ಪತಿ ಮನೆಯಲ್ಲಿ ಕಿರುಕುಳ ಸಹಿಸಲಾಗದೆ ತಾಯಿ ಮನೆಗೆ ಹೋದ ಯುವತಿಗೆ ತಂದೆಯಿಂದಲೂ ಹಲ್ಲೆ: ಆತ್ಮಹತ್ಯೆಗೈಯ್ಯಲು ನಿರ್ಧರಿಸಿದ ಯುವತಿಯನ್ನು ರಕ್ಷಿಸಿದ ಯುವಕರು

ಕುಂಬಳೆ: ನಾಲ್ಕು ತಿಂಗಳು ಪ್ರಾಯದ  ಮಗುವಿನ ತಾಯಿಯಾದ ಯುವತಿಗೆ ಪೈಶಾಚಿಕ ರೀತಿಯಲ್ಲಿ ಹಲ್ಲೆ ನಡೆಸಿ  ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಕುಂಬಳೆ ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ. ಕೊಯಿಪ್ಪಾಡಿ, ಪೆರುವಾಡ್ ಕಡಪ್ಪುರದ ೨೦ರ ಹರೆಯದ ಯುವತಿ ನೀಡಿದ ದೂರಿ ನಂತೆ  ಕೇಸು ದಾಖಲಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪತಿ ಪೆರುವಾಡ್ ಕಡಪ್ಪುರದ ಫಿರೋಸ್, ಮನೆಯವರಾದ ಅಬ್ದುಲ್ ರಹ್ಮಾನ್, ನಬೀಸ ಎಂಬಿವರ ವಿರುದ್ದ ಕೇಸು ದಾಖಲಿಸಲಾಗಿದೆ. 2024 ಎಪ್ರಿಲ್ 21ರಂದು ಯುವತಿ ಹಾಗೂ ಒಂದನೇ ಆರೋಪಿಯಾದ ಫಿರೋಸ್  ಮಧ್ಯೆ …

ಅಸೌಖ್ಯ: ನಿವೃತ್ತ ಶಿಕ್ಷಣಾಧಿಕಾರಿ ನಿಧನ

ಉಪ್ಪಳ: ಐಲ ಕ್ಷೇತ್ರ ಸಮೀಪ ನಿವಾಸಿ, ಧರ್ಮತ್ತಡ್ಕ ಶಾಲೆಯ ನಿವೃತ್ತ ಅಧ್ಯಾಪಕ ಅಶೋಕನ್‌ರ ಪತ್ನಿ ನಿವೃತ್ತ ಶಿಕ್ಷಣಾಧಿಕಾರಿ ಲತಾ.ಕೆ (59) ನಿನ್ನೆ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮಂಗಲ್ಪಾಡಿ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿ ಕೋದಮಂಗಲದಲ್ಲಿ ಡಿ.ಇ.ಒ ಆಗಿ ನಿವೃತ್ತಿ ಹೊಂದಿದ್ದಾರೆ. ಕಾಸರಗೋಡಿನ ದಿ| ರಾಮಚಂದ್ರ -ದಿ| ರಾಜೀವಿ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ ಪುತ್ರ ಆಶಿತ್‌ಲಾಲ್ (ಯು.ಎಲ್.ಸಿ.ಸಿ ಉದ್ಯೋಗಿ), ಸಹೋದರ ಸಹೋದರಿಯರಾದ ಜಗದೀಶ, ಲಕ್ಷ್ಮೀಕಾಂತ್, ಪುಷ್ಪಾವತಿ, ವಿಜಯ ಹಾಗೂ …

ಮತ್ತೆ ದಾಖಲೆ ಸೃಷ್ಟಿಸಿದ ಚಿನ್ನದ ದರ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆಯತ್ತ ನೆಗೆದಿದೆ. ಪವನ್ಗೆ 160 ರೂಪಾಯಿ ಹೆಚ್ಚಳವಾಗುವು ದರೊಂ ದಿಗೆ ಇಂದಿನ ದರ 75,200 ರೂ. ಆಗಿದೆ. ಒಂದು ಗ್ರಾಂ ಚಿನ್ನದ ದರ 9,400ರೂಪಾಯಿ.ಕಳೆದ ತಿಂಗಳ 23ರಂದು 75 ಸಾವಿರ ರೂಪಾಯಿ ದಾಟಿ ದಾಖಲೆ ನಿರ್ಮಿಸಿದ ಚಿನ್ನದ ಬೆಲೆ ಅನಂತರದ ದಿನಗಳಲ್ಲಿ ಕಡಿಮೆ ಯಾಗಿತ್ತು. 74 ಸಾವಿರಕ್ಕಿಂತಲೂ ಕಡಿಮೆಯಾದ ಬೆಲೆ ಮೊನ್ನೆಯಿಂದ ಮತ್ತೆ ಏರತೊಡಗಿದೆ. ಅಗೋಸ್ತ್ 1ರಂದು ಪವನ್ಗೆ 73,200 ರೂ. ಆಗಿತ್ತು.5 ದಿನಗಳ ಮಧ್ಯೆ 1800 ರೂ.ಗಳ ಹೆಚ್ಚಳವಾಗಿದೆ. …

ಬೀಗ ಜಡಿದ ಮನೆಯಿಂದ 15 ಪವನ್ ಚಿನ್ನ, 50,೦೦೦ ರೂ. ಕಳವು

ಕಾಸರಗೋಡು: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ 15 ಪವನ್ ಚಿನ್ನ ಹಾಗೂ 5೦,೦೦೦ ರೂ. ನಗದು ಕಳವುಗೈದ ಘಟನೆ ಚೆಂಗಳದಲ್ಲಿ ನಡೆದಿದೆ. ಚೆಂಗಳ ನಾಲ್ಕನೇ ಮೈಲಿನ ಸತ್ತಾರ್ ಕೆ.ಎ. ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಇವರು ನಿನ್ನೆ ಮನೆಗೆ ಬೀಗ ಜಡಿದು ಸೂರ್ಲಿನಲ್ಲಿರುವ ತಮ್ಮನ ಮನೆಗೆ ಹೋಗಿದ್ದರು. ಸಂಜೆ ವೇಳೆ ಹಿಂದಿರುಗಿದಾಗಲಷ್ಟೇ ಮನೆಯಲ್ಲಿ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಮನೆಯ ಎದುರಿನ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿನ ಎಲ್ಲಾ ಕಪಾಟುಗಳನ್ನು …

ಮನೆ ಅಂಗಳದಲ್ಲಿ ಮಗುವಿಗೆ ಊಟ ನೀಡುತ್ತಿದ್ದಾಗ ತೆಂಗಿನ ಮರಬಿದ್ದು ಯುವತಿ ಮೃತ್ಯು

ಕಲ್ಲಿಕೋಟೆ: ಮನೆ ಅಂಗಳದಲ್ಲಿ ನಿಂತುಕೊಂಡು ಮಗುವಿಗೆ ಊಟ ನೀಡುತ್ತಿದ್ದ ವೇಳೆ ತೆಂಗಿನ ಮರ ಮಗುಚಿಬಿದ್ದು  ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುನಿಯಿಲ್ ಪೀಡಿಗ ಎಂಬಲ್ಲಿಗೆ ಸಮೀಪದ ಪರಂಬತ್ತ್ ಜಂಶೀದ್ ಎಂಬವರ ಪತ್ನಿ ಫಹೀಮ (30) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ  ಮನೆ ಹಿತ್ತಿಲಲ್ಲಿರುವ ತೆಂಗಿನ ಮರ ಬುಡ ಸಹಿತ ಮಗುಚಿ ಅಂಗಳಕ್ಕೆ ಬಿದ್ದಿದೆ. ಘಟನೆ ವೇಳೆ ಅಂಗಳದಲ್ಲಿ ಫಹೀಮ ಮಗುವಿಗೆ  ಊಟ ನೀಡುತ್ತಿದ್ದರು.  ಈ ವೇಳೆ ಮಗುಚಿದ ತೆಂಗಿನ ಮರ ಇವರ ಮೇಲೆ ಬಿದ್ದಿದೆ. ಈ …

ಮಾಧ್ಯಮ ಕಾರ್ಯಕರ್ತರ ಮೇಲೆ ತಂಡದಿಂದ ಹಲ್ಲೆ: ಕೊಲೆಗೀಡಾದ ಸೌಜನ್ಯರ  ಮಾವನ ಕಾರಿಗೆ ಹಾನಿ;  ಧರ್ಮಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕೊಲೆಗೀಡಾದ ಸೌಜನ್ಯ ಎಂಬ ಯುವತಿಯ ಮಾವ ವಿಠಲ ಗೌಡರ ವಾಹನವನ್ನು ತಂಡವೊಂದು ತಡೆದು ನಿಲ್ಲಿಸಿ  ಹಾನಿಗೊಳಿಸಿದ ಘಟನೆ ನಡೆದಿದೆ. ಧರ್ಮಸ್ಥಳ ಟ್ರಸ್ಟನ್ನು ಬೆಂಬಲಿಸುವ ವ್ಯಕ್ತಿಗಳು ವಾಹನಕ್ಕೆ ಹಾನಿಗೈದಿರುವುದಾಗಿ ದೂರಲಾಗಿದೆ. ನಿನ್ನೆ ಸಂಜೆ ನಾಲ್ವರು ಮಾಧ್ಯಮ ಕಾರ್ಯಕರ್ತರ ಮೇಲೆ ಹಲ್ಲೆಗೈದ ಘಟನೆಯ ಬೆನ್ನಲ್ಲೇ ಉಂಟಾದ ಘರ್ಷಣೆ ವೇಳೆ ವಾಹನಕ್ಕೆ ಹಾನಿಗೈಯ್ಯಲಾಗಿದೆ. ವಾಹನದ ಗಾಜುಗಳನ್ನು ಪುಡಿಗೈದು  ಸೀಟುಗಳನ್ನು ಹರಿದು ಹಾಕಿರುವುದಾಗಿ ದೂರಲಾಗಿದೆ. ಬಿಗ್‌ಬಾಸ್ ಸ್ಪರ್ಧಿ ರಜತ್ ಎಂಬವರು ಧರ್ಮಸ್ಥಳ ಗ್ರಾಮದ ಪಾಂಗಾಳದಲ್ಲಿರುವ ಸೌಜನ್ಯರ ಮನೆಗೆ  ಭೇಟಿ ನೀಡಿದ್ದರು. …

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಧರ್ಮಸ್ಥಳ ದೇಗುಲ ಉಗ್ರರ ಟಾರ್ಗೆಟ್ ಆಗಿತ್ತು

ಬೆಂಗಳೂರು: 2022 ನವಂಬರ್ 19ರಂದು ಸಂಜೆ ಮಂಗಳೂರಿನ ಕಂಕನಾಡಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್  ಸ್ಫೋಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಲಭಿಸಿದೆ. ಕುಕ್ಕರ್ ಬಾಂಬ್‌ನ ಅಸಲಿ ಟಾರ್ಗೆಟ್ ಧರ್ಮಸ್ಥಳ ದೇಗುಲ ಆಗಿತ್ತೆಂಬ ಸ್ಫೋಟಕ ಮಾಹಿತಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯಲ್ಲಿ ಬಯಲುಗೊಂಡಿದೆ. ಶಂಕಿತ ಉಗ್ರರು ಧರ್ಮಸ್ಥಳ ದೇವಾಲಯದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರೆಂಬ ಮಾಹಿತಿಯನ್ನು ಇ.ಡಿ ಬಯಲಿಗೆಳೆದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಬಾಂಬನ್ನು ಧರ್ಮಸ್ಥಳ ಕ್ಷೇತ್ರದಲ್ಲಿ ಇರಿಸಿ ಸ್ಫೋಟಿಸಲು ಸಂಚು …

ನಿಧನ

ಬೆಳ್ಳೂರು: ಕಿನ್ನಿಂಗಾರು ಬೈಕಾಜೆ ಕನಕತ್ತೋಡಿ ಗುತ್ತು ನಿವಾಸಿ, ಕೃಷಿಕ ರಮಾನಾಥ ಆಳ್ವ (65) ನಿಧನ ಹೊಂದಿದರು. ಜ್ವರ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಲಕ್ಷ್ಮಿ ಆಳ್ವ, ಮಕ್ಕಳಾದ ಶರಣ್ ಆಳ್ವ, ಚಿನ್ಮಯ್, ಸಹೋದರರಾದ ಸಚ್ಚಿದಾನಂದ ಆಳ್ವ , ಜೀವರಾಜ ಆಳ್ವ, ರವೀಂದ್ರ ಆಳ್ವ, ಅಶೋಕ ಆಳ್ವರ, ಸಹೋದರಿಯರಾದ ಸಾವಿತ್ರಿ ಶೆಟ್ಟಿ, ಗೀತಾಲಕ್ಷ್ಮಿ ಭಂಡಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

ವರ್ಕಾಡಿ ಕಾಂಗ್ರೆಸ್ ಕಚೇರಿ ಕೆ.ಕೆ. ಜಾಯಿರನ್ ಸ್ಮೃತಿ ಭವನ ಉದ್ಘಾಟನೆ

ವರ್ಕಾಡಿ: ಸ್ವತಂತ್ರ ಭಾರತದ ರೂವಾರಿಗಳಾದ ಹಿರಿಯರ ತ್ಯಾಗಮಯ ಜೀವನವೇ ಕಾಂಗ್ರೆಸಿಗರಿಗೆ ಸ್ಪೂರ್ತಿಯಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ಮುನ್ನಡೆಯು ತ್ತಿರುವ ಕಾಂಗ್ರೆಸ್ ಜನ ಹೃದಯಗಳಲ್ಲಿ ಸ್ಥಾಯಿಯಾಗಿ ನಿಲ್ಲಲಿದೆ. ಕಾಂಗ್ರೆಸ್ ಪಕ್ಷದ ಉಲ್ಲೇಖವಿಲ್ಲದೆ ಆಧುನಿಕ ಭಾರತದ ಇತಿಹಾಸ ಪೂರ್ಣವಾಗದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಹೇಳಿದ್ದಾರೆ. ವರ್ಕಾಡಿ ಮಂ ಡಲ ಕಾಂಗ್ರೆಸ್ ಸಮಿತಿಯ ನೂತನ ಕಚೇರಿ ಕೆ.ಕೆ. ಜಾಯಿರನ್ ಸ್ಮೃತಿಭವನ ಮಜಿರ್ಪಳ್ಳದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವರ್ಕಾಡಿ ಮಂ ಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋ ತ್ತಮ …

ಬಿಜೆಪಿ ಹಿರಿಯ ಕಾರ್ಯಕರ್ತ ನಿಧನ

ಮಂಜೇಶ್ವರ: ಕೊಡ್ಲಮೊಗರು ಬಳಿಯ ಕೊಣಿಬೈಲು ನಾಣಿಲ್ತಾಡಿ ನಿವಾಸಿ ಕೃಷಿಕ, ಹಿರಿಯ ಬಿಜೆಪಿ ಕಾರ್ಯಕರ್ತ ರಾಘವ ಬೆಳ್ಚಾಡ (76) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಮಕ್ಕಳಾದ ಕಾರ್ತೀಶ್ (ಬಿಜೆಪಿ ಮಂಡಲ ಕಮಿಟಿ ಸದಸ್ಯ), ಸುನೀತಾ, ವನಿತಾ, ಮಮತಾ, ಸುಖಲತಾ, ಸೊಸೆ ಮಲ್ಲಿಕಾ, ಅಳಿಯಂದಿರಾದ ಯಾದವ, ರಾಧಾಕೃಷ್ಣ, ಮೋಹನ, ದಾಮೋದರ, ಸಹೋದರಿ ಶಾರದಾ, ಸಹೋದರ ರಾದ ಮಾಧವ, ವಿಶ್ವನಾಥ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಪತ್ನಿ ಸೀತಾ ಈ …