ತ್ಯಾಜ್ಯ ನೀರನ್ನು ಪಂಚಾಯತ್‌ನ ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ ೨೦,೦೦೦ ರೂ. ದಂಡ

ಕುಂಬಳೆ: ತ್ಯಾಜ್ಯ ನೀರನ್ನು ಪಂ ಚಾಯತ್‌ನ ಚರಂಡಿಗೆ ಹರಿಯಬಿಟ್ಟ ಹೋಟೆಲ್‌ಗೆ ಪಂಚಾಯತ್ ಅಧಿಕಾರಿಗಳು ೨೦ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.  ಕುಂಬಳೆ ಪೇಟೆಯ ಪೊಲೀಸ್ ಠಾಣೆ ರಸ್ತೆಯಲ್ಲಿರುವ ಸುಧೀಂದ್ರ ಹೋಟೆಲ್‌ಗೆ ದಂಡ ವಿಧಿಸಲಾಗಿದೆ. ಈ ಹೋಟೆಲ್‌ನಿಂದ ತ್ಯಾಜ್ಯ ನೀರನ್ನು  ನಳಿಗೆಗಳ ಮೂಲಕ ಪಂಚಾಯತ್‌ನ ಚರಂಡಿಗೆ ಹರಿಯಬಿಟ್ಟಿರುವುದಾಗಿ  ದೂರಲಾಗಿದೆ. ಇದರಿಂದ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿ ಅದು ಸ್ಲ್ಯಾಬ್‌ನ ಎಡೆಯಲ್ಲಾಗಿ ಹೊರಗೆ ಹೋಗಿದ್ದು, ಇದರಿಂದ ಪರಿಸರ ಪ್ರದೇಶದಲ್ಲಿ ದುರ್ನಾತಕ್ಕೆ ಕಾರಣವಾಗಿತ್ತೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಆರೋಗ್ಯ ಅಧಿಕಾರಿ ಗಳಿಗೂ, …

ಪೊಲೀಸರಿಂದ ಹಲ್ಲೆ ಆರೋಪ : ಯುವ ವ್ಯಾಪಾರಿ ಆಸ್ಪತ್ರೆಯಲ್ಲಿ ದಾಖಲು

ಕುಂಬಳೆ:  ಕುಂಬಳೆ ಪೇಟೆಯ ವ್ಯಾಪಾರಿಯೊಬ್ಬರಿಗೆ ಪೊಲೀಸರು ಹಲ್ಲೆಗೈದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಪೇಟೆಯಲ್ಲಿ ಚಪ್ಪಲಿ ವ್ಯಾಪಾರಿ ಯಾಗಿರುವ ಪೇರಾಲ್ ಮಡಿ ಮೊಗರಿನ ಮೊಹಮ್ಮದ್ ಶಾಹಿದ್ (೨೨) ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ  ಸಹಕಾರಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದಾರೆ. ನಿನ್ನೆ ರಾತ್ರಿ ೧೧ ಗಂಟೆ ವೇಳೆ ಅಂಗಡಿಗೆ  ನುಗ್ಗಿದ ಪೊಲೀಸ್ ಹಲ್ಲೆಗೈದಿರುವು ದಾಗಿ ಗಾಯಾಳು ದೂರಿದ್ದಾರೆ. ಇದೇ ವೇಳೆ ಪೊಲೀಸರು ವ್ಯಾಪಾರಿ ಮೇಲೆ ನಡೆಸಿದ ಹಲ್ಲೆಯನ್ನು ಪ್ರತಿಭಟಿಸಿ ಕುಂಬಳೆಯ ವ್ಯಾಪಾರಿಗಳು ಇಂದು ಸಭೆ ನಡೆಸಲು ನಿರ್ಧರಿಸಿದ್ದಾರೆ.  ಇದೇ ವೇಳೆ ಘಟನೆ ಕುರಿತು …

ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ಕೇರಳದ ಮಾದರಿ ಯೋಜನೆ-ಸಚಿವೆ ಆರ್. ಬಿಂದು

ಮುಳಿಯಾರು: ಮುಳಿಯಾರು  ಪಂಚಾಯತ್‌ನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ  ನಿರ್ಮಿಸಲಾಗಿರುವ ಪುನರ್ವಸತಿ ಗ್ರಾಮ ಕೇರಳದ ಒಂದು ಮಾದರಿ ಯೋಜನೆಯಾಗಿದೆಯೆಂದು ರಾಜ್ಯ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಖಾತೆ ಸಚಿವೆ ಆರ್. ಬಿಂದು ಹೇಳಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮುಳಿಯಾರಿನಲ್ಲಿ ಆರಂಭಿಸಲಾದ  ಸಹಜೀವನ, ಸ್ನೇಹಗ್ರಾಮವನ್ನು ಇಂದು ಬೆಳಿಗ್ಗೆ ಉದ್ಘಾಟಿಸಿ  ಸಚಿವೆ ಮಾತನಾಡುತ್ತಿದ್ದರು. ಕ್ಲೀನಿಕಲ್ ಸೈಕಾಲಜಿ ಬ್ಲೋಕ್ ಕನ್ಸಲ್ಟಿಂಗ್ ಆಂಡ್ ಹೈಡ್ರಾಲಜಿ ಬ್ಲಾಕ್‌ಗಳನ್ನು ಈ ಪುನರ್ವಸತಿ ಗ್ರಾಮ ಯೋಜನೆಯ ಮೊದಲ ಹಂತದಲ್ಲಿ ತೆರೆಯಲಾಗಿದೆ. ೨೦೨೨ ಮೇ ತಿಂಗಳಲ್ಲಿ ಇದರ ನಿರ್ಮಾಣ ಕೆಲಸ ಆರಂಭಗೊಂಡಿತ್ತು. ಇದಕ್ಕಾಗಿ …

ಲೋಕಸಭಾ ಚುನಾವಣೆ: ೧೬ರಲ್ಲಿ ಬಿಜೆಪಿ, ೪ರಲ್ಲಿ ಬಿಡಿಜೆಎಸ್ ಸ್ಪರ್ಧೆ

ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯ ಕೇರಳ ಘಟಕದಲ್ಲಿ ಸೀಟು ಹಂಚಿಕೆ ಕ್ರಮ ಪೂರ್ಣಗೊಂಡಿದೆ ಎಂದು ಎನ್‌ಡಿಎ ಉಪಾಧ್ಯಕ್ಷ ಪಿ.ಕೆ. ಕೃಷ್ಣದಾಸ್ ಮತ್ತು ಸಂಚಾಲಕ ತುಷಾರ್ ವೆಳ್ಳಾಪಳ್ಳಿ ತಿಳಿಸಿದ್ದಾರೆ. ಎನ್‌ಡಿಎಯ ಎಲ್ಲಾ ಘಟಕ ಪಕ್ಷಗಳಲ್ಲೂ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿ ಅವರ ಬೇಡಿಕೆಗಳನ್ನು ಆಲಿಸಲಾಗಿದೆ. ಅದನ್ನು ಬಿಜೆಪಿಯ ರಾಜ್ಯ  ಸಮಿತಿಯು ಕೇಂದ್ರ ನೇತೃತ್ವಕ್ಕೆ ತಿಳಿಸಲಿದೆ. ಆ ಬಳಿಕವಷ್ಟೇ ಸೀಟು ಹಂಚಿಕೆ  ವಿಷಯದಲ್ಲಿ  ಅಂತಿಮ ತೀರ್ಮಾನ ಉಂಟಾಗಲಿದೆ ಎಂದೂ ಅವರು ಹೇಳಿದ್ದಾರೆ. ಕೇರಳದ ೨೦ ಲೋಕಸಭಾ ಕ್ಷೇತ್ರಗಳ ಪೈಕಿ …

ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ಮಾರ್ಚ್ ೭ಕ್ಕೆ ಮುಂದೂಡಿಕೆ

ಕಾಸರಗೋಡು: ೨೦೧೭ ಮಾರ್ಚ್ ೨೦ರಂದು ರಾತ್ರಿ ಕಾಸರಗೋಡು ಹಳೇ ಸೂರ್ಲುವಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೭)ರನ್ನು ಕೊಲೆಗೈದ ಪ್ರಕರಣದ ತೀರ್ಪನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ  ಮಾರ್ಚ್ ೭ಕ್ಕೆ ಮುಂದೂಡಿದೆ. ಈ ಪ್ರಕರಣದ ತೀರ್ಪು ನೀಡುವ ದಿನಾಂಕವನ್ನು ನ್ಯಾಯಾಲಯ ಕಳೆದ ವಾರಇಂದಿಗೆ ನಿಗದಿಪಡಿಸಿತ್ತು. ಅದನ್ನು ಈಗ ಮುಂದೂ ಡಲಾಗಿದೆ.

ಮೋನ್ಸನ್ ಮಾವುಂಗಲ್‌ನ ೧.೮೮ ಕೋಟಿ ರೂ.ಗಳ ಸೊತ್ತು ಮುಟ್ಟುಗೋಲು

ಕೊಚ್ಚಿ: ಪುರಾವಸ್ತು ಹೆಸರಲ್ಲಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೋನ್ಸನ್ ಮಾವುಂಗಲ್‌ನ ೧.೮೮ ಕೋಟಿ ರೂಪಾಯಿಗಳ ಸೊತ್ತುಗಳನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ಮುಟ್ಟು ಗೋಲು ಹಾಕಿಕೊಂಡಿದೆ. ಕಾಳಧನ ಬಿಳುಪಿಸುವಿಕೆ ನಿಷೇಧ ನಿಯಮ ೨೦೦೨ರ ಕಾಯ್ದೆಗಳ ಪ್ರಕಾರ ಮೋನ್ಸನ್ ಹಾಗೂ ಕುಟುಂಬ ಸದಸ್ಯರ ಹೆಸರಲ್ಲಿರುವ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಮೋನ್ಸನ್ ಮಾವುಂಗಲ್ ನಕಲಿ ಪುರಾವಸ್ತುಗಳನ್ನು ತೋರಿಸಿ ಗ್ರಾಹಕರನ್ನು ವಂಚಿಸಿರುವುದಾಗಿ ಇ.ಡಿ ತನಿಖೆಯಲ್ಲಿ ಪತ್ತೆಹಚ್ಚಿದೆ.

ಹೆಚ್ಚುತ್ತಿರುವ ಉಷ್ಣತೆ: ಕಾಸರಗೋಡು ಸೇರಿದಂತೆ ೧೨ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಕಾಸರಗೋಡು: ರಾಜ್ಯದ ಇತಿ ಹಾಸದಲ್ಲಿ ಇದೇ ಪ್ರಥಮ ವೆಂಬಂತೆ ಒಟ್ಟು ೧೪  ಜಿಲ್ಲೆಗಳ ಪೈಕಿ ಕಾಸರ ಗೋಡು ಸೇರಿದಂತೆ ೧೨ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇಡುಕ್ಕಿ ಮತ್ತು ವಯನಾಡು ಜಿಲ್ಲೆಗಳನ್ನು  ಹೊರತುಪಡಿಸಿ ಇತರ ಎಲ್ಲಾ ಜಿಲ್ಲೆಗಳ ತಾಪಮಾನ ಮಟ್ಟ  ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ  ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ಎರ್ನಾಕುಳಂ, ಪತ್ತನಂತಿಟ್ಟ ಮತ್ತು ತಿರುವನಂತಪುರ ಜಿಲ್ಲೆಗ  ಉಷ್ಣತಾ ಮಟ್ಟ  ಈಗ ೩೭ ಡಿಗ್ರಿಗೇರಿದೆ. ಕೊಲ್ಲಂ, ಕೋಟ್ಟಯಂ ಮತ್ತು ಆಲ …

ಉಪ್ಪಳ ಬಸ್ ನಿಲ್ದಾಣಕ್ಕೆ ಸರಕಾರಿ ಬಸ್‌ಗಳು ಪ್ರವೇಶಿಸಲು ಆಗ್ರಹಿಸಿ ವ್ಯಾಪಾರಿ ಸಮಿತಿಯಿಂದ ಮಂಜೇಶ್ವರ ಪೊಲೀಸರಿಗೆ ದೂರು

ಉಪ್ಪಳ: ಉಪ್ಪಳ ಬಸ್ ನಿಲ್ದಾಣದೊಳಗೆ ಕರ್ನಾಟಕ-ಕೇರಳ ಸರಕಾರಿ ಬಸ್‌ಗಳು ಪ್ರವೇಶಿಸದೆ ಹೊರಗಡೆ ಹೆದ್ದಾರಿಯಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆಗೊಳಗಾಗುತ್ತಿದ್ದು, ಬಸ್‌ಗಳು ನಿಲ್ದಾಣ ಪ್ರವೇಶಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಉಪ್ಪಳ ಯೂನಿಟ್ ಮಂಜೇಶ್ವರ ಠಾಣೆಗೆ ದೂರು ನೀಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ. ಬಸ್ ನಿಲ್ದಾಣ ಪ್ರವೇಶಿಸದ ಕಾರಣ ಬಸ್‌ಗಾಗಿ ಮಕ್ಕಳು, ಮಹಿಳೆಯರ ಸಹಿತ ವೃದ್ದರು ಸುಡು ಬಿಸಿಲಿಗೆ ಹೆದ್ದಾರಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ. ಕೂಡಲೇ ಎಲ್ಲಾ ಬಸ್‌ಗಳು ನಿಲ್ದಾಣ ಪ್ರವೇಶಿಸಬೇಕೆಂದು …

ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರ  ಕಳಿಯಾಟ ಮಹೋತ್ಸವ ನಾಳೆಯಿಂದ

ಸೀತಾಂಗೋಳಿ: ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಾಳೆಯಿಂದ ೭ರವರೆಗೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಕೇರಳದ ಪ್ರಧಾನ ೧೮ ಮುಚ್ಚಿ ಲೋಟ್ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ  ಈ ಮೊದಲು ೨೦೦೪ರಲ್ಲಿ ಕಳಿಯಾಟ ಮಹೋತ್ಸವ ನಡೆದಿದೆ. ನಾಳೆ ಬೆಳಿಗ್ಗೆ ೯.೩೦ರಿಂದ ಶ್ರೀ ಅನಂತಪುರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸನ್ನಿಧಿಯಿಂದ ಭಂಡಾರ ಆಗಮನ, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ೧೧ರಿಂದ ಕೊಡಿಎಲೆ ಇಡುವುದು, ಉಗ್ರಾಣ ತುಂಬಿಸುವುದು, ಮಧ್ಯಾಹ್ನ ೧೨.೩೦ರಿಂದ ತಂಬುರಾಟಿಯ …

ಹೈಯರ್ ಸೆಕೆಂಡರಿ ಪರೀಕ್ಷೆ ನಾಳೆಯಿಂದ

ಕಾಸರಗೋಡು: ಪ್ಲಸ್ ವನ್, ಪ್ಲಸ್ ಟು ಪರೀಕ್ಷೆಗಳು ನಾಳೆ ಆರಂಭಗೊಳ್ಳ ಲಿದೆ. ಪ್ಲಸ್‌ವನ್‌ನಲ್ಲಿ ೪,೧೪,೧೫೯ ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ೪,೪೧,೨೧೩ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿ ದ್ದಾರೆ. ಮಾರ್ಚ್ ೨೬ರ ತನಕ ಪರೀಕ್ಷೆ ಮುಂದುವರಿಯಲಿದೆ. ರಾಜ್ಯದ ೨೦೧೭ ಕೇಂದ್ರಗಳಲ್ಲಾಗಿ ಈ ಪರೀಕ್ಷೆ ನಡೆಯಲಿದೆ. ಇನ್ನು ವಿ.ಎಚ್.ಎಸ್.ಸಿ. ಪರೀಕ್ಷೆಯೂ ನಾಳೆ ಆರಂಭಗೊಳ್ಳಲಿದ್ದು, ಇದು ಮಾ. ೨೬ರ ತನಕ ಮುಂದುವರಿಯಲಿದೆ. ೧೯೯೪ ಕೇಂದ್ರಗಳಲ್ಲಾಗಿ ಈ ಪರೀಕ್ಷೆ ನಡೆಯಲಿದೆ. ಇದರಲ್ಲಿ ಒಟ್ಟು ೫೭,೧೦೭ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.