ಕೆ.ಪಿ.ಸಿ.ಸಿ ಯ ‘ಸಮರಾಗ್ನಿ’ ಆಂದೋಲನ ಯಾತ್ರೆ ನಾಳೆ ಆರಂಭ

ಕಾಸರಗೋಡು:  ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಕೆ.ಪಿ.ಸಿ.ಸಿ ಅಧ್ಯಕ್ಷ ಕೆ. ಸುಧಾಕರನ್ ಹಾಗೂ ವಿಪಕ್ಷ ನೇತಾರ ವಿ.ಡಿ. ಸತೀಶನ್ ನೇತೃತ್ವದಲ್ಲಿ ಹಮ್ಮಿಕೊಂಡ ಆಂದೋಲನ ಯಾತ್ರೆ ‘ಸಮರಾಗ್ನಿ’ ನಾಳೆ  ಕಾಸರಗೋಡಿನಿಂದ ಆರಂಭಗೊಳ್ಳಲಿದೆ.  ವಿದ್ಯಾನಗರದ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಾಳೆ ಅಪರಾಹ್ನ ೩ ಗಂಟೆಗೆ ಎಐಸಿಸಿ ಸಂಘಟನಾ  ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲನ್ ಉದ್ಘಾಟಿಸು ವರು. ಕೇರಳದ ಹೊಣೆಗಾರಿಕೆಯುಳ್ಳ ಎಐಸಿಸಿ ಸೆಕ್ರೆಟರಿ ದೀಪಾದಾಸ್ ಮುನ್ಶಿ, ರಮೇಶ್ ಚೆನ್ನಿತ್ತಲ, ಸಂಸದ ರಾದ ಶಶಿ ತರೂರ್, ಕೊಡಿಕುನ್ನಿಲ್ ಸುರೇಶ್  ಮೊದಲಾದವರು ಭಾಗವಹಿಸುವರು. …

ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ ರೈಲು ಕಲ್ಲಿಕೋಟೆವರೆಗೆ ವಿಸ್ತರಣೆ

ಹೊಸದಿಲ್ಲಿ: ಬೆಂಗಳೂರಿನಿಂದ ಮಂಗಳೂರು ಮೂಲಕ ಕಣ್ಣೂರುವರೆಗೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು  ಕಲ್ಲಿಕೋಟೆ ವರೆಗೆ ವಿಸ್ತರಿಸಿ ಹೊರಡಿಸಿದ ಘೋಷಣೆಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಸಂಸದ ಎಂ.ಕೆ. ರಾಘವನ್‌ರ ಪ್ರಶ್ನೆಗೆ ಉತ್ತರಿಸಿ ಸಚಿವ ಈ ರೀತಿ ತಿಳಿಸಿದ್ದಾರೆ. ಗೋವಾ- ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕಲ್ಲಿಕೋಟೆವರೆಗೆ ವಿಸ್ತರಿಸಲು ಕ್ರಮ ಆರಂಭಿಸಲಾಗಿದೆ. ಮಂಗಳೂರು ಮಧುರೆ, ರಾಮೇಶ್ವರ ಎಕ್ಸ್‌ಪ್ರೆಸ್ ರೈಲು ಶೀಘ್ರ ಸಂಚಾರ ಆರಂಭಿಸಲಿ ದೆಯೆಂದೂ ಸಚಿವ ತಿಳಿಸಿದ್ದಾರೆ.

ಕಣ್ಣೂರಿನಲ್ಲಿ ಸಂಚಾರ ಕೊನೆಗೊಳಿಸುವ ರೈಲುಗಳನ್ನು ಮಂಗಳೂರಿಗೆ ವಿಸ್ತರಿಸಲು ಎಐಟಿಯುಸಿ ಮನವಿ

ಕಾಸರಗೋಡು: ಕಣ್ಣೂರುವರೆಗೆ ಸಂಚಾರ ನಡೆಸುವ ತಿರುವನಂತಪುರ, ಕಣ್ಣೂರು ಜನಶತಾಬ್ದಿ ಎಕ್ಸ್‌ಪ್ರೆಸ್, ಕಣ್ಣೂರು- ಆಲಪ್ಪುಳ ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲುಗಳನ್ನು ಮಂಗಳೂರುವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿ ಎಐಟಿಯುಸಿ ಕಾಸರಗೋಡು ಜಿಲ್ಲಾ ಕೌನ್ಸಿಲ್ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ರಿಗೆ ಮನವಿ ನೀಡಿದೆ. ಉತ್ತರ ಕೇರಳ, ಪ್ರತ್ಯೇಕವಾಗಿ ಕಾಸರಗೋಡು ಜಿಲ್ಲೆಯ ಜನರು ಪ್ರಯಾಣಕ್ಕಾಗಿ ಸಮಸ್ಯೆ ಅನುಭವಿಸುತ್ತಿದ್ದು, ರೈಲ್ವೇ ಈ ಪ್ರದೇಶವನ್ನು ಅವಗಣಿಸಿದೆ. ಈ ಎರಡು ರೈಲುಗಳನ್ನು ಮಂಗಳೂರುವರೆಗೆ ವಿಸ್ತರಿಸಿದರೆ ಸಂಚಾರ ಸಮಸ್ಯೆಗೆ ಅಲ್ಪ ಪರಿಹಾರವಾದಿತೆಂದು ಮನವಿಯಲ್ಲಿ ಸೂಚಿಸಲಾಗಿದೆ. ಕಣ್ಣೂರು- ಕಾಸರಗೋಡು ಮಧ್ಯೆ ೧೦೦ಕ್ಕೂ …

ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೃಢಕಲಶ

ಮವ್ವಾರು: ಇತ್ತೀಚೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದ ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೃಢಕಲಶ ಜರಗಿತು. ಈ ಬಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮೋಹನದಾಸ ಪರಮ ಹಂಸ ಸ್ವಾಮೀಜಿ ಉಪಸ್ಥಿತರಿದ್ದು, ಆಶೀರ್ವಚನ ನೀಡಿದರು. ಸಂಜೀವ ಶೆಟ್ಟಿ  ಮೊಟ್ಟ ಕುಂಜ ಅಧ್ಯಕ್ಷತೆ ವಹಿಸಿದರು. ಅನಂತ ಭಟ್ ಕುರುಮುಜ್ಜಿ, ನಾರಾಯಣ ಭಟ್, ನಾರಾಯಣ ಮಣಿಯಾಣಿ ಬೆಳ್ಳಿಗೆ, ಐತ್ತಪ್ಪ ಮವ್ವಾರು ಮಾತ ನಾಡಿದರು. ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಕೃಷ್ಣಮೂರ್ತಿ ಎಡಪಾಡಿ ವಂದಿಸಿದರು. …

ಯುವಕನನ್ನು ಅಪಹರಿಸಿ ಕೊಲೆಗೈದ ಪ್ರಕರಣ : ನೇಪಾಳಕ್ಕೆ ಪರಾರಿಯಾದ ಸೂತ್ರಧಾರ ಸೆರೆ

ಉಪ್ಪಳ: ಯುವಕನನ್ನು ಗಲ್ಫ್ ನಿಂದ ಊರಿಗೆ ಕರೆಸಿದ ಬಳಿಕ ಅಪಹರಿಸಿಕೊಂಡೊಯ್ದು ಮರಕ್ಕೆ ತೂಗುಹಾಕಿ ಕೊಲೆಗೈದ ಬಳಿಕ ಕಾರಿನಲ್ಲಿ ಕೊಂಡೊಯ್ದು ಆಸ್ಪತ್ರೆಯಲ್ಲಿ ಉಪೇಕ್ಷಿಸಿ ಪರಾರಿಯಾದ ಪಕರಣದ ಸೂತ್ರಧಾರ  ಪೊಲೀಸರ ಮುಂದೆ ಶರಣಾಗಿದ್ದಾನೆ. ಪೈವಳಿಕೆ ನಿವಾಸಿಯೂ ಉಪ್ಪಳದ ಫ್ಲಾಟ್‌ನಲ್ಲಿ ವಾಸಿಸುವ ಅಬೂಬಕರ್ ಸಿದ್ದಿಕ್ ಯಾನೆ ನೂರ್‌ಶ (೩೩) ಎಂಬಾತ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಈತನನ್ನು ಇನ್‌ಸ್ಪೆಕ್ಟರ್ ಕೆ. ರಾಜೀವ್ ಕುಮಾರ್ ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಈತನಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ. ಇದೇ ವೇಳೆ ನೂರ್‌ಶನನ್ನು ಕಸ್ಟಡಿಗೆ ತೆಗೆದು …

ನೇಣುಯತ್ನ ವೇಳೆ ಹಗ್ಗ ತುಂಡಾಗಿ ಬಾವಿಗೆ ಬಿದ್ದು ಮೃತ್ಯು

ಹೊಸದುರ್ಗ; ನೇಣು ಬಿಗಿದು ಆತ್ಮಹತ್ಯೆಗೆತ್ನಿಸುತ್ತಿದ್ದ ಮಧ್ಯೆ ಹಗ್ಗ ತುಂ ಡಾಗಿ  ಬಾವಿಗೆ ಬಿದ್ದ ಸೆಕ್ಯುರಿಟಿ ನೌಕರ ನಿಧನಹೊಂದಿದರು. ಕಾಞಂಗಾಡ್‌ನ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಆಗಿದ್ದ ಅಟ್ಟೆಂಗಾನಂ ಕುಂಞಾಕೊಟ್ಟಿಯ ನಿವಾಸಿ ರಾಜನ್ (೫೪) ನಿಧನಹೊಂದಿ ದರು. ನಿನ್ನೆ ಬೆಳಿಗ್ಗೆ ೯.೩೦ರ ಬಳಿಕ ಇವರು ಸ್ನಾನಕ್ಕೆಂದು ತೆರಳಿದ್ದು, ಹೊತ್ತು ಕಳೆ ದರೂ ಹಿಂತಿರುಗದ ಕಾರಣ ಮನೆ ಮಂದಿ ನೋಡಿದಾಗ ಹಗ್ಗ ಕುತ್ತಿಗೆಗೆ ಸಿಲುಕಿಕೊಂಡ ರೀತಿಯಲ್ಲಿ ಬಾವಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ಮೃತಪಟ್ಟರು.  ಮೃತರು ಪತ್ನಿ ಸುಜಿ, ಮಕ್ಕಳಾದ …

ಕಿಲೋಗೆ ೨೯ ರೂ. ಬೆಲೆಯ ‘ಭಾರತ್ ಅಕ್ಕಿ’ ವಿತರಣೆಗೆ ಚಾಲನೆ

ನವದೆಹಲಿ: ಬೆಲೆಯೇರಿಕೆ ಯಿಂದ ತತ್ತರಿಸುತ್ತಿರುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸರಕಾರದ ಮಹತ್ವದ ‘ಭಾರತ್ ಅಕ್ಕಿ’ (ರೈಸ್) ವಿತರಣಾ ಯೋಜನೆಗೆ ಇಂದಿನಿಂದ ಚಾಲನೆ ನೀಡಲಾಗಿದೆ. ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮಹತ್ವದ ಯೋಜನೆಯಾದ ‘ಭಾರತ್ ರೈಸ್’ ಯೋಜನೆಯಡಿ ಕಿಲೋ ಒಂದಕ್ಕೆ ಕೇವಲ ೨೯ ರೂಪಾಯಿಗೆ ಜನ ಸಾಮಾನ್ಯರಿಗೆ ಅಕ್ಕಿ ವಿತರಿಸಲಾಗುವುದು. ಅಕ್ಕಿ ಬೆಲೆಯಲ್ಲಿ ಕಳೆದ ವರ್ಷದಿಂದಲೇ ಶೇ. ೧೫ರಷ್ಟು ಏರಿಕೆ ಉಂಟಾಗಿದ್ದು, ಅದನ್ನು …

ಕೇಂದ್ರದಿಂದ ಅವಗಣನೆ ಆರೋಪಿಸಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ಸತ್ಯಾಗ್ರಹ

 ದೆಹಲಿ: ಕೇಂದ್ರ ಸರಕಾರ ಆರ್ಥಿಕವಾಗಿ ಕೇರಳವನ್ನು ಅವಗಣಿಸುತ್ತಿದೆಯೆಂದು ಆರೋಪಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಾಳೆ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ಜಂತರ್ ಮಂತರ್‌ನಲ್ಲಿ ನಡೆಯಲಿರುವ ಈ ಚಳವಳಿಯಲ್ಲಿ ರಾಜ್ಯ ಸಚಿವರು, ಎಡರಂಗ ಶಾಸಕರು, ಸಂಸದರು ಭಾಗವಹಿಸುವರು. ದೆಹಲಿ ಪೊಲೀಸ್‌ನ ಅನುಮತಿ ಲಭಿಸಿದರೆ ಕೇರಳ ಹೌಸ್‌ನಿಂದ ಜಂತರ್ ಮಂತರ್‌ಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಪ್ರತಿಭಟನೆಯಲ್ಲಿ  ಎಎಪಿ, ಆರ್‌ಜೆಡಿ, ಎನ್‌ಸಿಪಿ, ಡಿಎಂಕೆ, ಜೆಎಂಎಂ ಸಹಿತ ಪಕ್ಷಗಳ ನೇತಾರರು ಭಾಗವಹಿಸಲಿದ್ದಾರೆಂದು   ದೆಹಲಿಯ ಕೇರಳ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಎಡರಂಗ ಸಂಚಾಲಕ …

ಅಭ್ಯರ್ಥಿ ನಿರ್ಣಯ ಚರ್ಚೆ ಸಕ್ರಿಯ: ಕಾಸರಗೋಡಿನಲ್ಲಿ ಟಿ.ವಿ. ರಾಜೇಶ್‌ರ ಹೆಸರು ಸಿಪಿಎಂ ಪರಿಗಣನೆಯಲ್ಲಿ

ಕಾಸರಗೋಡು: ಎಡ-ಐಕ್ಯರಂ ಗಗಳಲ್ಲಿ ಅಭ್ಯರ್ಥಿ ನಿರ್ಣಯ ಚರ್ಚೆಗಳು ಸಕ್ರಿಯಗೊಂಡಿದೆ. ಕಳೆದ ಬಾರಿ ಯುಡಿಎಫ್ ಕಸಿದುಕೊಂಡಿದ್ದ ಕಾಸರಗೋಡು  ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಎಲ್‌ಡಿಎಫ್ ಅಭ್ಯರ್ಥಿ ಯಾಗಿ ಟಿ.ವಿ. ರಾಜೇಶ್ ಕಣಕ್ಕಿಳಿಯುವ ಸಾಧ್ಯತೆಯಿದೆ.  ನಾಯಕತ್ವ ಮಟ್ಟದಲ್ಲಿ ಈಗಾಗಲೇ ನಡೆದ ಚರ್ಚೆಗಳಲ್ಲಿ ಟಿ.ವಿ. ರಾಜೇಶ್‌ರ ಹೆಸರಿಗೆ ಆದ್ಯತೆ ಲಭಿಸಿದೆ. ಇವರು ಎರಡು ಬಾರಿ ಪಯ್ಯನ್ನೂರು ವಿಧಾನ ಸಭಾ ಕ್ಷೇತ್ರದಿಂದ ಚುನಾಯಿ ತರಾಗಿದ್ದರು. ಟಿ. ಗೋವಿಂದನ್‌ರ ಬಳಿಕ ಕಣ್ಣೂರು ಜಿಲ್ಲೆಯಿಂದ ಯಾರು ಕೂಡಾ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಗಳಾಗಿಲ್ಲ. ಕಳೆದ …

ಮಂಜೇಶ್ವರ ವಿಧಾನಸಭಾ ಚುನಾವಣಾ ತಕರಾರು ಪ್ರಕರಣ: ವಿಚಾರಣೆ ನಾಳೆ ಮತ್ತೆ ಆರಂಭ

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಲಂಚ ನೀಡಿದ ಆರೋಪದಂತೆ ದಾಖಲಿಸಲಾದ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲ ಯದಲ್ಲಿ ನಾಳೆ ಮತ್ತೆ ಆರಂಭಗೊಳ್ಳಲಿದೆ. ಈ ಪ್ರಕರಣವನ್ನು ರದ್ದುಪಡಿಸ ಬೇಕೆಂದು  ಪ್ರತಿವಾದಿಗಳಾದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಇತರರು ಸಲ್ಲಿಸಿರುವ ಅರ್ಜಿ ಮೇಲಿನ ವಾದ- ಪ್ರತಿವಾದಗಳನ್ನು ಪ್ರಧಾನವಾಗಿ ನ್ಯಾಯಾಲಯ ನಾಳೆ ಆಲಿಸಲಿದೆ. ಈ ಪ್ರಕರಣದಲ್ಲಿ ಆರೋಪಿಗ ನ್ನಾಗಿ ಹೆಸರಿಸಲಾಗಿರುವ ಕೆ. ಸುರೇಂದ್ರನ್, ಚೀಫ್ ಚುನಾವಣಾ ಏಜೆಂಟ್ ಬಿಜೆಪಿಯ …