೯೦ ಕಿಲೋ ಗಾಂಜಾ ವಶ ಪ್ರಕರಣ: ಪರಾರಿಯಾದ ಆರೋಪಿ ಬಂಧನ

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ೯೦ ಕಿಲೋ ಗಾಂಜಾ ವಶ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಯನ್ನು ಪೊಲೀಸರು  ಬಂಧಿಸಿದ್ದಾರೆ. ಕುಬಣೂರು ನಿವಾಸಿ ಶೇಕ್ ಅಲಿ (೬೯) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈತನನ್ನು ಮಂಜೇಶ್ವರ ಸಿಐ ರಜೀಶ್ ನೇತೃತ್ವದ ಪೊಲೀಸರು ಮನೆಯಿಂದ ಸೆರೆಹಿಡಿದಿದ್ದಾರೆ. ಅಲ್ಲದೆ ಆರೋಪಿಯ ಒಂದು ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಬಂಧಿತ ಆರೋಪಿಗೆ ನ್ಯಾಯಾಲಯದಲ್ಲಿ ರಿಮಾಂಡ್ ವಿಧಿಸಿದೆ. ೨೦೨೩ ಅಕ್ಟೋಬರ್ ೧೫ ರಂದು ರಾತ್ರಿ ೧೦.೩೦ರ ವೇಳ ಮಂಜೇಶ್ವರ ಪೊಲೀಸರು ಬಾಯಿಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ …

ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ತಡೆದು ನಿಲ್ಲಿಸಿ ಹಾನಿ : ನರಹತ್ಯಾ ಯತ್ನ ಪ್ರಕರಣ ದಾಖಲಿಸಿ ಮೂವರ ಸೆರೆ

ಕಾಸರಗೋಡು: ನಿಲುಗಡೆಗೊಳಿಸುವಂತೆ ಕೈ ತೋರಿಸಿದರೂ ನಿಲ್ಲಿಸದೆ ಮುಂದಕ್ಕೆ ಸಾಗಿದ ಕೆಎಸ್‌ಆರ್‌ಟಿಸಿ ಮಿಂಚಿನ  ಸೇವೆಯ ಬಸ್ಸನ್ನು ಹಿಂಬಾಲಿಸಿ, ಅದನ್ನು ತಡೆದು ನಿಲ್ಲಿಸಿ ಹಾನಿಗೊಳಿಸಿದ ದೂರಿನಂತೆ ನೀಲೇಶ್ವರ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿ ಅದರಂತೆ ಮೂವರನ್ನು ಬಂಧಿಸಿದ್ದಾರೆ. ಮೊನ್ನೆ ರಾತ್ರಿ ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸೇವೆ ಆರಂಭಿಸಿದ ಕಾಸರಗೋಡು- ಕೋಟಯಂ ರೂಟಿನ ಕೆಎಸ್‌ಆರ್‌ಟಿಸಿಯ ಮಿಂಚಿನ ಸೇವಾ ಬಸ್ ಹೊಸದುರ್ಗ ಸೌತ್‌ಗೆ ತಲುಪಿದಾಗ ಅದನ್ನು ನಿಲ್ಲಿಸುವಂತೆ ಕೆಲವರು ಕೈಸನ್ನೆ ತೋರಿಸಿದರು. ಆದರೆ ಬಸ್ ನಿಲ್ಲದೆ ಮುಂದಕ್ಕೆ ಸಾಗಿದೆ. ಆಗ ಆ …

ಕೆ. ಸುರೇಂದ್ರನ್ ನೇತೃತ್ವದ ಎನ್.ಡಿ.ಎ ಪಾದಯಾತ್ರೆ ೨೭ರಂದು ಕಾಸರಗೋಡಿನಿಂದ

ಕಾಸರಗೋಡು: ಎನ್.ಡಿ.ಎ ರಾಜ್ಯ ಚೆಯರ್‌ಮೆನ್ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯುವ ಕೇರಳ ಪಾದಯಾತ್ರೆ ಈ ತಿಂಗಳ ೨೭ರಂದು ಕಾಸರಗೋಡಿನಿಂದ ಆರಂಭಗೊಳ್ಳಲಿದೆ. ಅಂದು ಸಂಜೆ ೩ ಗಂಟೆಗೆ ಪಾದ ಯಾತ್ರೆಯನ್ನು ತಾಳಿಪಡ್ಪು ಮೈದಾನದಲ್ಲಿ   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿಸುವರು. ಜಿಲ್ಲೆ, ರಾಜ್ಯ ನೇತಾರರ ಸಹಿತ ಹಲವರು ಭಾಗವಹಿ ಸಲಿದ್ದಾರೆ. ಅಂದು ಸಂಜೆ ಮೇಲ್ಪ ರಂಬದಲ್ಲಿ ಮೊದಲ ದಿನದ ಪಾದಯಾತ್ರೆ ಸಮಾಪ್ತಿಗೊಳ್ಳಲಿದೆ. ೨೭ರಂದು ಬೆಳಿಗ್ಗೆ ನೇತಾರರು ಮಧೂರು ಕ್ಷೇತ್ರ ದರ್ಶನ ನಡೆಸು ವುದ ರೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ …

ಕನ್ನಡಿಗರಿಗಾಗಿ ಕನ್ನಡ ಕಲಿಯಲು ಮುಂದಾದ ಜನಪ್ರತಿನಿಧಿಗಳು, ನೌಕರರು

ಮುಳಿಯಾರು: ಅಚ್ಚಕನ್ನಡ ಪ್ರದೇಶಗಳಲ್ಲಿ ಇತರ ಭಾಷೆಯ ಪಾರಮ್ಯವಾದಾಗ ಕನ್ನಡಿಗರಿಗೆ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಸರಕಾರಿ ಕಚೇರಿಗಳಲ್ಲಿ ಮಲಯಾಳ ಭಾಷೆಯ ನೌಕರರು ಇರುವ ಕಾರಣ ಮಲಯಾಳ ತಿಳಿಯದ ಗ್ರಾಮೀಣ ಭಾಗದ ಕನ್ನಡಿಗರಿಗೆ ತೀರಾ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯನ್ನು ಮನಗಂಡ ಮುಳಿಯಾರು ಪಂಚಾಯತ್‌ನ ಜನಪ್ರತಿನಿಧಿಗಳು, ಉದ್ಯೋಗಿಗಳು ಕನ್ನಡ ಕಲಿಯಲು ಮುಂದಾಗುತ್ತಿದ್ದಾರೆ. ಪಂಚಾಯತ್‌ನ ಮೂರು, ನಾಲ್ಕನೇ ವಾರ್ಡ್‌ಗಳಲ್ಲಿ ಕನ್ನಡಿಗರೇ ಇದ್ದು, ಇವರೊಂದಿಗೆ ಪಂಚಾಯತ್ ಅಧಿಕಾರಿಗಳಿಗೆ ಸಂವಹನ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಸೇವೆ ಕನ್ನಡಿಗರಿಗೂ ಸುಲಭದಲ್ಲಿ ಲಭ್ಯಗೊಳಿಸುವ ಉದ್ದೇಶವಿರಿಸಿ ಕನ್ನಡ ಕಲಿಯಲು …

ಸಮಸ್ಯೆ ಮುಗಿಯದ ಹೊಸಂಗಡಿ ರೈಲ್ವೇ ಗೇಟ್ ವಾಹನ ದಟ್ಟಣೆಯಿಂದ ಸಂಚಾರ ತಡೆ ಸಮಸ್ಯೆ

ಹೊಸಂಗಡಿ: ಪೇಟೆಯಲ್ಲಿರುವ ರೈಲ್ವೇ ಗೇಟ್ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಒಂದೆಡೆ ಹೆದ್ದಾರಿ ನಿರ್ಮಾಣದಿಂದಾಗಿ ರಸ್ತೆ ಅಗಲ ಕಿರಿದಾಗಿದ್ದು, ಸಂಚಾರ ತಡೆ ಮಧ್ಯೆ ಗೇಟ್ ಮುಚ್ಚಿದಾಗ ಪೇಟೆ ಉಸಿರುಗಟ್ಟುವ ಸ್ಥಿತಿಗೆ ತಲುಪುತ್ತಿದೆ. ರೈಲುಗಳು, ಗೂಡ್ಸ್ ರೈಲು ಸಂಚಾರ ವೇಳೆ ದಿನಕ್ಕೆ ಹೆಚ್ಚಿನ ಹೊತ್ತು ಹೊಸಂಗಡಿ ರೈಲ್ವೇ ಗೇಟ್ ಮುಚ್ಚಿರುತ್ತದೆ. ಒಮ್ಮೆ ಗೇಟ್ ಹಾಕಿದರೆ ಸುಮಾರು ೧೫ ನಿಮಿಷ ಕಳೆದು ಮತ್ತೆ ತೆರೆಯಲಾಗುತ್ತಿದೆ. ಇದರಿಂದ ಮಂಜೇಶ್ವರ ಒಳಪೇಟೆಗೆ ತೆರಳುವ ವಾಹನಗಳು, ಅಲ್ಲಿಂದ ಹೊಸಂಗಡಿ ಬರುವ ವಾಹನಗಳು ಗೇಟ್ ಮುಂಭಾಗ …

ಅಡೂರು ಉಮೇಶ ನಾಯ್ಕ್‌ರಿಗೆ ಕ.ಸಾ.ಪ.ದ ಗೃಹಸನ್ಮಾನ ಗೌರವ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಕನ್ನಡ ಕಾಯಕದ ಕಟ್ಟಾಳು ಅಡೂರು ಉಮೇಶ ನಾಯ್ಕ್ರನ್ನು ಮನೆಗೆ ತೆರಳಿ ಅಭಿನಂದಿಸಲಾಯಿತು. ಕ.ಸಾ.ಪದ ವತಿಯಿಂದ ಹಿರಿಯ ಕನ್ನಡ ಕಟ್ಟಾಳುಗಳಿಗೆ ಗೃಹಸನ್ಮಾನ ಗೌರವಾಭಿನಂದನೆ ಸಲ್ಲಿಸಿ, ಅವರ ಬದುಕನ್ನು ದಾಖಲಿಸುವ ಯೋಜನೆಯಿದ್ದು, ತದಂಗವಾಗಿ ಅಡೂರು ಉಮೇಶ ನಾಯ್ಕ್ ಮನೆಗೆ ತೆರಳಲಾಯಿತು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅವರ ಆಶಯದಂತೆ ಈ ಅಭಿಯಾನ ನಡೆಯಲಿದೆ. ಅಡೂರು ಉಮೇಶ ನಾಯ್ಕ್ ಹಾಗೂ ಅವರ ಪತ್ನಿ ಕನ್ನಡ …

ಹೊಸಂಗಡಿಯಲ್ಲಿ ತಪಾಸಣಾ ಕೇಂದ್ರವಿಲ್ಲ: ಪರ್ಯಾಯವಾಗಿ  ಅಂತಾರಾಷ್ಟ್ರೀಯ ಮಟ್ಟದ ದಾರಿ ವಿಶ್ರಾಂತಿ ಕೇಂದ್ರ ನಿರ್ಮಾಣ

ಮಂಜೇಶ್ವರ: ಸಮನ್ವಿತ ವಾಹನ ತಪಾಸಣಾ ಕೇಂದ್ರಕ್ಕಾಗಿ  ಹೊಸಂಗಡಿ ಯಲ್ಲಿ ಮೀಸಲಿರಿಸಿದ ಪ್ರದೇಶದಲ್ಲಿ ಅದರ ಬದಲು ದಾರಿ ವಿಶ್ರಾಂತಿ ಕೇಂದ್ರ ಸ್ಥಾಪಿಸುವ ಬೃಹತ್ ಯೋ ಜನೆಗೆ ರಾಜ್ಯ ಸರಕಾರ ರೂಪು ನೀಡಿದೆ. ನಿನ್ನೆ ಸೇರಿದ ರಾಜ್ಯ ಸಚಿವ ಸಂಪುಟ ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾ ಗಿದೆ. ಇದಕ್ಕೆ ಅಗತ್ಯದ ಭೂಮಿ ಹಸ್ತಾಂತರವೂ ಈಗಾಗಲೇ ನಡೆದಿದೆ. ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸಂಪ್ರ ದಾಯ ಜ್ಯಾರಿಗೊಂಡ ಹಿನ್ನೆಲೆಯಲ್ಲಿ ಹೊಸಂಗಡಿಗೆ ಸಮೀಪ ಈ ಹಿಂದೆ ಕಾರ್ಯವೆಸಗುತ್ತಿದ್ದ ಮಾರಾಟ ತೆರಿಗೆ ವಸೂಲಿ …

ಅಣಂಗೂರಿನಲ್ಲಿ ಫಸ್ಟ್ ನ್ಯೂರೋ ಕಾಂಪ್ರಹೆನ್ಸಿವ್ ನ್ಯೂರೋಸೈನ್ಸ್ ಸೆಂಟರ್ ಉದ್ಘಾಟನೆ ನಾಳೆ

ವಿದ್ಯಾನಗರ: ಅಣಂಗೂರಿನಲ್ಲಿ ಫಸ್ಟ್ ನ್ಯೂರೋ ಕಾಂಪ್ರಹೆನ್ಸಿವ್ ನ್ಯೂರೋ ಸೈನ್ಸ್ ಸೆಂಟರ್ ನಾಳೆ ಉದ್ಘಾಟನೆಗೊಳ್ಳಲಿದೆ. ಸಂಜೆ ೫ ಗಂಟೆಗೆ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಉತ್ತರ ಕೇರಳದಲ್ಲಿ ಈ ರೀತಿಯ ಚಿಕಿತ್ಸಾ ಸೌಲಭ್ಯ ಮೊತ್ತಮೊದಲಾಗಿದೆಯೆಂದು ಪತ್ರಿಕಾಗೋಷ್ಠಿಯಲ್ಲಿ ನ್ಯೂರಾಲಜಿಸ್ಟ್ ಡಾ| ಮೊಹಮ್ಮದ್ ಶಮೀಮ್ ಕಟ್ಟತ್ತಡ್ಕ ತಿಳಿಸಿದ್ದಾರೆ. ರಂಜಿತ್ ಶೆಟ್ಟಿ,ಸಂಪತ್ತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಇತರ ಶಾಸಕರು, ನಗರಸಭಾ ಉಪಾಧ್ಯಕ್ಷೆ, ಜಿ.ಪಂ. ಅಧ್ಯಕ್ಷೆ, ಜಿಲ್ಲಾಧಿಕಾರಿ ಸಹಿತ ಹಲವು ಜನಪ್ರತಿನಿಧಿಗಳು ಭಾಗವಹಿಸುವರು. ಆಸ್ಪತ್ರೆಯಲ್ಲಿ ಡಾ| ಮೊಹಮ್ಮದ್ ಶಮೀಮ್ ಕಟ್ಟತ್ತಡ್ಕ, ಡಾ| ಶೃತಿ …

ಮೊಗವೀರಪಟ್ನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ೫೬ನೇ ವಾರ್ಷಿಕ ಏಕಾಹ ಭಜನೆ ಆರಂಭ

ಉಪ್ಪಳ: ಉಪ್ಪಳ ಸಮೀಪದ ಮೊಗವೀರ ಪಟ್ನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ೫೬ನೇ ವಾರ್ಷಿಕ ಏಕಾಹ ಭಜನೆ ಮತ್ತು ಪುನರ್ ಪ್ರತಿಷ್ಠಾ ದಿನಾಚರಣೆ ಹಾಗೂ ಶ್ರೀ ನಾಗದೇವರ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮ ಇಂದಿನಿAದ ಆರಂಭ ಗೊಂಡಿದ್ದು ನಾಳೆ ಸಮಾಪ್ತಿಗೊಳ್ಳಲಿದೆ. ಇಂದು ಸೂರ್ಯೋದಯಕ್ಕೆ ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ಎಂ.ಕುಟ್ಟಿಕೃಷ್ಣನ್ ಗುರುಸ್ವಾಮಿ ದೀಪ ಪ್ರಜ್ವಲನೆಗೊಳಿಸಿ ಏಕಾಹ ಭಜನೆಗೆ ಚಾಲನೆ ನೀಡಿದರು ಬಳಿಕ ಆಶ್ಲೇಷ ಬಲಿ, ಶುದ್ದಿ ಕಲಶ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ೭ಕ್ಕೆ ದುರ್ಗಾನಮ …

ಕೇರಳ ಬ್ಯಾಂಕ್‌ನ ಕೊಡುಗೆ: ನಿಧನ ಹೊಂದಿದ ವಿಶ್ವನಾಥ ಗಟ್ಟಿಯವರ ಕುಟುಂಬಕ್ಕೆ ಮನೆ ಹಸ್ತಾಂತರ ನಾಳೆ

ಕುಂಬಳೆ: ಕೇರಳ ಬ್ಯಾಂಕ್ ಕುಂಬಳೆ ಬ್ರಾಂಚ್‌ನ ದೈನಂದಿನ ಠೇವಣಿ ಸಂಗ್ರಹಗಾರರಾಗಿದ್ದ ವೇಳೆ ಮೃತಪಟ್ಟ ಕುಂಡಾಪು ವಿಶ್ವನಾಥ ಗಟ್ಟಿಯವರ ಕುಟುಂಬಕ್ಕೆ ಚೌಕಿ ಕಲ್ಲಂಗೈಯಲ್ಲಿ ಬ್ಯಾಂಕ್ ನಿರ್ಮಿಸಿದ ಮನೆಯ ಕೀಲಿ ಕೈ ಹಸ್ತಾಂತರ, ಕುಟುಂಬ ಸಹಾಯಧನ ಹಸ್ತಾಂತರ ನಾಳೆ ನಡೆಯಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಜಿಲ್ಲೆಯ ಬ್ಯಾಂಕ್‌ನ ನೌಕರರೆಲ್ಲ ಸೇರಿ ಸಂಗ್ರಹಿಸಿದ ಮೊತ್ತದಿಂದ ೧೧ ಲಕ್ಷ ರೂ. ವೆಚ್ಚದಲ್ಲಿ ಸ್ನೇಹಮನೆ ನಿರ್ಮಿಸಲಾಗಿದೆ. ಕೇರಳ ಬ್ಯಾಂಕ್‌ನ ನೌಕರರು ಮೊದಲ ಬಾರಿ ಕಾರುಣ್ಯ ಚಟುವಟಿಕೆಯಲ್ಲಿ ಮನೆ ನಿರ್ಮಿಸಿ ನೀಡಿದ್ದಾರೆ. ನಾಳೆ …