ಕುಡಿಯುವ ನೀರು, ವಸತಿ ಸಮಸ್ಯೆಗೆ ಆದ್ಯತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ೧೦ ಲಕ್ಷ ರೂ. ಮೀಸಲಿಟ್ಟ ಬದಿಯಡ್ಕ ಪಂ. ಬಜೆಟ್

ಬದಿಯಡ್ಕ: ಪಂಚಾಯತ್‌ನ ೨೦೨೪-೨೫ನೇ ಆರ್ಥಿಕ ವರ್ಷದ ಬಜೆಟ್ ಪಂ. ಉಪಾಧ್ಯಕ್ಷ ಎಂ. ಅಬ್ಬಾಸ್ ಮಂಡಿಸಿದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರ, ವಸತಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುವ ೨೫,೩೮,೬೯,೭೨೫ ರೂ. ಆದಾಯ, ೨೫,೩೨,೧೯,೭೨೫ ರೂ. ವೆಚ್ಚದ ೩೮,೬೫,೦೮೧ ರೂ. ಮೀಸಲು ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ. ಕಡು ಬಡತನ ಯಾದಿಯಲ್ಲಿರುವ ಎಲ್ಲಾ ವಸತಿ ರಹಿತರಿಗೂ ಮನೆ ನೀಡುವುದಕ್ಕೆ ಮೊತ್ತ ಮೀಸಲಿಡಲಾಗಿದೆ. ಬದಿಯಡ್ಕ ಪಂ. ಬಸ್ ನಿಲ್ದಾಣ ನಿರ್ಮಾಣಕ್ಕೆ ೧೦ ಲಕ್ಷ ರೂ., ಬೋಳುಕಟ್ಟೆ ಇಂಡೋರ್ ಸ್ಟೇಡಿಯಂ ದುರಸ್ತಿಗಾಗಿ ೧೦ …

ಬಿ.ವಿ. ರಾಜನ್ ಅಂತ್ಯ ಸಂಸ್ಕಾರ: ನೂರಾರು ಮಂದಿಯಿಂದ ಅಂತಿಮ ದರ್ಶನ

ಮಂಜೇಶ್ವರ: ಸಿ.ಪಿ.ಐ ಮುಖಂಡ ಬಿ.ವಿ ರಾಜನ್ ರವರ ಅಂತ್ಯಸAಸ್ಕಾರ ನಿನ್ನೆ ಮಧ್ಯಾಹ್ನ ರಾಮತ್ತ ಮಜಲ್ ಸಾರ್ವಜನಿಕ ಸ್ಮಶಾನದಲ್ಲಿ ನಡೆಸ ಲಾಯಿತು. ಮನೆಯಿಂದ ಮೃತದೇಹ ವನ್ನು ನೂರಾರು ಮಂದಿಯ ಉಪಸ್ಥಿತಿಯಲ್ಲಿ ಸ್ಮಶಾನಕ್ಕೆ ತಲುಪಿಸಿ ಅಲ್ಲಿ ಅಲ್ಪ ಹೊತ್ತು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಯಿತು. ಬಳಿಕ ಅವರ ಪುತ್ರಿ ರಮ್ಯ ಚಿತೆಗೆ ಬೆಂಕಿ ಹಚ್ಚಿದ್ದಾರೆ. ನಿನ್ನೆ ಬೆಳಿಗ್ಗೆ ಮೃತರ ಮನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಮಂಜೇಶ್ವರ ತಾಲೂಕು ತಹಶೀಲ್ದಾರ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಬ್ಲೋಕ್ ಪಂಚಾಯತ್ …

ಸೋಂಕಾಲ್‌ನಲ್ಲಿ ಜ್ಯೋತಿಷ್ ಸ್ಮತಿ ದಿನ

ಉಪ್ಪಳ: ಜೋಬಾಯ್ ಅಭಿಮಾನಿ ಬಳಗದ ಪ್ರತಾಪನಗರ ಇದರ ವತಿಯಿಂದ ಸಾಮಾಜಿಕ ಕಾರ್ಯಕರ್ತ ಜ್ಯೋತಿಷ್ ಕಾಸರಗೋಡು ಇವರ ಸ್ಮೃತಿ ದಿನದಂಗವಾಗಿ ಸಂಸ್ಮರಣೆ, ಪುಷ್ಪಾರ್ಚನೆ ಇಂದು ಬೆಳಿಗ್ಗೆ ಸೋಂಕಾಲ್‌ನಲ್ಲಿ ನಡೆಯಿತು. ಬಿಜೆಪಿ ಮುಖಂಡ ಕೆ.ಪಿ. ವಲ್ಸರಾಜ್ ಪುಷ್ಪಾರ್ಚನೆ ನಡೆಸಿದರು. ಧನ್‌ರಾಜ್, ಚೇತನ್, ಮಹೇಶ್, ಪ್ರಜ್ವಲ್ ಸಹಿತ ಹಲವರು ಭಾಗವಹಿಸಿದರು.

ಆರಿಕ್ಕಾಡಿ ಜನರಲ್ ಜಿಬಿಎಲ್‌ಪಿ ಶಾಲೆ ಹೊಸ ಕಟ್ಟಡ ಉದ್ಘಾಟನೆ ೧೭ರಂದು

ಕುಂಬಳೆ: ಆರಿಕ್ಕಾಡಿ ಜನರಲ್ ಜಿಬಿಎಲ್‌ಪಿ ಶಾಲೆಯ ಹೊಸ ಕಟ್ಟಡ ವನ್ನು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಆನ್‌ಲೈನ್ ಮೂಲಕ ಶನಿವಾರ ಉದ್ಘಾಟಿಸುವರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಮಂಜೂ ರಾದ ಒಂದು ಕೋಟಿ ರೂ. ವೆಚ್ಚ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಇದೇ ವೇಳೆ ಶಾಲೆಯ ೬೯ನೇ ವಾರ್ಷಿಕೋ ತ್ಸವ ನಡೆಯಲಿದೆ. ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಉದ್ಘಾಟನೆಯಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಕಾರ್ಯಕ್ರಮದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, …

ಕುಬಣೂರಿನಲ್ಲಿ ಬೆಂಕಿ ಅನಾಹುತ ನಿಗೂಢತೆ: ಪಂಚಾಯತ್ ಕಾರ್ಯದರ್ಶಿ ದೂರಿನಂತೆ ಕೇಸು ದಾಖಲು; ತನಿಖೆ ಆರಂಭ

ಕುಂಬಳೆ/ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ತ್ಯಾಜ್ಯ ಸಂಸ್ಕರಣೆ ಕೇಂದ್ರವಾದ ಕುಬಣೂರಿನಲ್ಲಿ  ಉಂ ಟಾದ ಬೆಂಕಿ ಅನಾಹುತದಲ್ಲಿ  ನಿಗೂ ಢತೆಗಳಿವೆಯೆಂದು ವಿವಿಧ ಸಂಘಟ ನೆಗಳು  ಆರೋಪಗಳನ್ನು ಹೊರಿಸಿರುವ ಬೆನ್ನಲ್ಲೇ ಪಂಚಾಯತ್ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಯದರ್ಶಿ ನಾರಾಯಾಣ ನಾಯ್ಕ್ ದೂರು ನೀಡಿದ್ದಾರೆ. ಬೆಂಕಿ ಅನಾಹುತ ದಲ್ಲಿ ೯೦ ಲಕ್ಷರೂಪಾಯಿಗಳ ನಷ್ಟವುಂ ಟಾಗಿದೆಯೆಂದೂ  ತ್ಯಾಜ್ಯ ರಾಶಿಯ ನಾಲ್ಕು ಭಾಗದಿಂದಲೂ ಏಕ ಕಾಲದಲ್ಲಿ ಬೆಂಕಿ ಹತ್ತಿಕೊಂಡಿರುವುದರಲ್ಲಿ ನಿಗೂಢತೆಗಳಿವೆಯೆಂದೂ ಈ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಬಗ್ಗೆ ಕುಂಬಳೆ …

ಅಗಲಿದ ಸಿಪಿಐ ನೇತಾರ ಬಿ.ವಿ. ರಾಜನ್‌ರಿಗೆ ನೂರಾರು ಮಂದಿಯಿಂದ ಅಂತಿಮ ನಮನ

ಮಂಜೇಶ್ವರ: ಅಗಲಿದ ಹಿರಿಯ ಸಿಪಿಐ ನೇತಾರ ಬಂಗ್ರಮಂಜೇಶ್ವರ ರಾಮತ್ ಮಜಲ್ ನಿವಾಸಿ ಬಿ.ವಿ. ರಾಜನ್ (೬೮) ಅವರಿಗೆ ವಿವಿಧ ರಾಜಕೀಯ ಪಕ್ಷಗಳ ನೇತಾರರು, ಕಾರ್ಯಕರ್ತರು ಸಹಿತ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಸಿಪಿಐ ಕಾಸರಗೋಡು ಜಿಲ್ಲಾ ಕೌನ್ಸಿಲ್ ಕಚೇರಿಯಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕ ದರ್ಶನಕ್ಕಿರಿಸಿದ ಮೃತದೇಹಕ್ಕೆ ಪಕ್ಷದ ಸಹಿತ ವಿವಿಧ ರಾಜಕೀಯ, ಸಾಮಾಜಿಕ ರಂಗಗಳ ಮುಂದಾಳುಗಳು ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತದೇಹವನ್ನು ಮಂಜೇಶ್ವರಕ್ಕೆ ಕೊಂಡೊಯ್ದು ರಾಮತ್ ಮಜಲ್ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. …

ಬಸ್ ನಿಲ್ದಾಣದೊಳಗೆ ವ್ಯಕ್ತಿ ನೇಣುಬಿಗಿದು ಸಾವು

ಕಾಸರಗೋಡು: ಉದುಮ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊ ಬ್ಬರು ನೇಣು ಬಿಗಿದು ಸಾವಿ ಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ನಾಲಾಂವಾದುಕಲ್ ತಟ್ಟುಮ್ಮಲ್ ನಿವಾಸಿ ನಾರಾ ಯಣನ್ (೬೨) ಎಂಬವರು ಮೃತಪಟ್ಟ ವ್ಯಕ್ತಿಯೆಂದು ತಿಳಿದುಬಂದಿದೆ.  ಇಂದು ಬೆಳಿಗ್ಗೆ ಇವರು ಬಸ್ ನಿಲ್ದಾಣದೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ನಾರಾಯಣನ್ ಈ ಹಿಂದೆ ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಪ್ರಿಯಾ, ಪ್ರೀತ, ನವೀನ್, ಅಳಿಯಂದಿರಾದ ಲತೀಶ್, ಮನೋಜ್, ಸಹೋ ದರ-ಸಹೋದರಿಯರಾದ ಜಾನಕಿ, ಮಾಧವಿ, ರೋಹಿಣಿ, ವಿಜಯನ್, …

ಯುವಕನನ್ನು ಅಪಹರಿಸಿ ಕೊಲೆಗೈದ ಪ್ರಕರಣ: ರಿಮಾಂಡ್‌ನಲ್ಲಿದ್ದ ಆರೋಪಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ

ಉಪ್ಪಳ: ಯುವಕನನ್ನು ಗಲ್ಫ್‌ನಿಂದ ಊರಿಗೆ ಕರೆಸಿದ ಬಳಿಕ ಅಪಹರಿಸಿಕೊಂಡೊಯ್ದು ಮರಕ್ಕೆ ತೂಗುಹಾಕಿ  ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪೈವಳಿಕೆ ನಿವಾಸಿಯೂ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುವ ಅಬೂಬಕರ್ ಸಿದ್ದಿಕ್ ಯಾನೆ ನೂರ್‌ಶ (೩೩) ಎಂಬಾತನನ್ನು ಕಾಸರಗೋಡು ಪ್ರಥಮದರ್ಜೆ ನ್ಯಾಯಾಲಯ ಮೂರು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಟ್ಟಿದೆ. ೨೦೨೨ ಜೂನ್ ೨೬ರಂದು ಪುತ್ತಿಗೆ ಮುಗುವಿನ ಅನಿವಾಸಿಯಾದ ಅಬೂ ಬಕರ್ ಸಿದ್ದಿಕ್‌ರನ್ನು  ಅಪಹರಿಸಿ ಕೊಂಡೊಯ್ದು ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ …

ಶಬರಿಮಲೆ ಆಂದೋಲನಕ್ಕೆ ನೇತೃತ್ವ ನೀಡಿದ್ದ ಪಂದಳಂ ರಾಜಕುಟುಂಬ ಸದಸ್ಯ ನಿಧನ

ಪತ್ತನಂತಿಟ್ಟ: ಪಂದಳಂ ರಾಜಕುಟುಂಬ ಸದಸ್ಯ ಕೈಪುಳ ಅಂಬಿಕಾ ವಿಲಾಸ ಅರಮನೆಯಲ್ಲಿ ಮೂಲ ನಕ್ಷತ್ರ ಶಶಿಕುಮಾರ್ ವರ್ಮ (೭೨) ನಿಧನ ಹೊಂದಿದರು. ನಿನ್ನೆ ಸಂಜೆ ೫.೩೦ಕ್ಕೆ ನಿಧನ ಸಂಭವಿಸಿದೆ. ಮೃತದೇಹದ ಅಂತ್ಯ ಸಂಸ್ಕಾರ ಇಂದು ಸಂಜೆ ನಡೆಯಲಿದೆ. ಕಳೆದ ಕೆಲವು ದಿನಗಳಿಂದ ರೋಗ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಮೀರಾ ವರ್ಮ, ಮಕ್ಕಳಾದ ಸಂಗೀತವರ್ಮ, ಅರವಿಂದ್ ವರ್ಮ, ಮಹೇಂದ್ರ ವರ್ಮ, ಅಳಿಯ ನರೇಂದ್ರ ವರ್ಮ ಹಾಗೂ ಅಪಾರ ಬಂಧು-ಮಿತ್ರ ರನ್ನು ಅಗಲಿದ್ದಾರೆ. ಸೆಕ್ರೆಟರಿಯೇಟ್ ನಲ್ಲಿ ಔದ್ಯೋಗಿಕ ಬದುಕು ಆರಂಭಿಸಿದ …

ಸಂಚರಿಸುತ್ತಿದ್ದ ವೇಳೆ ಬೈಕ್ ಬೆಂಕಿಗಾಹುತಿ

ಕುಂಬಳೆ:  ಸಂಚರಿಸುತ್ತಿದ್ದ ವೇಳೆ ಬೈಕ್ ಬೆಂಕಿಗಾ ಹುತಿಯಾದ ಘಟನೆ ನಡೆದಿದೆ. ನಾಯ್ಕಾಪುವಿನ ರವಿ ಎಂಬವರ ಬೈಕ್ ಬೆಂಕಿಗಾಹುತಿಯಾಗಿದೆ.  ನಿನ್ನೆ ರಾತ್ರಿ ೧೧ ಗಂಟೆ ವೇಳೆ ರವಿ ಹಾಗೂ ಪುತ್ರ ಕುಂಬಳೆಯಿಂದ ಮನೆಗೆ ಮರಳುತ್ತಿದ್ದಾಗ ಭಾಸ್ಕರನಗರಕ್ಕೆ ತಲುಪಿದಾಗ ಸ್ಟಾರ್ಟ್ ಆಫ್ ಆಗಿದೆ. ಇದರಿಂದ ಮತ್ತೆ ಸ್ಟಾರ್ಟ್  ಮಾಡಲೆತ್ನಿಸಿದಾಗ ದಿಢೀರನೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ರವಿ ಹಾಗೂ ಪುತ್ರ ಬೈಕ್‌ನಿಂದ  ಇಳಿದುದರಿಂದ ಭಾರೀ ಅಪಾಯ  ತಪ್ಪಿದೆ.