ಕ್ಷೇತ್ರ ಪರಿಸರದಲ್ಲಿ ಪ್ರಾಚೀನ ವಿಗ್ರಹ ಅವಶೇಷಗಳು ಪತ್ತೆ

ಕಾಸರಗೋಡು: ಪ್ರಾಚೀನ ವಿಗ್ರಹದ ಅವಶೇಷಗಳು ಹೊಸದುರ್ಗಕ್ಕೆ ಸಮೀಪದ ಮಡಿಕೈ ಮಲಪ್ಪಚೇರಿಯಲ್ಲಿ ಪತ್ತೆಯಾಗಿದೆ. ಮಲಪ್ಪಚ್ಚೇರಿ ಪೊಟ್ಟನ್ ಕುಳಂಗರೆ ಶ್ರೀಕಷ್ಣ ದೇವಸ್ಥಾನದ ಪುನರುದ್ಧಾರಕ್ಕಾಗಿ ಊರವರು ತೀರ್ಮಾನಿಸಿದ್ದರು. ಅದರ ಪೂರ್ವಭಾವಿಯಾಗಿ ಅಷ್ಟಮಂಗಲ ಪ್ರಶ್ನೆ ನಡೆಸಲಾಯಿತು. ಈ ಕ್ಷೇತ್ರ ಪರಿಸರದಲ್ಲಿ ಪ್ರಾಚೀನ ವಿಗ್ರಹದ ಅವಶೇಷಗಳಿವೆ ಎಂಬುದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂತು. ಅದರಂತೆ ಊರವರು ಆ ಕ್ಷೇತ್ರ ಪರಿಸರದಲ್ಲಿ ಶೋಧ ಆರಂಭಿಸಿದಾಗ ಕ್ಷೇತ್ರ ಪರಿಸರದಲ್ಲಿ ಪ್ರಾಚೀನ ವಿಗ್ರಹದ ಅವಶೇಷಗಳು ಪತ್ತೆಯಾಗಿದೆ. ಈ ವಿಗ್ರಹ ಅಂದಾಜು ೭೫೪ ವರ್ಷಗಳ ಪ್ರಾಚೀನತೆ ಹೊಂದಿರುವುದಾಗಿ ಅಂದಾಜಿಸಲಾಗಿದೆ. ಮಾಂಙಾಡ್ …

ಸಿಪಿಐ ಮುಂದಾಳು ಬೆಜ್ಜ ಎಂ. ನಾರಾಯಣ ಹೆಗ್ಡೆ ಸಂಸ್ಮರಣೆ

ಮಂಜೇಶ್ವರ: ಸಿಪಿಐಯ ಹಿರಿಯ ನೇತಾರ ಬೆಜ್ಜದ ಎಂ. ನಾರಾಯಣ ಹೆಗ್ಡೆ ಅವರ ೧೫ನೇ ಸಂಸ್ಮರಣಾ ವಾರ್ಷಿಕವನ್ನು ಇಂದು ಆಚರಿಸಲಾ ಯಿತು. ಬೆಜ್ಜದಲ್ಲಿರುವ ಅವರ ಸ್ವ-ಗೃಹದ ಸಮೀಪದ ಕುಟೀರದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ರಾಮಕೃಷ್ಣ ಕಡಂಬಾರ್ ಉದ್ಘಾಟಿಸಿದರು. ಅವರು ಮಾತನಾಡಿ ಎಂ. ನಾರಾಯಣ ಹೆಗ್ಡೆಯವರು ಬ್ರಿಟಿಷ್ ಸೇನೆಗೆ ಸ್ವಯಂ ರಾಜೀನಾಮೆ ನೀಡಿ ಬಡವರ, ರೈತರ ಕ್ಷೇಮಾಭಿ ವೃದ್ಧಿಗೆ ಪ್ರಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಬಡವರ ಹಾಗೂ ರೈತರ ಭೂಮಿ, ಸಹಿತ ಸೊತ್ತುಗಳನ್ನು ಜಮೀನುದಾರ ರಿಂದ ವಶಪಡಿಸಿ ಬಡವರ …

ಕಾರನ್ನು ಬಸ್‌ಗೆ ಅಡ್ಡ ನಿಲ್ಲಿಸಿ ತಂಡದಿಂದ ಕಂಡಕ್ಟರ್‌ಗೆ ಹಲ್ಲೆ

ಕುಂಬಳೆ: ಕಾರನ್ನು ಖಾಸಗಿ ಬಸ್‌ಗೆ ಅಡ್ಡ ನಿಲ್ಲಿಸಿದ ತಂಡವೊಂ ದು ಕಂಡಕ್ಟರ್‌ಗೆ ಹಲ್ಲೆಗೈದ ಘಟನೆ ನಡೆದಿದೆ. ಹಲ್ಲೆಯಿಂದ ಗಾಯ ಗೊಂಡ ಕೊಡಿಯಮ್ಮೆ ಚೆಕ್‌ಪೋಸ್ಟ್ ನಿವಾಸಿ ಮುಸ್ತಫ (೨೨) ಎಂಬ ವರನ್ನು ಕುಂಬಳೆ ಜಿಲ್ಲಾ  ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿ ಲಾಗಿದೆ. ನಿನ್ನೆ ಸಂಜೆ ಪೆರ್ಮುದೆ ಬಳಿಯ ಮುನ್ನೂರು ಎಂಬಲ್ಲಿ ನಡೆದಿದೆ. ಮುಸ್ತಫ ಕುಂಬಳೆ- ಬಂದ್ಯೋಡು- ಪೆರ್ಮುದೆ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್‌ನ ಕಂಡಕ್ಟರ್ ಆಗಿದ್ದಾರೆ. ನಿನ್ನೆ ಸಂಜೆ ಪ್ರಯಾಣಿಕರನ್ನು ಇಳಿಸಿ ಬಸ್ ಮುನ್ನೂರು ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂರು …

ತ್ಯಾಜ್ಯನಿರ್ಲಕ್ಷ್ಯ: ಮಧೂರು ಪಂ.ಗೆ ೧೦ ಸಾವಿರ ರೂ. ದಂಡ

ಮಧೂರು: ತ್ಯಾಜ್ಯ ಸಂಗ್ರಹ ಕೇಂದ್ರವಾದ ಎಂ.ಸಿ.ಎಫ್‌ನ ಹೊರಗೆ ತ್ಯಾಜ್ಯವನ್ನು ರಾಶಿ ಹಾಕಿ ರುವುದಕ್ಕೆ ಮಧೂರು ಪಂಚಾ ಯತ್‌ಗೆ ತ್ಯಾಜ್ಯ ಸಂಸ್ಕರಣೆ ರಂಗದಲ್ಲಿ ಕಾನೂನು ಉಲ್ಲಂಘನೆ ತನಿಖೆ ನಡೆಸುವ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ೧೦ ಸಾವಿರ ರೂ. ದಂಡ ವಿಧಿಸಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪೇಕ್ಷಿಸಿರುವುದಕ್ಕೆ ಮಧೂರಿನ ಶಿವಗಿರಿ ಹೋಟೆಲ್, ಉಳಿಯತ್ತಡ್ಕದ ಮೆಜಿಸ್ಟಿಕ್ ರೆಸ್ಟೋರೆಂಟ್ ಎಂಬೀ ಸಂಸ್ಥೆಗಳಿಗೂ ದಂಡ ಹೇರಲಾಗಿದೆ. ಈ ಬಗ್ಗೆ ಪಂಚಾಯತ್‌ಗೆ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ. ಜಿಲ್ಲಾ ಇನ್ಫರ್ಮೇಶನ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, …

ಲೋಕಸಭಾ ಚುನಾವಣೆ: ಸಿಪಿಎಂ ಉಮೇದ್ವಾರ ನಿರ್ಣಯ ಸಭೆ ೧೬ರಂದು

ತಿರುವನಂತಪುರ: ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭ ಗೊಂಡಿರುವಂತೆಯೇ ಚುನಾವಣೆ ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಿರ್ಣಯ  ನಾಳೆ ನಡೆಯ ಲಿರುವ ಸಿಪಿಎಂ ರಾಜ್ಯ ಸೆಕ್ರೆಟರಿ ಯೇಟ್ ಸಭೆಯಲ್ಲಿ ಕೈಗೊಳ್ಳಲಾಗು ವುದು. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಶಾಸಕರು ಸ್ಪರ್ಧಿಸಬೇಕು, ಎಷ್ಟರ ಮಟ್ಟಿನ ಮಹಿಳಾ ಪ್ರಾತಿನಿಧ್ಯ ನೀಡಬೇಕು ಇತ್ಯಾದಿ ವಿಷಯಗಳ ಬಗ್ಗೆಯೂ ಸಭೆ ಚರ್ಚಿಸಿ ಸಭೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯೂ ಪಕ್ಷದೊಳಗೆ ಒಂದೆಡೆ ಉಂಟಾಗಿದೆ. ಅದನ್ನು ಸಭೆ ಚರ್ಚಿಸಲಿದೆ. ಲೋಕಸಭಾ ಚುನಾವಣೆಗೆ …

ಬಿ.ಎಂ.ಎಸ್‌ನಿಂದ ಜ್ಯೋತಿಷ್ ಸಂಸ್ಮರಣೆ

ಕಾಸರಗೋಡು: ಬಿಎಂಎಸ್ ತಲೆಹೊರೆ ಕಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತನಾಗಿದ್ದ ದಿ| ಜ್ಯೋತಿಷ್‌ರ ಸಂಸ್ಮರಣೆ ಹಾಗೂ ಪುಷ್ಪಾರ್ಚನೆ ಬಿಎಂಎಸ್ ಕಾಸರಗೋಡು ವಲಯ ಸಮಿತಿಯ ನೇತೃತ್ವದಲ್ಲಿ ಜರಗಿತು. ಜ್ಯೋತಿಷ್‌ರ ತಾಯಿ ರಾಜೀವಿ, ತಂದೆ ಗೋಪಾ ಲಕೃಷ್ಣ ಜಂಟಿಯಾಗಿ ದೀಪ ಬೆಳಗಿಸಿದರು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ  ನ್ಯಾಯವಾದಿ ಪಿ. ಮುರಳೀಧರನ್ ಸಂಸ್ಮರಣೆ ನಡೆಸಿದರು. ಆರ್‌ಎಸ್‌ಎಸ್ ಜಿಲ್ಲಾ ಬೌದ್ಧಿಕ್ ಪ್ರಮುಖ್ ಅನಂ ತಪದ್ಮನಾಭ ಮಾತನಾಡಿದರು. ಬಿ.ಎಂ.ಎಸ್ ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರನ್, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ಜಿಲ್ಲಾ ಉಪಾಧ್ಯಕ್ಷ ಕೆ.ಎ. ಶ್ರೀನಿವಾಸನ್, …

ಫ್ಲೈವುಡ್ ಕಂಪೆನಿ ಸಮೀಪ ಬೆಂಕಿ: ತಪ್ಪಿದ ದುರಂತ

ಉಪ್ಪಳ: ಮಂಜೇಶ್ವರ ಬಳಿಯ ದುರ್ಗಿಪಳ್ಳದಲ್ಲಿ ಫ್ಲೈವುಡ್ ಕಂಪೆನಿ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ತಲುಪಿದ ಅಗ್ನಿಶಾಮಕದಳ ಬೆಂಕಿ ನಂದಿಸಿದುದರಿಂದ ಭಾರೀ ದುರಂತ ತಪ್ಪಿದೆ. ನಿನ್ನೆ ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಫ್ಲೈವುಡ್ ಕಂಪೆನಿ ಸಮೀಪ ರಾಶಿ ಹಾಕಲಾಗಿದ್ದ ಮರದ ತುಂಡುಗಳಿಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳದ ಸ್ಟೇಶನ್ ಆಫೀಸರ್ ರಾಜೇಶ್ ನೇತೃತ್ವದಲ್ಲಿ ಉಪ್ಪಳ ಹಾಗೂ ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕದಳ ಕಾರ್ಯಾ ಚರಣೆ ನಡೆಸಿ ಬೆಂಕಿ ನಂದಿಸಿದೆ.  ಇದರಿಂದ ಬೆಂಕಿ ಹರಡುವುದನ್ನು ತಪ್ಪಿಸಲು ಸಾಧ್ಯವಾಯಿತು.

ಭಾರತದಲ್ಲಿ ಬೇಹುಗಾರಿಕೆ ನಡೆಸಲು ೩೮ ನಕಲಿ ಆಧಾರ್ ಕಾರ್ಡ್ ಪತ್ತೆ: ೫ ಕಾರ್ಡ್ ಪಡೆದಿದ್ದು ಮಲಪ್ಪುರದಿಂದ, ಸಮಗ್ರ ತನಿಖೆ ಆರಂಭ

ಕಾಸರಗೋಡು: ಭಾರತದಲ್ಲಿ ಬೇಹುಗಾರಿಕೆ ನಡೆಸಲು ಉಗ್ರಗಾಮಿ ಗಳು ನಕಲಿ  ಆಧಾರ್ ಕಾರ್ಡ್‌ಗಳನ್ನು ಬಳಸಿ ದೇಶದೊಳಗೆ ನುಗ್ಗಿದ್ದಾರೆಂದೂ,   ಹೀಗೆ ತಯಾರಿಸಲಾದ ೩೮ ನಕಲಿ ಆಧಾರ್ ಕಾರ್ಡ್‌ಗಳನ್ನುಕೇಂದ್ರ ಗುಪ್ತಚರ ವಿಭಾಗ ಪತ್ತೆಹಚ್ಚಿ ಬಳಿಕ  ಅದನ್ನು ರದ್ದುಪಡಿಸಲಾಗಿದೆ. ಈ ಪೈಕಿ ೫ ನಕಲಿ ಆಧಾರ್ ಕಾರ್ಡ್‌ಗಳನ್ನು  ಮಲಪ್ಪುರಂ ಜಿಲ್ಲೆಯ ತಿರೂರ್‌ನ ಅಕ್ಷಯ ಕೇಂದ್ರವೊಂದರ  ಮೂಲಕ ತಯಾರಿಸಲಾಗಿದೆ ಎಂಬ ಮಾಹಿತಿ  ಕೇಂದ್ರ ಗುಪ್ತಚರ ವಿಭಾಗಕ್ಕೆ  ಲಭಿಸಿದೆ. ಇನ್ನೊಂದೆಡೆ ಕೇರಳ ಸೈಬರ್ ಕ್ರೈಂ ವಿಭಾಗವೂ ಈ ಬಗ್ಗೆ  ಸಮಗ್ರ  ತನಿಖೆ ಆರಂಭಿಸಿದೆ. ಯುನೀಕ್ ಐಡೆಂಟಿಫಿಕೇಶನ್ …

ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಾಳೆಯಿಂದ

ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ, ಶ್ರೀ ಮಹಾಗಣಪತಿ, ಶ್ರೀ ವನಶಾಸ್ತಾರ ದೇವರುಗಳ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ನಾಗದೇವರು, ವ್ಯಾಘ್ರ ಚಾಮುಂಡಿ, ಗುಳಿಗ ದೈವಗಳ ಪುನಃ ಪ್ರತಿಷ್ಠೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಾಳೆ ಆರಂಭಗೊಂಡು ಫೆ. ೨೪ರವರೆಗೆ ಜರಗಲಿದೆ. ಕ್ಷೇತ್ರದ ವರ್ಷಾವಧಿ ಜಾತ್ರೆ ೨೫ರಿಂದ ೨೯ರವರೆಗೆ ಜರಗಲಿದೆ. ನಾಳೆ ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಮಧ್ಯಾಹ್ನ …

ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಎಂ. ಸಂಜೀವ ಶೆಟ್ಟಿ ಆಯ್ಕೆ

ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಎಂ.ಸAಜೀವ ಶೆಟ್ಟಿ ಮೊಟ್ಟೆಕುಂಜೆ ಪುನರಾಯ್ಕೆಗೊಂಡಿದ್ದಾರೆ.ಬ್ಯಾAಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2024-29ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಂ.ಸAಜೀವ ಶೆಟ್ಟಿ ಮೊಟ್ಟೆಕುಂಜೆ, ಉಪಾಧ್ಯಕ್ಷರಾಗಿ ಎಂ. ಶ್ರೀಧರ್ ಭಟ್‌ರನ್ನು ಆರಿಸಲÁ ಗಿದೆ. ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜೆ ಅವರು 1995ರಿಂದಲೇ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಗೊಂಡಿರುತ್ತಾರೆ. ಕಳೆದ 55 ವರ್ಷಗಳ ಸುದೀರ್ಘ ಕಾಲ ಸಹಕಾರಿ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಳಿದಂತೆ ನಿರ್ದೇಶಕರಾಗಿ ರಾಮಕೃಷ್ಣ ಭಟ್, ಜಯಪ್ರಕಾಶ್ ಶೆಟ್ಟಿ, ವೇಣುಗೋಪಾಲ ಕೆ., ನಾರಾಯಣ …