ಕಾಂಗ್ರೆಸ್ ಮುಖಂಡ ಜಿ. ರಾಮ್ ಭಟ್ರಿಗೆ ಅಂತಿಮ ನಮನ
ಮಂಜೇಶ್ವರ: ಅಗಲಿದ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಜಿ. ರಾಮ್ ಭಟ್ರಿಗೆ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿ ದರು. ಮೀಯಪದವಿನಲ್ಲಿ ಸಾರ್ವ ಜನಿಕ ದರ್ಶನದ ಬಳಿಕ, ಬೋರ್ಕಳದ ಸ್ವ-ಗೃಹದ ಸಮೀಪ ಅಂತ್ಯಕ್ರಿಯೆ ನಡೆಯಿತು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಮೀಂಜ ಪಂ. ಉಪಾಧ್ಯಕ್ಷ ಜಯರಾಮ ಬಲ್ಲಂ ಗುಡೇಲು, ಬ್ಲಾಕ್ ಪಂ. ಸದಸ್ಯ ರಾಧಾಕೃಷ್ಣ ಕೆ. ವಿ., ಮೀಯಪದವು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಘುನಾಥ ಕೋಮ್ಮಂಗಳ, ಹರ್ಷಾದ್ ವರ್ಕಾಡಿ, …