ಪೆರಿಯ ಅವಳಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಎಂಟು ತಾಸುಗಳ ಕಸ್ಟಡಿ ಪರೋಲ್

ಕಾಸರಗೋಡು: ಪೆರಿಯದ ಕಲ್ಯೋಟ್‌ನ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ      ನ್ಯಾಯಾಂಗ ಬಂಧನದಲ್ಲಿ ಕಳೆದಿರುವ ಇಬ್ಬರು ಆರೋಪಿಗಳಿಗೆ ಕೊಚ್ಚಿ ಸಿಬಿಐ ನ್ಯಾಯಾಲಯ ಎಂಟು ತಾಸುಗಳ ತನಕ ಕಸ್ಟಡಿ ಪರೋಲ್ ಮಂಜೂರು ಮಾಡಿದೆ. ಈ ಕೊಲೆ ಪ್ರಕರಣದ ಆರನೇ ಆರೋಪಿ ಕಲ್ಯೋಟ್ ಎಚ್ಚಿಲಡ್ಕದ ಪ್ಲಾಕಾ ತೊಟ್ಟಿಲ್‌ನ ಆರ್. ಶ್ರೀರಾಗ್ (ಕುಟ್ಟಿ-೨೭) ಮತ್ತು ೧೦ನೇ ಆರೋಪಿ ಪೆರಿಯಾ ಕಣ್ಣೋತ್ ತಾನತ್ತಿಂಗಾಲ್‌ನ ಟಿ. ರಂಜಿತ್ (ಅಪ್ಪು-೨೯) ಎಂಬವರಿಗೆ ಇಂದು ಬೆಳಿಗ್ಗೆ ೮.೩೦ರಿಂದ ಸಂಜೆ ೪.೩೦ರ ಅವಧಿ ತನಕ ನ್ಯಾಯಾಲಯ ಕಸ್ಟಡಿ ಪರೋಲ್ …

ರಾಜ್ಯದ ದೇವಸ್ಥಾನಗಳ ೫೦೦ ಕಿಲೋ ಗ್ರಾಂ ಚಿನ್ನ ಬ್ಯಾಂಕ್‌ಗೆ

ಕಾಸರಗೋಡು: ರಾಜ್ಯ ಮುಜರಾಯಿ ಮಂಡಳಿಯ ವ್ಯಾಪ್ತಿಗೊಳಪಟ್ಟ ದೇವಸ್ಥಾನಗಳ ಪೈಕಿ ನಿತ್ಯಪೂಜೆ ಹಾಗೂ ಕ್ಷೇತ್ರೋತ್ಸವದ ವೇಳೆ ಬಳಸದೇ ಇರುವ ಚಿನ್ನದ ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿರೂಪದಲ್ಲಿ ಇರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಹೀಗೆ ಕ್ಷೇತ್ರಗಳ ಚಿನ್ನದ ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ಇರಿಸಿ ಅದಕ್ಕೆ ಶೇ. ೨.೫ರಷ್ಟು ಬಡ್ಡಿ ಲಭಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪೋಸಿಟ್ ಸ್ಕೀಮ್ ಜ್ಯಾರಿಗೊ ಳಿಸಲು ರಾಜ್ಯ ಹೈಕೋರ್ಟ್ ಕೂಡಾ ಅನುಮತಿ ನೀಡಿದೆ. ಇದರಂತೆ ದೇವಸ್ಥಾನಗಳ ಚಿನ್ನದ ಒಡವೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಯಲ್ಲಿ ಠೇವಣಿ …

ಪದ್ಮಶ್ರೀ ಬೆಳೇರಿಯವರಿಗೆ ಕಾರ್ಮಾರು ಕ್ಷೇತ್ರದಲ್ಲಿ ಸನ್ಮಾನ

ಬದಿಯಡ್ಕ: ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿ ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಸತ್ಯನಾರಾಯಣ ಬೆಳೇರಿ ಅವರನ್ನು ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಕ್ಷೇತ್ರದ ರಾಜಗೋಪುರದ ಶಿಲಾನ್ಯಾಸ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸನ್ಮಾನಿಸಿದರು. ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದು, ಹಲವರು ಉಪಸ್ಥಿತರಿದ್ದರು.

ಜೋಗಿ ಸಮಾಜ ಭವನದ ನೂತನ ಕಟ್ಟಡ ಉದ್ಘಾಟನೆ ನಾಳೆ

ಬದಿಯಡ್ಕ: ಕಾಸರಗೋಡು ಜೋಗಿ ಸಮಾಜ ಸುಧಾರಕ ಸಂಘದ ನೂತನ ಜೋಗಿ ಸಮಾಜ ಭವನದ ಉದ್ಘಾಟನೆ ನಾಳೆ ಬದಿಯಡ್ಕ ಮೂಕಂಪಾರೆಯಲ್ಲಿ ಜರಗಲಿದೆ. ತಮೋನಿ ಶ್ರೀ ೧೦೦೮ ರಾಜಯೋಗಿ ನಿರ್ಮಲ್‌ನಾಥ್ ಜೀ ಮಹಾರಾಜ್, ಶ್ರೀ ಯೋಗೀಶ್ವರ ಮಠ ಕದ್ರಿ ಮಂಗಳೂರು  ಉದ್ಘಾಟಿಸುವರು. ಶ್ರೀ ೧೦೦೮ ಮಠಾಧೀಶ ಶ್ರೀ ರಾಜಗುರು ಶ್ರದ್ಧಾನಾಥ್ ಜೀ ಮಹಾರಾಜ್  ಶ್ರೀ ಯೋಗೀಶ್ವರ ಮಠ ವಿಟ್ಲ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಭಜನೆ, ರೋಟ್ ಪೂಜೆ, ಜೋಗಿ ಸಮಾಜದ ಪೂರ್ವಾಧ್ಯಕ್ಷರುಗಳಿಗೆ ಗೌರವಾರ್ಪಣೆ, ಸಾಧಕರಿಗೆ ಸನ್ಮಾನ, ವಿಕಲಚೇತನ ವಿದ್ಯಾರ್ಥಿಗಳಿಗೆ ಧನಸಹಾಯ, …

ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ನಾಳೆಯಿಂದ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಹಸ್ರತ್ ಬಾವ ಫಖೀರ್ ವಲಿಯುಲ್ಲಾಹಿ ಹಲ್‌ರಮಿ ಮಖಾಂ ಉರೂಸ್ ನಾಳೆಯಿಂದ ೧೮ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಸಂಜೆ ೪ಕ್ಕೆ ಕೆ.ಎಸ್. ಆಟ್ಟಕೋಯ ತಂಙಳ್ ಮಖಾಂ ಸಿಯಾರತ್‌ಗೆ ನೇತೃತ್ವ ನೀಡುವರು. ಇಚ್ಲಂಗೋಡು ಮಾಲಿಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಅನ್ಸಾರ್ ಶೆರೂಲ್ ಧ್ವಜಾರೋಹಣಗೈಯ್ಯುವರು. ರಾತ್ರಿ ಕೆ.ಎಸ್. ಆಟ್ಟಕೋಯ ತಂಙಳ್ ಉದ್ಘಾಟಿಸುವರು. ಮಜೀದ್ ಬಾಖವಿ ಅಧ್ಯಕ್ಷತೆ ವಹಿಸುವರು. ಕಾರಿಹ ಸಖಾಫಿ ಪೆನ್ನಾಲ ಪ್ರಧಾನ ಭಾಷಣ ಮಾಡುವರು. ಹಲವರು ಮಾತನಾಡುವರು. ಮುಂದಿನ ದಿನಗಳಲ್ಲಿ ನೌಷಾದ್ ಬಾಖವಿ,  …

ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಡೆಂಟಲ್ ಯೂನಿಟ್‌ಗೆ ಆಡಳಿತಾತ್ಮಕ ಅನುಮತಿ

ಮಂಗಲ್ಪಾಡಿ: ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ನೂತನ ಡೆಂಟಲ್ ಯೂನಿಟ್ ಆರಂಭಿಸಲು ಆರೋಗ್ಯ ಇಲಾಖೆ ಆಡಳಿತಾತ್ಮಕ ಅನುಮತಿ ನೀಡಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದರು. ಏರ್ವ ಡೆಂಟಲ್ ಸರ್ಜನ್, ಡೆಂಟಲ್ ಮೆಕ್ಯಾನಿಕ್ ಎಂಬೀ ಹುದ್ದೆಗಳೊಂದಿಗೆ ಡೆಂಟಲ್ ವಿಂಗ್ ಸ್ಪೆಷಾಲಿಟಿ ಆರಂಭಿಸಲಾಗುವುದು. ದಂತ ಚಿಕಿತ್ಸೆಗೆ ಸೌಕರ್ಯದ ಕೊರತೆಯಿಂದ ರೋಗಿಗಳು ಎದುರಿಸುತ್ತಿರುವ ತೊಂದರೆಗೆ ಪರಿಹಾರ ದೊರೆಯಲಿದ್ದು, ಭೌತಿಕ ಸೌಲಭ್ಯಗಳನ್ನು ಒದಗಿಸಿ ಶಾಸಕರ ನಿಧಿಯಿಂದ ಅನುಮತಿಸಿದ ಐಸೋಲೇಶನ್ ವಾರ್ಡ್ ಕಟ್ಟಡದಲ್ಲಿ ಡೆಂಟಲ್ ಯೂನಿಟ್ ಸ್ಥಾಪಿಸಲು ಸಂಬAಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಉತ್ತರ ವಲಯ ಪುರುಷ- ಮಹಿಳಾ ಹಗ್ಗಜಗ್ಗಾಟ ಪಂದ್ಯ

ಹೊಸದುರ್ಗ: ಆಶ್ವಾಸ್ ಪಟ್ಟೇನ ಇದರ ನೇತೃತ್ವದಲ್ಲಿ ಉತ್ತರ ವಲಯ ಪುರುಷ- ಮಹಿಳಾ ತಂಡಗಳ ಹಗ್ಗಜಗ್ಗಾಟ ಪಂದ್ಯ ಇಂದು ನೀಲೇಶ್ವರದಲ್ಲಿ ನಡೆಯಲಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳ ೧೦ ಮಹಿಳಾ ತಂಡಗಳು, ೨೫ ಪುರುಷ ತಂಡಗಳು ಭಾಗವಹಿಸಲಿವೆ. ಸಂಜೆ ೭ ಗಂಟೆಗೆ ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸುವರು. ರಾಷ್ಟ್ರೀಯ ಕ್ರೀಡಾತಾರೆ ಕೆ.ಸಿ. ಗಿರೀಶನ್ ಭಾಗವಹಿಸುವರು. ನೀಲೇಶ್ವರ ಹಾಗೂ ಸಮೀಪ ನಿವಾಸಿಗಳಾದ ಹಿರಿಯ ಕ್ರೀಡಾತಾರೆಗಳನ್ನು ಗೌರವಿಸಲಾಗುವುದು. ಅಲ್ಲದೆ ಪಾಲಿಯೇಟಿವ್ ಉಪಕರಣಗಳ ವಿತರಣೆ ನಡೆಯಲಿದೆ. ಪಂದ್ಯದಲ್ಲಿ ಗೆಲುವು ಸಾಧಿಸುವ ಪುರುಷ ತಂಡಗಳಿಗೆ ಯಥಾಕ್ರಮ …

ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರೆ ೬ರಿಂದ

ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕೋತ್ಸವ ಈ ತಿಂಗಳ ೬,೭ರಂದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಪೌರೋಹಿತ್ಯದಲ್ಲಿ  ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ೬ರಂದು  ಬೆಳಿಗ್ಗೆ ೫ ಗಂಟೆಯಿಂದ ಮಹಾಗಣಪತಿ ಹೋಮ, ಮಹಾಪೂಜೆ, ೭.೩೦ರಿಂದ ಭಜಜೆ, ೯.೩೦ಕ್ಕೆ ತಂತ್ರಿಗಳ ಆಗಮನ, ಭಜನೆ, ೧೧ ಗಂಟೆಯಿಂದ ಪುಣ್ಯಾಹ, ನವಕ ಕಲಶಪೂಜೆ, ಅಭಿಷೇಕ, ಮಧ್ಯಾಹ್ನ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬ ಗಂಟೆಯಿಂದ ಚೆಂಡೆಮೇಳ, ೬.೪೫ಕ್ಕೆ ದೀಪಾರಾಧನೆ, ೭ ಗಂಟೆಯಿಂದ ಶ್ರೀ ದೇವರ ಭೂತಬಲಿ, …

ನಕಲಿ ಪಾಸ್‌ಪೋರ್ಟ್, ಮೊಹರು ಮತ್ತಿತರ ದಾಖಲುಪತ್ರಗಳು ಪತ್ತೆ: ಕಾರು ಸಹಿತ ಮೂವರ ಸೆರೆ

ಕಾಸರಗೋಡು: ಬಂದಡ್ಕ ಗ್ರಾಮದ ಕನ್ನಾಡಿತ್ತೋಡಿನಲ್ಲಿರುವ ಎನ್.ಎಚ್ ರಸ್ತೆಯಲ್ಲಿ ಬೇಡಗಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಂಗಾಧರನ್ ಎಂ ನೇತೃತ್ವದ ಪೊಲೀಸರು ನಿನ್ನೆ ರಾತ್ರಿ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಸುಳ್ಯದಿಂದ ಬರುತ್ತಿದ್ದ ಬಿಳಿ ಬಣ್ಣದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಸಂಶಯಾಸ್ಪದ ರೀತಿಯಲ್ಲಿ ಹಲವು ಪಾಸ್‌ಪೋರ್ಟ್‌ಗಳು, ಲ್ಯಾಪ್ ಟೋಪ್ ಮತ್ತು ನಕಲಿಮೊಹರುಗಳು   ಹಲವು ನಕಲಿ ದಾಖಲುಪತ್ರಗಳನ್ನು ಪತ್ತೆಹಚ್ಚಿದೆ.  ಇದಕ್ಕೆ ಸಂಬಂಧಿಸಿ ತೃಕ್ಕರಿಪುರ ಸೌತ್‌ನ ಮಸೀದಿ ಬಳಿಯ ಉಡುಂಬುತ್ತಲದ ಪುದಿಯಕಂಡಂ ಹೌಸ್‌ನ ಅಹಮ್ಮದ್ ಅಬ್ರಾರ್ ಎಂ.ಎ (೨೬), …

ಕುಂಬಳೆ ಬಸ್ ನಿಲ್ದಾಣಕ್ಕೆ ವಾಹನಗಳ ಪ್ರವೇಶ, ನಿರ್ಗಮನ; ಜನರಲ್ಲಿ ಹೆಚ್ಚಿದ ಆತಂಕ

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪೂರ್ಣಗೊಳ್ಳುತ್ತಲೇ ಕಾಸರಗೋಡು ಭಾಗದಿಂದ ತೆರಳುವ ವಾಹನಗಳು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಹಾಗೂ ಕುಂಬಳೆ ಬಸ್ ನಿಲ್ದಾಣದಿಂದ ವಾಹನಗಳು ಮಂಗಳೂರು ರಸ್ತೆಗೆ ಪ್ರವೇಶಿಸಲು ಕಷ್ಟಕರವಾಗಲಿದೆ ಯೆಂಬ ಆತಂಕ ಹೆಚ್ಚಿದೆ. ಕುಂಬಳೆ ರೈಲ್ವೇ ನಿಲ್ದಾಣ ಬಳಿ ನಿರ್ಮಿಸುವ ಅಂಡರ್ ಪಾಸ್ ಮೂಲಕ ಕಾಸರಗೋಡು ಭಾಗದ ವಾಹನಗಳಿಗೆ ಸರ್ವಿಸ್ ರಸ್ತೆ ಮೂಲಕ ಕುಂಬಳೆ ನಿಲ್ದಾಣಕ್ಕೆ ತಲುಪಬಹುದೆಂದು ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ತಿಳಿಸಿರುತ್ತದೆ. ಅದೇ ರೀತಿ ಕುಂಬಳೆ ಬಸ್ ನಿಲ್ದಾಣದಿಂದ ಮಂಗಳೂರು ಭಾಗಗಳಿಗಿಲ್ಲಿರುವ ವಾಹನಗಳು ಇದೇ …