ರಾಜಗೋಪುರ ದೇವಾಲಯಕ್ಕೆ ಶೋಭೆ- ಎಡನೀರು ಶ್ರೀ
ಬದಿಯಡ್ಕ: ರಾಜಗೋಪುರ ದೇವಸ್ಥಾನಕ್ಕೆ ಹಾಗೂ ಊರಿಗೆ ಶೋಭೆಯನ್ನು ತರುತ್ತದೆ. ದೇವಾಲಯಗಳು ಊರಿನ ಔನತ್ಯದ ಪ್ರತೀಕವಾಗಿದೆ. ದೇವಮಂದಿರಗಳು, ವಿದ್ಯಾಲಯಗಳು ಉಚ್ಚಸ್ಥಾನದಲ್ಲಿದ್ದರೆ ಆ ಊರು ಸುಭಿಕ್ಷೆಯಿಂದ ಕೂಡಿರುತ್ತದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು, ದೇವಾಲಯದ ಮುಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ರಾಜಗೋಪುರಕ್ಕೆ ಶಿಲಾನ್ಯಾಸಗೈದು ಅವರು ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾರಾಯಣ ಬೆಳೇರಿ ವರನ್ನು ಈ …