ಸಪ್ಲೈಕೋ: ೧೩ ಅವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ೮೯ ರೂ. ತನಕ ಹೆಚ್ಚಳ

ಕಾಸರಗೋಡು: ಸಪ್ಲೈಕೋ ಮಾರುಕಟ್ಟೆಗಳಲ್ಲಿ ವಿತರಿಸಲಾಗುವ ೧೩ ಅವಶ್ಯಕ ಸಾಮಗ್ರಿಗಳ ಸಬ್ಸಿಡಿ ಯನ್ನು ಶೇ. ೭೦ರಿಂದ ೩೫ಕ್ಕೆ ಇಳಿಸಿದ ಬೆನ್ನಲ್ಲೇ  ಅವುಗಳ ದರದಲ್ಲಿ ೩ರಿಂದ ಆರಂಭಗೊಂಡು ೮೯ ರೂ. ತನಕ ಏರಿಕೆ ಉಂಟಾಗಿದೆ. ಇದರಂತೆ ಜಯ ಅಕ್ಕಿ (ಕಿಲೋವೊಂದಕ್ಕೆ) ಈ ಹಿಂದಿನ ೨೫ ರೂ.ನಿಂದ ೨೯.೪೬ ಕ್ಕೇರಿದೆ. ಕುರುವ ಅಕ್ಕಿ ದರ ೨೫ ರೂ.ನಿಂದ ೩೦.೦೫ ರೂ., ಮಟ್ಟಾ ಅಕ್ಕಿ ಬೆಲೆ ೨೪ ರೂ. ನಿಂದ ೩೦.೮೬ ರೂ. ಆಗಿ ಹೆಚ್ಚಿಸ ಲಾಗಿದೆ. ಬೆಳ್ತಿಗೆ ಅಕ್ಕಿ ದರ ೨೩ …

ಕುಂಬ್ಡಾಜೆ ಪಂ. ವಿರುದ್ಧ ಬಿಜೆಪಿ ಹೋರಾಟಕ್ಕೆ ಜಯ

ಬದಿಯಡ್ಕ: ಕುಂಬ್ಡಾಜೆ ಪಂಚಾ ಯತ್ ಯುಡಿಎಫ್ ಹಾಗೂ ಸಿಪಿಐ ದುರಾಡಳಿತದ ವಿರುದ್ಧ ಅಂಗನವಾಡಿ ಸಹಾಯಕಿ ನೇಮಕಾತಿಯಲ್ಲಿ ಬಿಜೆಪಿಯನ್ನು ಅವಗಣಿಸಿದುದರ ವಿರುದ್ಧ ಬಿಜೆಪಿ ಕುಂಬ್ಡಾಜೆ ಪಂಚಾಯ ತ್ ಸಮಿತಿ ನೇತೃತ್ವದಲ್ಲಿ ನಡೆದ ತುರ್ತು ಹೋರಾಟಕ್ಕೆ ಜಯ ಲಭಿಸಿದೆ. ಪ್ರಸ್ತುತ ಪ್ಯಾನೆಲ್‌ನಲ್ಲಿ ಬಿಜೆಪಿ ಪ್ರತಿನಿಧಿಯನ್ನು ಸೇರಿಸಿಕೊಂ ಡು ಸಂದರ್ಶನ ನಡೆಸುವುದೆಂದು ಲಿಖಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಯನ್ನು ಹಿಂತೆಗೆಯಲಾಯಿತು. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯ ಅಧ್ಯಕ್ಷ ಹರೀಶ್ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೇಮೂಲೆ, ಮಂ ಡಲ ಕಾರ್ಯದರ್ಶಿ …

ಪಚ್ಚಂಬಳ ಮಖಾಂ ಉರೂಸ್ ನಾಳೆ ಸಮಾರೋಪ

ಕುಂಬಳೆ: ಎರಡು ವಾರಗಳಿಂದ ಸಂಭ್ರಮದಿಂದ ನಡೆಯುತ್ತಿರುವ ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ನಾಳೆ ಸಮಾಪ್ತಿಗೊಳ್ಳಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ, ಕರ್ನಾ ಟಕದಿಂದಲೂ ನೂರಾರು ಮಂದಿ ವಿವಿಧ ದಿನ ನಡೆದ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ್ದಾರೆ. ಈ ತಿಂಗಳ ೪ರಂದು ಉರೂಸ್ ಕಾರ್ಯಕ್ರಮ ಗಳು ಆರಂಭಗೊಂಡಿತ್ತು.  ಈಗಾಗಲೇ ಹಲವು ಪ್ರಮುಖರು ತಲುಪಿ ಧಾರ್ಮಿ ಕ ಪ್ರವಚನ ನೀಡಿದ್ದಾರೆ. ಇಂದು ರಾತ್ರಿ ಸಮಾರೋಪ ಕಾರ್ಯಕ್ರಮವನ್ನು ಕಾಸರಗೋಡು ಸಂಯುಕ್ತ ಜಮಾ ಅತ್ ಖಾಝಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸುವರು. ಕೆ.ಎಸ್. ಆಟ್ಟಕೋಯ …

ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವ:  ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ನಾಳೆ ಸಭಾ ಭವನ ಉದ್ಘಾಟನೆ

ಕುಂಬಳೆ:  ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋ ತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಧಾರ್ಮಿಕ ಸಭೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಒಳವೇದಿಕೆಯಲ್ಲಿ ಇಂದು ಸಂಜೆ ೪.೩೦ರಿಂದ  ಭಜನಾ ಝೇಂಕಾರ್, ೬.೩೦ಕ್ಕೆ ಅನಿಲ್‌ಕೃಷ್ಣ ಕುಂಬಳೆ ಬಳಗದಿಂದ ವಯಲಿನ್ ಸೋಲೋ ನಡೆಯಲಿದೆ. ಹೊರವೇದಿಕೆಯಲ್ಲಿ ಇಂದು ಮಧ್ಯಾಹ್ನ ಗಂಟೆ ೧ರಿಂದ ಡಾ| ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ  ಸಾಂಸ್ಕೃತಿಕ ಸಂಘ ಕಾಸರಗೋಡು  ಇವರಿಂದ ಸಾಹಿತ್ಯ-ಗಾನ-ನೃತ್ಯ ವೈಭವ ನಡೆಯಲಿದೆ. ಸುಮಾರು ೪೦ಕ್ಕೂ ಹೆಚ್ಚು ಕಲಾವಿ …

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್: ಗಡಿನಾಡಿಗೂ ಅನ್ವಯಗೊಳಿಸಲು ಒತ್ತಾಯ

ಕಾಸರಗೋಡು: ನಿನ್ನೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಮುಂಗಡಪತ್ರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಯೋಜನೆಯನ್ನು ಘೋಷಿಸಿರುವುದಕ್ಕೆ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಇವರಿಗೆ ಪತ್ರಕರ್ತರ ಪರವಾಗಿ ಕೃತಜ್ಞತೆ ಸೂಚಿಸಲಾಗಿದೆ, ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಪತ್ರಕರ್ತ ಸಂಘದ ೩೮ನೇ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಈ ಭರವಸೆ ನೀಡಿದ್ದರು. ಇದಕ್ಕಾಗಿ ಯತ್ನಿಸಿದ ಮುಖ್ಯ ಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕೆಯುಡಬ್ಲುಜೆ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರುರವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಯೋಜನೆ ಯನ್ನು …

ಜ್ಯೋತಿಷ್ ಸಂಸ್ಮರಣೆ, ಸ್ಮೃತಿ ಮಂಟಪ ಉದ್ಘಾಟನೆ

ಅಣಂಗೂರು: ಜೆ.ಪಿ ನಗರ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತ,ಸಮಾಜ ಸೇವಕ ಜ್ಯೋತಿಷ್ ಕಾಸರಗೋಡು ಅವರ ೨ನೇ ವರ್ಷದ ಸಂಸ್ಮರಣೆ ಅಣಂಗೂರು ಜೆ.ಪಿ ನಗರದಲ್ಲಿ ನಡೆಯಿತು. ಇದರಂಗವಾಗಿ  ಅಂದು ಬೆಳಿಗ್ಗೆ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಜೆ.ಪಿನಗರ ಗೆಳೆಯರ ಬಳಗದವರ ನೇತೃತ್ವದಲ್ಲಿ ರಕ್ತದಾನ  ಶಿಬಿರ ನಡೆಯಿತು. ಸಂಜೆ ಜೆ.ಪಿ ನಗರಕೇಸರಿ ಮೈದಾನದಲ್ಲಿ ನೂತನವಾಗಿ ನಿರ್ಮಿಸಿದ ಸ್ಮೃತಿ ಮಂಟಪವನ್ನು  ಪುಷ್ಪಾರ್ಚನೆಯ ಮೂಲಕ ಜ್ಯೋತಿಷ್‌ರ ತಂದೆ ಮಣಿ ಮತ್ತು ತಾಯಿ ರಾಜೀವಿ ಉದ್ಘಾಟಿಸಿದರು.  ಸಮಾಜ ಸೇವಕ ಶಂಕರ ಜೆ.ಪಿ ನಗರ್ ಮಾತನಾಡಿ …

ಕುಂಬ್ಡಾಜೆ: ಕಾಂಗ್ರೆಸ್‌ನಿಂದ ಮನೆಯ ಕೀಲಿ ಕೈ ಹಸ್ತಾಂತರ ನಾಳೆ

ಕುಂಬ್ಡಾಜೆ: ಕುಂಬ್ಡಾಜೆ ಮಂಡಲ ಕಾಂಗ್ರೆಸ್ ಗೋಸಾಡ ಬೂತ್ ಸಮಿತಿ ವತಿಯಿಂದ ಪಾತೇರಿಯಲ್ಲಿ ಐತ್ತಪ್ಪ ರೈಯವರಿಗೆ ನಿರ್ಮಿಸಿ ನೀಡುವ ಮನೆಯ ಕೀಲಿ ಕೈ ಹಸ್ತಾಂತರ ನಾಳೆ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಕೀಲಿ ಕೈ ಹಸ್ತಾಂತರಿಸುವರು. ಆನಂದ ಕೆ. ಮವ್ವಾರ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸುವರು.

ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ ನಾಳೆ: ಸಿಪಿಎಂ ಅಭ್ಯರ್ಥಿಗಳ ಗೆಲ್ಲಿಸಲು ಕರೆ

ಕೊಡ್ಲಮೊಗರು: ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಿತ ಮಂಡಳಿಗಿರುವ ಚುನಾವಣೆ ನಾಳೆ ನಡೆಯಲಿದ್ದು, ಇದರಲ್ಲಿ ಸ್ಪರ್ಧಿಸುವ ಸಿಪಿಎಂನ ಎಲ್ಲಾ ಉಮೇದ್ವಾರರನ್ನು ಜಯಗೊಳಿಸಬೇಕೆಂದು ಸಿಪಿಎಂ ಲೋಕಲ್ ಕಾರ್ಯದರ್ಶಿ ಕರೆ ನೀಡಿದ್ದಾರೆ. ಕಳೆದ ೬೦ ವರ್ಷಗಳಿಂದ ಆಡಳಿತ ನಡೆಸಿ ಅನುಭವ ಹೊಂದಿದ ಬ್ಯಾಂಕ್‌ನ್ನು ಲಾಭದತ್ತ ಕೊಂಡೊಯ್ದುದು ಸಿಪಿಎಂ ಆಡಳಿತ ಸಮಿತಿಯಾಗಿದ್ದು, ಈ ಬಾರಿಯೂ ಅಧಿಕಾರಕ್ಕೇರಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ ೪ರಿಂದ

ಕಾಸರಗೋಡು: ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ ೪ರಂದು ಆರಂಭಗೊಂಡು ೨೬ರ ತನಕ ನಡೆಯಲಿದೆಯೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ಇದೇ ರೀತಿ ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿಯ ಪ್ರಥಮ ಮತ್ತು ದ್ವಿತೀಯ ವರ್ಷದ ಪರೀಕ್ಷೆಗಳು ಮಾರ್ಚ್ ೧ರಿಂದ ಆರಂಭಗೊಂಡು ೨೬ರ ತನಕ ಮುಂದುವರಿಯಲಿದೆ. ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ಬೆಳಿಗ್ಗೆ ೯.೩೦ಕ್ಕೆ ಆರಂಭಗೊಳ್ಳಲಿದೆ. ಎಸ್‌ಎಸ್‌ಎಲ್‌ಸಿ ಮೋಡೆಲ್ ಪರೀಕ್ಷೆಗಳು ಫೆ. ೧೯ರಂದು ಆರಂಭಗೊಂಡು ೨೩ರ ತನಕ ಮುಂದುವರಿಯಲಿದೆ. ಈ ಪರೀಕ್ಷೆ …

ಕುಂಬಳೆ ಪೇಟೆ ಪೊಲೀಸರ: ಸರ್ಪಗಾವಲಿನಲ್ಲಿ: ಎಲ್ಲೆಡೆ ಕಟ್ಟೆಚ್ಚರ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ, ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರ ಪರಿಸರ ಹಾಗೂ ಕುಂಬಳೆ ಪೇಟೆಯಲ್ಲಿ ಅತೀವ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ.ಕ್ಷೇತ್ರ ಸಮಿತಿ ಹಾಗೂ ಪೊಲೀಸರ ಸಂಯುಕ್ತ ಸಹಕಾರದೊಂದಿಗೆ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ. ಕ್ಷೇತ್ರ ಪರಿಸರ, ಕುಂಬಳೆ ಪೇಟೆ, ಪೊಲೀಸ್ ಠಾಣೆ ರಸ್ತೆ, ರೈಲ್ವೇನಿಲ್ದಾಣ ರಸ್ತೆ, ಬದಿಯಡ್ಕ ರಸ್ತೆ, ಕಂಚಿಕಟ್ಟೆರಸ್ತೆ, ಶಾಲಾ ಪರಿಸರ ಸಹಿತ ಎಲ್ಲೆಡೆ ಪೊಲೀಸರ ಪೂರ್ಣ ನಿಗಾದಲ್ಲಿರುವಈ ಎಲ್ಲಾ ಪ್ರದೇಶಗಳಲ್ಲಾಗಿ ೧೧೦ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ ಡ್ರೋನ್ …