ಮೊಟಕುಗೊಂಡ ಮರಣೋತ್ತರ ಪರೀಕ್ಷೆ : ಜನರಲ್ ಆಸ್ಪತ್ರೆ ಮುಂದೆ ಬಿಜೆಪಿ ಜಿಲ್ಲಾಧ್ಯಕ್ಷೆ ನೇತೃತ್ವದಲ್ಲಿ ಪ್ರತಿಭಟನೆ

ಕಾಸರಗೋಡು: ಮೃತದೇಹವನ್ನು ಸಕಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸದಿರುವುದನ್ನು ಪ್ರತಿಭಟಿಸಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನೇತೃತ್ವದಲ್ಲಿ ಕಾರ್ಯಕರ್ತರು ಕಾಸರಗೋಡು ಜನರಲ್ ಆಸ್ಪತ್ರೆ ಮುಂದೆ ನೆಲದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಬೆದ್ರಡ್ಕದಲ್ಲಿರುವ ಖಾಸಗಿ ಸಂಸ್ಥೆಯೊಂದರ ಗೋದಾಮಿನ ವಾಹನ ಚಾಲಕ ಮಧೂರು ಶಿರಿಬಾಗಿಲು ನಿವಾಸಿ ಚನಿಯಪ್ಪ ಪೂಜಾರಿ (54) ಎಂಬವರು ನಿನ್ನೆ ಕೆಲಸದ ಮಧ್ಯೆ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ   ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ …

ಡಾರ್ಕ್‌ವೆಬ್ ಮೂಲಕ ಕೇರಳಕ್ಕೆ ಮಾದಕ ದ್ರವ್ಯ ಪೂರೈಸುವ ಸೂತ್ರಧಾರ ಸೆರೆ

ಕಾಸರಗೋಡು: ‘ಕೆಟ್ಟಾ ಮೆಲೋನ್’ ಎಂಬ ಹೆಸರಿನ ಡಾರ್ಕ್ ವೆಬ್ ಮೂಲಕ ಕೇರಳಕ್ಕೆ ಮಾದಕದ್ರವ್ಯ ವಿತರಿಸುವ ಜಾಲದ ಪ್ರಧಾನ ಸೂತ್ರ ಧಾರನನ್ನು ನರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯ ಕೊಚ್ಚಿ ಘಟಕ ಬಂಧಿಸುವಲ್ಲಿ ಸಫಲ ವಾಗಿದೆ. ಇದರ ಜೊತೆಗೆ ಆತನ ಸಹಾಯಕ ನೋರ್ವನನ್ನೂ ವಶಕ್ಕೆ ತೆಗೆದುಕೊಳ್ಳ ಲಾಗಿದೆ. ಮೂವಾಟುಪುಳ ನಿವಾಸಿ ಎಡಿಸನ್ ಎಂಬಾತ ಬಂಧಿತ ಸೂತ್ರ ಧಾರ. 1127 ಬ್ಲೋಟ್ ಎಲ್‌ಎಸ್‌ಡಿ, 131.66 ಗ್ರಾಂ ಕೆಟಾಮೈನ್ ಮತ್ತು ರಿಫ್ಟೋ ಕರೆನ್ಸಿಯನ್ನು ಆತನಿಂದ  ಪತ್ತೆಹಚ್ಚಲಾಗಿದೆ. ವಶಪಡಿಸಲಾದ ಮಾದಕದ್ರವ್ಯಕ್ಕೆ ಸುಮಾರು 35 ಲಕ್ಷರೂ. …

ಎಂಡಿಎಂಎ ಪತ್ತೆಗೆಂದು ತೆರಳಿದ ಪೊಲೀಸ್ ತಂಡದಿಂದ ಅನಧಿಕೃತ ಗ್ಯಾಸ್ ಸಂಗ್ರಹ ಪತ್ತೆ

ಕಾಸರಗೋಡು: ಚೆಂಗಳ ಚೇರೂರಿನಲ್ಲಿ ಅನಧಿಕೃತ ಗ್ಯಾಸ್ ಸಂಗ್ರಹ ಪತ್ತೆಹಚ್ಚಲಾಗಿದೆ. 170 ಅನಿಲ ಜಾಡಿಗಳು, ಗ್ಯಾಸ್ ತುಂಬಿಸಲಿರುವ ಉಪಕರಣಗಳನ್ನು ವಶಪಡಿಸಲಾಗಿದೆ. ಓರ್ವ ವ್ಯಕ್ತಿಯ ಮನೆ ಪರಿಸರದಲ್ಲಿ ಗ್ಯಾಸ್ ಸಿಲಿಂಡರ್ ಪತ್ತೆಹಚ್ಚಲಾಗಿದೆ. ಎಂಡಿಎಂಎ ವಶಪಡಿಸಲೆಂದು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್‌ರ ನೇತೃತ್ವದಲ್ಲಿರುವ ತಂಡ ನಡೆಸಿದ ಪರಿಶೀಲನೆಯಲ್ಲಿ ಅನಧಿಕೃತ ಗ್ಯಾಸ್ ಸಂಗ್ರಹ ಪತ್ತೆಯಾಗಿದೆ. ಬಳಿಕ ಕಾಸರಗೋಡು ತಾಲೂಕು ಸಪ್ಲೈ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ತಾಲೂಕು ಸಪ್ಲೈ ಆಫೀಸರ್ ಕೃಷ್ಣ ನಾಯ್ಕ್, ರೇಶನ್ ಇನ್ಸ್‌ಪೆಕ್ಟರ್‌ಗಳಾದ ಪಿ. ಕೊರಗಪ್ಪ, ಇ. ಪ್ರಭಾಕರನ್, ದಿಲೀಪ್ ಎಂಬಿವರ …

ಯುವತಿಯ ಜೊತೆ ವಳಪಟ್ಟಣಂ ಹೊಳೆಗೆ ಹಾರಿದ ಯುವಕನ ಮೃತದೇಹ ಪತ್ತೆ

ಕಣ್ಣೂರು: ಯುವತಿಯ ಜೊತೆ ವಳಪಟ್ಟಣಂ ಹೊಳೆಗೆ ಹಾರಿದ ಯುವಕನ ಮೃತದೇಹ ದಡ ಸೇರಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನೆಯಾಲ ಪೆರಿಯಾಟಡ್ಕ ನಿವಾಸಿ ರಾಜು ಅಲಿಯಾಸ್ ರಾಜೇಶ್ (35)ನ ಮೃತದೇಹ ಇಂದು ಬೆಳಿಗ್ಗೆ ಪಳಯಂಗಾಡಿ ಮಾಟುಲ್ ಕಡಪ್ಪುರದಲ್ಲಿ ಕಂಡು ಬಂದಿದೆ. ಸಂಬಂಧಿಕರು ಸ್ಥಳಕ್ಕೆ ತಲುಪಿ ರಾಜುನ ಮೃತದೇಹವೆಂದು ಖಚಿತಪಡಿಸಿದ್ದಾರೆ. ಬೇಕಲ ಎಸ್‌ಐ ಸವ್ಯಸಾಚಿಯವರ ನೇತೃತ್ವದಲ್ಲಿರುವ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಆದಿತ್ಯವಾರ ಬೆಳಿಗ್ಗೆ ರಾಜು ಹಾಗೂ ವಿವಾಹಿತೆ ಯುವತಿ  ಪೆರಿಯಾಟ ಡ್ಕದಿಂದ ನಾಪತ್ತೆಯಾಗಿದ್ದರು. ತನಿಖೆ ನಡೆಸುತ್ತಿದ್ದ ಮಧ್ಯೆ …

ಕಾರಿನಲ್ಲಿ ಸಾಗಿಸುತ್ತಿದ್ದ 16.8 ಗ್ರಾಂ ಎಂಡಿಎಂಎ, ಗಾಂಜಾ ಪತ್ತೆ: ಓರ್ವ ಸೆರೆ

ಕಾಸರಗೋಡು: ಮುಟ್ಟತ್ತೋಡಿ ಪನ್ನಿಪಾರೆಯಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಪಿನ್ ಯು.ಪಿ ಯವರ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕದ್ರವ್ಯವಾದ 16.8 ಗ್ರಾಂ ಎಂಡಿಎಂಎ ಮತ್ತು 2.1 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ಮೂಲತಃ ಕಾಸರಗೋಡು ಅಣಂಗೂರು ತುರ್ತಿ ಕೆ. ಕಪ್ಪಲ್ ಹೌಸ್‌ನ ನಿವಾಸಿ ಹಾಗೂ ಈಗ ಚೆಂಗಳ ಸಿಟಿಜನ್ ನಗರ ತೈವಳಪ್ಪಿನಲ್ಲಿ ವಾಸಿಸುತ್ತಿರುವ ಅಬೂಬಕ್ಕರ್ ಸಿದ್ದೀಕ್ ಟಿ.ಎಂ. (27) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಬಂಧಿತನನ್ನು ಬಳಿಕ …

ಕುಂಬಳೆ ಬಸ್ ವೈಟಿಂಗ್ ಶೆಡ್ ನಿರ್ಮಾಣ ಭ್ರಷ್ಟಾಚಾರ ಆರೋಪ ಕುರಿತು ತನಿಖೆಗೆ ಒತ್ತಾಯಿಸಿ ಪಂ. ಅಧ್ಯಕ್ಷೆಯಿಂದ ಸಚಿವ, ವಿಜಿಲೆನ್ಸ್, ಡೈರೆಕ್ಟರ್‌ಗೆ ಪತ್ರ

ಕುಂಬಳೆ: ಕುಂಬಳೆ  ಪಂಚಾಯತ್  ವಾರ್ಷಿಕ ಯೋಜನೆಯಲ್ಲಿ ಒಳಪಡಿಸಿ ಕುಂಬಳೆ ಪೇಟೆಯಲ್ಲಿ ನಿರ್ಮಿಸಿದ ಬಸ್ ವೈಟಿಂಗ್ ಶೆಡ್‌ನ ಬಗ್ಗೆ ಭ್ರಷ್ಟಾಚಾರ ಆರೋಪ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ಸಮಗ್ರ ತನಿಖೆ ನಡೆಸಬೇ ಕೆಂದು ಒತ್ತಾಯಿಸಿ ಪಂಚಾಯತ್ ಅಧ್ಯಕ್ಷೆ ಯು.ಪಿ.ತಾಹಿರ ಯೂಸಫ್ ಸ್ಥಳೀಯಾಡಳಿತ ಖಾತೆ ಸಚಿವ ಎಂ.ಬಿ. ರಾಜೇಶ್, ರಾಜ್ಯ ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಡೈರೆಕ್ಟರ್ ಮೊದಲಾದವರಿಗೆ ಪತ್ರ ಬರೆದಿದ್ದಾರೆ. ಪೇಟೆಯ ಟ್ರಾಫಿಕ್ ಪರಿಷ್ಕರಣೆಗೆ ಸಂಬಂಧಿಸಿ ಬಸ್ ವೈಟಿಂಗ್ ಶೆಡ್ ನಿರ್ಮಾಣವನ್ನು ಅಕ್ರಡಿಟ್ ಏಜೆನ್ಸಿಯಾದ ಹ್ಯಾಬಿಟಾಟ್ ಮೂಲಕ …

ಜಿಲ್ಲೆಯ ಹಲವೆಡೆಗಳಲ್ಲಿ ಅಬಕಾರಿ ಕಾರ್ಯಾಚರಣೆ: ಮದ್ಯ ವಶ

ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ನಗರದ ಕರಂದಕ್ಕಾಡ್‌ನಲ್ಲಿ  ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಶ್ರೀನಿವಾಸನ್ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ  ಖಾಸಗಿ ಹಿತ್ತಿಲೊಂದರಲ್ಲಿ ಬಚ್ಚಿಡಲಾಗಿದ್ದ 180 ಎಂ.ಎಲ್‌ನ 37 ಪ್ಯಾಕೆಟ್ (6.66 ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದೇತಂಡದ ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್ ನೇತೃತ್ವದ ಅಬಕಾರಿ ತಂಡ ಕೂಡ್ಲು ವಿವೇಕಾನಂದ ನಗರದಲ್ಲಿ ನಿನ್ನೆ …

ವ್ಯಾಪಕಗೊಳ್ಳುತ್ತಿರುವ ಕಡಲ್ಕೊರೆತ: ಮಣಿಮುಂಡ ಸಹಿತ ಕಡಲತೀರ : ಪ್ರದೇಶದ ಜನರ ಮನೆಗಳು ಸಮುದ್ರಪಾಲಾಗುವ ಭೀತಿ

ಉಪ್ಪಳ: ಮಂಗಲ್ಪಾಡಿ, ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳ ಕಡಲತೀರಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ರಸ್ತೆಗಳು ಹಾಗೂ ಮನೆಗಳು ಅಪಾಯದಂಚಿನಲ್ಲಿವೆ. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಣಿಮುಂಡದಲ್ಲಿ ನಾಲ್ಕು ಮನೆಗಳು ಯಾವುದೇ ಕ್ಷಣ ಸಮುದ್ರಪಾಲಾಗುವ ಭೀತಿ ನೆಲೆಗೊಂಡಿದೆ. ಇಲ್ಲಿನ ಜಯರಾಮ, ಕೇಶವ, ಅಲಿಮ, ಅವ್ವಾಬಿ ಎಂಬವರ ಮನೆ ಅಪಾಯದಂಚಿನಲ್ಲಿದೆ. ಹಲವು ದಿನಗಳಿಂದ ಕಡಲ್ಕೊರೆತ ವ್ಯಾಪಕಗೊಂಡಿದ್ದು, ನೀರು ಮನೆಗೆ ಬಡಿದು ಅಂಗಳತನಕ ತಲುಪುತ್ತಿದೆ. ಮನೆ ಸುತ್ತಲೂ ಮರಳು ತುಂಬಿಕೊಂಡಿದ್ದು, ಇಲ್ಲಿ ವಾಸ ಮಾಡಲು ಅಸಾಧ್ಯವಾಗುತ್ತಿದೆ. ಈ ಪರಿಸರದಲ್ಲಿ ತಡೆಗೋಡೆ ನಿರ್ಮಿಸಲು …

ಭ್ರಷ್ಟಾಚಾರ ಆಡಳಿತ ಆರೋಪಿಸಿ ಕುಂಬಳೆ ಪಂಚಾಯತ್ ಕಚೇರಿಗೆ ಸಿಪಿಎಂ ಮಾರ್ಚ್

ಕುಂಬಳೆ: ಕುಂಬಳೆ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಆಡಳಿತ ವ್ಯಾಪಕಗೊಂಡಿರುವುದಾಗಿ ಆರೋಪಿಸಿ ಸಿಪಿಎಂ ಕುಂಬಳೆ ಲೋಕಲ್ ಕಮಿಟಿ ಪಂಚಾಯತ್ ಕಚೇರಿಗೆ ನಿನ್ನೆ ಮಾರ್ಚ್ ನಡೆಸಿತು. ಏರಿಯಾ ಸೆಕ್ರೆಟರಿ ಸಿ.ಎ. ಸುಬೈರ್ ಉದ್ಘಾಟಿಸಿದರು. ಕುಂಬಳೆ ಪಂಚಾಯತ್‌ನಲ್ಲಿ ಆಡಳಿತ ನಡೆಸುವವರು ಕೊಳ್ಳೆಹೊಡೆಯುವ ತಂಡದಂತೆ ವರ್ತಿಸುತ್ತಿದ್ದಾರೆಂದು ಅವರು ಆರೋಪಿಸಿದರು. ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆದು ಅಭಿವೃದ್ಧಿ ಇಲ್ಲದಂತೆ ಮಾಡಲಾಗಿದೆ.   ಪಂಚಾಯತ್ ಆಡಳಿತ ಸಮಿತಿ ಜನಪರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು    ಮುಟ್ಟಿದ್ದೆಲ್ಲದರಲ್ಲೂ ಭ್ರಷ್ಟಾಚಾರ ನಡೆಸಿ ಕುಂಬಳೆಯ ಜನತೆಗೆ ಸವಾಲಾಗಿ ಪರಿಣಮಿಸಿದೆಯೆಂದು ಸುಬೈರ್ ತಿಳಿಸಿದರು.  ಲೋಕಲ್ ಸೆಕ್ರೆಟರಿ …

ಕಾಸರಗೋಡಿನಲ್ಲಿ ಕನ್ನಡವನ್ನು ಬಲಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಪಾತ್ರ ಮಹತ್ತರ- ವಿಶಾಲಾಕ್ಷ ಪುತ್ರಕಳ

ಕಾಸರಗೋಡು: ಕಾಸರಗೋಡಿನಲ್ಲಿ ಕನ್ನಡವನ್ನು ಬಲಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಪಾತ್ರ ಮಹತ್ತರವಾದುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ, ನಿವೃತ್ತ ಅಧ್ಯಾಪಕ ವಿಶಾ ಲಾಕ್ಷ ಪುತ್ರಕಳ ನುಡಿದರು. ಕಾಸರ ಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ನಿನ್ನೆ ಸಂಜೆ ಕೋಟೆಕಣಿ ಶ್ರೀರಾಮನಾಥ ಸಾಂಸ್ಕೃ ತಿಕ ಭವನದಲ್ಲಿ ನಡೆದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಪತ್ರಿಕೆಗಳು ಸವಾಲುಗಳನ್ನು ಎದುರಿಸುತ್ತಿವೆ. ಹೊಸ ತಲೆಮಾರು …