ಮುಸ್ಲಿಂ ಲೀಗ್‌ಗಿಲ್ಲ್ಲ ಮೂರನೇ ಸೀಟು

ಕೊಚ್ಚಿ: ಲೋಕಸಭಾ ಚುನಾವಣೆ ಯಲ್ಲಿ ತಮಗೆ ಮೂರು ಸೀಟು ಲಭಿಸಬೇಕೆಂಬ ಮುಸ್ಲಿಂ ಲೀಗ್‌ನ ಬೇಡಿಕೆಯನ್ನು ಕಾಂಗ್ರೆಸ್ ನಿರಾಕರಿಸಿದೆ.  ತೃತೀಯ ಸೀಟು ನೀಡಿದ್ದಲ್ಲಿ, ಅದರಿಂದ ಉಂಟಾಗಬಹುದಾದ ಸಂಕಷ್ಟಗಳನ್ನು ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ  ಮನವರಿಕೆ ಮಾಡಿದೆ. ಆದ್ದರಿಂದ ಲೋಕಸಭೆಯಲ್ಲಿ ಮೂರು ಸೀಟುಗಳ ಬದಲು ರಾಜ್ಯಸಭೆಗೆ ಹೆಚ್ಚುವರಿಯಾಗಿ ಇನ್ನೊಂದು ಸೀಟು ನೀಡಲು ಸಿದ್ಧ ಎಂದು ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ ತಿಳಿಸಿದೆ. ಕೊಚ್ಚಿಯಲ್ಲಿ ನಡೆದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನೇತಾರರ ಚರ್ಚೆ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಕಾಂಗ್ರೆಸ್ ರಾಜ್ಯ ಅಧ್ಯಕ್ಷ …

೧೦೦೦ ಮೆಘಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ

ಕಾಸರಗೋಡು: ರಾಜ್ಯದಲ್ಲಿ ಸೌರ ಸ್ಥಾವರಗಳ ಮೂಲಕ ೧೦೦೦ ಮೆಘಾವಾಟ್ ವಿದ್ಯುತ್ ಉತ್ಪಾದಿ ಸುವ ಗುರಿಯನ್ನು ರಾಜ್ಯ ವಿದ್ಯುನ್ಮಂಡಳಿ ಹಾಕಿಕೊಂಡಿದೆ.   ಮನೆಗಳ ಮೇ ಲ್ಛಾವಣಿ ಮೂಲಕ ಸೌರ ಪ್ಯಾನಲ್ ಗಳನ್ನು ಸ್ಥಾಪಿಸಿ ಆ ಮೂಲಕ ೫೦೦ ಮೆಘಾವಾಟ್ ಉತ್ಪಾದಿಸುವ ಯೋ ಜನೆ ಹಾಕಿಕೊಳ್ಳಲಾದರೂ  ವಿದ್ಯುತ್ ಉತ್ಪಾದಿಸಲು ಸಾಧ್ಯವಾಗದೆ ಅದನ್ನೂ ಮೀರಿ  ಈಗ ೫೪೧ ಮೆಘಾ ವಾಟ್   ಮೂರು ಕಿಲೋ ವಾಟ್ ತನಕ ಸೌರ ವಿದ್ಯುತ್  ಉತ್ಪಾದಿಸಲು ತಗಲುವ ಖರ್ಚಿ ನಲ್ಲಿ ಶೇ. ೪೦ರಷ್ಟು ಸಬ್ಸಿಡಿಯೂ ಲಭಿಸು ತ್ತಿದೆ. ಕೇಂದ್ರ …

ಸಾರ್ವತ್ರಿಕ ಚುನಾವಣೆ: ನೋಡೆಲ್ ಆಫೀಸರ್‌ಗಳ ನೇಮಕ

ಕಾಸರಗೋಡು:  ಜಿಲ್ಲೆಯಲ್ಲಿ ಸಾರ್ವತ್ರಿಕ ಚುನಾವಣೆಯ ಸಿದ್ಧತೆಗಳಂ ಗವಾಗಿ ನೋಡೆಲ್ ಆಫೀಸರ್‌ಗಳನ್ನು ನೇಮಕಗೊಳಿಸಲಾಯಿತು. ಮ್ಯಾನ್ ಪವರ್ ಮೆನೇಜ್‌ಮೆಂಟ್ ನೋಡೆ ಲ್ ಆಫೀಸರ್ ಆಗಿ ಸರ್ವೇ ಅಸಿಸ್ಟೆಂ ಟ್ ಡೈರೆಕ್ಟರ್ ಅಸಿಫ್ ಆಲಿಯಾರ್, ಟ್ರೈನಿಂಗ್ ಮೆನೇಜ್‌ಮೆಂಟ್ ನೋಡೆಲ್ ಆಫೀಸರ್ ಆಗಿ ಸಹಾಯ ಕ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಅಸಿಸ್ಟೆಂಟ್ ನೋಡೆಲ್ ಆಫೀಸರ್ ಆಗಿ ಕೆ. ಬಾಲಕೃಷ್ಣನ್, ಮೆಟೀರಿಯಲ್ ಮೆನೇಜ್‌ಮೆಂಟ್  ನೋಡೆಲ್ ಆಫೀಸರ್ ಆಗಿ ತಹಶೀಲ್ದಾರ್ (ಆರ್‌ಆರ್)ರನ್ನು, ಟ್ರಾನ್‌ಪೋರ್ಟ್ ಮೆನೇಜ್‌ಮೆಂಟ್ ನೋಡೆಲ್ ಆಫೀಸರ್ ಆಗಿ ಡಿಸ್ಟ್ರಿಕ್ಟ್ ಎಂಪ್ಲೋಯ್‌ಮೆಂಟ್ ಆಫೀಸರ್ ಅಜಿತ್ ಜೋನ್, …

ಹಿಂದೂ ಐಕ್ಯವೇದಿ ರಥಯಾತ್ರೆಗೆ ಸ್ವಾಗತ

ಉಪ್ಪಳ: ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೇರಳದಲ್ಲಿ ಹಿಂದೂ ವಿರೋಧಿ ಧೋರಣೆಗೆ ಎದುರಾಗಿ ಜಿಲ್ಲೆಯಾದ್ಯಂತ ಹೊರಟ ವಾಹನ ಪ್ರಚಾರ ರಥಯಾತ್ರೆಗೆ ಪ್ರತಾಪನಗರ ಸೋಂಕಾಲ್‌ನಲ್ಲಿ ಸ್ವಾಗತ ನೀಡಲಾಯಿತು. ಜಾಥಾ ನಾಯಕಿ ದಿವ್ಯಾ ಗಟ್ಟಿ, ಶ್ರೀ ಪ್ರೇಮಾನಂದ ಸ್ವಾಮೀಜಿ, ಶಿವಗಿರಿ ಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಜಿ, ಜಿಲ್ಲಾ ಕಾರ್ಯದರ್ಶಿ ರಾಜನ್ ಮುಳಿಯಾರ್, ಗೋಪಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು, ವಸಂತ ಕುಮಾರ್ ಮಯ್ಯ ಸ್ವಾಗತಿಸಿ, ವಲ್ಸರಾಜ್ ಕೆ.ಪಿ. ವಂದಿಸಿದರು.

ವಿದೇಶಿ ಕರೆನ್ಸಿ ಸೇರಿ ೧೫ ಲಕ್ಷ ರೂ. ವಶ: ಇಬ್ಬರು ಕಸ್ಟಡಿಗೆ

ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶಿ ಕರೆನ್ಸಿ ಸೇರಿದಂತೆ ಒಟ್ಟು ೧೫ ಲಕ್ಷ ರೂ. ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ಚೌಕಿ ನಿವಾಸಿ ಮೊಹಮ್ಮದ್ (೪೨) ಮತ್ತು ಮಲಪ್ಪುರಂ ತಿರೂರಂಬಾಡಿಯ ಝೈನುದ್ದೀನ್ (೫೦) ಎಂಬವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಶಪಡಿಸಲಾದ ಮಾಲಿನಲ್ಲಿ ಅಮೆರಿಕನ್ ಡಾಲರ್, ಸೌದಿ ರಿಯಾಲ್ ಮತ್ತು ಮಲೇಷ್ಯದ ರಿಂಗಿಟ್ ಕರೆನ್ಸಿ ನೋಟುಗಳು ಸೇರಿ ಒಟ್ಟು ಏಳೂವರೆ ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಏಳೂವರೆ …

ತ್ಯಾಜ್ಯ ರಾಶಿ ಹಾಕಿ ಕಿಚ್ಚಿಟ್ಟ ಪರಿಣಾಮ ನೆರಳು ಮರ ಉರಿದು ನಾಶ

ಬೋವಿಕ್ಕಾನ:  ತ್ಯಾಜ್ಯವನ್ನು ರಾಶಿ ಹಾಕಿ ಕಿಚ್ಚಿಟ್ಟ ಪರಿಣಾಮ ಮರವೊಂದು ಉರಿದು ನಾಶಗೊಂಡ ಘಟನೆ ನಡೆದಿದೆ. ಬೋವಿಕ್ಕಾನ ಪೇಟೆಯಲ್ಲಿ ಚೆರ್ಕಳ-ಜಾಲ್ಸೂರು ಅಂತಾರಾಜ್ಯ ರಸ್ತೆ ಬದಿ ಹಲವು ವರ್ಷಗಳ ಹಳಮೆಯ ನೆರಳು ಮರ ನಿನ್ನೆ ರಾತ್ರಿ ವೇಳೆ ಉರಿದು ನಾಶಗೊಂಡಿದೆ. ರಸ್ತೆ ಬದಿಯಲ್ಲಿದ್ದ ಮರದ   ಬುಡದಲ್ಲಿ  ಪ್ಲಾಸ್ಟಿಕ್ ಸಹಿತ ತ್ಯಾಜ್ಯ ವನ್ನು ರಾಶಿ ಹಾಕಿ ಕಿಚ್ಚಿಡಲಾಗಿದೆ.  ಇದರಿಂದ ಮೊದಲಿಗೆ ಮರದ ಒಣಗಿದ ರೆಂಬೆಗಳಿಗೆ ಬೆಂಕಿ ಹತ್ತ್ತಿಕೊಂಡಿದೆ.  ಬಳಿಕ ಅದು ಇಡೀ ಮರಕ್ಕೆ ಹರಡಿದೆ. ಈ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ …

ಕರ್ತವ್ಯ ವೇಳೆ ಮೃತಪಟ್ಟ ಬಸ್ ಚಾಲಕನಿಗೆ ಸಹಾಯ: ಪೆರ್ಮುದೆ- ಕಾಸರಗೋಡು ಜಿಸ್ತಿಯ ಬಸ್‌ನಿಂದ ಇಂದು ಕಾರುಣ್ಯ ಯಾತ್ರೆ

ಕುಂಬಳೆ: ಬಸ್ ಚಲಾಯಿಸುತ್ತಿ ದ್ದಂತೆ ಹೃದಯಾಘಾತವುಂಟಾಗಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಸಹಾಯವೊದಗಿಸುವ ಉದ್ದೇಶದಿಂದ ಪೆರ್ಮುದೆ- ಧರ್ಮತ್ತಡ್ಕ- ಬಂದ್ಯೋ ಡು- ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ಮೂರು ಜಿಸ್ತಿಯ ಬಸ್‌ಗಳು ಇಂದು ಕಾರುಣ್ಯ ಯಾತ್ರೆ ನಡೆಸುತ್ತಿವೆ. ಇಂದು ಬೆಳಿಗ್ಗೆ ಪೆರ್ಮುದೆಯಿಂದ ಆರಂಭಗೊಂಡ ಕಾರುಣ್ಯ ಯಾತ್ರೆಯನ್ನು ಸಿಪಿಎಂ ಕುಡಾಲ್ ಮೇರ್ಕಳ ಲೋ ಕಲ್ ಸೆಕ್ರೆಟರಿ  ಬಿ.ಎ. ಬಶೀರ್ ಉದ್ಘಾಟಿಸಿದರು. ಸಿಐಟಿಯು ನೇತಾರ ಸಾಕಿರ್, ಜಿಸ್ತಿಯಾ ಬಸ್ ಮಾಲಕ ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಕಾರುಣ್ಯ ಯಾತ್ರೆಯ ಅಂಗವಾಗಿ ಇಂದು ಬಸ್‌ನಲ್ಲಿ ಪ್ರಯಾಣಿಕರಿಗೆ ಟಿಕೆಟ್ …

ಮನೆ ಬಳಿಯ ಶೆಡ್ ಬೆಂಕಿಗಾಹುತಿ: ಅಪಾರ ನಾಶನಷ್ಟ

ಉಪ್ಪಳ: ಮನೆ ಬಳಿಯ ಶೆಡ್‌ಗೆ ಬೆಂಕಿ ತಗಲಿ ಅಪಾರ ನಾಶ-ನಷ್ಟವುಂ ಟಾದ ಘಟನೆ ನಡೆದಿದೆ. ಹೊಸಂಗಡಿ ಬಳಿಯ ಪೊಸೋಟು ಚಾದಿಪಡ್ಪು ಎಂಬಲ್ಲಿನ ಮೊಹಮ್ಮದ್ ಹನೀಫ್ ಎಂಬವರ ಮನೆ ಬಳಿಯ ಕಾಂಕ್ರೀಟ್ ಶೆಡ್ ನಿನ್ನೆ ರಾತ್ರಿ ೭.೩೦ರ ವೇಳೆ ಬೆಂಕಿಗಾಹುತಿಯಾಗಿದೆ. ಶೆಡ್‌ನಲ್ಲಿದ್ದ ಕಟ್ಟಿಗೆ, ತೆಂಗಿನಕಾಯಿ ಸಹಿತ ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡಿದೆ. ಉಪ್ಪಳದಿಂದ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ  ಹತ್ತಿಕೊಳ್ಳ ಲು ಕಾರಣವೆಂದು ಹೇಳಲಾಗುತ್ತಿದೆ.

ಅಪಘಾತ: ಕಯ್ಯಾರು ನಿವಾಸಿ ಮುಂಬೈಯಲ್ಲಿ ಮೃತ್ಯು

ಕಾಸರಗೋಡು: ಮುಂಬೈ ಯಲ್ಲಿ ನಡೆದ ಅಪಘಾತದಲ್ಲಿ ಕಯ್ಯಾರ್ ನಿವಾಸಿ ಯೋ ರ್ವ ರು ಮೃತಪಟ್ಟ ಘಟನೆ ನಡೆದಿದೆ. ಕಯ್ಯಾರ್ ಚನ್ನಿಕುಡೇಲ್ ನ ದಿ| ಮಾರ್ಸೆಲ್ – ಲೀನಾ ಕ್ರಾಸ್ತ ದಂಪತಿ ಪುತ್ರ ರೂಬನ್ ಚಾರ್ಲ್ಸ್ ಕ್ರಾಸ್ತ (೩೯) ಮೃತ ಪಟ್ಟವರು. ಮುಂಬೈ ನಲ್ಲಿ ಉದ್ಯಮ ನಡೆಸುತ್ತಿದ್ದರು. ನಿನ್ನೆ ಸಂಜೆ ಮುಂಬೈಯಲ್ಲಿ ಬೈಕ್ ಸ್ಕಿಡ್ ಆಗಿ ರಸ್ತೆ ಗೆಸೆಯಲ್ಪಟ್ಟ ರೂಬನ್ ಗಂಭೀರ ಗಾಯಗೊಂಣ¥್ಣ್ನಬ, ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ. ರೂಬನ್ ಕಳೆದ ೨೩ ವರ್ಷ ಗಳಿಂದ ಮುಂಬೈ …

ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌ಗೆ ಪಾಕಿಸ್ತಾನದಿಂದ ಬಾಂಬ್ ಬೆದರಿಕೆ

ಲಕ್ನೋ: ಉತ್ತರ ಪ್ರದೇಶದ ಫೆತೆಪುರದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗ್ಗಾ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷರಿಗೆ ಪಾಕಿಸ್ತಾನ ಉಗ್ರರಿಂದ ಬೆದರಿಕೆ ಕರೆ ಬಂದಿದೆ. ವಾಟ್ಸಪ್ ಕರೆ ಮಾಡಿದ ವ್ಯಕ್ತಿ ತಾನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಸೇರಿದವನಾಗಿದ್ದಾನೆ ಎಂದು ಹೇಳಿಕೊಂಡಿದ್ದಾನೆ. ಮಥುರಾದ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್‌ನ ಅಧ್ಯಕ್ಷರಾಗಿರುವ ಶಕುಂಭರಿ ಪೀಠಾಧೀಶ್ವರ ಅಶುತೋಷ್‌ರಿಗೆ ಈ ಬೆದರಿಕೆ ಸಂದೇಶ ಬಂದಿದೆ. ಇವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದುಕೊಂಡಿರುವ ಶ್ರೀ ಕೃಷ್ಣ …