ನಿಲಂಬೂರು ಗೆಲುವು: ವಿವಿಧೆಡೆ ಯುಡಿಎಫ್ ವಿಜಯೋತ್ಸವ
ಪೈವಳಿಕೆ: ನಿಲಂಬೂರು ವಿಧಾನಸಭಾ ಮಂಡಲದಲ್ಲಿ ನಡೆದ ಉಪಚುನಾವಣೆಯಲ್ಲಿ ಐಕ್ಯಪ್ರಜಾಪ್ರಭುತ್ವ ರಂಗದ ಅಭ್ಯರ್ಥಿ ಆರ್ಯಾಡನ್ ಶೌಕತ್ರ ಗೆಲುವಿನ ಬಗ್ಗೆ ಪೈವಳಿಕೆ ನಗರದಲ್ಲಿ ಯು.ಡಿ.ಎಫ್. ಪಂಚಾಯತ್ ಸಮಿತಿಯ ನೇತ್ವತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮೆರವಣಿಗೆಯಲ್ಲಿ ಯು.ಡಿ.ಎಫ್. ಪಂಚಾಯತ್ ಸಮಿತಿ ಅಧ್ಯಕ್ಷ ವಸಂತಕುಮಾರ್, ಸಂಚಾಲಕ ಝೆಡ್ ಎ. ಕಯ್ಯಾರ್, ಸೈಫುಲ್ಲಾ ತಂಙಳ್, ನಾರಾಯಣ ಏದಾರ್, ರಾಘವೇಂದ್ರ ಭಟ್, ಅಸೀಸ್ ಕಳಾಯಿ ನೇತೃತ್ವ ನೀಡಿದರು. ಅಸೀಸ್ ಚೇವಾರ್, ಎಡ್ವರ್ಡ್ ಡಿ ಸೋಜ, ಶಿವರಾಮ ಶೆಟ್ಟಿ, ಝಾಕಿರ್, ಇಬ್ರಾಹಿಂ ಪದವು, ಗಂಗಾಧರ ನಾಯಕ್, ಮುಸ್ತಫ ಪದವು, …