ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ೧೦೭ ಕಿಲೋ ಗಾಂಜಾ ಪೆರ್ಲದಲ್ಲಿ ವಶ: ಇಬ್ಬರ ಬಂಧನ

ಪೆರ್ಲ: ಹೊರ ರಾಜ್ಯಗಳಿಂದ ಕಾಸರಗೋಡಿಗೆ  ಮಾದಕವಸ್ತು ಸಾಗಾಟ ಮತ್ತೆ ತೀವ್ರಗೊಂಡಿದೆ. ಈ ಬಗ್ಗೆ ಲಭಿಸಿದ  ಖಚಿತ ಮಾಹಿತಿ ಮೇರೆಗೆ ಪೆರ್ಲದಲ್ಲಿ ಅಬಕಾರಿ ಅಧಿಕಾರಿಗಳು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಗಾಂಜಾ ವಶಪಡಿಸಿಕೊ ಳ್ಳಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಕುಂಬಳ ಶಾಂತಿಪಳ್ಳ ನಿವಾಸಿ ಸಹೀರ್ ರಹೀಂ (೩೬), ಪೆರ್ಲ ಅಮೆಕ್ಕಳದ ಶರೀಫ್ (೫೨) ಎಂಬಿವರು ಬಂಧಿತ ಆರೋಪಿಗಳೆಂ ದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಿದ ಪಿಕಪ್ ವಾಹನವನ್ನು ಕಸ್ಟಡಿಗೆ ತೆಗೆಯಲಾಗಿದೆ. ಕರ್ನಾಟಕ …

ವಾರಣಾಸಿ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮುಂದುವರಿಸಬಹುದು : ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

ವಾರಣಾಸಿ: ಉತ್ತರಪ್ರದೇಶದ ವಾರಣಾಸಿ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯೊಳಗೆ ನಡೆಸಲಾಗುತ್ತಿರುವ ಪೂಜೆಯನ್ನು ಮುಂದುವರಿಸಬಹುದೆಂದು ಅಲಹಾಬಾದ್ ಹೈಕೋರ್ಟ್ ಇಂದು ಬೆಳಿಗ್ಗೆ ಮಹತ್ವದ ತೀರ್ಪು ನೀಡಿದೆ. ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಿದ ಕೆಳ ನ್ಯಾಯಾಲಯದ ತೀರ್ಪಿ ನ ವಿರುದ್ಧ ತಡೆಯಾಜ್ಞೆ ಹೊರಡಿಸಬೇಕು ಮತ್ತು ಪೂಜೆಗೆ ನೀಡಲಾಗಿರುವ ಅನುಮತಿ ರದ್ದುಪಡಿಸಬೇಕೆಂದು ಕೋರಿ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮಾನ್ ಇಂತೇಜಾಮಿಯಾ ಮಸಾಜಿತ್ ಸಮಿತಿ ಫೆ.೧ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ಹೈಕೋ ರ್ಟ್ ತಳ್ಳಿ ಹಾಕಿದೆ ಮಾತ್ರವಲ್ಲದೆ, ಪೂಜೆ ಮುಂದುವರಿಸಲು ಅವಕಾಶ …

ಕೇಂದ್ರೀಯ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಸಾವು

ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಹಾಸ್ಟೆಲ್ ಕೊಠಡಿಯಲ್ಲಿ  ವಿದ್ಯಾರ್ಥಿ ನೇಣು  ಬಿಗಿದು  ಸಾವನ್ನ ಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪ್ರಸ್ತುತ ವಿಶ್ವವಿದ್ಯಾಲಯದ ಎಂಎಡ್ ದ್ವಿತೀಯ ವರ್ಷದ ವಿದ್ಯಾರ್ಥಿ, ಉತ್ತರ ಪ್ರದೇಶದ ಘಾಸಿಪುರ ನಿವಾಸಿ ನಿತೀಶ್ ಯಾದವ್(೨೮) ಸಾವನ್ನಪ್ಪಿದ ಯುವಕ.  ನಿತೀಶ್ ನಿನ್ನೆ  ಕಾಣಿಸದ ಹಿನ್ನೆಲೆಯಲ್ಲಿ ಸಹಪಾಠಿಗಳು ಮೊಬೈಲ್ ಫೋನ್‌ನಲ್ಲಿ ಆತನನ್ನು  ಸಂಪರ್ಕಿಸಿದರೂ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ  ಲಭಿಸಲಿಲ್ಲ. ಇದರಿಂದ  ಹಾಸ್ಟೆಲ್‌ಗೆ ನಿನ್ನೆ  ರಾತ್ರಿ ಹೋಗಿ ನೋಡಿದಾಗ ಅಲ್ಲಿ ನಿತೀಶ್ ಫ್ಯಾನ್‌ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ …

ಪ್ರಧಾನಮಂತ್ರಿ ನಾಳೆ ತಿರುವನಂತಪುರಕ್ಕೆ:  ಕೇರಳ ಪಾದಯಾತ್ರೆ ಸಮಾರೋಪ ಉದ್ಘಾಟನೆ

ತಿರುವನಂತಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಳೆ ತಿರುವನಂತಪುರಕ್ಕೆ ಆಗಮಿಸುವರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಕೇರಳ ಪಾದಯಾತ್ರೆ ಸಮಾರೋಪ ಸಮಾ ರಂಭವನ್ನು ಸೆಂಟ್ರಲ್ ಸ್ಟೇಡಿಯಂನಲ್ಲಿ ನರೇಂದ್ರ ಮೋದಿ ಉದ್ಘಾಟಿಸುವರು. ಈ ಕಾರ್ಯಕ್ರಮದಲ್ಲಿ ಸುಮಾರು ೫೦ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸು ವರೆಂದು ಅಂದಾಜಿಸಲಾಗಿದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸತಾಗಿ ಬಿಜೆಪಿಗೆ ಸೇರ್ಪಡೆಗೊಂಡ ಸಾವಿರದಷ್ಟು ಮಂದಿ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ನಾಳೆ ಬೆಳಿಗ್ಗೆ ೧೦ …

ಅನಧಿಕೃತ ಬೀಫ್ ಸ್ಟಾಲ್: ಮೂವರ ವಿರುದ್ಧ ಕೇಸು

ಮಂಜೇಶ್ವರ: ಅನಧಿಕೃತವಾಗಿ   ನಡೆಯುತ್ತಿದ್ದ ಬೀಫ್ ಸ್ಟಾಲ್‌ಗೆ ಮಂಜೇಶ್ವರ ಪೊಲೀಸರು ನಿನ್ನೆ ದಾಳಿ ನಡೆಸಿ ಮೂವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಹೊಸಂಗಡಿ ಅಬಕಾರಿ ಚೆಕ್‌ಪೋಸ್ಟ್ ಬಳಿಯ ಬೀಫ್ ಸ್ಟಾಲ್‌ವೊಂದಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಬೀಫ್ ಸ್ಟಾಲ್ ನಡೆಸುತ್ತಿದ್ದ ಬಂಗ್ರ ಮಂಜೇಶ್ವರ ಮೇಲಂಗಡಿ ನಿವಾಸಿ ಮೂಸಕುಂಞಿ, ಉಪ್ಪಳ ನಿವಾಸಿ ಮೆಹಬೂ ಬ್ ಎಂ.ಎಸ್, ಬೀಫ್ ಸ್ಟಾಲ್ ನಡೆಸಲು ಸ್ಥಳವೊದಗಿಸಿದ್ದ ಉಪ್ಪಳದ ಅಬ್ದುಲ್ ಖಾದರ್ ಎಂಬಿವರ ವಿರುದ್ಧ ಕೇಸು ದಾಖ ಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಿಕಪ್ ಢಿಕ್ಕಿ: ಮುರಿದುಬಿದ್ದ ಹೊಸಂಗಡಿ ರೈಲ್ವೇ ಗೇಟ್

 ಮಂಜೇಶ್ವರ: ಮರ ಮತ್ತಿತರ ವಸ್ತುಗಳನ್ನು ಹೇರಿ ಸಾಗುತ್ತಿದ್ದ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಹೊಸಂಗಡಿ ರೈಲ್ವೇ ಗೇಟ್ ಮುರಿದುಬಿದ್ದಿದೆ. ಇದರಿಂದ ಇಂದು ಈ ಮೂಲಕ  ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇಂದುಬೆಳಿಗ್ಗೆ ರೈಲು  ಹಾದು ಹೋಗಲು ಗೇಟ್ ಮುಚ್ಚುತ್ತಿದ್ದಂತೆ ಹೊಸಂಗಡಿ ಭಾಗಕ್ಕೆ ತೆರಳುತ್ತಿದ್ದ ಪಿಕಪ್ ವಾಹನ ತಲುಪಿದೆ. ವಾಹನ ಮುಂದೆ ಸಾಗುವಷ್ಟರಲ್ಲಿ ಅದರ ಮೇಲೆ ಹೇರಿದ್ದ ಮರ ಮತ್ತಿತರ ಸಾಮಗ್ರಿ ಗಳು ಗೇಟ್‌ಗೆ ಬಡಿದಿದೆ. ಇದರಿಂದ ಗೇಟ್ ಮುರಿದು ಬಿತ್ತೆನ್ನಲಾಗಿದೆ. ಘಟನೆಯಿಂದ  ಈ ರೈಲ್ವೇ ಗೇಟ್ …

ಬಸ್-ಸ್ಕೂಟರ್ ಢಿಕ್ಕಿ: ಯುವಕನಿಗೆ  ಗಂಭೀರ ಗಾಯ

ಕುಂಬಳೆ: ಶಾಂತಿಪಳ್ಳದಲ್ಲಿ ಮೊನ್ನೆ ಸಂಜೆ ಖಾಸಗಿ ಬಸ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಗಂಭೀರ ಗಾಯಗೊಂಡಿದ್ದಾನೆ. ಕುಂಬಳೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಅಬೂಬಕರ್ ಕೆ.ಐ. (೨೦) ಗಾಯಗೊಂಡಿದ್ದು, ಇವರನ್ನು  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಬೂಬಕರ್ ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಬಸ್ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ.

ರೈಲ್ವೇ ನಿಲ್ದಾಣದಲ್ಲಿ ಕುಳಿತಿದ್ದ ವ್ಯಕ್ತಿಗೆ ಹಲ್ಲೆ: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಉಪ್ಪಳ: ರೈಲ್ವೇ ನಿಲ್ದಾಣದಲ್ಲಿ ಕುಳಿತಿದ್ದ ವ್ಯಕ್ತಿಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಹಲ್ಲೆಗೈದ ವ್ಯಕ್ತಿಯನ್ನು ಅಲ್ಲಿದ್ದ ಇತರರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಳನಾಡು ಮೇಲ್ಪರಂಬ ಕೈನೋತ್ ನಿವಾಸಿ ಉಬೈದ್ (೫೨) ಎಂಬವರು ಹಲ್ಲೆ ಯಿಂದ ಗಾಯಗೊಂಡಿದ್ದಾರೆ. ಈ ಸಂಬಂಧ ಉಪ್ಪಳ ನಿವಾಸಿ ನಿಯಾಸ್ (೩೯) ಎಂಬಾತನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಘಟನೆ ನಡೆದಿದೆ. ಮಂಜೇಶ್ವರದಲ್ಲಿರುವ ಪತ್ನಿ …

 ಪಾನ್ ಮಸಾಲೆ ವಶ

ಉಪ್ಪಳ: ನಿಷೇಧಿತ ೧೧೬ ಪ್ಯಾಕೆಟ್ ಪಾನ್ ಮಸಾಲೆ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ವರ್ಕಾಡಿ ಧರ್ಮನಗರ ನಿವಾಸಿ ಉಮ್ಮರ್ ಫಾರೂಕ್ (೩೯) ಬಂಧಿತ ವ್ಯಕ್ತಿ. ನಿನ್ನೆ ಎಸ್‌ಐ ಲಿನೇಶ್ ನೇತೃತ್ವದ ಪೊಲೀಸರು ಮಜೀರ್ಪಳ್ಳದಲ್ಲಿ ಕಾರ್ಯಾಚgಣೆ  ನಡೆಸಿ ಪಾನ್ ಮಸಾಲೆ ವಶಪಡಿಸಿದ್ದಾರೆ.

ರೈಲುಗಳ ಎ.ಸಿ. ಬೋಗಿಗಳಿಂದ ಹೊದಿಕೆಗಳನ್ನು ಕದಿಯುತ್ತಿದ್ದ ವ್ಯಕ್ತಿ ಕೈಯ್ಯಾರೆ ಸೆರೆ

ಕಾಸರಗೋಡು: ರೈಲುಗಳ ಹವಾನಿ ಯಂತ್ರಿತ ಕೊಠಡಿ ಬೋಗಿಗಳಿಂದ ಹೊದಿಕೆ ಮತ್ತು ದಿಂಬುಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ರೈಲಿನ ಸಿಬ್ಬಂದಿಗಳೇ ಕಯ್ಯಾರೆ  ಸೆರೆ ಹಿಡಿದ ಘಟನೆ ನಡೆದಿದೆ. ಬಂಧಿತನ  ಹೆಸರು, ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ತಿರುವನಂತಪುರ- ಮಂಗಳೂರು ಮಲ ಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ  ಹೊದಿ ಕೆಗಳನ್ನು ಕದ್ದು ಸಾಗಿಸುತ್ತಿದ್ದ ವೇಳೆ ಆತನನ್ನು ಕೈಯ್ಯಾರೆ ಸೆರೆ ಹಿಡಿಯ ಲಾಗಿದೆ. ಆತನ ಬ್ಯಾಗ್‌ನಿಂದ ನಾಲ್ಕು ಹೊದಿಕೆಗಳು ಮತ್ತು ಎರಡು ದಿಂಬು ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ರೈಲುಗಳ ಹವಾನಿಯಂತ್ರಿತ ಬೋಗಿಗಳಿಂದ ಹೊದಿಕೆ ಮತ್ತು ದಿಂಬುಗಳು ಕಳವು …