ಪೊಲೀಸರ ಚಲನವಲನಗಳ ಬಗ್ಗೆ ನಿಗಾ ಇರಿಸಲು ವಾಟ್ಸಪ್ ಗ್ರೂಪ್ ತಯಾರಿಸಿದ 20 ಮಂದಿ ವಿರುದ್ಧ ಕೇಸು

ಕಾಸರಗೋಡು: ಪೊಲೀಸರ ಚಲನವಲನಗಳ ಬಗ್ಗೆ ಮಾದಕದ್ರವ್ಯ ಮತ್ತು ಆನ್‌ಲೈನ್ ಲಾಟರಿ ದಂಧೆಯವರಿಗೆ ಸಕಾಲದಲ್ಲಿ ಮಾಹಿತಿ ನೀಡಲು ವಾಟ್ಸಪ್ ಗ್ರೂಪ್‌ಗೆ ರೂಪು ನೀಡಿದ ಅಡ್ಮಿನ್‌ಗಳು ಸೇರಿದಂತೆ 20 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಕೈವಶವಿರಿಸಿಕೊಂಡ ಕೋಡಿಚ್ಚಾಲ್ ನಿವಾಸಿಯೋರ್ವನನ್ನು ರಾಜಪುರಂ ಪೊಲೀಸರು ಬಂಧಿಸಿದ್ದರು. ಆಗ ಆತನ ಕೈಯಲ್ಲಿದ್ದ ಮೊಬೈಲ್ ಫೋನ್ ಪರಿಶೀಲಿಸಿದಾಗ ಅದರಲ್ಲಿ ಫ್ಯಾಮಿಲಿ ಎಂಬ ಹೆಸರಿನ ವಾಟ್ಸಪ್ ಗ್ರೂಪ್ ಒಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದರಲ್ಲಿ ಪೊಲೀಸ್ ವಾಹನಗಳು ಮತ್ತು ಹಲವು ಪೊಲೀಸ್ …

ಮಸಾಜ್ ಕೇಂದ್ರದ ಮರೆಯಲ್ಲಿ ವೇಶ್ಯಾಟಿಕೆ : ನಾಲ್ವರು ಮಹಿಳೆಯರ ಸಹಿತ ಎಂಟು ಮಂದಿ ಸೆರೆ

ಕಲ್ಲಿಕೋಟೆ: ಪೇರಾಂಬ್ರದಲ್ಲಿ ಆಯುರ್ವೇದ ಮಸಾಜ್ ಸೆಂಟರ್‌ನ ಮರೆಯಲ್ಲಿ ವೇಶ್ಯಾಟಿಕೆ ದಂಧೆ ನಡೆಸಿದ  ನಾಲ್ವರು ಮಹಿಳೆಯರ ಸಹಿತ 8 ಮಂದಿಯನ್ನು ಬಂಧಿಸ ಲಾಗಿದೆ. ಪೇರಾಂಬ್ರ ಬಿವರೇಜಸ್ ಸಮೀಪ ಕಾರ್ಯಾಚರಿಸುವ ಆಯುಷ್ ಸ್ಪಾ ಎಂಬ ಮಸಾಜ್ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಇತರ ರಾಜ್ಯಗಳಿಂದಲೂ ಮಹಿಳೆಯರನ್ನು ಇಲ್ಲಿಗೆ ತಲುಪಿಸಿ ವೇಶ್ಯಾಟಿಕೆ ದಂಧೆ  ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಮಸಾಜ್‌ನ ಹೆಸರಲ್ಲಿ ಕಾನೂನು ವಿರುದ್ಧ ಚಟುವಟಿಕೆಗಳು  ಮುಂದುವರಿದ ಹಿನ್ನೆಲೆಯಲ್ಲಿ ಪೊಲೀ ಸರು ದಾಳಿ ನಡೆಸಿದ್ದಾರೆ. ಪೊಲೀಸರು ಮಸಾಜ್ ಕೇಂದ್ರದ ಮೆನೇಜರ್   ಚೆಂಬನೋಡ್ ನಿವಾಸಿ ಆಂಟೋ …

ಪಾಕಿಸ್ತಾನ ಪರ ಬೇಹುಗಾರಿಕೆ : ಭಾರತೀಯ ನೌಕಾಪಡೆ ಸಿಬ್ಬಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ವರ್ಷಗಳ ಕಾಲ ಮತ್ತು ಆಪರೇಷನ್ ಸಿಂಧೂರ ಸಮಯದಲ್ಲೂ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಂತೆ ಭಾರತೀಯ ನೌಕಾಪಡೆಯ ಪ್ರಧಾನ ಕಚೇರಿಯ ಉದ್ಯೋಗಿ ವಿಶಾಲ್ ಯಾದವ್ ಎಂಬಾತನನ್ನು ರಾಜಸ್ತಾನ ಪೊಲೀಸ್ ಗುಪ್ತಚರ ವಿಭಾಗ ಬಂಧಿಸಿದೆ. ಈತ ನೌಕಾಪಡೆಯ ಪ್ರಧಾನ ಕಚೇರಿಯಲ್ಲಿ ಕ್ಲರ್ಕ್ ಆಗಿ ದುಡಿಯುತ್ತಿದ್ದು, ಹರ್ಯಾಣ ನಿವಾರಿಯಾಗಿದ್ದಾನೆ. ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಹಲವು ಪುರಾವೆಗಳನ್ನೂ ಪೊಲೀಸರು ಈತನಿಂದ ಪತ್ತೆಹಚ್ಚಿದ್ದರು.

ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವ ಪಿ.ಎಫ್.ಐನ ನಿಗೂಢ ಯೋಜನೆ: ಜಿಲ್ಲಾ ನ್ಯಾಯಾಧೀಶರೂ ಸೇರಿ 977 ನೇತಾರರ ಹತ್ಯೆಗೆ ಹಿಟ್‌ಲಿಸ್ಟ್; ನ್ಯಾಯಾಲಯಕ್ಕೆ ಎನ್‌ಐಎ ವರದಿ ಸಲ್ಲಿಕೆ

ಕೊಚ್ಚಿ: 2047ರೊಳಗಾಗಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಗೂಢ ಯೋಜನೆಗೆ ನಿಷೇಧಿತ ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರೂಪು ನೀಡಿತ್ತೆಂದೂ, ಮಾತ್ರವಲ್ಲ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಇತರ ಧರ್ಮಕ್ಕೆ ಸೇರಿದ 977 ನೇತಾರರ  ಹತ್ಯೆಗಾಗಿ ಹಿಟ್ ಲಿಸ್ಟನ್ನು ಪಿಎಫ್‌ಐ ತಯಾರಿಸಿತ್ತೆಂದು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಎರ್ನಾಕುಳಂ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ಶಾರೀರಿಕ್ ಶಿಕ್ಷಕ್ ಪ್ರಮುಖ್  ಶ್ರೀನಿವಾಸರನ್ನು ಕೊಲೆಗೈದ ಪ್ರಕರಣದ ಆರೋಪಿಗಳು ಜಾಮೀನುಕೋರಿ ಸಲ್ಲಿಸಿದ ಅರ್ಜಿಯ ವಿರುದ್ಧ ನ್ಯಾಯಾ …

ನಕಲಿ ಸಹಿ ಹಾಕಿ ಟ್ರಶರಿಯಿಂದ ಹಣ ಹಿಂಪಡೆದ ಪ್ರಕರಣ: ಫಾರೆಸ್ಟ್ ಆಫೀಸರ್ ಸೆರೆ

ಕಾಸರಗೋಡು: ಚೆಕ್‌ಗಳಲ್ಲಿ ನಕಲಿ ಸಹಿ ಹಾಕಿ ಟ್ರಶರಿಯಿಂದ ಹಣ ಹಿಂಪಡೆದುಕೊಂಡ ಆರೋಪದಂತೆ ಫಾರೆಸ್ಟ್ ಆಫೀಸರ್‌ನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಕಾಸರಗೋಡು ಸಬ್ ಟ್ರಶರಿ ಆಫೀಸರ್‌ರ ದೂರಿನಂತೆ ಸೆಕ್ಷನ್ ಫಾರೆಸ್ಟ್ ಆಫೀಸರ್  ಬಿಜು ಆಂಟನಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಕೆಲಸ ನಿರ್ವಹಿಸುತ್ತಿದ್ದ ತಲಶ್ಶೇರಿ ನಿವಾಸಿ ಆನಂದ್‌ರ ಎರಡು ಚೆಕ್‌ಲೀಫ್‌ಗಳನ್ನು ಪಡೆದು ಕೊಂಡ ಬಿಜು ಆಂಟನಿ ಆನಂದ್‌ರ ನಕಲಿ ಸಹಿ ಹಾಕಿ ಈತಿಂಗಳ 13ರಂದು 35 ಸಾವಿರ ರೂಪಾಯಿಗಳನ್ನು ಲಪಟಾ ಯಿಸಿರುವು ದಾಗಿ ಕೇಸು ದಾಖಲಿಸ …

ಮದ್ಯದಮಲಿನಲ್ಲಿ ಬಸ್‌ನೊಳಗೆ ಗಲಾಟೆ ಸೃಷ್ಟಿಸಿದ ವ್ಯಕ್ತಿ ಸೆರೆ

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ  ವ್ಯಕ್ತಿಯೋರ್ವ ಮದ್ಯದಮಲಿನಲ್ಲಿ ಗಲಾಟೆ ಸೃಷ್ಟಿಸಿ ಇತರ ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡಿದ ಘಟನೆ ನಡೆದಿದೆ.  ಈ ಸಂಬಂಧ ಕಾಞಂಗಾಡ್ ನಿವಾಸಿ ಉಮರುಲ್ ಫಾರೂಕ್ (45) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತ ನಿನ್ನೆ ಸಂಜೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದನು. ಮಂಗಳೂರಿ ನಿಂದ ಈತ ಬಸ್ ಹತ್ತಿದ್ದು ಆವಾಗಲೇ ಮದ್ಯದಮಲಿನಲ್ಲಿದ್ದನೆನ್ನಲಾಗಿದೆ. ಬಸ್ ಪ್ರಯಾಣ ಆರಂಭಿಸಿದೊಡನೆ ಈತ ಬಸ್‌ನೊಳಗೆ ಗಲಾಟೆಯೆಬ್ಬಿಸಿ ಇತರ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸಿದ್ದಾನ. ಇದರಿಂದ ಬಸ್ ಕುಂಬಳೆಗೆ ತಲುಪಿದಾಗ ನೇರವಾಗಿ …

ಮದ್ಯದಮಲಿನಲ್ಲಿ ಕಾರು ಚಲಾಯಿಸಿದ ಮುಖ್ಯೋಪಾಧ್ಯಾಯಿನಿ ಸೆರೆ

ಹೊಸದುರ್ಗ: ಮದ್ಯದ ಮಲಿನಲ್ಲಿ ಕಾರು ಚಲಾಯಿಸಿದ ಆರೋಪದಂತೆ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯನ್ನು ಹೊಸದುರ್ಗ ಪೊಲೀಸರು ಸೆರೆ ಹಿಡಿದಿದ್ದಾರೆ. ಹೊಸದುರ್ಗ ಐಂಙೋತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿ ಬರುತ್ತಿದ್ದುದನ್ನು ಗಮನಿಸಿದ ಪೊಲೀಸರು ಆ ಕಾರನ್ನು ತಡೆದು ನಿಲ್ಲಿಸಿ ವಶಕ್ಕೆ ತೆಗೆದು ಅದನ್ನು ಚಲಾಯಿಸಿದ ಮುಖ್ಯೋಪಾಧ್ಯಾಯಿನಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡಿದ್ದಾರೆ.

ರ‍್ಯಾಗಿಂಗ್ ವಿರುದ್ಧ ಕಠಿಣ ಕ್ರಮ: ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾ ಇರಿಸಲು ನಿರ್ಧಾರ

ಕಾಸರಗೋಡು:  ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಪೊಲೀಸ್ ಸ್ಪೆಷಲ್ ಸ್ಕ್ವಾಡ್ ನಿಗಾ ಇರಿಸಲಿದೆ. ರ‍್ಯಾಗಿಂಗ್ ಬಗ್ಗೆ ಆರೋಪ  ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿ  ಸ್ಪೆಷಲ್ ಸ್ಕ್ವಾಡ್‌ಗೆ ಈ ನಿರ್ದೇಶ ನೀಡಿದ್ದಾರೆ. ಇತ್ತೀಚೆಗೆ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆ ವಿದ್ಯಾರ್ಥಿ ಗಳ ಮೇಲೆ ರ‍್ಯಾಗಿಂಗ್ ನಡೆಸಲಾಗಿದೆ ಯೆಂಬ ಆರೋಪದಂತೆ ಕೇಸು ದಾಖಲಿಸಲಾಗಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ಪೂರ್ಣವಾಗಿ …

ಹಿಮಾಚಲದಲ್ಲಿ ಮೇಘಸ್ಫೋಟ, ಪ್ರವಾಹ: ಇಬ್ಬರ ಸಾವು

ಶಿಮ್ಲಾ:  ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ ಹಾಗೂ ಅದರ ಪರಿಣಾಮ ಉಂಟಾದ ಪ್ರವಾಹದಿಂದ ಇಬ್ಬರು ಸಾವಿಗೀಡಾಗಿದ್ದಾರೆ. 20ಕ್ಕಿಂತ ಹೆಚ್ಚು ಮಂದಿ  ನಾಪತ್ತೆ ಯಾಗಿರುವುದಾಗಿ ಹೇಳಲಾಗುತ್ತಿದೆ.  ಕುಳು, ಕಂಕಾರ ಜಿಲ್ಲೆಗಳಲ್ಲಿ ವ್ಯಾಪಕ ನಾಶನಷ್ಟ ಸಂಭವಿಸಿದೆ. ಹಲವಾರು ಮನೆಗಳು,ಶಾಲೆಗಳು ಕುಸಿದುಬಿದ್ದಿವೆ. ನದಿಗಳು ಉಕ್ಕಿ ಹರಿದ ಪರಿಣಾಮ ರಸ್ತೆ,ಸೇತುವೆಗಳು ಹಾನಿಗೀಡಾಗಿವೆ.  ರಾಜ್ಯದಲ್ಲಿ ವ್ಯಾಪಕ ಮಳೆ ಮುಂದುವರಿಯುತ್ತಿದೆ.

ಉತ್ತರಾಖಂಡ್‌ನಲ್ಲಿ ಬಸ್ ನೀರಿಗೆ ಬಿದ್ದು ಹಲವರು ನಾಪತ್ತೆ

ರುದ್ರಪ್ರಯಾಗ್: ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಘೋಲ್ತಿರ್‌ನಲ್ಲಿ ಇಂದು ಬೆಳಿಗ್ಗೆ ಉಕ್ಕಿ ಹರಿಯುತ್ತಿದ್ದ ಅಲಕಾನಂದ ನದಿಗೆ ಬಸ್ಸೊಂದು ಮಗುಚಿ ಬಿದ್ದು ಅದರಲ್ಲಿದ್ದ ಹಲವರು ನಾಪತ್ತೆಯಾಗಿದ್ದಾರೆ. ಬಸ್‌ನಲ್ಲಿ ಎಷ್ಟು ಮಂದಿ ಇದ್ದರೆಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಭದ್ರತಾ ಸಂಸ್ಥೆಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ಮೇಲಕ್ಕೆತ್ತುವ ಯತ್ನದಲ್ಲಿತೊಡಗಿದ್ದಾರೆ. ಮಾತ್ರವಲ್ಲ ನಾಪತ್ತೆಯಾದವರನ್ನು ಪತ್ತೆಹಚ್ಚುವ ಕೆಲಸವೂ ಭರದಿಂದ ಮುಂದುವರಿಯುತ್ತಿದೆ.