ಇಬ್ಬರು ಯುವಕರು ರೈಲು ಢಿಕ್ಕಿ  ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕರಿ ಬ್ಬರು ರೈಲು  ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.  ನಗರದ ಪಳ್ಳಂ ರೈಲ್ವೇ ಅಂಡರ್ ಪಾಸ್‌ನ ಮೇಲ್ಗಡೆಯ ರೈಲು ಹಳಿಯಲ್ಲಿ ಯುವಕರಿಬ್ಬರು ಇಂದು ಮುಂಜಾನೆ ಸುಮಾರು ೫.೩೦ರ ವೇಳೆ ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿ ದ್ದಾರೆ.  ಗೂಡ್ಸ್ ರೈಲುಗಾಡಿ ಢಿಕ್ಕಿ ಹೊಡೆದ ಇವರು ಸಾವನ್ನಪ್ಪಿರಬಹು ದೆಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ರೈಲು ಹಳಿ ಬಳಿ  ಇಯರ್ ಫೋನ್ ಬಳಸಿ ಮೊಬೈಲ್ ಫೋನ್ ವೀಕ್ಷಿಸುತ್ತಿದ್ದ ವೇಳೆ ಅವರಿಗೆ ರೈಲು ಢಿಕ್ಕಿ ಹೊಡೆದಿರಬಹುದೆಂದು ಹೇಳಲಾಗುತ್ತಿದೆ. ಮೃತದೇಹ ಪತ್ತೆಯಾದ …

ವಿಷ ಸೇವಿಸಿ ವಿದ್ಯಾರ್ಥಿನಿ ಸಾವಿಗೀಡಾದ ಪ್ರಕರಣ : ಇನ್ನೋರ್ವ ಆರೋಪಿ ಬಂಧನ

ಬದಿಯಡ್ಕ: ಶಾಲಾ ವಿದ್ಯಾ ರ್ಥಿನಿ ಇಲಿ ವಿಷ ಸೇವಿಸಿ ಸಾವಿಗೀ ಡಾದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಸೆರೆಗೀಡಾಗಿ ದ್ದಾನೆ. ಇತ್ತೀಚೆಗೆ ಸೆರೆಗೀಡಾದ ಮೊಗ್ರಾಲ್ ಪುತ್ತೂರು ಕೋಟಕುನ್ನುವಿನ ಅನ್ವರ್ (೨೪) ಎಂಬಾತನ ಸ್ನೇಹಿತ ಸಾಹಿಲ್ (೨೧)  ಎಂಬಾತ ಸೆರೆಗೀಡಾದ   ಆರೋಪಿಯಾಗಿದ್ದಾನೆ.  ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ  ಹತ್ತನೇ ತರಗತಿ ವಿದ್ಯಾರ್ಥಿನಿಯೂ, ಕುಂಬ್ಡಾಜೆ ನಿವಾಸಿಯಾದ ಹದಿನಾರರ ಹರೆಯದ ಬಾಲಕಿಯ ಸಾವಿಗೆ ಸಂಬಂಧಿಸಿ ಈ ಇಬ್ಬರನ್ನು ಬಂಧಿಸಲಾಗಿದೆ.  ಕಳೆದ ಮಂಗಳವಾರ ಸಂಜೆ ಮನೆಯೊಳಗೆ ವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ …

ಅಧಿಕಾರದ ಹಗ್ಗಜಗ್ಗಾಟ ಹಿನ್ನೆಲೆ : ಎಣ್ಮಕಜೆ ಪಂ. ಉಪಾಧ್ಯಕ್ಷೆ ರಾಜೀನಾಮೆ

ಪೆರ್ಲ: ಪಕ್ಷದ ಒಂದು ವಿಭಾಗದ ವಿರೋಧದ ಹಿನ್ನೆಲೆ ಯಲ್ಲಿ ಎಣ್ಮಕಜೆ ಪಂಚಾಯತ್ ಉಪಾಧ್ಯಕ್ಷೆ ರಾಜೀನಾಮೆ ನೀಡಿದ್ದಾರೆ. ಮುಸ್ಲಿಂ ಲೀಗ್‌ನ ಡಾ. ಜಹನಾಸ್ ಹಂಸಾರ್ ರಾಜೀನಾಮೆ ನೀಡಿದ್ದು, ಇವರಿಗೆ ಬದಲಾಗಿ ೧೦ನೇ ವಾರ್ಡ್ ಪ್ರತಿನಿಧಿ ರಮ್ಲ ಉಪಾಧ್ಯಕ್ಷೆಯಾಗುವ ಸಾಧ್ಯತೆ ಇದೆ. ಕಳೆದ ಪಂಚಾಯತ್ ಚುನಾವಣೆಯ ಬಳಿಕ ಜಹನಾಸ್ ಹಾಗೂ ರಮ್ಲರ ಹೆಸರನ್ನು ಉಪಾ ಧ್ಯಕ್ಷ ಹುದ್ದೆಗೆ ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ  ಇವರಿಬ್ಬರನ್ನು ಎರಡೂವರೆ ವರ್ಷದಂತೆ ಉಪಾ ಧ್ಯಕ್ಷೆಯರನ್ನಾಗಿ ಮಾಡುವುದಾಗಿ ಭರವಸೆ ನೀಡಲಾಗಿತ್ತೆಂದು ಒಂದು ವಿಭಾಗ ಲೀಗ್ ಕಾರ್ಯಕರ್ತರು ತಿಳಿಸುತ್ತಾರೆ. …

ಮುಗು ಪರಿಸರದಲ್ಲಿ ಶಂಕಾಸ್ಪದ ತಂಡದಿಂದ ತಿರುಗಾಟ: ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು

ಸೀತಾಂಗೋಳಿ: ಸೇವಾ ಟ್ರಸ್ಟ್‌ನ ಹೆಸರಲ್ಲಿ ಮುಗು ಹಾಗೂ ಪರಿಸರ ಪ್ರದೇಶದಲ್ಲಿ ಬಟ್ಟೆಬರೆ ಸಂಗ್ರಹಕ್ಕಾಗಿ ತಲುಪುವ ತಂಡದ ಬಗ್ಗೆ ಸ್ಥಳೀಯರಿಗೆ ಶಂಕೆ ಉಂಟಾಗಿದೆ. ಕಳೆದ ಮೂರು ದಿನಗಳಿಂದ ಈ ಪರಿಸರದ ಮನೆಗಳಿಗೆ  ಈ ತಂಡ ಹಳೆಯ ಬಟ್ಟೆಬರೆಗಳನ್ನು ಕೇಳಿ ತಲುಪುತ್ತಿದೆ. ಇದೇ ರೀತಿ ಅಮೆತ್ತೋಡು ನಿವಾಸಿ ಮನೆಗೆ ತಲುಪಿದ ಓರ್ವನ ವರ್ತನೆಯಲ್ಲಿ ಶಂಕೆ ತೋರಿ ಆತನ ಹೆಸರೇನು ಎಂದು ಕೇಳಿದಾಗ ಪ್ರಕಾಶ್ ಶಿರಸಿ ಎಂದು ತಿಳಿಸಿದ್ದಾನೆನ್ನಲಾಗಿದೆ. ಆದರೆ ಆತನ ಕೊರಳಿನಲ್ಲಿರುವ ಟ್ಯಾಗ್‌ನಲ್ಲಿ  ಯಾವುದೋ ಚಾರಿಟೇಬಲ್ ಟ್ರಸ್ಟ್‌ನ ಹೆಸರಿದ್ದು,  ಪಾಲಕ್ಕಾಡ್ …

ಮದ್ಯ ಬೇಟೆ: ಅಪಾರ ಪ್ರಮಾಣದ ಮದ್ಯ ವಶ; ಇಬ್ಬರ ಸೆರೆ

ಕಾಸರಗೋಡು: ಕಾಸರಗೋಡು ನಗರದ ಎರಡೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ ಕರ್ನಾಟಕ ನಿರ್ಮಿತ ೩೪.೫೬ ಲೀಟರ್ ಮದ್ಯ ಮತ್ತು ಅನಧಿಕೃತವಾಗಿ ಕೈವಶ ವಿರಿಸಿಕೊಳ್ಳಲಾದ ಆರು ಲೀಟರ್ ಕೇರಳ ಮದ್ಯವನ್ನು ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಅಬಕಾರಿ ತಂಡ ಬಂಧಿಸಿದೆ. ಕಾಸರಗೋಡು ನೆಲ್ಲಿಕುಂಜೆ ಪಿ.ಎಸ್ ಗುಡ್ಡೆ ಪರಿಸಬದಲ್ಲಿ ಕಾಸರಗೋಡು ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೩೪.೫೬ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪಿ.ಎಸ್. ಗುಡ್ಡೆಯ …

ಪ್ರಾಧ್ಯಾಪಕನ ಕೈ ತುಂಡರಿಸಿದ ಪ್ರಕರಣ:  ಬಂಧಿತ ನಿಜವಾಗಿಯೂ ಸವಾದ್ ಆಗಿದ್ದಾನೆಂಬುವುದನ್ನು

ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಗೆ ಮುಂದಾದ ಎನ್‌ಐಎ ಕಾಸರಗೋಡು: ತೊಡುಪುಳ ನ್ಯೂಮನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫರ ಕೈ  ತುಂಡರಿಸಿದ ಪ್ರಕರಣದ ಒಂದನೇ ಆರೋಪಿಯಾಗಿ ರುವ ಎರ್ನಾಕುಳಂ ಜಿಲ್ಲೆಯವನೇ ಆಗಿರುವ ಸವಾದ್‌ನ ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎರ್ನಾಕುಳಂ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಪ್ರಾಧ್ಯಾಪಕನ ಕೈ ತಂಡರಿಸಿದ ಬಳಿಕ    ಕಣ್ಣೂರು ಮಟ್ಟನ್ನೂರಿನಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದ ಸವಾದನ್‌ನನ್ನು  ಘಟನೆ ನಡೆದ ೧೩ ವರ್ಷಗಳ …

ಮಣ್ಣಂಗುಳಿ ಮೈದಾನ ಪರಿಸರ, ರಸ್ತೆಗಳಲ್ಲಿ ತುಂಬಿಕೊಂಡ ತ್ಯಾಜ್ಯ: ದುರ್ವಾಸನೆಯಿಂದ ಸಂಚಾರಕ್ಕೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನದ ಪರಿಸರದಲ್ಲಿ ಕಂಡು ಬರುವ ತ್ಯಾಜ್ಯ ರಾಶಿಯಿಂದ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ. ಮೈದಾನದ ಸುತ್ತಲೂ ಇರುವ ರಸ್ತೆಗಳಲ್ಲಿ ತ್ಯಾಜ್ಯ ತುಂಬಿಕೊAಡಿದೆ. ಇಲ್ಲಿನ ಕೋಡಿಬೈಲು ರಸ್ತೆ, ಕರವೂರು ರಸ್ತೆ ಹಾಗೂ ಅಂಗನವಾಡಿ ಪರಿಸರದ ರಸ್ತೆ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯಗಳು ತುಂಬಿ ತುಳುಕುತ್ತಿದ್ದರೂ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಲು ಕ್ರಮಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ವಿವಿಧ ಕಡೆಗಳಿಂದ ಜನರು ಮೈದಾನಕ್ಕೆ ತಲುಪುತ್ತಿದ್ದು, ಸುತ್ತಮುತ್ತ ಹಲವಾರು ಮನೆಗಳು ಹೊಂದಿರುವ ಪ್ರದೇಶ ಇದಾಗಿದೆ. …

ವ್ಯಾಪಾರ ಸಂರಕ್ಷಣಾ ಜಾಥಾಕ್ಕೆ ಕಾಸರಗೋಡಿನಿಂದ ಚಾಲನೆ

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತೃತ್ವದಲ್ಲಿ ಕಿರು ವ್ಯಾಪಾರಿ ವಲಯದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಹಲವಾರು ಮನವಿಗಳನ್ನು ಮುಖ್ಯಮಂತ್ರಿಗೂ, ವಿವಿಧ ಇಲಾಖೆ ಸಚಿವರಿಗೂ ನೀಡಿದರೂ ಸೂಕ್ತ ತೀರ್ಮಾನ ಉಂಟಾಗದ ಹಿನ್ನೆಲೆಯಲ್ಲಿ ವಿವಿಧ ೨೯ ಬೇಡಿಕೆಗಳನ್ನು ಮುಂದಿಟ್ಟು ವ್ಯಾಪಾರ ಸಂರಕ್ಷಣೆ ಹೆಸರಿನಲ್ಲಿ ನಿನ್ನೆ ಜಾಥಾ ಆರಂಭಿಸಲಾಗಿದ್ದು, ಫೆ. ೧೩ರ ವರೆಗೆ ರಾಜ್ಯದಾದ್ಯಂತ ಸಂಚಾರ ನಡೆಸಲಿದೆ. ತಿರುವನಂತಪುರ ಪುತ್ತರಿಕಂಡಂ ಮೈದಾನದಲ್ಲಿ ಜಾಥಾ ಸಮಾಪ್ತಿಯಾಗಲಿದ್ದು, ಈ ವೇಳೆ ವಿವಿಧ ಕಡೆಗಳಿಂದ ಸಂಗ್ರಹಿಸಿದ ೫ ಲಕ್ಷ ವ್ಯಾಪಾರಿಗಳ ಸಹಿ ಮುಖ್ಯಮಂತ್ರಿಗೆ …

ಕಾರ್ಮಾರು ಕ್ಷೇತ್ರ ನೂತನ ರಾಜಗೋಪುರಕ್ಕೆ ಶಿಲಾನ್ಯಾಸ

 ಬದಿಯಡ್ಕ: ಜೀರ್ಣೋದ್ಧಾರ ಗೊಳ್ಳುತ್ತಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ನೂತನ ರಾಜಗೋಪುರಕ್ಕೆ ಫೆಬ್ರವರಿ ೧ರಂದು ಬೆಳಿಗ್ಗೆ ೯.೪೫ರ ಶುಭ ಮುಹೂರ್ತದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಉಪಸ್ಥಿತಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಶಿಲಾನ್ಯಾಸಗೈ ಯ್ಯುವರು. ನಂತರ ಜರಗುವ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ  ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸತ್ಯನಾ ರಾಯಣ ಬೆಳೇರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆ ತ್ತೋಡಿ, …

ಅನಧಿಕೃತ ಮೀನುಗಾರಿಕೆ ವಿರುದ್ಧ ಫಿಶರೀಸ್ ಇಲಾಖೆ ಕಠಿಣ ಕ್ರಮ

ಕಾಸರಗೋಡು: ಕೇರಳ ಸಮುದ್ರ ಕರಾವಳಿಯಲ್ಲಿ ಅನಧಿಕೃತ ಮೀನುಗಾರಿಕೆಯಲ್ಲಿ ತೊಡಗುವವರ ವಿರುದ್ಧ ಫಿಶರೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ನೈಟ್ ಟ್ರೋಲಿಂಗ್ ನಡೆಸಿದ ಕರ್ನಾಟಕದ ಬೋಟ್‌ವೊಂದನ್ನು  ವಶಪಡಿಸಿ ೨.೫ ಲಕ್ಷ ರೂಪಾಯಿ ದಂಡ ಹೇರಿದೆ. ಈ ರೀತಿಯಲ್ಲಿ ಕಳೆದ ಆರು ತಿಂಗಳೆಳಗೆ ಅನಧಿಕೃತ ಮೀನುಗಾರಿಕೆಯಲ್ಲಿ ತೊಡಗಿದ ಬೋಟ್‌ಗಳನ್ನು ವಶಪಡಿಸಿ ೫೦ ಲಕ್ಷ ರೂಪಾಯಿ ದಂಡ ವಸೂಲು ಮಾಡಲಾಗಿದೆ. ಮಂಜೇಶ್ವರ ಕರಾವಳಿಗೆ ಹೊಂದಿಕೊಂಡು ಮೀನುಗಾರಿಕೆ ನಡೆಸಿದ ಕರ್ನಾಟಕ ಬೋಟನ್ನು ಫಿಶರೀಸ್ ಇಲಾಖೆ ಹಾಗೂ ಕುಂಬಳ, ಬೇಕಲ, ತೃಕ್ಕರಿಪುರ ಕರಾವಳಿ …