ಕನ್ನಡ ಭವನದಲ್ಲಿ ಕನ್ನಡ ಸಂಸ್ಕೃತಿ ಉತ್ಸವ 10ರಂದು

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ಮಾರ್ಚ್ 10ರಂದು ಬೆಳಗ್ಗೆ 10ರಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಹಕಾರದಲ್ಲಿ ಕೇರಳ-ಕರ್ನಾಟಕ ಕನ್ನಡ ಸಂಸ್ಕೃತಿ ಉತ್ಸವ ಜರುಗಲಿದೆ.ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷ ಎಂ.ಕೆ ಪ್ರಾಣೇಶ್ ಉದ್ಘಾಟಿಸುವರು. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಕನ್ನಡ ಭವನ ಮತ್ತ ಗ್ರಂಥಾಲಯದ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್, ಪಿ …

ಮಂಗಳೂರಿಗೆ ತೆರಳಿದ ಯುವಕ ನಾಪತ್ತೆ

ಹೊಸದುರ್ಗ: ಮಂಗಳೂರಿಗೆ ಉದ್ಯೋಗ ನಿಮಿತ್ತ ತೆರಳಿದ ಮಡಿಕೈ ನಿವಾಸಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕಾಣಿಚ್ಚಿರದ ಕೊಟ್ಟನ್ ವೆಲ್ಛಪ್ಪಾಡನ್‌ರ ಪುತ್ರ ದಿನೇಶನ್ (೪೭) ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. ಕಳೆದ ತಿಂಗಳ ೨೩ರಂದ ಬೆಳಿಗ್ಗೆ ಅಂಬಲತ್ತುಕರ ಪತ್ನಿಯ ಮನೆಯಿಂದ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ತೆರಳಿದ್ದ ಇವರು ನಾಪತ್ತೆಯಾಗಿರು ವುದಾಗಿ ಪತ್ನಿ ಕೆ. ಆಶಾ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.

ಕಲ್ಲಕಟ್ಟ ಎಂಎಯುಪಿ ಶಾಲೆ ವಾರ್ಷಿಕೋತ್ಸವ

ಮಾನ್ಯ: ಕಲ್ಲಕಟ್ಟ ಎಂಎಯುಪಿ ಶಾಲೆಯಲ್ಲಿ ವಾರ್ಷಿಕೋತ್ಸವ ಜರಗಿತು. ಕಾಸರಗೋಡು ಬಿಆರ್‌ಸಿಯ ಬ್ಲೋಕ್ ಪ್ರೊಜೆಕ್ಟ್ ಆಫೀಸರ್ ಖಾಸಿಂ ಟಿ. ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಪಿ.ವಿ. ಕೇಶವ ಧ್ವಜಾರೋಹಗೈದರು. ಚೆಂಗಳ ಪಂಚಾಯತ್ ಸದಸ್ಯ ಬಶೀರ್ ಎನ್.ಎ. ಅಧ್ಯಕ್ಷತೆ ವಹಿಸಿ ದರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಆಗಸ್ಟಿನ್ ಬರ್ನಾಡ್ ಮೊಂತೇರೊ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಖ್ಯೋಪಾಧ್ಯಾ ಯಿನಿ ಜಯಲಕ್ಷ್ಮಿ ಸಿ.ಎಚ್. ವರದಿ ವಾಚಿಸಿದರು. ಪಿಟಿಎ ಅಧ್ಯಕ್ಷ ಗೋ ಪಾಲಕೃಷ್ಣ ಎ.ಎನ್, ಮಾತೃಸಂಘದ ಅಧ್ಯಕ್ಷೆ ಪಾರ್ವತಿ ಪಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ …

ಬಂಗ್ರಮಂಜೇಶ್ವರ: ಓಜ ಸಾಹಿತ್ಯ ಕೂಟದಿಂದ ಏಕಾಹ ಭಜನೆ

ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವ ಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಓಜ ಸಾಹಿತ್ಯ ಕೂಟ ಇದರ 64ನೇ ವರ್ಷದ ಏಕಾಹ ಭಜನೋತ್ಸವ ಇಂದು ಮುಂಜಾನೆ ಕ್ಷೇತ್ರದ ತಂತ್ರಿ ವರ್ಯ ಉಮೇಶ ತಂತ್ರಿ ಮಂಗಳೂರು, ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ಪ್ರಕಾಶ್ಚಂದ್ರ ಶ್ರೌತಿ ದೀಪ ಪ್ರಜ್ವಲನೆಗೊಳಿಸಿ ಭಜನೆಗೆ ಚಾಲನೆ ನೀಡಿದರು.ಈ ವೇಳೆ ಕ್ಷೇತ್ರದ ಮೊಕ್ತೇಸರು, ಓಜ ಸಾಹಿತ್ಯ ಕೂಟದ, ಕ್ಷೇತ್ರದ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ನಾಳೆ ಸೂರ್ಯೋ ದಯಕ್ಕೆ ಮಂಗಳಾಚರಣೆ ನಡೆಯಲಿದೆ.

ಪೆರ್ಣೆಯಲ್ಲಿ ಕಳಿಯಾಟ ಮಹೋತ್ಸವ ಸಂಪನ್ನ

ಸೀತಾಂಗೋಳಿ: ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು. ಈ ತಿಂಗಳ ೧ರಿಂದ ಕಳಿಯಾಟ ಮಹೋತ್ಸವ ಆರಂಭಗೊಂಡಿತ್ತು ನಿನ್ನೆ ವರೆಗೆ ಏಳುದಿನಗಳಲ್ಲಿ  ಪುಲ್ಲೂರು ಕಣ್ಣನ್ ದೈವ, ಕಣ್ಣಂಗಾಟ್ ಭಗವತಿ, ಪುಲ್ಲೂರು ಕಾಳಿ ದೈವ, ಶ್ರೀ ವಿಷ್ಣುಮೂರ್ತಿ, ಶ್ರೀ ಬೀರ್ಣಾಳ್ವ ಮೊದಲಾದ ದೈವಗಳ ನರ್ತನ ನಡೆಯಿತು. ಕೊನೆಯ ದಿನವಾದ ನಿನ್ನೆ ನರಂಬಿಲ್ ಭಗವತಿ ದೈವದ ನರ್ತನ, ಪುಲ್ಲೂರ್‌ಕಾಳಿ ದೈವದ ನರ್ತನ,  ತೀಪಾತಿ ದೈವದ ನರ್ತನ, ಅಗ್ನಿಸೇವೆ, ಶ್ರೀ ಮುಚ್ಚಿಲೋಡ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್‌ಕಾಳಿ …

ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಆರೋಪಿಯ ನಿಗೂಢ ಸಾವು: ದೇಹದಲ್ಲಿ ಹಲ್ಲೆಯ ಗುರುತುಗಳು ಪತ್ತೆ ಮೂರು ಮಂದಿ ಪೊಲೀಸ್ ಕಸ್ಟಡಿಯಲ್ಲಿ

ಮಂಜೇಶ್ವರ: ಗಾಂಜಾ ಸೇದಿ ಬೊಬ್ಬಿಟ್ಟ ಎಂಬ ಆರೋಪದಂತೆ ಪೊಲೀಸರು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಸಂಬಂಧಿಕನೊಂದಿಗೆ ತೆರಳಿದ ಆರೋಪಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು  ಮೂರು ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೀಯಪದವು ಮದಕ್ಕಳದ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (೨೨)ರ ಸಾವಿಗೆ ಸಂಬಂಧಿಸಿ ಪೊಲೀಸರು ಮೂರು ಮಂದಿಯನ್ನು ಕಸ್ಟಡಿಗೆ ತೆಗೆದು ತನಿಖೆ ಮುಂದುವರಿಸಿದ್ದಾರೆ. ಗಂಭೀರ ಹಲ್ಲೆಯೇ ಮೊಯ್ದೀನ್ ಆರಿಫ್‌ರ ಸಾವಿಗೆ ಕಾರಣ ವೆಂದು ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ  ವರದಿಯಲ್ಲಿ ತಿಳಿಸಲಾಗಿದೆ. ಪರಿಯಾರಂ ಮೆಡಿಕಲ್ …

ವಿಷಪ್ರಾಶನ : ಮಹಿಳೆ ಮೃತ್ಯು

ಎಡನೀರು: ವಿಷಪ್ರಾಶನಗೈದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಎಡನೀರು ಚೂರಿಮೂಲೆಯ ಮೈಮೂನಾ (೪೩) ಸಾವನ್ನಪ್ಪಿದ ಮಹಿಳೆ. ಹಳದಿಕಾಮಾಲೆ ತಗಲಿರುವುದಾಗಿ ಶಂಕಿಸಿ ಮೈಮೂನಾರನ್ನು ಮನೆಯ ವರು ಮೊದಲು ವಿದ್ಯಾನಗರದ  ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ  ಹಳದಿಕಾ ಮಾಲೆ ಗುಣಮುಖ ಗೊಳ್ಳದಾಗ ಶಂಕೆಗೊಂಡ ವೈದ್ಯರು ಉನ್ನತ ಮಟ್ಟದ ಪರೀಕ್ಷೆಗೊಳಪಡಿ ಸಿದಾಗ ಮೈಮೂನ ವಿಷ ಸೇವಿಸಿರುವುದು ಸ್ಪಷ್ಟಗೊಂಡಿದೆ. ನಂತರ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಕೊನೆಯುಸಿರೆಳೆ ದರು. ಆದೂರು …

ಮೂಸೋಡಿ ಸಮುದ್ರದಲ್ಲಿ ಅಪರಿಚಿತ ಮೃತದೇಹ ಪತ್ತೆ

ಉಪ್ಪಳ: ಮೂಸೋಡಿ ಸಮುದ್ರ ದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ದಡಕ್ಕೆ ತಲುಪಿಸಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತ ವ್ಯಕ್ತಿ ಯುವಕನದ್ದೆಂದು ತಿಳಿದುಬಂದಿದೆ. ದೇಹದಲ್ಲಿ ಒಳಉಡುಪು ಮಾತ್ರವೇ ಇದೆ. ಮೃತದೇಹ ಜೀರ್ಣಾವಸ್ಥೆಯ ಲ್ಲಿದ್ದು, ನಾಲ್ಕೈದು ದಿನಗಳ ಹಿಂದೆ ಸಾವಿಗೀಡಾಗಿರಬಹುದೆಂದು ಅಂದಾಜಿ ಸಲಾಗಿದೆ.  ಇಂದು ಬೆಳಿಗ್ಗೆ ಮೂಸೋಡಿ ಕಡಪ್ಪುರದಿಂದ ಮೀನುಗಾರಿಕೆಗೆ ತೆರಳಿದವರಿಗೆ ದಡದಿಂದ ೫ ನೋಟಿಕಲ್ ಮೈಲು ದೂರ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ವಿಷಯ ತಿಳಿದ ಕರಾವಳಿ ಪೊಲೀಸರು ಕೂಡಾ  ಕಾರ್ಯಾಚರಣೆಗೆ ತಲುಪಿದ್ದರು.  ಸುಮಾರು …

ನೇಣು ಬಿಗಿದು ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಪೆರಿಯಾ ಮೂನಾಂಕಡವಿನ ಫಲ್ಗುಣನ್- ತಂಗಮಣಿ ದಂಪತಿ ಪುತ್ರಿ ಚಾಲಿಂಗಾಲ್ ಎಸ್.ಎನ್. ಕಾಲೇಜಿನ ತೃತೀಯ ವರ್ಷ ಪದವಿ ವಿದ್ಯಾರ್ಥಿನಿ ಅಮರ ಶಿವ (೧೯) ಎಂಬಾಕೆ ಸಾವನ್ನಪ್ಪಿದ ಯುವತಿ. ಈಕೆ ನಿನ್ನೆ ಮಧ್ಯಾಹ್ನ ತನ್ನ ಮನೆಯ ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವಿಷಯ ತಿಳಿದ ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹದ ಮಹಜರು ನಡೆಸಿದ್ದಾರೆ. ನಂತರ ಮೃತದೇಹವನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಮರಣೋತ್ತರ …

ಸಿನಿಮಾ ಕಥೆಗಾರ ನಿಸಾಂ ರಾವುತರ್ ನಿಧನ

ಕಾಸರಗೋಡು: ಜ್ಯೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್ ಆಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ, ಕಥೆ, ಚಿತ್ರಕಥೆ ಎಂಬೀ ವಲಯಗಳಲ್ಲಿ ಮಲಯಾಳ ಸಿನಿಮಾದಲ್ಲಿ ಸಕ್ರಿಯರಾಗಿದ್ದ  ನಿಸಾಂ ರಾವುತರ್ (೪೯) ಹೃದಯಾಘಾ ತದಿಂದ ನಿಧನಹೊಂದಿದರು. ಅವರು ಕೊನೆಯದಾಗಿ ಚಿತ್ರಕಥೆ ರಚಿಸಿದ ‘ಒರು ಸರ್ಕಾರ್ ಉಲ್ಪನ್ನಂ’ ಎಂಬ ಸಿನಿಮಾ ರಿಲೀಸ್ ಆಗಲಿರುವಂ ತೆಯೇ ಪತ್ತನಂತಿಟ್ಟ ಕಡಮನಿಟ್ಟ ದಲ್ಲಿರುವ ಸ್ವ ವಸತಿಯಲ್ಲಿ  ಇಂದು ಮುಂಜಾನೆ ನಿಧನ ಸಂಭವಿಸಿದೆ.  ಮೊಗ್ರಾಲ್ ಪುತ್ತೂರು, ಕುಂಬಳೆ, ಮುಳ್ಳೇರಿಯ ಮೊದಲಾದ ಆಸ್ಪತ್ರೆಗಳಲ್ಲಿ ಇವರು ಹೆಲ್ತ್ ಇನ್‌ಸ್ಪೆಕ್ಟರ್ ಆಗಿ ಕಾರ್ಯ …