ಸೇವಾ ಭಾರತಿ ಮೊಗ್ರಾಲ್ ಪುತ್ತೂರು ಪಂಚಾಯತ್ ಸಮಿತಿ ರೂಪೀಕರಣ

ಕಾಸರಗೋಡು: ಮಾಧವ ಸೇವಾ ಮಾನವ ಸೇವಾ ಎಂಬ ಆಶಯವನ್ನಿಟ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಸೇವಾಕಾರ್ಯಗಳಲ್ಲಿ ನಿರತವಾಗಿರುವ ಸೇವಾಭಾರತಿಯ ಮೊಗ್ರಾಲ್ ಪುತ್ತೂರು ಪಂಚಾಯತ್ ನೂತನ ಸಮಿತಿಯ ರೂಪೀಕರಣ ನಿನ್ನೆ ಪೆರ್ನಡ್ಕದಲ್ಲಿ ನಡೆಯಿತು. ಸೇವಾಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗೀತಾ ವಿಜಯನ್ ಉದ್ಘಾಟಿಸಿದರು. ಬಳಿಕ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಾಧಾಕೃಷ್ಣ ಮಾಸ್ಟರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರುತಿ, ಕೋಶಾಧಿಕಾರಿಯಾಗಿ ರಾಜೇಶ ಪುತ್ತೂರುಕೊಟ್ಯ, ಉಪಾಧ್ಯಕ್ಷರಾಗಿ ಶೈಲಜಾ ಮಜಲ್, ಸೂರಜ್ ರಕ್ತೇಶ್ವರಿಗುಡ್ಡೆ ಜೆÆತೆಕಾರ್ಯದರ್ಶಿ ಗಳಾಗಿ ದೀಕ್ಷಿತ್ ರಕ್ತೇಶ್ವರಿ ಗುಡ್ಡೆ ಹಾಗೂ …

ಜಾಮಿಯಾ ಸ ಅದಿಯಾ ಕ್ಯಾಂಪಸ್‌ಗೆ ಕಾನೂನು ಕಾಲೇಜು ಮಂಜೂರು: ಕಟ್ಟಡ ಶಿಲಾನ್ಯಾಸ ನಾಳೆ

ಕಾಸರಗೋಡು: ಕೋಳಿಯಡ್ಕ ದಲ್ಲಿ ಕಾರ್ಯವೆಸಗುತ್ತಿರುವ ಜಾಮಿಯಾ ಸಅದಿಯಾ ಕಾಲೇಜು ಕ್ಯಾಂಪಸ್‌ನಲ್ಲಿ ಐದು ವರ್ಷದ ಇಂಟಗ್ರೇಟೆಡ್ ಬಿಎ ಎಲ್‌ಎಲ್‌ಬಿ ಕಾನೂನು ಕಾಲೇಜು ಮಂಜೂರು ಮಾಡಲಾಗಿದೆ. ಪ್ರಥಮ ಬ್ಯಾಚ್‌ನಲ್ಲಿ ಒಟ್ಟು 60ಸೀಟುಗಳಿರಲಿವೆ. ಇದಕ್ಕಾಗಿ ನಿರ್ಮಿಸಲಿರುವ ಹೊಸ ಕಟ್ಟಡ ಜಾಮಿಯಾ ಸ ಅದಿಯಾ ಅಧ್ಯಕ್ಷ ಕೆ.ಎಸ್. ಆಟುಕೋಯ ತಂಙಳ್ ಕುಂಬೋಳ್  ನಾಳೆ ನಿರ್ವಹಿಸಲಿದ್ದಾರೆಂದು ಈ ಪ್ರಯುಕ್ತ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರಾದ ಮಹಮ್ಮದಲಿ ಸಖಾಫಿ ತೃಕರಿಪುರ, ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ, ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ, ಹಾಜಿ ಅಬ್ದುಲ್ಲ ಹುಸೈನ್ ಕಡವತ್ತ್, …

ಪಡೆಂಕುಡಿಯ ತರವಾಡಿನಲ್ಲಿ ದೈವಂಕಟ್ಟು ಮಹೋತ್ಸವ ಎ.9ರಿಂದ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರ ತುರ್ತಿ ಶ್ರೀ ವಿಷ್ಣುಮುರ್ತಿ, ವಯನಾಟ್ ಕುಲವನ್ ಮಹಾ ಮಲರಾಯ ದೈವಸ್ಥಾನ ಪಡೆಂಕುಡಿಯ ತರವಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ದೈವಂ ಕಟ್ಟು ಹೋತ್ಸವದ ದಿವಸ ನಿರ್ಣಯ ಪೆರಿಯ ಎಸ್‌ಎನ್ ಕಾಲೇಜಿನಲ್ಲಿ ನಡೆಯಿತು. ದೈವಂಕಟ್ಟು ಮಹೋತ್ಸವವನ್ನು ಮಂದಿನ ಎಪ್ರಿಲ್ 9ರಿಂದ 12ರ ತನಕ ನಡೆಸಲು ತೀರ್ಮಾನಿಸಲಾಯಿತು. ಉತ್ತರ ಮಲಬಾರ್ ತೀಯಾ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಜನ್ ಪೆರಿಯ, ಉಪ್ಪಳ ಶ್ರೀ ಭಗವತೀ ಕ್ಷೇತ್ರದ ಆಚಾರ ಪಟ್ಟವರಾದ ಜನಾರ್ದನ, ರಾಧಾಕೃಷ್ಣ ಬೆಳ್ಚಪ್ಪಾಡ, ಹರಿಪ್ರಸಾದ್ …

ನಾಪತ್ತೆಯಾದ ಕೃಷಿಕನ ಮೃತದೇಹ ಕೆರೆಯಲ್ಲಿ ಪತ್ತೆ

ಬದಿಯಡ್ಕ: ನಾಪತ್ತೆಯಾಗಿದ್ದ ಕೃಷಿಕರೊಬ್ಬರು ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಗಲ್ಪಾಡಿ ಬಳಿಯ ಪದ್ಮಾರು ನಿವಾಸಿ ಬಾಲಕೃಷ್ಣ ಭಟ್ (73) ಎಂಬವರು ಮೃತಪಟ್ಟ ವ್ಯಕ್ತಿ. ಮೊನ್ನೆ ರಾತ್ರಿ 7 ಗಂಟೆಯಿಂದ ಇವರು ನಾಪತ್ತೆಯಾಗಿದ್ದಾರೆನ್ನಲಾಗಿದೆ. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದರು. ಮನೆಯವರು ಹಾಗೂ ಸ್ಥಳೀಯರು ಸೇರಿ  ಹುಡುಕಾಡುತ್ತಿದ್ದಾಗ  ತೋಟದ ಕೆರೆಯಲ್ಲಿ ನಿನ್ನೆ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಪೊಲೀಸರು ತಲುಪಿ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ …

ಗಾಳಿ ಮಳೆ: ಕೊಯಿಪ್ಪಾಡಿ, ಕಳ್ಳಿಗೆಯಲ್ಲಿ ಮನೆ ಕುಸಿತ

ಉಪ್ಪಳ: ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಕೃಷಿಕನ ಮನೆ ಕುಸಿದುಬಿದ್ದು ಭಾರೀ ನಾಶನಷ್ಟ ಸಂಭವಿಸಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಅರಿಯಾಳ ವಾರ್ಡ್‌ನ ಕಳ್ಳಿಗೆ ನಿವಾಸಿ ಬಾಬು ರೈ ಎಂಬವರ ಮನೆ ಕುಸಿದು ಬಿದ್ದಿದೆ. ಛಾವಣಿ ಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯಲ್ಲಿ ಬಾಬು ರೈ ಹಾಗೂ ಪುತ್ರಿ ಮಾತ್ರವೇ ವಾಸಿಸುತಿ ದ್ದರು.  ಶಬ್ದ ಕೇಳಿ ಇವರು ಹೊರಗೆ ಓಡಿದುದರಿಂದ ಅಪಾಯ ತಪ್ಪಿದೆ. ಇದೇ ವೇಳೆ ಮನೆಯೊಳಗಿರಿಸಿದ್ದ ಅಡಿಕೆ, ಭತ್ತ, ಅಕ್ಕಿ ಸಹಿತ ವಿವಿಧ ಸಾಮಗ್ರಿಗಳು ನೀರಿನಿಂದಾ ವೃತ …

ಕಾಪಾ ಕಾನೂನು ಉಲ್ಲಂಘಿಸಿದ ಆರೋಪಿ ಸೆರೆ

ಕಾಸರಗೋಡು: ಕಾಪಾ ಕಾನೂನು ಉಲ್ಲಂಘಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೌತ್ ಚಿತ್ತಾರಿ ಕೂಳಿಕ್ಕಾಡ್ ಹೌಸ್‌ನ ಸಿ.ಕೆ. ಶಹೀರ್ (22) ಬಂಧಿತ ಆರೋಪಿ. ಈತನ ವಿರುದ್ಧ ಕಣ್ಣೂರು ಡಿಐಜಿ ನಿರ್ದೇಶ ಪ್ರಕಾರ ಕಾಪಾ ಕಾನೂನು ಹೇರಲಾಗಿತ್ತು. ಅದರ ಶರತ್ತುಗಳ ಪ್ರಕಾರ ಆತ ನಿಗದಿತ ಸಮಯಗಳಲ್ಲಿ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕಾಗಿ ದ್ದರೂ, ಆತ ಹಾಜರಾಗಲಿಲ್ಲ. ಆ ಮೂಲಕ ಆತ ಕಾಪಾ ಕಾನೂನು ಉಲ್ಲಂಘಿಸಿದ್ದನೆಂಬ ಆರೋಪದಂತೆ ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಮತ್ತು ಎಸ್‌ಐ ಶರಂಗಾಧರನ್‌ರ ನೇತೃತ್ವದ ಪೊಲೀಸರು …

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ನಿರ್ಮಾಣ ಕಾರ್ಮಿಕ ನಿಧನ

ಕಾಸರಗೋಡು: ಅಸೌಖ್ಯದಿಂದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಿರ್ಮಾಣ ಕಾರ್ಮಿಕ ಮೃತಪಟ್ಟರು. ಚೌಕಿ ಕೆ.ಕೆ.ಪುರದ ದಿ| ಕುಮಾರನ್ ಎಂಬವರ ಪುತ್ರ ಪುರುಷೋತ್ತಮನ್ (35) ಮೃತಪಟ್ಟ ವ್ಯಕ್ತಿ. ಇವರು ಪ್ರಸ್ತುತ ನಗರದ ಚಕ್ರಬಜಾ ರ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇವರಿಗೆ ಗಂಭೀರ ಅಸೌಖ್ಯ ಬಾಧಿಸಿತ್ತೆನ್ನಲಾಗಿದೆ. ನಾಲ್ಕು ದಿನಗಳ ಹಿಂದೆ ಅಸೌಖ್ಯ ಉಲ್ಬಣಗೊಂಡ ಇವರನ್ನು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ನಿಧನ ಹೊಂದಿದರು. ಮೃತರು ತಾಯಿ ಗೀತ, ಸಹೋದರ- ಸಹೋದರಿಯರಾದ ಚಂದ್ರಶೇಖರನ್, …

ಗಗನಯಾತ್ರಿ ಶುಭಾಂಶು ಶುಕ್ಲ ಇಂದು ಅಪರಾಹ್ನ 3.01ಕ್ಕೆ ಭೂಮಿಗೆ ವಾಪಸ್

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಬಾಹ್ಯಾಕಾಶದಲ್ಲಿ 18 ದಿನಗಳ ತನಕ ನಡೆಸಿದ ಯಶಸ್ವಿ ಕಾರ್ಯಾಚರಣೆ ಯನ್ನು ಪೂರ್ತಿಗೊಳಿಸಿ ಇತರ ನಾಲ್ಕು ಗಗನಯಾತ್ರಿಕರೊಂದಿಗೆ ಇಂದು ಅಪರಾಹ್ನ 3.01ಕ್ಕೆ ಭೂಮಿಗೆ ವಾಪಸಾಗಲಿದ್ದಾರೆ. ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲರ ಜತೆಗೆ ಅಮೆರಿಕದ ಪೆಗ್ಗಿ ವಿಡ್ಸನ್, ಪೋಲೆಂಡ್‌ನ ಮಿಶನ್ ಸ್ಪೆಷಲಿಸ್ಟ್ ಸ್ಲಾವೋಸ್ಟ್ ಉಜ್ಞಾನ್ಸ್ಕಿ ಮತ್ತು ಹಂಗೇರಿಯ ಗಗನಯಾತ್ರಿ ಟಿಬೋಕ್ ಕಾಪು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಸತತ 15 ದಿನಗಳ ತನಕ ಹಲವು ಸಂಶೋ ಧನೆಗಳನ್ನು ನಡೆಸಿ ಅಂತಾರಾಷ್ಟ್ರೀಯ ಬಾಹ್ಯಾಕಾಶ …

ಮಾದಕದ್ರವ್ಯ ಕೈವಶವಿರಿಸಿಕೊಂಡಿದ್ದ ಬಸ್ ಪ್ರಯಾಣಿಕನ ಸೆರೆ

ಮಂಜೇಶ್ವರ: ಮಾದಕದ್ರವ್ಯ ಕೈವಶವಿರಿಸಿಕೊಂಡಿದ್ದ ಯುವಕನನ್ನು ಬಸ್‌ನಿಂದ ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿನು ಜೇಮ್ಸ್‌ರ ನೇತೃತ್ವದ ತಂಡ ಬಂಧಿಸಿದೆ. ಕುಂಜತ್ತೂರು ಜಿಎಲ್‌ಪಿ ಶಾಲೆ ಬಳಿಯ ನಿವಾಸಿ ಹೈದರಲಿ (40) ಬಂಧಿತನಾದ ವ್ಯಕ್ತಿ. ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಿನ್ನೆ ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿಯಾಗಿ ಬಂದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಹೈದರಲಿಯ ಕೈವಶ ಮಾದಕ ದ್ರವ್ಯವಾದ 136.038 ಗ್ರಾಂ ಮೆಥಾಫಿಟಮಿನ್ ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿ ಆತನನ್ನು …

ಬೈಕ್‌ನಿಂದ ಪೆಟ್ರೋಲ್ ಕಳವು: ಓರ್ವ ಆರೋಪಿ ಸೆರೆ; ಇನ್ನೋರ್ವ ಪರಾರಿ

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣ ಸಮೀಪ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವುಗೈದ ಯುವಕನನ್ನು ಬಂಧಿಸಲಾಗಿದೆ. ಮೊಗ್ರಾಲ್ ಬದ್ರಿಯಾನಗರ ಮಸೀದಿ ಬಳಿಯ ನೀರೋಳಿ ಹೌಸ್‌ನ ಕೆ.ಪಿ. ರುಮೈಸ್ (20) ಎಂಬಾತನನ್ನು ಕುಂಬಳೆ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈತನ ಸಹಚರ ಮೇಲ್ಪರಂಬದ ರಿಸ್ವಾನ್ ಓಡಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಕಸ್ಟಡಿಗೆ ತೆಗೆದ ರುಮೈಸ್‌ನನ್ನು ಕುಂಬಳೆ ಠಾಣೆಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಕುಂಬಳೆಯಲ್ಲಿ ಹೊಸತಾಗಿ ಕರ್ತವ್ಯ ವಹಿಸಿಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ವಿಜೀಶ್ ಪೊಲೀಸರ ಸಭೆ …