ಕೇರಳ ಬಜೆಡ್ ೨೦೨೪-೨೦೨೫: ೨೦೨೫ರಲ್ಲಿ ೫ ಲಕ್ಷ ಮನೆ ನಿರ್ಮಾಣ, ಕಾಸರಗೋಡಿನಲ್ಲಿ ನರ್ಸಿಂಗ್ ತರಬೇತಿ ಕೇಂದ್ರ ಸ್ಥಾಪನೆ
ತಿರುವನಂತಪುರ: ಕೇರಳ ಸರಕಾರದ ೨೦೨೪-೨೫ನೇ ವಿತ್ತೀಯ ವರ್ಷದ ಮುಂಗಡಪತ್ರ (ಬಜೆಟ್)ವನ್ನು ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲನ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮಂಡಿಸಿದರು. ಸ್ವಂತವಾಗಿ ಜಮೀನು ಮತ್ತು ಮನೆಗಳಿಲ್ಲದ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡಲು ಲೈಫ್ ಮಿಶನ್ ಯೋಜನೆ-೨೫ಕ್ಕೆ ರೂಪು ನೀಡಲಾ ಗಿದ್ದು, ಇದರಂತೆ ದೀರ್ಘಕಾಲದ ಸಾಲಗಳನ್ನು ಒಳಪಡಿಸಿ ೫ ಲಕ್ಷದಷ್ಟು ಮನೆಗಳನ್ನು ನಿರ್ಮಿಸಿಕೊಡಲಾಗು ವುದೆಂದು ಸಚಿವರು ತಿಳಿಸಿದ್ದಾರೆ. ಕಾಸರಗೋಡು ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ನರ್ಸಿಂಗ್ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಮಾತ್ರವಲ್ಲ ಕಾಸರಗೋಡು, ಇಡುಕ್ಕಿ ಮತ್ತು …