ಶಾಲೆ ಆವರಣದಲ್ಲಿರುವ  ಆಂಗಡಿಯಿಂದ ಕಳವು: ಸೆರೆಗೀಡಾದ ಆರೋಪಿ  ಠಾಣೆಯಿಂದ ಪರಾರಿಯಾಗಿ ಮತ್ತೆ ಬಂಧನ

ಕಾಸರಗೋಡು: ಶಾಲೆ ಆವರಣದ ಅಂಗಡಿಯಿಂದ ಕಳವು ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾ ಗಿದ್ದು, ಕೂಡಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಒಂದು ಗಂಟೆಯೊಳಗೆ ಮತ್ತೆ ಬಂಧಿಸಿದ್ದಾರೆ. ಇದರಿಂದ ಕಳವು ಪ್ರಕರಣದ ಹೊರತು ಪೊಲೀಸ್ ಠಾಣೆಯಿಂದ ಪರಾರಿಯಾದ ಆರೋಪದಂತೆಯೂ  ಕೇಸು ದಾಖಲಿಸಲಾಗಿದೆ. ಬೇಕಲ ತಾಯಲ್ ಮವ್ವಲ್ ನಿವಾಸಿಯೂ ತಚ್ಚಂಗಾಡ್ ಅರವತ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಿ.ಕೆ. ಮುಹಮ್ಮದ್ ಸಫ್ವಾನ್ (19) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈತ ಬೇಕಲ ಶಿಕ್ಷಣ ಉಪಜಿಲ್ಲೆಯ ತಚ್ಚಂಗಾಡ್ ಸರಕಾರಿ ಶಾಲೆಯ ಆವರಣದಲ್ಲಿರುವ …

ಚಿಕಿತ್ಸೆಯಲ್ಲಿದ್ದ ನಿವೃತ್ತ ಎಸ್ ಐ ಟಿ. ವೇಣುಗೋಪಾಲನ್ ನಿಧನ

ಕಾಸರಗೋಡು: ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ನಿವೃತ್ತ ಎಸ್‌ಐ ಕಯ್ಯೂರು ನಿವಾಸಿ ಟಿ. ವೇಣುಗೋಪಾಲನ್ (60) ನಿಧನ ಹೊಂದಿದರು. ಮೂತ್ರಕೋಶ ಸಂಬಂಧ ಚಿಕಿತ್ಸೆಯಲ್ಲಿದ್ದರು. ಬ್ಲಡ್ ಡೋನರ್ಸ್ ಕೇರಳ ಸಮಿತಿಯ ಮಾಜಿ ಗೌರವಾಧ್ಯಕ್ಷರಾಗಿಯೂ, ಕಾಸರಗೋಡು ಜಿಲ್ಲಾ ಗೌರವಾ ಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತದೇಹವನ್ನು ಇಂದು ಬೆಳಿಗ್ಗೆ ಮನೆ ಪರಿಸರದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗುವುದು. ಅಪ ರಾಹ್ನ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ ಟಿ.ವಿ. ಸುನಿತ, ಮಕ್ಕಳಾದ ಅಶೀಬೂಶ್, ಅನಯ್, ಅಳಿಯ ಸುನು, ಸಹೋದರಿಯ ರಾದ  ಕನಕಲತ, ಶೈಲಜ ಹಾಗೂ ಅಪಾರ ಬಂಧು-ಮಿತ್ರರನ್ನು …

ಆರೋಪಿ ಬಾಯಾರುಪದವು ನಿವಾಸಿ ನೀಡಿದ ಹೇಳಿಕೆಯ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ: ಕೇರಳಕ್ಕೆ ಮಾದಕದ್ರವ್ಯ ಸಾಗಾಟ ಜಾಲದ ಮೂವರು ವಿದೇಶೀಯರೂ ಸೇರಿ 11 ಮಂದಿ ಸೆರೆ

ಕಾಸರಗೋಡು: ಮಾದಕದ್ರವ್ಯ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಜೇಶ್ವರ ಬಾಯಾರುಪದವು ನಿವಾಸಿ ಹಾಗೂ ಇನ್ನೋರ್ವ ಆರೋಪಿ ವಿಚಾರಣೆ ವೇಳೆ ನೀಡಿದ ಹೇಳಿಕೆಯ ಜಾಡು ಹಿಡಿದು ಪೊಲೀಸರು ನಡೆಸಿದ ಅತ್ಯಂತ ಯಶಸ್ವಿ ಕಾರ್ಯಾಚರಣೆಯಲ್ಲಿ ಕೇರಳಕ್ಕೆ ಮಾದಕದ್ರವ್ಯ ಸಾಗಿಸುವ ಜಾಲಕ್ಕೆಸೇರಿದ ಮೂವರು ವಿದೇಶಿಯರೂ ಸೇರಿ 11 ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.  ಟಾನ್ಸಾನಿಯನ್ ನಿವಾಸಿಗಳಾದ ಡೇವಿಡ್ ಎನ್ಡ್‌ಮಿ, ಅತ್‌ಕ್ ಅರುಣ್ ಮತ್ತು ಫ್ರಾಂಕ್ ಎಂಬೀ ಮೂವರು ವಿದೇಶಿಯರು ಹಾಗೂ ವಿವಿಧ ರಾಜ್ಯಗಳ ಇತರ 9 ಮಂದಿ ಬಂಧಿತರಾದ  ಈ ಮಾದಕದ್ರವ್ಯ ಸಾಗಾಟ ದಂಧೆಯ ಕೊಂಡಿಗಳಾಗಿದ್ದು …

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರುಣ್ ತಾಪಾ ನಿಧನ

ಕಾಸರಗೋಡು: ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರುಣ್ ತಾಪ (65) ಕಲ್ಲಿಕೋಟೆಯಲ್ಲಿರುವ ಪುತ್ರಿಯ ಮನೆಯಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದರು. ಇವರು ಅಸೌಖ್ಯದಿಂದ ತಿಂಗಳುಗಳಿಂದ ಚಿಕಿತ್ಸೆಯಲ್ಲಿದ್ದರು. ಮೂಲತಃ ಮೇಲ್ಪರಂಬ ಪಳ್ಳಿಪ್ರಂ ನಿವಾಸಿಯಾಗಿರುವ ಕರುಣ್‌ತಾಪಾ ವಿದ್ಯಾನಗರ ಚಾಲ ರಸ್ತೆಯ ತಾಪಾ ಹೌಸ್‌ನಲ್ಲಿ ವಾಸಿಸುತ್ತಿದ್ದರು. ಕಾಂಗ್ರೆಸ್‌ನ ಕಾಸರಗೋಡು ಬ್ಲೋಕ್ ಉಪಾಧ್ಯಕ್ಷ ಹಾಗೂ ಯುಡಿಎಫ್‌ನ ಕಾಸರಗೋಡು ಮಂಡಲ ಸಂಚಾಲಕರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ದೀರ್ಘಕಾಲ ವಿದೇಶದಲ್ಲೂ ದುಡಿದಿದ್ದರು. ಮಾತ್ರವಲ್ಲದೆ ಓರ್ವ ನಿಷ್ಠಾವಂತ ಸಮಾಜಸೇವಕರೂ ಆಗಿದ್ದರು. ದಿ| ಕುಟ್ಟಿಯಾನ್- ಚಿರುದಾ ಪಳ್ಳಿಪುರಂ ದಂಪತಿಯ …

ಮಂಡಲ ಕಾಂಗ್ರೆಸ್ ಅಧ್ಯಕ್ಷರ ಮನವಿಗೆ ಸ್ಪಂದಿಸಿದ ಸರಕಾರ: ಮುಜುಂಗಾವು ಯಕ್ಷಗಾನ ಕಲಾ ಕೇಂದ್ರ ಕಾಮಗಾರಿ ನಡೆಸಲು ಸರಕಾರ ನಿರ್ಧಾರ

ಕುಂಬಳೆ: ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡ ಮುಜುಂಗಾವಿನ ಯಕ್ಷಗಾನ ಕುಲಪತಿ ಕುಂಬಳೆ ಪಾರ್ತಿಸುಬ್ಬ ಸ್ಮಾರಕ ಯಕ್ಷಗಾನ ಕಲಾಕೇಂದ್ರ ಕಾಮಗಾರಿ ಪುನರಾರಂಭಿಸಲು ಸರಕಾರ ಕ್ರಮ ಕೈಗೊಂಡಿದೆ. ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಪೂಜಾರಿ 2024 ಡಿಸೆಂಬರ್ 20ರಂದು ನಡೆದ ತಾಲೂಕು ಅದಾಲತ್‌ನಲ್ಲಿ ನೀಡಿದ ಮನವಿಗೆ ಉತ್ತರವಾಗಿ ಜಿಲ್ಲಾ ಅಕೌಂಟ್ಸ್ ಆಫೀಸರ್ ಈ ವಿಷಯವನ್ನು ತಿಳಿಸಿದ್ದಾರೆ. ತುಳುನಾಡಿನ ಸ್ವಂತ ಕಲೆಯಾದ ಯಕ್ಷಗಾನ ಹಾಗೂ ಯಕ್ಷಗಾನದ ಕುಲಪತಿ ಪಾರ್ತಿಸುಬ್ಬರನ್ನು ಸರಕಾರ ಅವಹೇಳನಗೈಯ್ಯು ತ್ತಿದೆಯೆಂದು ರವಿ ಪೂಜಾರಿ ಮನವಿಯಲ್ಲಿ ಆರೋಪಿಸಿದ್ದರು. …

ಸಚಿವ ಶಿವನ್ ಕುಟ್ಟಿ ಮಹಿಳಾ ವಿರುದ್ಧ ಮನೋಭಾವದ ಪ್ರತಿರೂಪ- ಎಂ.ಎಲ್. ಅಶ್ವಿನಿ

ಕಾಸರಗೋಡು: ರಾಜ್ಯ ಸರಕಾರ ಹಾಗೂ ರಾಜಭವನ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿರಿಸಿದ್ದ ಭಾರತಮಾತೆಯ ಛಾಯಾಚಿತ್ರವನ್ನು ಕಾವಿ ಪತಾಕೆ ಎತ್ತಿ ಹಿಡಿದ ಮಹಿಳೆಯ ದ್ದಾಗಿದೆ ಎಂದು ಸಚಿವ ಶಿವನ್ ಕುಟ್ಟಿ ನಡೆಸಿದ ಪರಾಮರ್ಶೆ ಅವರ ಮಹಿಳಾ ವಿರುದ್ಧ- ಸಂಕುಚಿತ ಮನಸ್ಸಿನ ಭಾವನೆ ಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ವಿದೇಶದಲ್ಲಿ ರೂಪುಗೊಂಡ ಕಮ್ಯೂನಿಸ್ಟ್ ಸಿದ್ಧಾಂತಗಳಿಗೆ ಭಾರತಾಂಬೆಯೆಂದಲ್ಲ, ನಮ್ಮ ದೇಶದ ಯಾವುದನ್ನೂ ಕೂಡಾ ಅರಗಿಸಿಕೊಳ್ಳಲು ಸಾಧ್ಯವಿಲ್ಲವೆಂದು ಶಿವನ್ ಕುಟ್ಟಿ ಮತ್ತೊಮ್ಮೆ ಸ್ಪಷ್ಟಪಡಿಸಿ ದ್ದಾರೆ ಎಂದು ಅವರು ನುಡಿದರು. 1947ರಲ್ಲಿ …

ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ: ರಾಜಕೀಯ ಪಕ್ಷ ಪ್ರತಿನಿಧಿಗಳ ಸಭೆ 23ರಂದು

ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿ ಬದಿಯಡ್ಕ ಪಂಚಾಯತ್ ವ್ಯಾಪ್ತಿಯ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ 23ರಂದು ಅಪರಾಹ್ನ 3 ಗಂಟೆಗೆ ಪಂಚಾಯತ್ ಕಾನ್ಫರೆನ್ಸ್ ಸಭಾಂಗಣ ದಲ್ಲಿ ನಡೆಯಲಿದೆ. ಪಕ್ಷದ ಪ್ರತಿನಿಧಿಗಳು ಭಾಗವಹಿಸಬೇಕೆಂದು ಪಂಚಾಯತ್ ಪ್ರಭಾರ ಕಾರ್ಯದರ್ಶಿ ತಿಳಿಸಿದ್ದಾರೆ.

ನಿಧನ

ಏತಡ್ಕ: ಇಲ್ಲಿನ ಪುತ್ರಕಳ ನಿವಾಸಿ ಕೃಷಿಕ ನಾರಾಯಣ ರೈ (72) ನಿಧನ ಹೊಂದಿದರು. ಮೃತರು ಪತ್ನಿ ದೇವಕಿ, ಮಕ್ಕಳಾದ ರಜನಿ, ಸೌಮ್ಯಾ, ಸಂತೋಷ್ ರೈ, ಅಳಿಯಂದಿರಾದ ಜಗನ್ನಾಥ ರೈ, ಸದಾನಂದ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೀನು ಕಾರ್ಮಿಕರ ಅವಗಣನೆ ವಿರುದ್ಧ ಎಸ್‌ಟಿಯುನಿಂದ ಮಂಜೇಶ್ವರ ಪಂ. ಕಚೇರಿ ಮಾರ್ಚ್

ಮಂಜೇಶ್ವರ: ಮೀನು ಕಾರ್ಮಿಕರ ಸಂಘಟನೆಯನ್ನು ಅವಗಣಿಸಿರುವುದರ ವಿರುದ್ಧ, ಮಂಜೇಶ್ವರ ಪಂಚಾಯತ್ ಆಡಳಿತ ಸಮಿತಿ ಓರ್ವ ತಾರತಮ್ಯ ನೀತಿ ವಿರೋಧಿಸಿ ಮಂಜೇಶ್ವರ ಪಂಚಾಯತ್ ಮೀನು ಕಾರ್ಮಿಕರ ಸಂಘಟನೆ ಎಸ್‌ಟಿಯು ಮಂಜೇಶ್ವರ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿದೆ. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ವಸತಿ ಯೋಜನೆಯ 10 ಲಕ್ಷ ರೂ.ವನ್ನು ೫ ಲಕ್ಷವಾಗಿ ಕಡಿತಗೊಳಿಸಲಾಗಿದೆ. ಮತ್ಸ್ಯ ಕಾರ್ಮಿಕ ವಿಭಾಗಕ್ಕೆ ಫಂಡ್ ನಿಷೇಧವನ್ನು ಪ್ರತಿಭಟಿಸಿ ಮಾರ್ಚ್ ನಡೆಸಲಾಗಿದೆ. ಫೆಡರೇಶನ್ ಜಿಲ್ಲಾಧ್ಯಕ್ಷ ಅಸೀಸ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು.  ಪ್ರಧಾನ ರಾಜ್ಯ ಕಾರ್ಯದರ್ಶಿ ಕೆ.ಪಿ. …

ಹೃದಯಾಘಾತ: ಮಧ್ಯವಯಸ್ಕ ನಿಧನ

ಕುಂಬಳೆ: ಕುಂಬಳೆ ಬದ್ರಿಯಾನಗರ ನಿವಾಸಿ ಅಶ್ರಫ್ (50)  ಎಂಬವರು ಹೃದಯಾಘಾತದಿಂದ ನಿಧನ ಹೊಂದಿದರು.  ನಿನ್ನೆ ರಾತ್ರಿ 12 ಗಂಟೆ ವೇಳೆ ಮನೆಯಲ್ಲಿ  ಇವರಿಗೆ ವಾಂತಿ ಸಹಿತ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ  ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. ಇವರು ಈ ಹಿಂದೆ ಗಲ್ಫ್‌ಉದ್ಯೋಗಿ ಯಾಗಿದ್ದರು. ಅಬೂಬಕರ್-ಆಮಿನ ದಂಪತಿಯ ಪುತ್ರನಾದ ಮೃತರು ಪತ್ನಿ ಸಾಬಿರ, ಮಕ್ಕಳಾದ ಸಮೀರ್, ನಿಸ್ವಾ, ಸಿನಾನ್, ಸಹೋದರ-ಸಹೋದರಿಯ ರಾದ ಅಬ್ದುಲ್ ಖಾದರ್, ಅಬ್ದುಲ್ಲ, ನಸೀಮ,  ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.