ಕರ್ನಾಟಕ ವಿಧಾನಸೌಧದಲ್ಲಿ ಪಾಕ್‌ಪರ ಘೋಷಣೆ: ತನಿಖೆಗಾಗಿ ೩ ವಿಶೇಷ ತಂಡ ರಚನೆ

ಬೆಂಗಳೂರು: ಬೆಂಗಳೂರು ವಿಧಾನಸೌಧದಲ್ಲಿ ನಿನ್ನೆ ಪಾಕ್‌ಪರ ಘೋಷಣೆ ಆರೋಪ ಕೇಳಿಬಂದಿರುವ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆಯೆಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಸಿರ್ ಹುಸೇನ್ ಅವರ  ಗೆಲುವು ಘೋಷಿಸಿದ ಬೆನ್ನಲ್ಲೇ ಅವರ ಜತೆಗಿದ್ದ ಬೆಂಗಾವಲಿಗರು ಅವರಿಗೆ ಜೈಕಾರ ಮೊಳಗಿಸುತ್ತಿದ್ದ ವೇಳೆಯಲ್ಲೇ  ಯಾರೋ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆಂಬ ಆರೋಪ ಉಂಟಾಗಿತ್ತು. ಆದ್ದರಿಂದ  ನಾಸಿರ್ ಹುಸೇನ್ ಜೊತೆ …

ಪೈವಳಿಕೆ: ಮಾವಂದಿರು, ಚಿಕ್ಕಮ್ಮ ಸೇರಿದಂತೆ ನಾಲ್ವರನ್ನು ಕೊಲೆಗೈದ ಪ್ರಕರಣ: ಆರೋಪಿ ಖುಲಾಸೆ

ಕಾಸರಗೋಡು: ಪೈವಳಿಕೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕಡಿದು ಬರ್ಭರವಾಗಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಕಾಸರಗೋಡು  ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ತೃತೀಯ) ಖುಲಾಸೆಗೊಳಿಸಿ ತೀರ್ಪು ನೀಡಿದೆ.  ಪೈವಳಿಕೆ ಸುದೆಂಬಳ ನಿವಾಸಿ ಉದಯ (೪೫) ಈ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿ ಮಾನಸಿಕ ಸಮಸ್ಯೆ ಎದುರಿಸುತ್ತಿರುವುದರಿಂ ದಾಗಿ  ಆತನನ್ನು ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುವಂತೆ ತೀರ್ಪಿನಲ್ಲಿ ತಿಳಿಸಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪೈವಳಿಕೆ ಸುದೆಂಬಳ ನಿವಾಸಿಗಳಾದ ರೇವತಿ (೬೦), ವಿಠಲ (೭೫), ಬಾಬು (೬೮) ಮತ್ತು …

ಯುಡಿಎಫ್‌ನ ಸೀಟು ಹಂಚಿಕೆ ಮುಸ್ಲಿಂ ಲೀಗ್‌ಗೆ ಮೂರನೇ ಸೀಟಿಲ್ಲ

ತಿರುವನಂತಪುರ: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಯುಡಿಎಫ್‌ನಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ತಲೆಯೆತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆಯೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ತಿಳಿಸಿದ್ದಾರೆ. ಮುಸ್ಲಿಂ ಲೀಗ್‌ಗೆ ಮೂರನೇ ಸೀಟು ನೀಡುವ ವಿಷಯದಲ್ಲಿ ಉಂಟಾಗಬಹುದಾದ ಪ್ರಾಯೋಗಿಕ ಸಮಸ್ಯೆಯನ್ನು ನಾವು ಮುಸ್ಲಿಂ ಲೀಗ್‌ಗೆ ಈಗಾಗಲೇ ಮನವರಿಕೆ ಮಾಡಿದ್ದೇವೆ. ಅದಕ್ಕೆ ಮುಸ್ಲಿಂ ಲೀಗ್ ಒಪ್ಪಿಗೆ ನೀಡಿದೆ. ಅದರಂತೆ ಮುಸ್ಲಿಂ ಲೀಗ್ ತನ್ನ ಈಗಿರುವ  ಎರಡು ಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧಿಸಲಿದೆ.

ಬಾಹ್ಯಾಕಾಶ ಗಗನಯಾನ್ ಕ್ಯಾಪ್ಟನ್ ತನ್ನ ಪತಿ ಎಂದು ಘೋಷಿಸಿದ ನಟಿ ಲೆನಾ

ಪಾಲಕ್ಕಾಡ್: ನಾನು ವಿವಾಹಿ ತೆಯಾಗಿದ್ದೇನೆ ಎಂದು ಮಲೆಯಾಳ ಸಿನಿಮಾ ನಟಿ ಲೆನಾ ಬಹಿರಂಗಪಡಿ ಸಿದ್ದಾರೆ. ಭಾರತೀಯ ಬಾಹ್ಯಾಕಾಶ ಗುರಿಯಾದ ಗಗನಯಾನ್‌ನ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ಪತಿಯೆಂದು ಲೆನಾ ಇನ್‌ಸ್ಟಾ ಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದಾರೆ. ೨೦೨೪ ಜನವರಿ ೨೭ರಂದು ನಮ್ಮ ವಿವಾಹ ಪರಂಪರಾಗತ ರೀತಿಯಲ್ಲಿ ನಡೆದಿರುವುದಾಗಿಯೂ ನಟಿ ಪ್ರಕಟಿಸಿದ್ದಾರೆ. ಪ್ರಧಾನಮಂತ್ರಿ ಬಾಹ್ಯಾಕಾಶ ಪ್ರಯಾಣಿಕರನ್ನು ಔಪಚಾರಿಕವಾಗಿ ಘೋಷಿಸಿದ ಬಳಿಕ ನಟಿ ಲೆನಾ ಈ ವಿಷಯವನ್ನು ಪ್ರಕಟಿಸಿದ್ದಾರೆ. ಪ್ರಧಾನಮಂತ್ರಿಯ ಘೋಷಣೆ ಬರಲು ತಾನು ಕಾಯು ತ್ತಿದ್ದೆ ಎಂದು ಆಕೆ ತಿಳಿಸಿದ್ದಾರೆ. ಪ್ರಧಾನಮಂತ್ರಿಯ ಘೋಷಣೆ …

ರಾಗಂ ಜಂಕ್ಷನ್‌ನಲ್ಲಿ ಹೆದ್ದಾರಿ ದಾಟಲು ವ್ಯವಸ್ಥೆ ಇಲ್ಲ: ಸ್ಥಳೀಯರಿಂದ ಕಾಮಗಾರಿಗೆ ತಡೆ

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಹೆದ್ದಾರಿಯನ್ನು ಅಡ್ಡ ದಾಟಲು ದಾರಿ ಇಲ್ಲವೆಂದು ಆರೋಪಿಸಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ. ಹೆದ್ದಾರಿ ಕಾಮಗಾರಿ ವೇಳೆ ಇಲ್ಲಿ ಪಾದಚಾರಿಗಳಿಗೆ ಸಂಚರಿಸಲೆಂದು ಬಿಟ್ಟಿದ್ದ ಸ್ಥಳದಲ್ಲೂ ಬಾರಿಕೇಡ್ ಇರಿಸಿ ಮುಚ್ಚಿರುವುದೇ ಸ್ಥಳೀಯರ ರೋಷಕ್ಕೆ ಕಾರಣವಾಗಿರುವುದು. ಆಟೋಚಾ ಲಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪದಾಧಿಕಾರಿಗಳು ಸೇರಿ ಸ್ಥಳೀಯರಿಗೆ ಹೆದ್ದಾರಿ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸದೆ ಇದ್ದ ದಾರಿ ಯನ್ನು ಮುಚ್ಚಲು  ಬಿಡುವುದಿಲ್ಲವೆಂ ದು ಕಾಮಗಾರಿಗೆ ತಡೆಯೊಡ್ಡಿದ್ದಾರೆ. …

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಜೈಲಿನಿಂದ ಬಿಡುಗಡೆಗೊಂಡ ಶಾಂತಾನಂ ಸಾವು

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಗೊಳಗಾಗಿ ಬಳಿಕ ಇತ್ತೀಚೆಗಷ್ಟೇ ಜೈಲಿನಿಂದ   ಬಿಡುಗ ಡೆಗೊಂಡಿದ್ದ ಎಂ.ಟಿ. ಶಾಂತಾನಂ (೫೫) ಸಾವನ್ನಪ್ಪಿದ್ದಾನೆ. ಈತ ಗಂಭೀರ ಕರುಳು ರೋಗಕ್ಕೊಳಗಾಗಿ ಚೈನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದನು. ಶ್ರೀಲಂ ಕಾದಲ್ಲಿರುವ ತಾಯಿಯನ್ನು ಕಾಣಲು  ಅನುಮತಿ ನೀಡಬೇಕೆಂದು ಕೋರಿ ಆತ  ಭಾರತ ಮತ್ತು  ಶ್ರೀಲಂಕಾ ಸರಕಾರಕ್ಕೆ ಕೆಲವು ದಿನಗಳ ಹಿಂದೆಯಷ್ಟೇ ಮನವಿ ಸಲ್ಲಿಸಿದ್ದನು. ಅದಕ್ಕೆ ಉಭಯ ಸರಕಾರಗಳು ಅನುಮತಿ ನೀಡಿತ್ತು. ಅದರಂತೆ ಆತ ಶ್ರೀಲಂಕಾಕ್ಕೆ ತೆರಳುವ ಸಿದ್ಧತೆಯಲ್ಲಿ ತೊಡಗಿರು ವೇಳೆಯಲ್ಲೇ …

ಬಿ.ವಿ. ರಾಜನ್‌ರಿಗೆ ಮೀಂಜದಲ್ಲಿ ಸರ್ವಪಕ್ಷದಿಂದ ಶ್ರದ್ಧಾಂಜಲಿ

ಮೀಯಪದವು: ಮಂಜೇಶ್ವರ ತಾಲೂಕು ಮಾತ್ರವಲ್ಲದೆ ಜಿಲ್ಲೆ, ರಾಜ್ಯದ ಕಮ್ಯುನಿಸ್ಟ್ ನಾಯಕರಾಗಿ ಬಡಜನರ ಕಣ್ಮಣಿಯಾದ, ಹಲವಾರು ಬಡ ಕುಟುಂಬಗಳಿಗೆ ಆಸರೆಯಾದ, ಕೃಷಿಕರ, ಬೀಡಿ ಕಾರ್ಮಿಕರ, ಕೃಷಿ ಕೂಲಿ ಕಾರ್ಮಿಕರ ವಿವಿಧ ಸವಲತ್ತುಗಳನ್ನು ತೆಗೆಸಿಕೊಡುವಲ್ಲಿ, ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಸಹಕಾರಿ ರಂಗದ ಧುರೀಣರಾಗಿ, ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಜಿಲ್ಲಾ ಸಹಕಾರ್ಯದರ್ಶಿಯಾಗಿ ಕಳೆದ ೨೫ ವರ್ಷ ಮಂಜೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ೫ ವರ್ಷ ಅಧ್ಯಕ್ಷರಾಗಿ ಸೆÃವೆ ಸಲ್ಲಿಸಿದ್ದ ಬಿ.ವಿ. ರಾಜನ್‌ರ ಅಕಾಲಿಕ ನಿಧನ ತುಂಬ …

ಫೆನ್ಸಿಂಗ್‌ನಲ್ಲಿ ಹೊಸ ಭರವಸೆಯೊಂದಿಗೆ ಕಾಸರಗೋಡು  ತಾರೆಯರು

ಕಾಸರಗೋಡು: ತಿರುವನಂv Àಪುರಂನ ಪೆರಿಂಗಮಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ೨೫ನೇ ಕೇರಳ ಸ್ಟೇಟ್ ಸಬ್ ಜೂನಿ ಯರ್ ಫೆನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಾಸರಗೋಡು ತೃತೀಯ ಸ್ಥಾನ ಪಡೆದುಕೊಂಡಿದೆ. ರೈಫನಾತ್ ಅಮಾನ, ಅನ್ಯೆತ ನಂಬಿಯಾರ್ ಮತ್ತು ಮುಹಮ್ಮದ್ ರೈಹಾನ್ ಎಂಬೀ ಫೆನ್ಸಿಂಗ್ ತಾರೆಯರು ಮಾರ್ಚ್ ೨೫ ರಿಂದ ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪ್ಶನ್‌ಶಿಪ್‌ಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಬಾಲಕಿಯರ ಗ್ರೂಪ್ ಸ್ಪರ್ಧೆಯಲ್ಲಿ ರೈಫನಾತ್ ಅಮಾನ, ಅನ್ಯೆತ ನಂಬಿಯಾರ್ ಮತ್ತು ಡಿ.ಅನುಷ್ಕಾ ಎಂಬುವರು ಚಿನ್ನದ ಪದಕ …

ಜಿಲ್ಲಾ ಮಟ್ಟದ ಪ್ಲಾಸ್ಟಿಕ್ ಬದಲಿ ಉತ್ಪನ್ನ ಪ್ರದರ್ಶನ ಮಾರಾಟ ಮೇಳ

ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಶನ್ ನೇತೃತ್ವದಲ್ಲಿ ಜಿಲ್ಲೆಯ ೪೨ ಕಟುಂಬಶ್ರೀ ಸಿಡಿಎಸ್‌ನ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ಲಾಸ್ಟಿಕ್ ಬದಲಿ ಉತ್ಪನ್ನ ಪ್ರದರ್ಶನ ಮಾರಾಟ ಮೇಳ ನಡೆಯಲಿದೆ. ನಾಳೆ ಬೆಳಿಗ್ಗೆ ೧೦ರಿಂದ ೫ರವರೆಗೆ ಕಾಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಪರಿಸರದಲ್ಲಿ ಮೇಳ ನಡೆಯಲಿದೆ. ಪ್ಲಾಸ್ಟಿಕ್ ಬದಲಿ ಉತ್ಪನ್ನಗಳನ್ನು ಪರಿಚಯ ಪಡಿಸಲು, ಲಭ್ಯತೆ ಖಚಿತಪಡಿಸಲು ಮೇಳ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಉಪಯೋಗ ಕಡಿಮೆ ಮಾಡಲು, ವ್ಯಾಪಾರಿಗಳಿಗೆ, ಇವಂಟ್ ಮೆನೇಜ್‌ಮೆಂಟ್ ಗ್ರೂಪ್‌ಗಳು, ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬದಲಿ ಉತ್ಪನ್ನ ಲಭ್ಯತೆ ಖಚಿತಪಡಿಸಲು ಮೇಳದಿಂದ …

ನೌಕಾ ಪಡೆಯ ಬೃಹತ್ ಕಾರ್ಯಾಚರಣೆ: ೩೩೦೦ ಕೆ.ಜಿ ಮಾದಕವಸ್ತು ವಶ: ಐವರುಪಾಕ್ ಪ್ರಜೆಗಳ ಸೆರೆ

ಅಲಹಾಬಾದ್: ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುಜರಾತ್‌ನ ಪೋರ್‌ಬಂದರ್ ಕರಾವಳಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹಡಗಿನಲ್ಲಿ ಸಾಗಿಸುತ್ತಿದ್ದ ಬರೋಬರಿ ೩,೩೦೦ ಕೆ.ಜಿ ಮಾದಕವಸ್ತುಗಳನ್ನು ವಶಪಡಿಸಲಾಗಿದೆ. ಇದು ಇತ್ತೀಚೆಗಿನ ಬೃಹತ್ ಪ್ರಮಾಣದ ಡ್ರಗ್ ವಶ ಕಾರ್ಯಾಚರಣೆಯಾಗಿದೆ. ವಶಪಡಿಸಲಾದ ಮಾಲಿನಲ್ಲಿ ೩೦೮.೯ ಕೆ.ಜಿ ಚರಸ್, ೧೫೮ ಕೆ.ಜಿ ಮೆಥಾಂಫೆಟಾಮೈನ್ ಹಾಗೂ ೨೫ ಕೆ.ಜಿ ಮಾರ್ಫಿನ್ ಎಂಬ ಮಾದಕವಸ್ತುಗಳು ಒಳಗೊಂಡಿವೆ. ಇದನ್ನು ಸಣ್ಣ  ಹಡಗಿನಲ್ಲಿ ಭಾರತಕ್ಕೆ ಕಳ್ಳಸಾಗಾಟ ನಡೆಸಲಾಗುತ್ತಿತ್ತು. ಇದಕ್ಕೆ ಸಂಬಂಧಿಸಿ ಆ ಹಡಗಿನಲ್ಲಿದ್ದ ಐವರು ಪಾಕಿಸ್ತಾನಿ …