ಬಂದಡ್ಕದಲ್ಲಿ ಸೆರೆಗೀಡಾದ ತಂಡ ಉತ್ತರಕೊರಿಯಕ್ಕೆ ಸಾಗಿಸಿದ್ದು ೮ ಮಂದಿಯನ್ನು: ಪ್ರತಿಫಲವಾಗಿ ಪಡೆದದ್ದು ೩೨ ಲಕ್ಷ ರೂ.
ಕಾಸರಗೋಡು: ಬಂದಡ್ಕದಲ್ಲಿ ಮೊನ್ನೆ ರಾತ್ರಿ ಸೆರೆಗೀಡಾದ ಮೂರು ಮಂದಿಯ ತಂಡ ಉತ್ತರ ಕೊರಿಯಕ್ಕೆ ೮ ಮಂದಿಯನ್ನು ಸಾಗಿಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಇದಕ್ಕಿಂತಲೂ ಹೆಚ್ಚು ಮಂದಿಯನ್ನು ಸಾಗಿಸಲಾಗಿದೆಯೇ ಎಂದು ತಿಳಿಯಲು ರಿಮಾಂಡ್ನಲ್ಲಿರುವ ಆರೋಪಿಗಳನ್ನು ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲು ಬೇಡಗಂ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ತೃಕ್ಕರಿಪುರ ಉಡುಂಬಂತಲದ ಎಂ.ಎ. ಅಹಮ್ಮದ್ ಅಬ್ರಾನ್ (೨೬), ಎಂ.ಎ. ಸಾಬಿತ್ (೨೫), ಪಡನ್ನ ಕ್ಕಾಡ್ ಕರುವಳದ ಮುಹಮ್ಮದ್ ಸಫ್ವಾನ್ (೨೫) ಎಂಬಿವರನ್ನು ಮೊನ್ನೆ ರಾತ್ರಿ ೯.೩೦ಕ್ಕೆ ಬಂದಡ್ಕ ಕಣ್ಣಾಡಿತ್ತೋಡ್ ಎಂಬಲ್ಲಿ ಬೇಡಗಂ ಎಸ್ಐ …