ಅಪಘಾತ: ಲಾರಿಯ ಅಡಿಭಾಗದಲ್ಲಿ ಸಿಲುಕಿಕೊಂಡ ಬೈಕ್ ಸವಾರರಿಬ್ಬರನ್ನು ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ಲಾರಿ ಮತ್ತು ಬೈಕ್ ಢಿಕ್ಕಿ ಹೊಡೆದ ಪರಿಣಾಮ ಕಂಟೈನರ್ ಲಾರಿಯ ಅಡಿಭಾಗದಲ್ಲಿ ಬೈಕ್ ಸಹಿತ ಸಿಲುಕಿಕೊಂಡ ಸವಾರರಿಬ್ಬರನ್ನು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಗರದ ಪ್ರೆಸ್‌ಕ್ಲಬ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರಾದ ಇರಿಯಣ್ಣಿ ನಿವಾಸಿಗಳಾದ ರಂಜಿಶ್ (35) ಮತ್ತು ಪ್ರಸಾದ್ (45)ಬೈಕ್ ಸಹಿತ ಲಾರಿಯ ಅಡಿಭಾಗದಲ್ಲಿ ಸಿಲುಕಿಕೊಂ ಡರು. ವಿಷಯ ತಿಳಿದು ಎಎಸ್‌ಟಿಒ ವಿನೋದ್ ರಾಮ್ ನೇತೃತ್ವದ ಕಾಸರ ಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಪೊಲೀಸರು ಮತ್ತು ಎಆರ್‌ಟಿಯ  ವಿನ್‌ಜಿನ್ಸ್‌ನ ಸಹಾಯ …

ಮುಷ್ಕರ ದಿನ: ಜನೋಪಕಾರಪ್ರದ ಕಾರ್ಯ ನಡೆಸಿದ ಬಿಜೆಪಿ ಕಾರ್ಯಕರ್ತರು

ಸೀತಾಂಗೋಳಿ: ಸೀತಾಂಗೋಳಿ ಸಮೀಪದ ಅನಂತಪುರ ವಾರ್ಡ್‌ನ ಪೆರ್ಣೆ ಪರಿಸರದ ರುದ್ರಭೂಮಿಯನ್ನು ಸಾರ್ವಜನಿಕ ಮುಷ್ಕರ ದಿನವಾದ ನಿನ್ನೆ ಬಿಜೆಪಿ ಕಾರ್ಯಕರ್ತರು ಶುಚಿಗೊಳಿಸಿದರು. ರುದ್ರಭೂಮಿ ಪರಿಸರದಲ್ಲಿ ಕಾಡು ಬೆಳೆದು ಇಲ್ಲಿಗೆ ತೆರಳದ ಸ್ಥಿತಿ ನಿರ್ಮಾಣವಾಗಿದ್ದ ಈ ಪ್ರದೇಶದ ಬಿಜೆಪಿ ಕಾರ್ಯಕರ್ತರು ಶ್ರಮದಾನದ ಮೂಲಕ ಸ್ಮಶಾನದ ಆವರಣ ಪೂರ್ತಿ ಸ್ವಚ್ಚಗೊಳಿಸಿ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶ್ರೀಮಂತ ಕುಳಗಳ ಸೇವೆಯಲ್ಲಿ ನಿರತವಾದ ಎಡರಂಗ ಸರಕಾರ- ಕಾಂಗ್ರೆಸ್ ಆರೋಪ

ಉಪ್ಪಳ: ರಾಜ್ಯದ ಎಡರಂಗ ಸರಕಾರ ಬಡ ಜನರ ಹಿತಾಸಕ್ತಿ ಕಾಯುವ ತನ್ನ ನಿಲುವಿನಿಂದ ಹಿಂದೆ ಸರಿದು ಅದಾನಿ, ಸಾಂಟಿಯಾಗೊ ಮಾರ್ಟಿನ್ ಮುಂತಾದ ಬಹುಕೋಟಿ ಶ್ರೀಮಂತ ಕುಳಗಳ ಸೇವೆಯಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆರೋಗ್ಯವಲಯದಲ್ಲಿ ಸರಕಾರ ತೋರುವ ಕಡೆಗಣನೆ, ನಿರ್ಲಕ್ಷ್ಯ ಪ್ರತಿಭಟಿಸಿ ಮಂಜೇಶ್ವರ ಹಾಗೂ ಕುಂಬಳೆ ಬ್ಲೋಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಆಸ್ಪತ್ರೆ ಮುಂಭಾಗ ನಡೆಸಿದ ಪ್ರತಿಭಟನಾ ಧರಣಿ ಉದ್ಘಾಟಿಸಿ ರಮೇಶನ್ ಕರ್ವಾಚ್ಚೇರಿ ನುಡಿದರು. ಆಡಳಿತದ ಸಕಲ ವಲಯದಲ್ಲೂ ಸಂಪೂರ್ಣ ವಿಫಲವಾದ ಎಡರಂಗ ಸರಕಾರ …

ಎಕೆಜಿಎಸ್‌ಎಂಎ ಕಾಸರಗೋಡು ಘಟಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಎಕೆಜಿಎಸ್‌ಎಂಎ ಕಾಸರಗೋಡು ಘಟಕದ ಮಹಾಸಭೆ ಘಟಕಾಧ್ಯಕ್ಷ ಜಿ.ವಿ. ನಾರಾಯಣನ್‌ರ ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಸಿಟಿಗೋಲ್ಡ್ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಡೋತ್ ಅಶೋಕನ್ ನಾಯರ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಕೋಶಾಧಿಕಾರಿ ಬಿ.ಎಂ. ಅಬ್ದುಲ್ ಕಬೀರ್ ಶುಭ ಕೋರಿದರು. ಘಟಕ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಕೆ.ವಿ. ವರದಿ ಮಂಡಿಸಿದರು. ಕೋಶಾಧಿಕಾರಿ ಎಂ.ಎಂ. ಸೈದ್ ಇಬ್ರಾಹಿಂ 2023-2024ನೇ ವರ್ಷದ ಲೆಕ್ಕ ಪತ್ರ ಮಂಡಿಸಿದರು. ಗ್ರಾಹಕರನ್ನು ವಂಚಿಸುವ ರೀತಿಯಲ್ಲಿ ಜಾಹೀರಾತು ನೀಡುವ ವ್ಯಾಪಾರಿಗಳನ್ನು ದೂರವಿಡಲು ತೀರ್ಮಾನಿಸಲಾಯಿತು. …

ಕನ್ನಡ ಪತ್ರಕರ್ತರ ಕುಟುಂಬ ಮಿಲನ, ಪತ್ರಿಕಾ ದಿನಾಚರಣೆ 13ರಂದು

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾ ಭಿವೃದ್ಧಿ ಸಂಘ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಇದರ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ನಲಿವಿನ ನೌಕೆ ಪತ್ರಕರ್ತರ ಕುಟುಂಬ ಮಿಲನ ಈ ತಿಂಗಳ 13ರಂದು ಬೆಳಿಗ್ಗೆ 9.30ರಿಂದ ನೀಲೇಶ್ವರ ತಾಜ್ ಕ್ರೂಯಿಜ್ ಹೌಸ್‌ಬೋಟ್‌ನಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ ಮಾಣಿ ದೀಪಪ್ರಜ್ವಲನೆಗೈಯ್ಯುವರು. ಕರ್ನಾಟಕ ಮುಖ್ಯಮಂತ್ರಿಯ  ಮಾಧ್ಯಮ ಸಲಹೆ ಗಾರ ಕೆ.ವಿ. ಪ್ರಭಾಕರ ಪ್ರಶಸ್ತಿ ಪ್ರದಾನ ಮಾಡುವರು.  ಕೆಯುಡಬ್ಲ್ಯು …

ಎಸ್‌ಎಫ್‌ಐ ರಾಜ್ಯ ವ್ಯಾಪಕ ಶಿಕ್ಷಣ ಬಂದ್ ಇಂದು

ತಿರುವನಂತಪುರ: ರಾಜ್ಯದಲ್ಲಿ ಇಂದು ಎಸ್‌ಎಫ್‌ಐಯ ಶಿಕ್ಷಣ ಬಂದ್ ನಡೆಸಲಾಗುತ್ತಿದೆ. ಉನ್ನತ ಶಿಕ್ಷಣ ವಲಯವನ್ನು ಕೇಸರೀಕರಣಗೊಳಿಸಲಿರುವ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಕ್ರಮದ ವಿರುದ್ಧ ಪ್ರತಿಭಟಿಸಿದ ಎಸ್‌ಎಫ್‌ಐ ಮುಖಂಡರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಬಂದ್‌ಗೆ ಆಹ್ವಾನ ನೀಡಲಾಗಿದೆ. ರಾಜ್ಯದ ಉನ್ನತ ಶಿಕ್ಷಣ ವಲಯವನ್ನು ಸಂರಕ್ಷಿಸಲಿರುವ ಹೋರಾಟವಾಗಿದೆ ಇದು ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಎಂ. ಶಿವಪ್ರಸಾದ್ ನುಡಿದರು.

ಕುರುಡಪದವು ರಸ್ತೆ ಶೋಚನೀಯ: ಸ್ಥಳೀಯರಿಂದ ತಾತ್ಕಾಲಿಕ ದುರಸ್ತಿ

ಪೈವಳಿಕೆ: ಲಾಲ್ಭಾಗ್- ಕುರುಡ ಪದವು ರಸ್ತೆ ಶೋಚನೀಯಗೊಂಡು ಸಂಚಾರ ಅಸಾಧ್ಯವಾಗಿದ್ದರೂ ದುರಸ್ತಿ ಗೊಳಿಸಲು ಅಧಿಕಾರಿಗಳು ಶ್ರಮವಹಿಸದ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆಯ ಹೊಂಡಗಳನ್ನು  ದುರಸ್ತಿಗೊಳಿಸಲು ರಸ್ತೆಯ ಕಂಡಿಗೆ ಎಂಬಲ್ಲಿ ಇರುವ ಹೊಂಡಗಳಿಗೆ ಟಿಪ್ಪರ್ ಲಾರಿ ಚಾಲಕರು ಜಲ್ಲಿ ಹುಡಿಯನ್ನು ತಂದುಹಾಕಿದ್ದು, ಅಮ್ಮೇರಿ ಎಂಬಲ್ಲಿ ಹೊಂಡದಲ್ಲಿ ಕಟ್ಟಿ ನಿಲ್ಲುತ್ತಿದ್ದ ನೀರನ್ನು ಚರಂಡಿಗೆ ಹರಿದುಹೋಗಲು ಸ್ಥಳೀಯ ಯುವಕರು ವ್ಯವಸ್ಥೆ ಮಾಡಿದ್ದಾರೆ. ಶ್ರಮದಾನದ ಮೂಲಕ ಯುವಕರು ಈ ಕಾರ್ಯ ನಡೆಸಿದ್ದು, ಶೀಘ್ರ ರಸ್ತೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಖಾಸಗಿ ಬಸ್ ಮುಷ್ಕರ ಪೂರ್ಣ: ಸಂಕಷ್ಟಕ್ಕೀಡಾದ ಪ್ರಯಾಣಿಕರು

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಖಾಸಗಿ ಬಸ್ ಮಾಲಕರು  ತಮ್ಮ ಬಸ್ ಸೇವೆಗಳನ್ನು ನಿಲುಗಡೆಗೊಳಿಸಿ  ಇಂದು ಬೆಳಿಗ್ಗೆ ಆರಂಭಿಸಿರುವ ಸೂಚನಾ ಮುಷ್ಕರ ಪೂರ್ಣಗೊಂ ಡಿದೆ. ಇದರಂಗವಾಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೊಳಗಾಗಬೇಕಾಗಿ ಬಂದಿದೆ. ಬಸ್ ಮುಷ್ಕರ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮ ಬೀರಿದೆ. ಪ್ರಯಾಣಕ್ಕಾಗಿ ಖಾಸಗಿ ಬಸ್‌ಗಳನ್ನು ಮಾತ್ರವೇ ಆಶ್ರಯಿಸುತ್ತಿರುವ ಪ್ರದೇಶಗಳ ಜನರು ತೀವ್ರ ಸಂಕಷ್ಟಕ್ಕೊಳಗಾದರು. ಖಾಸಗಿ ಬಸ್‌ಗಳ ಮುಷ್ಕರದ ಹಿನ್ನೆಲೆಯಲ್ಲಿ  ಕೆಎಸ್‌ಆರ್‌ಟಿಸಿ  ಇಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಏಳು ಹೆಚ್ಚುವರಿ ಬಸ್ ಸೇವೆ ಏರ್ಪಡಿಸಿದೆ. ಕೆಎಸ್‌ಆರ್‌ಟಿಸಿಯ ಎಲ್ಲಾ …

ಅಡೂರಿನಲ್ಲಿ ಯುವಕನಿಗೆ ಹಲ್ಲೆ, ಮನೆಗೆ ಕಲ್ಲೆಸೆತ ಪ್ರಕರಣದ ಆರೋಪಿ 30 ವರ್ಷಗಳ ಬಳಿಕ ಸೆರೆ

ಮುಳ್ಳೇರಿಯ: ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆಗೈದು ಆತನ ಮನೆಗೆ ಕಲ್ಲೆಸೆದು ಹೆಂಚು ನಾಶ ಗೊಳಿಸಲಾಯಿತೆಂಬ ಪ್ರಕರಣದ ಆರೋಪಿಯನ್ನು 30 ವರ್ಷಗಳ ಬಳಿಕ ಬಂಧಿಸಲಾಗಿದೆ. ಅಡೂರು ಮೂಲ ಹೌಸ್‌ನ ಎಂ.ಇ. ಬಾತಿಶ (48) ಎಂಬಾತನನ್ನು ಆದೂರು ಎಸ್‌ಐ ವಿನೋದ್ ಕುಮಾರ್, ಎಎಸ್‌ಐ ಸತ್ಯಪ್ರಕಾಶ್ ಜಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಘವನ್, ಸಿಪಿಒ ಹರೀಶ್ ಎಂಬಿವರು ಸೇರಿ ಸೆರೆಹಿಡಿದಿದ್ದಾರೆ. 1995 ಎಪ್ರಿಲ್ 21ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಅಂದು ಆರೋಪಿಯಾದ ಬಾತಿಶನಿಗೆ ಪ್ರಾಯ 18 ವರ್ಷ ವಾಗಿತ್ತು. …

ರಾಷ್ಟ್ರೀಯ ಮುಷ್ಕರ ಇಂದು ರಾತ್ರಿಯಿಂದ

ಕಾಸರಗೋಡು: ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಡೆಸುವ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರ ಇಂದು ರಾತ್ರಿ 12 ಗಂಟೆಗೆ ಆರಂಭಗೊಂಡು ನಾಳೆ ರಾತ್ರಿ 12 ಗಂಟೆ ತನಕ ಮುಂದುವರಿಯಲಿದೆ. ಕಾರ್ಮಿಕರ ಹತ್ತು ಸಂಘಟನೆಗಳು ಮತ್ತು  ಅವುಗಳ ಸಹವರ್ತಕ ವೇದಿಕೆಯ ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ರಾಷ್ಟ್ರವಿರೋಧಿ ಮತ್ತು ಕಾರ್ಪರೇಟ್ ಪರವಾದ ನೀತಿಗಳನ್ನು ಅನುಸರಿಸುತ್ತಿದೆಯೆಂದು ಆರೋಪಿಸಿ ಇದನ್ನು ವಿರೋಧಿಸಿ ಸಂಯುಕ್ತ ರಾಷ್ಟ್ರೀಯ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. …