ಆಟೋ ರಿಕ್ಷಾ ಮಗುಚಿ ಯುವಕ ಮೃತ್ಯು: ಮೂವರಿಗೆ ಗಾಯ

ಕಾಸರಗೋಡು: ಕ್ಷೇತ್ರ ಉತ್ಸವ ವೀಕ್ಷಿಸಲು ತೆರಳುತ್ತಿದ್ದವರು ಸಂಚರಿಸಿದ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವಕ ಮೃತಪಟ್ಟ ಘಟನೆ ನಡೆದಿದೆ. ಇತರ ಮೂರು ಮಂದಿ ಗಾಯಗೊಂ ಡಿದ್ದಾರೆ.  ಚೆರ್ವ ತ್ತೂರು ಬಳಿಯ ಅಮಿಞ್ಞಿಕೋಡ್ ನಿವಾಸಿ ಕೆ. ಅನುರಾಗ್ (೨೬) ಎಂಬವರು ಮೃತಪಟ್ಟ ದುರ್ದೈವಿ. ನಿನ್ನೆ ಅಪರಾಹ್ನ ೩ ಗಂಟೆಗೆ ಕೊಡಕ್ಕಾಡ್ ವೆಳ್ಳಚ್ಚಾಲ್‌ನಲ್ಲಿ ಅಪಘಾತ ವುಂಟಾಗಿದೆ. ಸ್ನೇಹಿತರೊಂದಿಗೆ ಮುಚ್ಚಿಲೋಟ್ ಉತ್ಸವಕ್ಕೆ ತೆರಳುತ್ತಿದ್ದಾಗ ಅಪಘಾತವುಂ ಟಾಗಿದೆ. ಸಂಚರಿಸುತ್ತಿದ್ದ ಆಟೋ ರಿಕ್ಷಾ  ಮಗುಚಿಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡ ಅನುರಾಗ್‌ರನ್ನು  ಆಸ್ಪತ್ರೆಗೆ …

ಎಣ್ಮಕಜೆ ಪಂ. ಉಪಾಧ್ಯಕ್ಷ ಆಯ್ಕೆ ೧೫ರಂದು: ರಂಲ ಮುಸ್ಲಿಂಲೀಗ್ ಅಭ್ಯರ್ಥಿ

ಪೆರ್ಲ: ಈ ತಿಂಗಳ ೧೫ರಂದು ನಡೆಯಲಿರುವ ಎಣ್ಮಕಜೆ ಪಂಚಾ ಯತ್ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಚುನಾವಣೆಗೆ ಮುಸ್ಲಿಂ ಲೀಗ್‌ನ ಸದಸ್ಯೆ ರಂಲ ಇಬ್ರಾಹಿಂರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಿಂದ ತಿಳಿಸಿದ್ದಾರೆ. ಪಂ. ಉಪಾಧ್ಯಕ್ಷೆಯಾಗಿದ್ದ ಡಾ. ಜಹನಾಸ್ ಹಂಸಾರ್ ರಾಜೀನಾಮೆ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.

ಅದ್ದೂರಿಯಾಗಿ ನಡೆದ ಮೊಗೇರ ಸಾಂಸ್ಕೃತಿಕ ಸಂಗಮ

ಎಡನೀರು: ಮೊಗೇರ ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಎಡನೀರು ಮಠದಲ್ಲಿ ಸಾಂಸ್ಕೃತಿಕ ಸಂಗಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲಾಯಿತು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮ ಉದ್ಘಾಟಿಸಿದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರು ಆಶೀರ್ವಚನ ನೀಡಿ ಮಾತ ನಾಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಭಟ್, ಚೆಂಗಳ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸಲೀಂ ಎಡನೀರು, ಎಡನೀರು ಮಠದ ಮೆನೇಜರ್ ಪಿ. ರಾಮಚಂದ್ರ ಕಲ್ಲೂ ರಾಯ, …

ಕುಂಬಳೆ ಪೇಟೆ ಶುಚೀಕರಣ

ಕುಂಬಳೆ: ಉತ್ಸವಗಳನ್ನು ಶುಚಿ ಯಾಗಿ ಆಚರಿಸಬೇಕೆಂಬ ಸಂದೇಶ ದೊಂದಿಗೆ ಕುಂಬಳೆ ಪೇಟೆಯನ್ನು ಶುಚೀಕರಿಸಲಾಯಿತು. ಈ ತಿಂಗಳ ೧೬ರಿಂದ ೨೯ರವರೆಗೆ ನಡೆಯುವ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯ ಅಂಗವಾಗಿ ಶುಚೀಕರಣ ನಡೆಸಲಾಗಿದೆ. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ, ಶುಚೀಕರಣ ಉದ್ಘಾಟಿಸಿದರು. ಸದಸ್ಯರಾದ ಸಬೂರ, ಮೋಹನನ್, ಅನಿಲ್, ವಿವೇಕಾನಂದ ಶೆಟ್ಟಿ, ಪ್ರೇಮಾವತಿ, ವಿದ್ಯಾ ಎನ್. ಪೈ, ಸುಲೋಚನ, ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು ಭಾಗವಹಿಸಿದರು.

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಹಾಸಭೆ; ನೂತನ ಸಮಿತಿ ರೂಪೀಕರಣ

ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿಯ ಮಹಾಸಭೆ ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕ ಭವನದಲ್ಲಿ ನಡೆಯಿತು.ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ವಾರ್ಷಿಕ ವರದಿ, ಕೋಶಾಧಿಕಾರಿ ಪದ್ಮಾವತಿ ಎಂ ಲೆಕ್ಕ ಪತ್ರ ಮಂಡಿ ಸಿದರು. ಬಳಿಕ ಸಂಘಟನಾತ್ಮಕ ಚರ್ಚೆ ನಡೆಯಿತು. ಬೇಕಲ-ಹೊಸ ದುರ್ಗ ಉಪಜಿಲ್ಲಾ ಸಮಿತಿಯ ಅಧ್ಯಕ್ಷೆ ರಜನಿ ಕುಮಾರಿ ಪಿ, ಕಾಸರ ಗೋಡು ಉಪಜಿಲ್ಲಾ ಅಧ್ಯಕ್ಷ ವಿನೋದ್ ರಾಜ್ …

ಇತಿಹಾಸ ಬದಲಾವಣೆಯಲ್ಲಿ ಸ್ತ್ರೀಯರಿಗೆ ಮಹತ್ತರ ಪಾತ್ರ- ಬಿಜೆಪಿ

ಮಂಜೇಶ್ವರ :ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಪ್ರಾಮುಖ್ಯತೆ ಪಡೆದಿದೆ. ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ ಎಲ್. ಹೇಳಿದರು. ಹೊ ಸಂಗಡಿ ಪ್ರೇರಣಾದಲ್ಲಿ ಜರಗಿದ ಬಿಜೆಪಿ ಮಂಜೇಶ್ವರ ಮಂಡಲ ಮಹಿಳಾ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿ ದರು. ಮಂಡಲ ಕಾರ್ಯದರ್ಶಿ ಜಯಶ್ರೀ ಕಮಲಾಕ್ಷ ಮಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಮಾತನಾಡಿ ದರು. ಕೇಂದ್ರ ಜಾರಿಗೆ ತರುವ ಮಹಿಳಾ ಬಿಲ್ ದೇಶದ ಮಹಿಳಾ ಸಮಾಜಕ್ಕೆ …

ರಾಜ್ಯ ಮಟ್ಟದ ವಿ.ವಿ. ಕಲೋತ್ಸವ ಪರಿಗಣನೆಯಲ್ಲಿ-ಸಚಿವೆ

ಮುನ್ನಾಡು: ಈಗ ಕೇವಲ ವಿಶ್ವವಿದ್ಯಾಲಯ ಮಟ್ಟದ ಕಾಲೇಜುಗಳಿಗೆ ಮಾತ್ರವಾಗಿ ನಡೆಸಲಾಗುತ್ತಿರುವ ಕಲೋತ್ಸವವನ್ನು ಮುಂದೆ ರಾಜ್ಯ ಮಟ್ಟದಲ್ಲಿ ನಡೆಸುವ ವಿಷಯ ಸರಕಾರದ ಪರಿಗಣನೆಯಲ್ಲಿ ದೆಯೆಂದು ರಾಜ್ಯ ಉನ್ನತ ಶಿಕ್ಷಣ ಸಚಿವೆ ಡಾ. ಆರ್. ಬಿಂದು ಹೇಳಿದ್ದಾರೆ. ಮುನ್ನಾಡು ಪೀಪಲ್ಸ್ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನಲ್ಲಿ  ನಿನ್ನೆ ಸಮಾಪ್ತಿಗೊಂಡ ಕಣ್ಣೂರು ವಿಶ್ವವಿದ್ಯಾ ಲಯದ ಸಮಾರೋಪ  ಸಮಾರಂಭವನ್ನು ಉದ್ಘಾಟಿಸಿ ಸಚಿವೆ ಮಾತನಾಡುತ್ತಿದ್ದರು. ಈ ಹಿಂದೆ ಏಕೀಕೃತ   ರೀತಿಯ ಕಲೋತ್ಸವ ಆರಂಭಿಸಲಾಯಿ ತಾದರೂ ಅದನ್ನು ಮುಂದುವರಿಸಲು ಬಳಿಕ ಸಾಧ್ಯವಾಗಿರಲಿಲ್ಲವೆಂದು ಸಚಿವೆ ಹೇಳಿದ್ದಾರೆ. ಕಣ್ಣೂರು …

ಬಿಎಂಎಸ್ ಎಣ್ಮಕಜೆ ಪಂಚಾಯತ್ ಸಮ್ಮೇಳನ

ಉಪ್ಪಳ: ಬಿಎಂಎಸ್ ನಿರ್ಮಾಣ ಯೂನಿಯನ್ ಎಣ್ಮಕಜೆ ಪಂಚಾ ಯತ್ ಸಮ್ಮೇಳನ ಪೆರ್ಲ ಕಚೇರಿಯಲ್ಲಿ ಜರಗಿತು. ಪಂಚಾಯತ್ ಸಮಿತಿ ಕೋಶಾಧಿಕಾರಿ ಚಂದ್ರಹಾಸ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ನಿರ್ಮಾಣ ಸಂಘದ ಉಪಾಧ್ಯಕ್ಷ ಐತ್ತಪ್ಪ ನಾರಾಯಣ ಮಂಗಲ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ರಾಜ್‌ಮೋಹನ್ ನೂತನ ಸಮಿತಿಯನ್ನು ಘೋಷಿಸಿ ಸಮಾರೋಪ ಭಾಷಣ ಮಾಡಿದರು. ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ಸ್ವಾಗತಿಸಿ, ನೂತನ ಅಧ್ಯಕ್ಷ ದಿನೇಶ್ ನಡುಬೈಲು ವಂದಿಸಿದರು. ನೂತನ ಸಮಿತಿಗೆ ಅಧ್ಯಕ್ಷರಾಗಿ ದಿನೇಶ್ ನಡುಬೈಲು, ಉಪಾಧ್ಯಕ್ಷರಾಗಿ ವಿಜಯಕುಮಾರ್, ಕಾರ್ಯದರ್ಶಿ …

ಲಯನ್ಸ್‌ಕ್ಲಬ್‌ನಿಂದ ‘ವೇಸ್ಟ್ ಬಾಟ್ಲಿ ಬೋಟಲ್ ಬಿನ್’ ಸ್ಥಾಪನೆ

ಮುಳ್ಳೇರಿಯ: ಉಪಯೋಗ ಶೂನ್ಯ ಪ್ಲಾಸ್ಟಿಕ್ ಬಾಟ್ಲಿಗಳನ್ನು ಹಾಕಲು ಮುಳ್ಳೇರಿಯ ಲಯನ್ಸ್ ಕ್ಲಬ್ ಪೇಟೆಯಲ್ಲಿ ‘ವೇಸ್ಟ್ ಬೋಟಲ್ ಬಿನ್’ ಸ್ಥಾಪಿಸಿದೆ. ಕಾರಡ್ಕ ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಟ್‌ರಿಗೆ ಲಯನ್ಸ್ ಡಿಸ್ಟ್ರಿಕ್ ಗವರ್ನರ್ ಟಿ.ಕೆ. ರಜೀಶ್ ಇದನ್ನು ಹಸ್ತಾಂತರಿಸಿದರು. ಶ್ರೀನಿವಾಸ, ಕ್ಲಬ್ ಅಧ್ಯಕ್ಷ ಇ. ವೇಣುಗೋಪಾಲ್, ಜಿಲ್ಲಾ ಕಾರ್ಯದರ್ಶಿ ಕೆ. ವಿನೋದ್ ಕುಮಾರ್, ವಲಯ ಅಧ್ಯಕ್ಷ ಶಾಫಿ ಚೂರಿಪಳ್ಳಂ, ಚಂದ್ರನ್ ಕಾರಡ್ಕ, ಅನೀಶ್ ಕುಮಾರ್ ಎಂ.ವಿ, ವಿನೋದ್ ಮೇಲತ್ತ್, ಕೆ. ರಾಜಲಕ್ಷ್ಮಿ, ಕೆ. ಶೇಖರನ್ ನಾಯರ್, ಟಿ.ಎನ್. ಮೋಹನನ್ …

ಜನಸಾಮಾನ್ಯರನ್ನು ಪಾಲ್ಗೊಳ್ಳಿಸಿ ಕೆಪಿಸಿಸಿಯಿಂದ ಜನಪರ ಚರ್ಚಾ ಸಭೆ

ಕಾಸರಗೋಡು: ಕೆಪಿಸಿಸಿ ನಡೆಸುವ ಸಮರಾಗ್ನಿ ಆಂದೋಲನ ಯಾತ್ರೆಯಂಗವಾಗಿ ವಿವಿಧ ವಲಯಗಳಲ್ಲಿ ಸಂಕಷ್ಟ ಎದುರಿಸುವವರನ್ನು ಪಾಲ್ಗೊಳ್ಳಿಸಿ ಇಂದು ಬೆಳಿಗ್ಗೆ ಕಾಸರಗೋಡು  ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ  ಚರ್ಚಾ ಸಭೆ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್, ವಿಪಕ್ಷ ನೇತಾರ ವಿ.ಡಿ. ಸತೀಶನ್ ನೇತೃತ್ವ ನೀಡಿದರು. ರಾಜ್ಯ ಸರಕಾರದ ನವಕೇರಳ ಸಭೆಯಲ್ಲಿ ಗಣ್ಯ ಪೌರರನ್ನು ಪಾಲ್ಗೊಳ್ಳಿಸಿ  ನಡೆಸಿದ  ಚರ್ಚೆಯ ರೀತಿಯಲ್ಲೇ ಜನಪರ ಚರ್ಚಾ ಸಭೆ ನಡೆಸಲಾಗಿದೆ.  ಎಂಡೋಸಲ್ಫಾನ್ ಸಂತ್ರಸ್ತರು, ಅಡಿಕೆ ಕೃಷಿಕರು, ವನ್ಯ ಜೀವಿ ಉಪಟಳ ಎದುರಿಸುವವರು, ಸಾಮಾಜಿಕ ಸುರಕ್ಷಾ ಪಿಂಚಣಿ  …