ಅಡ್ಯನಡ್ಕ ಬ್ಯಾಂಕ್ ಕಳವು: ತನಿಖೆ ಕಾಸರಗೋಡಿಗೆ ವಿಸ್ತರಣೆ ಸಾಧ್ಯತೆ

ಅಡ್ಯನಡ್ಕ: ಕರ್ನಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ  ನಡೆದ ಭಾರೀ ಕಳವು ಪ್ರಕರಣದ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಆರೋಪಿಗಳ ಕುರಿತಾಗಿ ಯಾವುದೇ ಸುಳಿವು ಲಭಿಸಿಲ್ಲ. ಆದರೆ ಶೀಘ್ರದಲ್ಲೇ ಪ್ರಕರಣವನ್ನು ಭೇದಿಸಲು ಸಾಧ್ಯವಿದೆಯೆಂದೂ ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಕಲ್ಲಡ್ಕ-ಕಾಞಂಗಾಡ್ ಅಂತಾ ರಾಜ್ಯ ಹೆದ್ದಾರಿಯ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಮೊನ್ನೆ ರಾತ್ರಿ ಕಳವು ನಡೆದಿದೆ. ಬ್ಯಾಂಕ್‌ನ ಹಿಂಬಾಗಿಲ ಕಿಟಿಕಿಯ ಸರಳು ಮುರಿದು ಒಳನುಗ್ಗಿದ ಕಳ್ಳರು ಸೇಫ್ ಲಾಕರ್‌ನ ಬಾಗಿಲು ಕೊರೆದು ನಗ-ನಗದು ಕಳವು ನಡೆಸಿದ್ದಾರೆ. ಲಾಕರ್‌ನೊಳಗಿದ್ದ  ೨ ಕಿಲೋ …

ಬದಿಯಡ್ಕ ಪಂ. ಮಾಜಿ ಅಧ್ಯಕ್ಷ ನಿಧನ

ಬದಿಯಡ್ಕ: ಪಂಚಾಯತ್‌ನ ಮಾಜಿ ಅಧ್ಯ ಕ್ಷ ಸಿ.ಎ. ಅಬೂಬಕರ್ (೬೮) ನಿಧನ ಹೊಂದಿದರು. ಬದಿಯಡ್ಕ ರಹ್‌ಮಾನಿಯ ಜುಮಾ ಮಸೀದಿ ಅಧ್ಯಕ್ಷ, ಐಕ್ಯರಂಗದ ಲೈಸನ್ ಸಮಿತಿ ಅಧ್ಯಕ್ಷ,  ಮುಸ್ಲಿಂ ಲೀಗ್ ಕಾರ್ಯನಿರ್ವಾಹಕ ಸಮಿತಿ ಸದಸ್ಯ, ಪೆರಡಾಲ ಜಾರಂ ಸಮಿತಿ ಅಧ್ಯಕ್ಷ, ಸುನ್ನಿ ಮಹಲ್ ಫೆಡರೇಶನ್  ಪಂ. ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಆಯಿಷ, ಮಕ್ಕಳಾದ ರಿಸ್ವಾನ, ಮನಾಫ್, ಸಂಸೀನ, ಶಿಹಾನ, ಇರ್ಫಾನ, ಅಳಿ ಯಂದಿರಾದ ಮಹ್‌ಬೂಬ, ನಿಸಾರ್, ಅಬ್ದುಲ್ಲ, ಆಸೀಫ್, ನೌಫಲ್, ಸಹೋದರರಾದ ಮೊಯ್ದೀನ್ ಕುಂಞಿ, ಸಹೋದರಿಯ ರಾದ ಬೀಫಾತಿಮ, …

ಆಸ್ಪತ್ರೆಯಲ್ಲಿ ಯುವಕನ ದಾಂಧಲೆ ತಡೆಯಲು ತಲುಪಿದ ಎಸ್‌ಐಗೆ ಹಲ್ಲೆ, ಕಚ್ಚಿ ಗಾಯ

ಬಂದಡ್ಕ: ಅಪಘಾತದಲ್ಲಿ ಗಾಯಗೊಂಡ ಸಹೋದರನನ್ನು ಕಾಣಲು ತಲುಪಿ ಯುವಕ ಖಾಸಗಿ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಎಸ್‌ಐ ಹಾಗೂ ಪೊಲೀಸರಿಗೆ ಯುವಕ ಹಲ್ಲೆಗೈದು, ಕಚ್ಚಿ ಗಾಯಗೊಳಿಸಿರುವುದಾಗಿ ದೂರಲಾಗಿದೆ. ಬೇಡಗಂ ಎಸ್‌ಐ ಎಂ. ಗಂಗಾಧರನ್‌ರ ದೂರಿನಂತೆ ವಿಕಲಚೇತನ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿಯುಂಟುಮಾಡಿದ ಆರೋಪದಂತೆ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಕಳ್ಳಾರು ಚಾಮುಂಡಿಕುನ್ನು, ಗಾಂಧಿನಗರ, ಶಾಸ್ತಮಂಗಲ ಹೌಸ್‌ನ ಪ್ರಮೋದ್ (೩೯) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. …

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಹಾವು ಕಚ್ಚಿ ಮೃತ್ಯು

ಮಲಪ್ಪುರಂ: ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಹಾವಿನ ಕಡಿತದಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಲಪ್ಪುರಂ ಬಳಿಯ ಕೊಂಡೋಟಿ ಪುಳಿಕ್ಕಲ್ ನಲ್ಲಿ ಈ ಘಟನೆ ಸಂಭವಿಸಿದೆ. ಪೆರಿಂದಲ್‌ಮಣ್ಣ ತೂತ ನಿವಾಸಿ ಸುಹೈಲ್-ಜಂಶಿಯ ದಂಪತಿಯ ಪುತ್ರ ಮಹಮ್ಮದ್ ಉಮರ್ ಮೃತಪಟ್ಟ ಮಗುವಾಗಿದೆ. ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಹಾವಿನ ಕಡಿತವುಂಟಾ ಗಿದೆ. ಮಗುವಿನ ಕೂಗು ಕೇಳಿ ಸಂಬಂಧಿಕರು ತಲುಪಿ ನೋಡಿದಾಗ ಕಾಲಿನಲ್ಲಿ ಹಾವಿನ ಕಡಿತದ ಗಾಯ ಕಂಡುಬಂದಿದೆ. ಕೂಡಲೇ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದರೂ …

ಕಣ್ಣೂರು ವಿ.ವಿ. ಯೂನಿಯನ್ ಕಲೋತ್ಸವ: ಕಾಸರಗೋಡು ಸರಕಾರಿ ಕಾಲೇಜು ಮುನ್ನಡೆ

ಹೊಸದುರ್ಗ: ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ ಮೊನ್ನೆ  ಆರಂಭಗೊಂಡಿರುವ ಕಣ್ಣೂರು ವಿಶ್ವವಿದ್ಯಾಲಯದ ಯೂನಿಯನ್ ಕಲೋತ್ಸವ ಆವೇಶಭರಿತವಾಗಿ ಮುಂದುವರಿಯುತ್ತಿದೆ. ಸ್ಪರ್ಧಾಳುಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಈ ತನಕ ಪ್ರಕಟಗೊಂಡ ಫಲಿತಾಂಶ ಪ್ರಕಾರ ವೇದಿಕೇತರ ಸ್ಪರ್ಧೆಗಳಲ್ಲಿ ೯೩ ಅಂಕಗಳೊಂದಿಗೆ ಕಾಸರಗೋಡು ಸರಕಾರಿ ಕಾಲೇಜು ಮುನ್ನಡೆಯಲ್ಲಿದೆ. ತಲಶ್ಶೇರಿ ಸರಕಾರಿ ಬ್ರೆನ್ನನ್ ಕಾಲೇಜು ೮೦ ಮತ್ತು ತಳಿಪರಂಬ ಕೆಯಿ ಸಾಹೀಬ್ ಬಿಎಡ್ ಸೆಂಟರ್- ೬೮ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಮುಂದುವರಿಯುತ್ತಿದೆ. ಪಯ್ಯನ್ನೂರು ಕಾಲೇಜು- ೫೦, ಕಣ್ಣೂರು ಎಸ್.ಎನ್ ಕಾಲೇಜು ೫೦, …

ಕಾಂಗ್ರೆಸ್‌ನ ‘ಸಮರಾಗ್ನಿ’: ನೇತಾರರ ದಂಡು ಆಗಮನ: ಎಲ್ಲೆಡೆ ಬಿಗಿ ಭದ್ರತೆ

ಕಾಸರಗೋಡು: ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು   ವಿಚಾರಣೆಗೊಳ ಪಡಿಸುವ ಹೆಸರಲ್ಲಿ  ಕಾಂಗ್ರೆಸ್ ರಾಜ್ಯ ಘಟಕದ ನೇತೃತ್ವದಲ್ಲಿ ನಡೆಸಲಾಗುವ ‘ಸಮರಾಗ್ನಿ’ ಜನಕೀಯ ಚಳವಳಿ ಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿರು ವಂತೆಯೇ ಅದರಲ್ಲಿ ಭಾಗವಹಿಸಲು ಕಾಂಗ್ರೆಸ್ ನೇತಾರರ ದಂಡು ಇಂದು ಬೆಳಿಗಿ ನಿಂದ ಕಾಸರಗೋಡಿಗೆ ಆಗಮಿಸತೊಡಗಿದೆ. ಕಾಂಗ್ರೆಸ್‌ನ ಕೇರಳ ಘಟಕ (ಕೆಪಿಸಿಸಿ) ಅಧ್ಯಕ್ಷ ಕೆ. ಸುಧಾಕರನ್ ಮತ್ತು ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್‌ರ ನೇತೃತ್ವದಲ್ಲಿ ನಡೆಯುವ ಈ ಜನಕೀಯ ಪ್ರತಿಭಟನಾ ಆಂದೋಲನ ಯಾತ್ರೆ ಇಂದು ಸಂಜೆ ೪ ಗಂಟೆಗೆ ವಿದ್ಯಾನಗರದಲ್ಲಿರುವ …

ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ವಿಚಾರಣೆ ಮಾ. ೭ಕ್ಕೆ ಮುಂದೂಡಿಕೆ

ಕಾಸರಗೋಡು: ಮಂಜೇಶ್ವರ ವಿಧಾನಸಭೆಗೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿ.ಎಸ್.ಪಿ ಉಮೇದ್ವಾರ  ಸುಂದರರಿಗೆ ಲಂಚ ನೀಡಿ ಅವರ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿರುವುದಾಗಿ ಆರೋಪಿಸಿ  ನೀಡಲಾದ ದೂರಿನಂತೆ ದಾಖಲಿಸಲಾದ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಪ್ರತಿವಾದಿಗಳಾದ ಬಿಜೆಪಿ ರಾಜ್ಯ ಅಧ್ಯಕ್ಷ  ಕೆ. ಸುರೇಂದ್ರನ್ ಸೇರಿದಂತೆ  ಇತರ  ೫ ಮಂದಿ ಸಲ್ಲಿಸಿದ ಅರ್ಜಿಯ ಪರಿಶೀಲನೆಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಯ್ ನ್ಯಾಯಾಲಯ ಮತ್ತೆ  ಮುಂದೂಡಿದೆ. ಇದರಂತೆ ಮಾರ್ಚ್ ೭ಕ್ಕೆ ಅರ್ಜಿಯನ್ನು ನ್ಯಾಯಾಲಯ ಪರಿಶೀಲಿಸಲಿದೆ. ಬಿ.ಎಸ್.ಪಿ ಉಮೇದ್ವಾರ ಸುಂದರರ ನಾಮಪತ್ರ ಹಿಂತೆದುಕೊಳ್ಳುವಂತೆ  ಮಾಡಲು …

ಕೇಂದ್ರ ಸರಕಾರದ ಆರ್ಥಿಕ ದಿಗ್ಬಂಧನ ನೀತಿಗೆದುರಾಗಿ ಎಡರಂಗದಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರದ ಆರ್ಥಿಕ ದಿಗ್ಬಂಧನ ನೀತಿಗೆದುರಾಗಿ ಮೀಂಜ ಪಂಚಾಯತ್ ಮಟ್ಟದ ಜನಪರ ಪ್ರತಿಭಟನೆ ನಿನ್ನೆ ಮೀಯಪದವಿನಲ್ಲಿ ನಡೆಯಿತು. ಎಲ್‌ಡಿಎಫ್  ನೇತಾರ ಸುರೇಶ್ ಬಾಬು ಉದ್ಘಾಟಿಸಿದರು. ನೇತಾರರಾದ ಅಬ್ದುಲ್ ರಜಾಕ್  ಚಿಪ್ಪಾರ್, ಡಿ. ಕಮಲಾಕ್ಷ, ಜಯರಾಮ ಬಲ್ಲಂಗುಡೇಲ್, ರಾಮಚಂದ್ರ ಟಿ, ಗಂಗಾಧರ ಕೊಡ್ಡೆ, ಸುಂದರಿ ಆರ್ ಶೆಟ್ಟಿ, ಹರೀಶ್ ಕಡಂಬಾರ್, ಲೋಕೇಶ್ ಚಿನಾಲ ಉಪಸ್ಥಿತರಿದ್ದರು. ಪೈವಳಿಕೆ ಪಂಚಾಯತ್ ಸಮಿತಿ ವತಿಯಿಂದ ಪೈವಳಿಕೆ ಪೇಟೆಯಲ್ಲಿ ನಡೆದ ಪ್ರತಿಭಟನೆಯನ್ನು ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ.ವಿ. ಕುಂಞಿರಾಮನ್ ಉದ್ಘಾಟಿಸಿ ದರು. …

ಬಿ.ಎಂ.ಎಸ್‌ನಿಂದ ಡಂಗುರ ಜಾಥಾ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ ಬಿಎಂಎಸ್‌ನ ೨೦ನೇ ರಾಜ್ಯ ಸಮ್ಮೇಳನ ಪಾಲಕ್ಕಾಡ್‌ನಲ್ಲಿ ಇಂದಿನಿಂದ ೧೧ರವರೆಗೆ ನಡೆಯಲಿದ್ದು, ಇದರ ಪ್ರಚಾರಾರ್ಥ ಕಾಸರಗೋಡು, ಮಧೂರು ವಲಯದ ಕಾರ್ಮಿಕರು ಡಂಗುರ ಜಾಥಾ ನಡೆಸಿದರು. ಕಾಸರಗೋಡು ಬಿಎಂಎಸ್ ಕಚೇರಿ ಪರಿಸರದಿಂದ ಆರಂಭಗೊಂಡ ಜಾಥಾಕ್ಕೆ ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರ ಕೋಟೆಕಣಿ, ಉಪಾಧ್ಯಕ್ಷ ಮುರಳೀಧರನ್, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಮಧೂರು ವಲಯ ಅಧ್ಯಕ್ಷ ಮನೀಶ್, ಕಾರ್ಯದರ್ಶಿ ಗುರುದಾಸ್,  ಕಾಸರಗೋಡು ವಲಯ ಕಾರ್ಯದರ್ಶಿ ರಿಜೇಶ್ ಜೆಪಿನಗರ್, ನಗರಸಭಾ ಸಮಿತಿ ಅಧ್ಯಕ್ಷ ಕಮಲಾಕ್ಷ ತಾಳಿಪಡ್ಪು, …

ಎಡರಂಗಕ್ಕೆ ಜನರು ಮತ ನೀಡಿ ಗೆಲ್ಲಿಸಿದ್ದು ದಿಲ್ಲಿಯಲ್ಲಿ ಹೋರಾಟ ನಡೆಸಲಲ್ಲ- ಪಿ.ಕೆ. ಕೃಷ್ಣದಾಸ್

ಕಾಸರಗೋಡು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇರಳದ ಜನತೆ ಎಡರಂಗವನ್ನು ಗೆಲ್ಲಿಸಿ ಅಧಿಕಾ ರದ ಗದ್ದುಗೆ ನೀಡಿರುವುದು ದಿಲ್ಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ನಡೆಸಲು ಅಲ್ಲ. ಬದಲಾಗಿ ಕೇರಳವನ್ನು ಆಳಲು ಆಗಿದೆ. ಆದ್ದರಿಂದ ಎಡರಂಗ ತನ್ನ ಆಡಳಿತೆಯ ಬಗ್ಗೆ ಕೇರಳದಲ್ಲಿ ಗಮನ ಹರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹೇಳಿದ್ದಾರೆ. ಕಾಸರಗೋ ಡಿನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು. ಹೋರಾಟ ನಡೆಸಬೇಕಾಗಿರುವುದು ದಿಲ್ಲಿಯಲ್ಲಿ ಅಲ್ಲ. ಬದಲಾಗಿ ತಿರುವನಂ ತಪುರದಲ್ಲಿ …