ನಗರದಲ್ಲಿ ಮತ್ತೆ ಕಾಳಧನ ಬೇಟೆ :೧೫.೧೫ ಲಕ್ಷ ರೂ. ವಶ; ಓರ್ವ ಕಸ್ಟಡಿಗೆ

ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೫.೧೫ ಲಕ್ಷ ರೂ.ವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ವರದಿ ತಯಾರಿಸಿ, ವಶಪಡಿಸಲಾದ ಹಣದ ಸಹಿತ ಅದನ್ನು ಕಾಸರಗೋಡು ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದಾರೆ.  ಈಗ ಹಣ ಸಾಗಾಟಕ್ಕೆ ಸಂಬಂಧಿಸಿ ಅಂಗಡಿಮೊ ಗರಿನ ಕಂಬಾರಿನ ಮೊಹಮ್ಮದ್ ಉನೈಸ್   ಎಂಬಾತ ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡು  ಹೇಳಿಕೆ ದಾಖಲಿಸಿಕೊಂಡ ನಂತರ ಆತನನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಹಣಕ್ಕೆ ಸಂಬಂಧಿಸಿದ ಸರಿಯಾದ ದಾಖಲುಪತ್ರಗಳನ್ನು ನ್ಯಾಯಾಲಯದಲ್ಲಿ …

ಸ್ವಂತ ಹಣದಿಂದ ರಸ್ತೆ ದುರಸ್ತಿಗೊಳಿಸಿದ ಲಾರಿ ಚಾಲಕನ ಸಮಾಜಸೇವೆಗೆ ಪ್ರಶಂಸೆ

ಮಂಜೇಶ್ವರ: ಕಾಂಕ್ರೀಟ್ ರಸ್ತೆಯ ಇಕ್ಕಡೆಗಳಲ್ಲಿ ತಗ್ಗಾಗಿರುವ ಕಾರಣ ದ್ವಿಚಕ್ರ ವಾಹನಗಳು ನಿತ್ಯವೂ ಅಪಘಾತಕ್ಕೀಡಾಗುತ್ತಿರುವುದನ್ನು ಮನಗಂಡ ಲಾರಿ ಚಾಲಕರೋರ್ವರು ಅಲ್ಲಗೆ ಮಣ್ಣು ಹಾಕಿ ಸಮತಟ್ಟುಗೊಳಿಸಿದ ಘಟನೆ ಪ್ರದೇಶದಲ್ಲಿ ಗಮನಸೆಳೆದಿದೆ. ತೂಮಿನಾಡು ನಿವಾಸಿ ಲಾರಿ ಚಾಲಕ ನಾರಾಯಣ ಈ ಸಮಾಜಸೇವೆ ಮಾಡಿ ಮಾದರಿಯಾದವರು. ತೂಮಿನಾಡುಪದವು ಕಾಂಕ್ರೀಟ್ ರಸ್ತೆಯ ಎರಡೂ ಕಡೆ ತಗ್ಗಾಗಿರುವ ಕಾರಣ ವಾಹನಗಳಿಗೆ ಸೈಡ್ ನೀಡುವ ವೇಳೆ ದ್ವಿಚಕ್ರ  ಸವಾರರು ಅಪಘಾತಕ್ಕೀಡಾಗುತ್ತಿದ್ದರು. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರೂ ಅವರು ಮೌನ ವಹಿಸಿದ ಹಿನ್ನೆಲೆಯಲ್ಲಿ  ಸ್ವಂತಕ್ಕಾಗಿ ಬದುಕುವ ಜೊತೆಗೆ …

ಮನೋರೋಗಿಯ ಪರಾಕ್ರಮ: ಸ್ಕೂಟರ್ ಢಿಕ್ಕಿ ಹೊಡೆಸಿ ಪಾದಚಾರಿಯ ತೊಡೆ ಎಲುಬು ಮುರಿತ

ಕಾಸರಗೋಡು: ಮಾನಸಿಕವಾಗಿ ಅಸ್ವಸ್ಥಗೊಂಡಿರುವ ವ್ಯಕ್ತಿಯೋರ್ವ ನಡೆಸಿದ ಪರಾಕ್ರಮದಿಂದ ಇಬ್ಬರು ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ನರಹತ್ಯಾಯತ್ನಕ್ಕೆ ಕೇಸು ದಾಖಲಿಸಿಕೊಂಡು ಪೊಲೀಸರು ಹಲ್ಲೆ ಗೈದ ವ್ಯಕ್ತಿಯನ್ನು ಕಲ್ಲಿಕೋಟೆಯ ಕುದಿರವಟ್ಟಂ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಕಳೆದ ದಿನ ತಳಂಗರೆ ಹಾಗೂ ಪೊವ್ವಲ್ ಮಾಸ್ತಿಕುಂಡ್‌ನಲ್ಲಿ ಘಟನೆ ನಡೆದಿದೆ. ಮುಂಜಾನೆ ೩ ಗಂಟೆ ವೇಳೆ ಮಾಲಿಕ್ ದೀನಾರ್ ನಗರದಲ್ಲಿ  ಓರ್ವನಿಗೆ ಹಲ್ಲೆಗೈದ ಬಳಿಕ ಸ್ಕೂಟರ್‌ನಲ್ಲಿ ಮಾಸ್ತಿಕುಂಡ್‌ಗೆ ತಲುಪಿದ ಯುವಕ   ಮಾಸ್ತಿಕುಂಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಇಬ್ರಾಹಿಂ ಎಂಬವರನ್ನು ದೂಡಿ ಹಾಕಿದ್ದಾನೆ. ರಸ್ತೆ ಬದಿ ನಡೆದು …

೩೧೫ ಗ್ರಾಂ ಗಾಂಜಾ ವಶ: ಓರ್ವ ಸೆರೆ

ಕಾಸರಗೋಡು: ತೆಕ್ಕಿಲ್ ಗ್ರಾಮದ ಪೊಯಿನಾಚಿಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಶಿಜು ಇ.ಟಿ.ಯವರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೩೧೫ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಇದಕ್ಕೆ ಸಂಬಂಧಿಸಿ  ಪನಯಾಲ್ ಪೆರಿಯಾಟಡ್ಕ ಪೆರುಂಬಾ ವೀಡಿನ ಖಾದರ್ ಕುಂಞಿ (೫೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾ ಗಿದೆ. ಈತ ಸಂಚರಿಸುತ್ತಿದ್ದ ಮೋಟಾರ್ ಬೈಕ್‌ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಅಬಕಾರಿ ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ …

ಕಾಸರಗೋಡಿನಿಂದ ಕಳವಿಗೀಡಾದ ಬೈಕ್ ಉಪ್ಪಳದಲ್ಲಿ ಪತ್ತೆ

ಕಾಸರಗೋಡು: ಕಾಸರ ಗೋಡಿನಿಂದ ನಾಪತ್ತೆಯಾಗಿದ್ದ ಬುಲ್ಲೆಟ್ ಬೈಕ್ ಉಪ್ಪಳದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಪ್ಪಳ ಬಳಿಯ ಐಲ- ಪಾರಕಟ್ಟೆ ರಸ್ತೆ ಬದಿ  ಮೊನ್ನೆ ಸಂಜೆ ಬೈಕ್ ಉಪೇಕ್ಷಿತ ಸ್ಥಿತಿಯಲ್ಲಿರುವುದನ್ನು ಕಂಡ ನಾಗರಿಕರು ಮಂಜೇಶರ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಅದನ್ನು ಕಸ್ಟಡಿಗೆ ತೆಗೆದು ಪರಿಶೀಲನೆ ನಡೆಸಿದಾಗ ಅದು ಕಾಸರಗೋಡಿ ನಿಂದ ಕಳವಿಗೀಡಾದುದೆಂದು ತಿಳಿದು ಬಂತು. ಈ ಬಗ್ಗೆ ಮಾಹಿತಿ ಲಭಿಸಿದ ಕಾಸರಗೋಡು ಪೊಲೀಸರು ಮಂಜೇಶ್ವರಕ್ಕೆ ತೆರಳಿ ಬೈಕ್ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ರೈಲು ನಿಲ್ದಾಣದ ಹೊರಗಡೆ ನಿಲ್ಲಿಸಿದ್ದ ಮಲಪ್ಪುರಂ …

ಬಸ್‌ನಲ್ಲಿ ಏಕಾಂಗಿಯಾಗಿ ಕಂಡು ಬಂದ ಬಾಲಕ: ಹೆತ್ತವರಿಗೆ ಒಪ್ಪಿಸಿದ ಪೊಲೀಸ್

ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ನಲ್ಲಿ ನಿನ್ನೆ ಮಧ್ಯಾ ಹ್ನ ಏಳರ ಹರೆಯದ ಬಾಲಕನೋ ರ್ವ ಏಕಾಂಗಿಯಾಗಿ ಕಂಡು ಬಂದಿದ್ದು ಇದು ಬಸ್ ಸಿಬ್ಬಂದಿಗಳು ಹಾಗೂ ಇತರ ಪ್ರಯಾಣಿಕರಲ್ಲಿ ಗೊಂದಲಕ್ಕೆ ಕಾರಣವಾಯಿತು. ಬಸ್ ನಿರ್ವಾಹಕ ಬಾಲಕ ನನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಲಭಿಸಿಲ್ಲವೆನ್ನಲಾಗಿದೆ. ಇದರಿಂದ ಆತನನ್ನು ಬಸ್ ಸಿಬಂಬಂದಿಗಳು ಉಪ್ಪಳದಲ್ಲಿರುವ ಪೊಲೀಸ್ ಕಂಟ್ರೋಲ್ ರೂಂಗೆ ತಲುಪಿಸಿದ್ದಾರೆ. ಬಳಿಕ ಮಂಜೇಶ್ವರ ಸಿ.ಐ. ರಾಜೀವ್ ಕುಮಾರ್ ಬಾಲಕನನ್ನು ವಶಕ್ಕೆ ತೆಗೆದು ವಿಚಾರಿಸಿದಾಗ ಉಳ್ಳಾಲ ಬಳಿಯ ಮಂಜಿಲ …

ಹದಿಮೂರು ಕ್ವಿಂಟಾಲ್ ಅಡಿಕೆ ಕಳವು

ಕಾಸರಗೋಡು: ಸುಲಿದು ಗೋಣಿಯಲ್ಲಿ ತುಂಬಿಸಿಟ್ಟಿದ್ದ ೧೩ ಕ್ವಿಂಟಾಲ್ ಅಡಿಕೆ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಕಾಟಂಬಳ್ಳಿ ಎಂಬಲ್ಲಿ ವಾಸಿಸುವ ಕೆ. ನಾರಾಯಣನ್ ನಾಯ ರ್‌ರ ಮನೆ ಸಮೀಪವಿರುವ ಗೋಡೌ ನ್‌ನಿಂದ ಅಡಿಕೆ ಕಳವುಗೈಯ್ಯ ಲಾಗಿದೆ. ೨೦ ಗೋಣಿ ಚೀಲಗಳಲ್ಲಿ ಅಡಿಕೆ ತುಂಬಿಸಿ ಡಲಾಗಿತ್ತು. ಸುಮಾರು ೪ ಲಕ್ಷರೂಪಾ ಯಿಗಳ  ಅಡಿಕೆ ಕಳವಿಗೀಡಾಗಿದೆ.

ಗಾಂಜಾ ಪತ್ತೆ: ಓರ್ವ ಸೆರೆ

ಕಾಸರಗೋಡು: ನಗರದ ತಾಯಲಂಗಾಡಿಯಲ್ಲಿ ಕಾಸರ ಗೋಡು ಪೊಲೀಸ್ ಠಾಣೆಯ ಎಸ್‌ಐ ಅಬ್ದುಲ್ ರಜಾಕ್ ಪಿ.ಕೆ.ರ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೪೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿ ಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ತಾಯಲಂಗಾಡಿ ವಳಪ್ಪಿಲ್ ಹೌಸ್‌ನ ನಿವಾಸಿ ಹಾಗೂ ಈಗ ಉಳಿಯತ್ತಡ್ಕ ಚೇನಕ್ಕೋಡಿನಲ್ಲಿ ವಾಸಿಸುತ್ತಿರುವ ಕೆ.ಇ. ಅಬ್ದುಲ್ ಖಾದರ್ (೬೧) ಎಂಬಾತನನ್ನುಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಯುವತಿ ಆತ್ಮಹತ್ಯೆ

ಹೊಸದುರ್ಗ:  ಯುವತಿ ಯೋರ್ವೆ ಮನೆಯ ಬೆಡ್ ರೂಂನಲ್ಲಿ  ನೇಣು ಬಿಗಿದು ಸಾವಿಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾರೆ. ಕಾಞಂ ಗಾಡ್ ಬಳಿಯ ವಳವಿಲ್ ಹೌಸ್‌ನ  ವಿ. ಬಿಜು ಎಂಬವರ ಪತ್ನಿ ಪಿ. ಶ್ರೀಜಾ (೩೫) ಸಾವಿಗೀಡಾದ ಯುವತಿ. ನಿನ್ನೆ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಈಕೆ  ನೇಣು ಬಿಗಿದು ಸಾವಿಗೀಡಾಗಿರುವುದಾಗಿ ಹೇಳಲಾಗುತ್ತಿದೆ. ಈ ಹೊತ್ತಿನಲ್ಲಿ ಪತಿ ಮಕ್ಕಳನ್ನು ವಾಹನಕ್ಕೆ ಹತ್ತಿಸಲು ತೆರಳಿದ್ದರು. ಅವರು ಮರಳಿ ಬಂದಾಗ  ಶ್ರೀಜಾ ನಾಪತ್ತೆಯಾಗಿದ್ದರೆಂದು ಹೇಳಲಾಗುತ್ತಿದೆ. ತೋಟಕ್ಕೆ ಹೋಗಿರಬಹುದೆಂದು ಭಾವಿಸಿ ಅಲ್ಲಿಗೆ ತೆರಳಿ …

ಎಡರಂಗ ಅಭ್ಯರ್ಥಿ ಪ್ರಚಾರ ಆರಂಭ : ಇಂದು ಸಂಜೆ ರೋಡ್‌ಶೋ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎಡರಂಗ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇಂದು ಬೆಳಿಗ್ಗೆ ಕೊಲ್ಲಂಗಾನದ ಬಾಲಷ್ಣನ್ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಸಿ ಪ್ರಚಾರ ಆರಂಭಿಸಲಾಯಿತು. ಅನಂತರ ಎಡನೀರು ಮಠ, ಚೆರ್ಕಳದ ಬಿ.ಎಡ್ ಸೆಂಟರ್, ಮಾರ್ತೋಮ ವಿದ್ಯಾಲಯ, ಚಾಲ ಬಿ.ಎಡ್ ಸೆಂಟರ್, ಸರಕಾರಿ  ಕಾಲೇಜು ಎಂಬೆಡೆಗಳಲ್ಲಿ  ಸಂದರ್ಶನ ನಡೆಸಿದರು. ಮಧ್ಯಾಹ್ನ ಬಳಿಕ ಸಿವಿಲ್ ಸ್ಟೇಶನ್, ಜನರಲ್ ಆಸ್ಪತ್ರೆ, ತಳಂಗರೆ ಮಾಲಿಕ್ ದಿನಾರ್ ಮಸೀದಿ ಎಂಬೆಡೆಗಳಲ್ಲಿ ಸಂದರ್ಶಿಸಿ ಸಂಜೆ …