ವಿವಿಧೆಡೆ ಮತ್ತೆ ಅಗ್ನಿ ದುರಂತ : ಅಗ್ನಿಶಾಮಕ ದಳಕ್ಕೆ ಬಿಡುವಿಲ್ಲದ ಕೆಲಸ

ಉಪ್ಪಳ: ಅಗ್ನಿ ಅನಾಹುತ ವ್ಯಾಪಕಗೊಳ್ಳುತ್ತಿದ್ದು, ಅಗ್ನಿಶಾಮಕ ದಳಕ್ಕೆ ಬಿಡುವಿಲ್ಲದ ದಿನಗಳಾಗಿದೆ. ನಿನ್ನೆ ಬೆಳಿಗ್ಗೆ ಯಿಂದ ಸಂಜೆ ತನಕ ವಿವಿಧ ಪ್ರದೇಶ ಗಳ ನಾಲ್ಕು ಕಡೆಗಳಲ್ಲಿ ಅಗ್ನಿಅನಾಹುತ ಸಂಭವಿದ್ದು, ಉಪ್ಪಳ ಅಗ್ನಿ ಶಾಮಕ ದಳದ ಸ್ಟೇಶನ್ ಆಫೀಸರ್ ರಾಜೇಶ್ ನೇತೃತ್ವದಲ್ಲಿ ತೆರಳಿ ಬೆಂಕಿಯನ್ನು ನಂದಿಸಿ ಸಂಭವಿ ಸಬಹುದಾದ ಅಪಾಯವನ್ನು ತಪ್ಪಿಸಿ ದ್ದಾರೆ. ಕುಬಣೂರಿನಲ್ಲಿ ಉರಿದ ತ್ಯಾಜ್ಯ ದಿಂದ ಮತ್ತೆ ಹೊಗೆ ಬರಲಾರಂ ಭಿಸಿದ್ದು ಅಲ್ಲಿಗೆ ಅಗ್ನಿ ಶಾಮಕದಳ ತೆರಳಿ ನೀರು ಹಾಯಿಸಿದೆ. ಆರಿಕ್ಕಾಡಿ ಕಳತ್ತೂರು, ಪೈವಳಿಕೆ ಬೋಳಂಗಳ ಮತ್ತು …

ಧರ್ಮ ಉಳಿಯಬೇಕಾದರೆ ದೈವ, ದೇವ ಆರಾಧನೆ, ಆಚರಣೆಗಳು ಅಗತ್ಯವಾಗಿದೆ-ವಜ್ರದೇಹಿ ಶ್ರೀ

ವರ್ಕಾಡಿ: ಧರ್ಮ ಉಳಿಯಬೇ ಕಾದರೆ ಸದಾ ದೈವ, ದೇವರ ಆರಾಧನೆ, ಆಚರಣೆಗಳು ಇರಬೇಕಾಗಿದೆ. ಅದನ್ನು ಮುಂದಿನ ತಲೆಮಾರಿಗೆ  ಮುಟ್ಟಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಜ್ರದೇಹಿ ಗುರುಪುರಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ವರ್ಕಾಡಿ ಕೊಂಡೆವೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸುಧಾಕರ ಕೊಡ್ಲಮೊಗರು ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಶಿವಕೃಪಾ ಧಾರ್ಮಿಕ ಭಾಷಣ ಮಾಡಿದರು. ರಾಮಕೃಷ್ಣ ಭಟ್ ಪೆರ್ವೋಡಿ, ನಾರಾಯಣ ಭಟ್ ಮಾಣಿಪ್ಪಾಡಿ, ನಾರಾಯಣ ನಾವಡ ಚೆಂಡೇಲು, ಮನೋಜ್ …

ಬದಿಯಡ್ಕ ಮೋಡೆಲ್ ಚೈಲ್ಡ್ ರಿಹಾಬಿಲಿಟೇಶನ್ ಸೆಂಟರ್ ಉದ್ಘಾಟನೆ ೨೯ರಂದು: ಸ್ವಾಗತ ಸಮಿತಿ ರಚನೆ

ಬದಿಯಡ್ಕ: ಬದಿಯಡ್ಕ ಮೋಡೆಲ್ ಚೈಲ್ಡ್ ರಿಹಾಬಿಲಿಟೇಶನ್ ಸೆಂಟರನ್ನು ಈ ತಿಂಗಳ ೨೯ರಂದು ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಉದ್ಘಾಟಿಸುವರು. ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ಸ್ವಾಗತ ಸಮಿತಿ ರೂಪೀಕರಣ ಸಭೆ ನಿನ್ನೆ ಪಂಚಾಯತ್ ಸಿಡಿಎಸ್ ಸಭಾಂ ಗಣದಲ್ಲಿ ಜರಗಿತು. ಪಂ. ಅಧ್ಯಕ್ಷೆ ಬಿ. ಶಾಂತಾ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಬ್ಲೋಕ್ ಪಂ. ಅಧ್ಯಕ್ಷ ಗೌರವ ಅಧ್ಯಕ್ಷರಾಗಿಯೂ, ಪಂ. ಅಧ್ಯಕ್ಷೆ ಚೆಯರ್ ಪರ್ಸನ್, ಕಾರ್ಯದರ್ಶಿ …

ನಗರದ ಎರಡು ಅಂಗಡಿಗಳಲ್ಲಿ ಅಗ್ನಿ ಅನಾಹುತ: ಲಕ್ಷಾಂತರ ರೂ.ಗಳ ನಷ್ಟ

ಕಾಸರಗೋಡು: ನಗರದ ಎಂ.ಜಿ. ರಸ್ತೆಯ ಮುಸ್ಲಿಂ ಲೀಗ್ ಕಚೇರಿ  ಸಮೀಪದ ಎರಡು ಅಂಗಡಿಗಳಲ್ಲಿ ಇಂದು ಬೆಳಿಗ್ಗೆ ಭಾರೀ ಅಗ್ನಿಅನಾ ಹುತ ಸಂಭವಿಸಿದೆ. ಎಂ.ಜಿ ರಸ್ತೆಯಿಂದ ಕೆಳಗೆ ಟ್ರಾಫಿಕ್ ಜಂಕ್ಷನ್‌ಗೆ ಹೋಗುವ ಭಾಗದ ಬಲಗಡೆ ಕಾರ್ಯಾಚರಿಸುತ್ತಿರುವ ನೇಶನಲ್ ನಗರದ ಅಶ್ರಫ್ ಎಂಬ ವರ ಮ್ಯಾಟ್ (ಚಾಪೆ) ಇತ್ಯಾದಿ ಮಾರಾಟ ಮಾಡುವ  ಎನ್.ಎ. ಮ್ಯಾಟ್ ಸೆಂಡರ್ ಎಂಬ ಹೆಸರಿನ ಅಂಗಡಿ ಮತ್ತು ಅಲ್ಲೇ ಪಕ್ಕದಲ್ಲಿರುವ ತಳಂಗರೆಯ ಮನಾಫ್ ಎಂಬವರ ಸ್ಯಾನೋ ಎಂಬ ಹೆಸರಿನ ಮೊಬೈಲ್ ಮತ್ತು ವಾಚ್ ಮಾರಾಟ ದಂಗಡಿಗೆ …

ಕುಬಣೂರು ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಮತ್ತೆ  ಬೆಂಕಿ ಅನಾಹುತ: ಸ್ಥಳೀಯರಲ್ಲಿ ಹೆಚ್ಚಿದ ಭೀತಿ

ಉಪ್ಪಳ: ಕುಬಣೂರು ತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ತ್ಯಾಜ್ಯಕ್ಕೆ ಮತ್ತೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ನಿನ್ನೆ ಮಧ್ಯಾಹ್ನ ವೇಳೆ ತ್ಯಾಜ್ಯ ರಾಶಿಯಿಂದ ಬೆಂಕಿ ಕಾಣಿಸಿಕೊಂ ಡಿದೆ. ಇದರಿಂದ ಪರಿಸರದಲ್ಲಿ  ಭಾರೀ ಹೊಗೆ, ದುರ್ವಾಸನೆ ಹರಡಿದ್ದು, ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿತು.  ಕೂಡಲೇ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ತ್ಯಾಜ್ಯ ರಾಶಿಗೆ ಬೆಂಕಿ ಹೇಗೆ ತಗಲಿದೆ ಎಂದು ತಿಳಿದುಬಂದಿಲ್ಲ. ಒಂದು ವಾರ ಹಿಂದೆ ಇದೇ ತ್ಯಾಜ್ಯ ಸಂಸ್ಕರಣೆ ಕೇಂದ್ರದಲ್ಲಿ ಭಾರೀ ಬೆಂಕಿ ಅನಾಹುತ ಉಂಟಾಗಿತ್ತು. ಅಂದು …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಸಾವು

ಬದಿಯಡ್ಕ: ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದ ಯುವಕ ಚಿಕಿತ್ಸೆ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಕುಂಬ್ಡಾಜೆ ನಿವಾಸಿ ಹೈದರ್ ಎಂಬವರ ಪುತ್ರ ಮುಹಮ್ಮದ್ ಸುಹೈಲ್ (೨೦) ಮೃತಪಟ್ಟಯುವಕ. ಕಳೆದ ಸೋಮವಾರ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡು ಬಂದ ಮುಹಮ್ಮದ್ ಸುಹೈಲ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟರು. ಮೃತರು ತಂದೆ, ತಾಯಿ ಸುಲೈಖ, ಸಹೋದರ ಸಿದ್ದಿಕ್ ಹಾಗೂ ಅಪಾರ ಬಂಧು  ಮಿತ್ರರನ್ನು ಅಗಲಿದ್ದಾರೆ.

ಕೊಲೆ ಪ್ರಕರಣದ ಆರೋಪಿಯನ್ನು ಕೊಲೆಗೈಯ್ಯಲು ಸಂಚು: ತಂಡ ಸೆರೆ

ಪುತ್ತೂರು: ಕೊಲೆ ಪ್ರಕರಣದ ಆರೋಪಿಯ ಸಹೋದರನನ್ನು  ಇರಿದು ಕೊಲೆಗೈಯ್ಯಲು ತಲವಾರಿನೊಂದಿಗೆ ಸಂಚರಿಸುತ್ತಿದ್ದಾಗ  ಬೇರೊಂದು ಕೊಲೆ ಪ್ರಕರಣದಲ್ಲಿ ಸೆರೆಗೀಡಾಗಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡ  ಯುವಕ ಹಾಗೂ  ಸಹಚರರನ್ನು ಸೆರೆಹಿಡಿಯಲಾಗಿದೆ. ವಿಟ್ಲ ಕಲ್ಲಡ್ಕದ ಕಿಶೋರ್ ಪೂಜಾರಿ (೩೬), ಮನೋಜ್ (೨೩), ಆಶಿಕ್ (೨೮), ಸನತ್ ಕುಮಾರ್ (೨೪) ಎಂಬಿವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ೨೦೨೨ ಜೂನ್ ೪ರಂದು ರಾತ್ರಿ ಪೆರ್ಲಂಪಾಡಿಯ ಚರಣ್‌ರಾಜ್ ರೈ ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಕಿಶೋರ್ ಪೂಜಾರಿ ಆರೋಪಿಯಾಗಿದ್ದಾನೆನ್ನಲಾಗಿದೆ.  ಪ್ರಸ್ತುತ ಪ್ರಕರಣದಲ್ಲಿ ಸೆರೆಗೀಡಾಗಿ ಜೈಲಿನಲ್ಲಿದ್ದ ಈತ ಇತ್ತೀಚೆಗೆ …

ಸರ ಕಳ್ಳನೆಂದು ಆರೋಪಿಸಿ ಪೊಲೀಸರು ಕಸ್ಟಡಿಗೆ ತೆಗೆದ ಯುವಕನಿಗೆ ಹಲ್ಲೆ -ದೂರು

ಚೆರ್ಕಳ: ಸರಕಳ್ಳನೆಂದು ಆರೋಪಿಸಿ  ಪೊಲೀಸರು ಕಸ್ಟಡಿಗೆ ತೆಗೆದ ಯುವಕನಿಗೆ  ಪೊಲೀಸ್ ಚಾಲಕ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಕಲ್ಲಕಟ್ಟ ನಿವಾಸಿ ಅಭಿಲಾಷ್ (೨೬)ಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಗಾಯಗೊಂಡ ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೋಮವಾರ ಸಂಜೆ ಎದುರ್ತೋಡ್‌ನಲ್ಲಿ ಘಟನೆ ನಡೆದಿದೆ. ಅಭಿಲಾಷ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರೆನ್ನಲಾಗಿದೆ. ಬಳಿಕ  ಪೊಲೀಸ್ ಚಾಲಕ  ಹಲ್ಲೆಗೈದಿದ್ದು, ಇದರಿಂದ  ಅಸ್ವಸ್ಥಗೊಂಡು ರಸ್ತೆ ಬದಿ ಬಿದ್ದಿದ್ದಾಗ ಮತ್ತೆಯೂ ಹಲ್ಲೆಗೈದಿರುವುದಾಗಿ ಅಭಿಲಾಷ್ ದೂರಿದ್ದಾರೆ. ಬಳಿಕ ಪೊಲೀಸ್ ಜೀಪಿನಲ್ಲಿ ಚೆಂಗಳ ಇ.ಕೆ. ನಾಯನಾರ್ ಆಸ್ಪತ್ರೆಗೆ ತಲುಪಿಸಿ  …

ಮಾದಕ ವಸ್ತು ಸಹಿತ ಮೂವರ ಸೆರೆ

ಹೊಸದುರ್ಗ: ಮಾರಕ ಮಾದಕವಸ್ತುವಾದ ಎಂ.ಡಿ.ಎಂ.ಎ ಸಹಿತ ಮೂರು ಮಂದಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕಣ್ಣಾಡಿಪರಂಬ ನಾರಾತ್ ನಿವಾಸಿ ಅನ್ಸಾರಿ ವಿ.ವಿ. (೩೨), ವಳಪಟ್ಟಣ ಪಾಲೋಟ್ ವಯಲ್ ನಾಸಿಲಾತ್ ಹೌಸ್‌ನ ರಿಸ್ವಾನ್ ಪಿ.ಎ.(೩೪), ಅಳಿಕ್ಕೋಡ್ ಮಯಿಲಾಡತ್ತಡ ನಿವಾಸಿ ರಂಶಾದ್ ಕೆ.ಎಲ್. (೩೯) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಕೈಯಿಂದ ೦.೬೧೮ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಕಣ್ಣೂರು ರೂಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಲತ ನೇತೃತ್ವದ ಡಾನ್ಸಪ್ ಸ್ಕ್ವಾಡ್, ತಳಿಪರಂಬ ಡಿವೈಎಸ್ಪಿ ಪಿ. ಬಾಲಕೃಷ್ಣನ್ ನಾಯರ್, ಇನ್ಸ್‌ಪೆಕ್ಟರ್ ಕೆ.ಪಿ. ಶೈನ್ …

ಎ.ಸಿ. ಸ್ಫೋಟ: ಕೊಠಡಿಯಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿ ಮೃತ್ಯು

ಮುಂಬೈ: ಕೊಠಡಿಯಲ್ಲಿದ್ದ  ಎ.ಸಿ ಸ್ಫೋಟಗೊಂಡು ಅಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಮುಂಬೈ ವಿಲೇ ಪಾರ್ಲೆ ಈಸ್ಟ್‌ನಲ್ಲಿರುವ ಅಮಿತ್ ಪರಿವಾರ್ ಸೊಸೈಟಿಯಲ್ಲಿ ಘಟನೆ ನಡೆದಿದೆ. ಪ್ಲಾಟ್‌ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸ್ವರೂರ್ ಷಾ (೪೫) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಪ್ಲಾಟ್‌ನಲ್ಲಿ ಹೊಗೆಏಳುವುದನ್ನು ಕಂಡ ಯಾರೋ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಹಾಗೂ ಸ್ಥಳೀಯರು  ಬಾಗಿಲು ಮುರಿದು ಒಳಗೆ ಪ್ರವೇಶಿಸಿ ನೋಡಿದಾಗ  ಸ್ವರೂಪ್ ಷಾ ಮೃತಪಟ್ಟಿರುವುದು ಕಂಡುಬಂದಿದೆ.