ಮಂಜೇಶ್ವರದಲ್ಲಿ ಬೆಂಕಿ ಅನಾಹುತ: ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದ ಐದು ವಾಹನಗಳು ಉರಿದು ನಾಶ

ಮಂಜೇಶ್ವರ: ಮಂಜೇಶ್ವರದಲ್ಲಿ ನಿನ್ನೆ ಬೆಳಿಗ್ಗೆ ಬೆಂಕಿ ಅನಾಹುತ ಸಂಭವಿಸಿದ್ದು, ಇದರಿಂದ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದ ಐದು ವಾಹನಗಳು ಉರಿದು ನಾಶಗೊಂಡಿವೆ. ವಿಷಯ ತಿಳಿದು ಉಪ್ಪಳದಿಂದ ತಲಪಿದ ಅಗ್ನಿಶಾಮಕದಳ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದ ಇನ್ನಷ್ಟು ನಾಶನಷ್ಟವನ್ನು ತಪ್ಪಿಸಲು ಸಾಧ್ಯವಾಯಿತು. ಮಂಜೇಶ್ವರ ಪೊಲೀಸ್ ಠಾಣೆ ಪರಿಸರದ ಖಾಸಗಿ ಹಿತ್ತಿಲಿನಲ್ಲಿ ನಿನ್ನೆ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಅದು ಇನ್ನಷ್ಟು ವಿಸ್ತರಿಸಿದ್ದು, ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಕಸ್ಟಡಿಗೆ ತೆಗೆದು ನಿಲ್ಲಿಸಿದ್ದ ವಾಹನಗಳತ್ತ ತಲುಪಿದೆ. ಇದರಿಂದ ನಾಲ್ಕು ಆಟೋರಿಕ್ಷಾ ಹಾಗೂ ಒಂದು ಓಮ್ನಿ …

ರಾಜ್ಯದಲ್ಲಿ ಲೋನ್-ಆಪ್ ವಂಚನೆ: ನಾಲ್ವರ ಸೆರೆ; ಒಂದು ವರ್ಷದಲ್ಲಿ ನಷ್ಟಗೊಂಡಿರುವುದು ೨೦೧ ಕೋಟಿ ರೂ.

ಕಾಸರಗೋಡು: ಲೋನ್ ಆಪ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ಬಳಿಕ ವಂಚನೆಗೈಯ್ಯುವ ಜಾಲವನ್ನು ಭೇದಿಸಿ ನಾಲ್ವರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಲೋನ್ ಆಪ್ ವಂಚನೆ ಪ್ರಕರಣಕ್ಕೆ  ಸಂಬಂಧಿಸಿ ಆರೋಪಿಗಳು ಸೆರೆಗೊಳಗಾಗುತ್ತಿರು ವುದು ರಾಜ್ಯದಲ್ಲಿ ಇದೇ ಮೊದಲ ಬಾರಿಯಾಗಿದೆ. ಗುಜರಾತ್ ನಿಂದ  ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ಅಮರೇಲಿ ನಿವಾಸಿ ಗಳಾದ ಖೆರಾನಿ ಸಮೀರ್ ಭಾ (೩೦), ಕಲ್ವತ್ತರ್ ಮೊಹಮ್ಮದ್ ಫರೀಜ್ (೨೦), ಅಲಿ ಅಜಿತ್ ಭಾ (೪೩) ಮತ್ತು ಪ್ರಾಯಪೂರ್ತಿಯಾಗದ ಓರ್ವ ಸೇರಿದಂತೆ ಒಟ್ಟು ನಾಲ್ವರನ್ನು ಈ ಪ್ರಕರಣಕ್ಕೆ …

ಹೃದಯಾಘಾತ: ಯುವಕ ನಿಧನ

ಉಪ್ಪಳ: ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಆಸ್ಪತ್ರೆಗೆ ಕಳೆದುಕೊಂಡು ಹೋಗುವ ಮಧ್ಯೆ ಯುವಕ ನಿಧನಹೊಂದಿದ ಘಟನೆ ನಿನ್ನೆ ಜೋಡುಕಲ್ಲಿನಲ್ಲಿ ಸಂಭವಿಸಿದೆ. ನಿನ್ನೆ ಮುಂಜಾನೆ ಮನೆಯಲ್ಲಿ ಸ್ಥಳೀಯ ನಿವಾಸಿ ಕೃಷ್ಣಪ್ಪ ಪೂಜಾರಿ ದೇರಂಬಳ ಇವರ ಪುತ್ರ ಸಂತೋಷ್ (೩೮)ರಿಗೆ ಹೃದಯಾ ಘಾತ ಉಂಟಾಗಿದೆ. ಕೂಡಲೇ ಉಪ್ಪ ಳದ ಖಾಸಗಿ ಆಸ್ಪತ್ರೆಗೆ ನಡೆದು ಕೊಂಡು ಹೋಗುವ ಮಧ್ಯೆ ನಿಧನ ಸಂಭವಿಸಿದೆ. ಅವಿವಾಹಿತರಾದ ಮೃತ ರು ತಂದೆ, ತಾಯಿ ಪದ್ಮಾವತಿ, ಸಹೋದರರಾದ  ಜಗದೀಶ, ಸುವರ್ಣ, ಸಂಪತ್ ಕುಮಾರ್, ವಿನೋ ದ್, ಸಹೋದರಿ ಆಶಾಲತಾ …

ಕಾರು- ಸ್ಕೂಟರ್ ಢಿಕ್ಕಿ: ಸಹೋದರಿಯರಿಗೆ ಗಾಯ; ಆಸ್ಪತ್ರೆಗೆ

ಕುಂಬಳೆ: ಕುಂಬಳೆ ಬದಿಯಡ್ಕ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಕಾರು- ಸ್ಕೂಟರ್ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರರಾದ ಸಹೋದರಿ ಯರು ಗಾಯಗೊಂಡರು. ನಾಯ್ಕಾಪು ನಾರಾಯಣಮಂಗಲ ನಿವಾಸಿ ಚೈತನ್ಯ (೨೨)ರಿಗೆ ಗಂಭೀರ ಗಾಯಗೊಂಡಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಗೂ, ಗಾಯಗೊಂಡ ಚೈತ್ರಾ (೨೦)ರನ್ನು ಕಾಸರಗೋಡಿನ ಆಸ್ಪತ್ರೆಗೂ ದಾಖಲಿಸಲಾಗಿದೆ. ನಿನ್ನೆ ಸಂಜೆ ಅಪಘಾತ ಸಂಭವಿಸಿದೆ.

ಜಿಲ್ಲಾ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್ ನಾಯ್ಕಾಪುನಲ್ಲಿ ೨೫ರಂದು

ಕುಂಬಳೆ: ಜಿಲ್ಲಾ ಕಬಡ್ಡಿ ತಾಂತ್ರಿಕ ಸಮಿತಿ ಮತ್ತು ಜೆ.ಕೆ. ಅಕಾಡೆಮಿ, ಕಾಸರಗೋಡು ಜಂಟಿ ಯಾಗಿ ಆಯೋಜಿಸಿರುವ ೩೩ನೇ ಕಾಸರಗೋಡು ಜಿಲ್ಲಾ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿ ಯನ್‌ಶಿಪ್ ಫೆಬ್ರವರಿ ೨೫ರಂದು  ಬೆಳಿಗ್ಗೆ ೯ರಿಂದ ಕುಂಬಳೆ ಸನಿಹದ ನಾಯ್ಕಾಪು ಜೆ.ಕೆ. ಅಕಾಡೆಮಿಯಲ್ಲಿ ನಡೆಯಲಿದೆ. ಪುರುಷ ಮತ್ತು ಮಹಿಳಾ ಆಟಗಾರರ ತೂಕ ೫೫ ಕೆ.ಜಿ. ಆಗಿದ್ದು, ಪುರುಷ ಕ್ರೀಡಾಳುಗಳಿಗೆ ೨೦೨೪ರ ಮಾರ್ಚ್ ೧೯ರ ವೇಳೆಗೆ ೧೯ ವರ್ಷ ಪೂರ್ತಿಯಾಗಿ ರಬಾರದು. ಹುಡುಗಿಯರಿಗೆ ೨೦೨೪ ಎಪ್ರಿಲ್ ೩ಕ್ಕೆ ೧೬ ವರ್ಷ ಪೂರ್ತಿಯಾಗಿರಬಾರದು. …

ಕಣಿಪುರ: ನಾಳೆ ಸಂಜೆ ಮಾತೃ ಸಂಗಮ; ಸಾಧ್ವಿ ಶ್ರೀ ಮಾತಾನಂದಮಯಿಯವರಿಂದ ಆಶೀರ್ವಚನ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ  ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಇಂದು ಬೆಳಿಗ್ಗೆ ಗಣಪತಿಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿತು. ಒಳ ವೇದಿಕೆಯಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನಾ ಝೇಂಕಾರ್ ನಡೆಯುತ್ತಿದೆ. ಹೊರ ವೇದಿಕೆಯಲ್ಲಿ ಮಧ್ಯಾಹ್ನ ೧೨ರಿಂದ  ಜಗದೀಶ ಆಚಾರ್ಯ ಪುತ್ತೂರು ಅವರಿಂದ ಸಂಗೀತಗಾನ ಸಂಭ್ರಮ,  ಸಂಜೆ ೬ರಿಂದ ಗೋ.ನಾ. ಸ್ವಾಮಿ ಮತ್ತು ಬಳಗ ಬೆಂಗಳೂರು ಇವರಿಂದ ಜಾನಪದ- ಭಾವ-ಭಕ್ತಿಗೀತೆಗಳು, ರಾತ್ರಿ ೮.೩೦ರಿಂದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ವಿದ್ಯಾರ್ಥಿಗಳಿಂದ ಯಕ್ಷಗಾನ …

ಕಾಸರಗೋಡು- ತಿರುವನಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಮಂಗಳೂರಿಗೆ ವಿಸ್ತರಣೆ

ಕಾಸರಗೋಡು: ಕಾಸರಗೋಡು- ತಿರುವನಂತಪುರ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಈಗ ಮಂಗಳೂರು ತನಕ ವಿಸ್ತರಣೆ ಮಾಡಲಾಗಿದೆ. ಇದರಂತೆ ಈ ರೈಲು ಮಂಗಳೂರಿನಿಂದ ಬೆಳಿಗ್ಗೆ ೬.೧೫ಕ್ಕೆ ಹೊರಟು ಅಪರಾಹ್ನ ೩.೦೫ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ ೪.೦೫ಕ್ಕೆ ಹೊರಟು ರಾತ್ರಿ ೧೨.೪೦ಕ್ಕೆ ಮಂಗಳೂರು ತಲುಪಲಿದೆ. ಬುಧವಾರ ಹೊರತುಪಡಿಸಿ ಉಳಿದ ಎಲ್ಲಾ ಆರು ದಿನಗಳಲ್ಲೂ ಈ ರೈಲು ಸೇವೆ ನಡೆಸಲಿದೆ. ವಂದೇಭಾರತ್ ರೈಲು ಸೇವೆಯನ್ನು ಮಂಗಳೂರು ತನಕ ವಿಸ್ತರಿಸಿದ ಅಧಿಕೃತ ತೀರ್ಮಾ ನವನ್ನು …

ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ಕಟ್ಟಡ ನಿರ್ಮಾಣ ಕಾರ್ಮಿಕ ಸಾವು

ಹೊಸದುರ್ಗ:  ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಟ್ಟಡ ನಿರ್ಮಾಣ ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ತೃಕ್ಕರಿಪುರ ಮಣಿಯ ತೋಡಿನ ಎಂ. ಕುಂಞಿ ರಾಮನ್-ಟಿ.ವಿ. ಚೆರಿ ದಂಪತಿಯ ಪುತ್ರ ಟಿ.ವಿ. ವಿಜಯನ್ (೫೫) ಸಾವನ್ನಪ್ಪಿದ ಕಾರ್ಮಿಕ. ಇವರು ಚಲಾಯಿಸುತ್ತಿದ್ದ ಸ್ಕೂಟರ್ ಮೊನ್ನೆ ಮಧ್ಯಾಹ್ನ ತೃಕ್ಕರಿಪುರ ಜಂಕ್ಷನ್ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಅದರಿಂದ ಗಂಭೀರ ಗಾಯಗೊಂಡ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಉನ್ನತ …

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್: ೨೦ಕೋಟಿ ರೂ.ಗಳ ಯೋಜನೆಗೆ ಅನುಮತಿ

ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆ ಆಡಳಿತಾನುಮತಿ ನೀಡಿದೆ. ಒಟ್ಟು ೨೦ ಕೋಟಿಯ ಯೋಜನೆಗೆ ಅನುಮತಿ ನೀಡಲಾಗಿದೆ. ಬಂದಡ್ಕ ವೀಟಿಯಡಿ ಚಾಮುಂಡಿಕುನ್ನ್ ಬಳಾಂತೋಡು ರಸ್ತೆಗೆ ೮.೫೦ ಕೋಟಿ ರೂ, ಪೆರಿಯ ಒಡೆಯಂಚಾಲ್ ರಸ್ತೆಗೆ ೬ಕೋಟಿ ರೂ., ಚಾಲಿಂಗಾಲ್ ಮೀಂಙೋತ್ತ್ ಅಂಬಲತ್ತರ ರಸ್ತೆಗೆ ೫.೬೪ ಕೋಟಿ ರೂ.ಗಳ ಆಡಳಿತಾನುಮತಿ ನೀಡಲಾಗಿದೆ.

ಧರ್ಮಚಾವಡಿ ಶ್ರೀ ಕೋಮರಾಯ ಚಾಮುಂಡಿ ದೈವಸ್ಥಾನ: ಉತ್ಸವ ಸಮಿತಿ ರೂಪೀಕರಣ

ಮುಳ್ಳೇರಿಯ: ಆದೂರು ಕೈತ್ತೋಡು ಧರ್ಮಚಾವಡಿ ಶ್ರೀ ಕೋಮರಾಯ ಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಕಾರ್ಯ ಮತ್ತು ದೈವಗಳ ನೇಮೋತ್ಸವ ಎ. ೨೫ರಿಂದ ೨೭ರವರೆಗೆ ವಿವಿಧ ದೈವಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಯಶಸ್ವಿಗಾಗಿ ಉತ್ಸವ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ದೈವಸ್ಥಾನದ ಪರಿಸರದಲ್ಲಿ ನಡೆಯಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅನುಗ್ರಹ ಭಾಷಣ ಮಾಡಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವೀಂದ್ರ ರೈ ಮಲ್ಲಾವರ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ …