ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಯೂನಿಯನ್ ಮಂಜೇಶ್ವರ ಘಟಕ ವಾರ್ಷಿಕ ಮಹಾಸಭೆ

ಮಂಜೇಶ್ವರ: ಕೇರಳ ಸ್ಟೇಟ್ ಸರ್ವೀಸ್ ಪೆನ್ಶನರ್ಸ್ ಯೂನಿಯನ್ ಮಂಜೇಶ್ವರ ಘಟಕದ ವಾರ್ಷಿಕ ಮಹಾಸಭೆ ಹೊಸಂಗಡಿ ಶ್ರೀ ನಿತ್ಯಾನಂದ ಧ್ಯಾನ ಮಂದಿರದಲ್ಲಿ ಘಟಕದ ಅಧ್ಯಕ್ಷೆ ಸುಲೋಚನಾ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲಾ ಕೋಶಾಧಿಕಾರಿ ಗೋಪಾಲಕೃಷ್ಣನ್ ಉಧ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ರವಿಚಂದ್ರ ಉದ್ಯಾವರ, ಕಾರ್ಯದರ್ಶಿ ಶೀನಪ್ಪ ಪೂಜಾರಿ ಅಲಾರ್ ದುರ್ಗಿಪಳ್ಳ,ಮಾಜಿ ಅಧ್ಯಕ್ಷ ಭಾಟಿಯಾ, ಬ್ಲೋಕ್ ಉಪಾಧ್ಯಕ್ಷ ರವೀಂದ್ರನಾಥ್ ನಾಯಕ್ ಶೇಣಿ, ಭಾಸ್ಕರ ರಾವ್ ಕೆಡೆಂಜಿ ಉಪಸ್ಥಿತರಿದ್ದರು.ಘಟಕದ ಕಾರ್ಯದರ್ಶಿ ಶಶಿಕಲಾ ಸ್ವಾಗತಿಸಿದರು. ಪಿಂಚಣಿದಾರರ ಸವಲತ್ತುಗಳನ್ನು ತಡೆಹಿಡಿದ ಕೇರಳ ಸರಕಾರದ ಧೋರಣೆಗಳನ್ನು ಮುಖಂಡರು …

ವರ್ಕಾಡಿ: ಕೆಪಿಸಿಸಿ ನಿಧಿ ಸಂಗ್ರಹಕ್ಕೆ ಚಾಲನೆ

ಮಂಜೇಶ್ವರ: ಕೆ.ಪಿ.ಸಿ.ಸಿ.ಆಶ್ರ ಯದಲ್ಲಿ ನಡೆಯಲಿರುವ ಸಮರಾಗ್ನಿ ಜನಾಂದೋಲನ ಕಾರ್ಯಕ್ರಮದ ಪ್ರಯುಕ್ತ ವರ್ಕಾಡಿ ಮಂಡಲದಲ್ಲಿ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವರ್ಕಾಡಿ ಮಂಡಲ ಕಾರ್ಯ ದರ್ಶಿ ಅಬೂಬಕ್ಕರ್ ಬೋರ್ಕಳ ರಿಂದ ಮೊದಲ ಕೊಡುಗೆ ಸ್ವೀಕರಿ ಸುವ ಮೂಲಕ ಡಿ.ಸಿ.ಸಿ. ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಕಾರ್ಯ ಕ್ರಮದ ಉದ್ಘಾಟನೆ ನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ, ನೇತಾರರಾದ ಅಜೀಜ್ ಕಲ್ಲೂರು, ಉಮ್ಮರ್ ಪಾಲೆಂಗ್ರಿ, ಮುಹಮ್ಮದ್ ಮಜಾಲ್, ಗಣೇಶ್ ಪಾವೂರು, ಸಲಾಂ ಮಾಂಕೋಡಿ ಉಪಸ್ಥಿತರಿದ್ದರು

ವಿಪಕ್ಷ ಸೇವಾ ಸಂಘಟನೆಗಳಿಂದ ಇಂದು ಮುಷ್ಕರ

ಕಾಸರಗೋಡು: ಸರಕಾರಿ ನೌಕರರ ಕ್ಷಾಮಭತ್ತೆ ಸಹಿತ ಸೌಲಭ್ಯಗಳನ್ನು ಮಂಜೂರು ಮಾಡದಿರುವುದನ್ನು ಪ್ರತಿಭಟಿಸಿ ವಿಪಕ್ಷ ಸೇವಾ ಸಂಘಟನೆಗಳು ಇಂದು ಮುಷ್ಕರ ನಡೆಸುತ್ತಿವೆ. ಇದರಿಂದ ಸರಕಾರಿ ಕಚೇರಿಗಳಲ್ಲಿ ಇಂದು ನೌಕರರ ಸಂಖ್ಯೆ ಭಾರೀ ಕಡಿಮೆ ಇರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಕಚೇರಿಗಳಲ್ಲಿ ಹಾಜರಾಗದವರ ವಿರುದ್ಧ ಸರಕಾರ ಡಯಾಸ್ನೋನ್  ಘೋಷಿಸಿದೆ.

ಖ್ಯಾತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಇನ್ನಿಲ್ಲ

ಬಾಯಾರು: ಖ್ಯಾತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (೮೨) ನಿನ್ನೆ ರಾತ್ರಿ ನಿಧನ ಹೊಂದಿದರು. ಯಕ್ಷಗಾನದ ಪರಂಪರಾಗತ ಕೊಂಡಿಯೊಂದು ಇವರ ನಿಧನದಿಂದ ಕಳಚಿದಂತಾ ಗಿದೆ. ಕಂಚಿನ ಕಂಠ, ಶ್ರುತಿಬದ್ಧ ಮಾತು, ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದ ಇವರು ಸುಮಾರು ೫೦ ವರ್ಷಕ್ಕೂ ಅಧಿಕ ಯಕ್ಷಗಾನ ಮೇಳಗಳಲ್ಲಿ ಸೇವೆ ಗೈದಿದ್ದಾರೆ. ಧರ್ಮಸ್ಥಳ, ಕಟೀಲು, ಕುಂಡಾಪು, ಕುಂಬಳೆ, ಕದ್ರಿ, ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಸೇವೆಗೈದ ಇವರು ವಿವಿಧ ಕಥಾಪಾತ್ರಗಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಕನ್ನಡ ಪೌರಾಣಿಕ ಪ್ರಸಂಗಗಳಲ್ಲಿ ಹಿರಣ್ಯಕಶಿಪು, …

ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ನಾಳೆಯಿಂದ

ತಿರುವನಂತಪುರ: ಈ ವರ್ಷದ ಮೊದಲ ವಿಧಾನಸಭಾ ಅಧಿವೇಶನ ನಾಳೆ ಆರಂಭಗೊಳ್ಳಲಿದ್ದು, ಮಾರ್ಚ್ ೨೭ರ ತನಕ ಮುಂದುವರಿಯಲಿದೆ. ೨೦೨೪-೨೫ನೇ ಆರ್ಥಿಕ ವರ್ಷದ ರಾಜ್ಯ ಮುಂಗಡ ಪತ್ರ (ಬಜೆಟ್)ನ್ನು ಫೆಬ್ರವರಿ ೨೫ರಂದು ಕೆ.ಎಸ್. ಬಾಲಗೋಪಾಲನ್ ವಿಧಾನಸಭೆಯಲ್ಲಿ ಮಂಡಿಸುವರು. ಆಧ್ಯಾದೇಶಗಳ ಪರ‍್ಯಾಯವಾಗಿ ಮೂರು ಸೇರಿದಂತೆ ಒಟ್ಟು ಎಂಟು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅನುಮೋದನೆಗಾಗಿ ಮಂಡಿಸಲಾಗುವುದು. ನಾಳೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್‌ರ ಭಾಷಣದೊಂದಿಗೆ ಬಜೆಟ್ ಅಧಿವೇಶನಕ್ಕೆ ಚಾಲನೆ ದೊರಕಲಿದೆ. ಜನವರಿ ೨೯ರಿಂದ ೩೧ರ ತನಕ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ. ಬಳಿಕ …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಮೃತ್ಯು

ಉಪ್ಪಳ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಮೃತಪಟ್ಟರು.ಐಲ ಮೈದಾನ ಬಳಿಯ ನಿವಾಸಿ  ಧನಂಜಯ (೪೭) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಮನೆ ಪರಿಸರದಲ್ಲಿ ಬೇಕರಿ ವ್ಯಾಪಾರಿಯಾಗಿ ದ್ದರು. ಒಂದು ವಾರ ಹಿಂದೆ ಇವರು ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದರು. ಈ ಹಿನ್ನೆಲೆಯಲ್ಲಿ  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಮೃತರು ಪತ್ನಿ ಸುನಿತ, ಮಕ್ಕಳಾದ ಅಂಜಲಿ, ನಿಖಿಲ್, ಸಹೋದರ-ಸಹೋದರಿಯರಾದ ರವಿಚಂದ್ರ, ಲಲಿತ, ನಳಿನಿ ಹಾಗೂ …

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಾಮಗ್ರಿ ಕಳವು: ಇಬ್ಬರ ಸೆರೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸಗಳಿಗಾಗಿ ತಂದಿಳಿಸಲಾಗಿದ್ದ ಸಾಮಗ್ರಿಗಳನ್ನು ಕಳವುಗೈದ ತಂಡದ ಇಬ್ಬರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳಾದ ಅಬೇದ್ ಅಲಿ, (೩೯) ಮತ್ತು ಅನ್ವರ್ ಹುಸೈನ್ (೪೦) ಬಂಧಿತರಾದ ಆರೋಪಿಗಳಾಗಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆಯ ಎಸ್.ಐ. ಕೆ.ಪಿ. ಸತೀಶ್‌ರ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ. ಹೊಸದುರ್ಗ ಚಮ್ಮಟ್ಟಂಬೈಲ್ ಟ್ರೆಂಡಿಂಗ್ ಗ್ರಾಂಡ್ ಬಳಿ ಇರಿಸಲಾಗಿದ್ದ ನಿರ್ಮಾಣ ಸಾಮಗ್ರಿಗಳನ್ನು ಆರೋಪಿಗಳು ಕದ್ದು ಸಾಗಿಸಿರುವುದಾಗಿಯೂ, ಅದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಬ್ಬಿಣದ  ಕೊಳವೆಗಳು, ನಿರ್ಮಾಣ …

ರಾಜ್ಯದಲ್ಲಿ ೨.೭೦ ಕೋಟಿ ಮತದಾರರು: ಮಹಿಳೆಯರದ್ದೇ ಮೇಲುಗೈ

ಕಾಸರಗೋಡು: ಲೋಕಸಭಾ ಚುನಾವಣೆ ಎಪ್ರಿಲ್ ೧೬ರಿಂದ ಆರಂಭಗೊಳ್ಳುವ ನಿರೀಕ್ಷೆಯಿದ್ದು ಅದಕ್ಕೆ ಹೊಂದಿಕೊಂಡು ಕೇಂದ್ರ ಚುನಾವಣಾ ಆಯೋಗ ಮತದಾರ ಯಾದಿ ಪ್ರಕಟಿಸಿದೆ. ಇದರಂತೆ ರಾಜ್ಯದಲ್ಲಿ ೨.೭೦ ಕೋಟಿ ಮತದಾರರಿದ್ದು, ಅದರಲ್ಲಿ ಮಹಿಳೆಯರೇ ಪ್ರಾಬಲ್ಯ ಪಡೆದಿದ್ದಾರೆ. ರಾಜ್ಯದಲ್ಲಿ ೨,೭೦,೯೯,೩೨೬ ಮತದಾರರಿದ್ದು ಅದರಲ್ಲಿ ಗಂಡಸರು ೧,೩೧,೦೨,೨೮೮,  ಮಹಿಳೆಯರು ೧,೩೯,೯೬,೭೨೯   ಮಂಗಳಮುಖಿ ಯರು ೩೦೯, ವಿಕಲಚೇತನರು ೨,೬೨,೨೧೩, ಯುವ ಮತದಾರರು (೧೮ರಿಂದ ೧೯ರ ಮಧ್ಯೆ ಪ್ರಾಯದವರು) ೨,೮೮,೫೩೩, ಹಿರಿಯ ನಾಗರಿಕರು (೬೦ ವರ್ಷ ದಾಟಿದವರು) ೬,೫೯,೨೨೭,  ಅನಿವಾಸಿ ಕೇರಳೀಯರು ೮೮,೨೨೮ ಒಳಗೊಂಡಿದ್ದಾರೆ. ಮಹಿಳೆಯರು …

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಸೌಖ್ಯ ಕಾಣಿಸಿಕೊಂಡ ವ್ಯಕ್ತಿ ಆಸ್ಪತ್ರೆಗೆ ತೆರಳುತ್ತಿದ್ದಂತೆ ಮೃತ್ಯು

ಉಪ್ಪಳ: ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದಾಗ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧದಲ್ಲೇ ಇಳಿದು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ  ತೆರಳುತ್ತಿ ದ್ದಂತೆ ವ್ಯಕ್ತಿ ಮೃತಪಟ್ಟ ಘಟನೆ ನಡೆ ದಿದೆ. ಹೊಸಂಗಡಿ ಬಳಿಯ ವಾಮಂ ಜೂರು ನಿವಾಸಿ ದಿ| ಬಡುವನ್ ಕುಂಞಿಯವರ ಪುತ್ರ ಅಬ್ದುಲ್ ಹಮೀದ್ (೪೯) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಇವರು ಮನೆ ಯಿಂದ ಸಹೋದರ ಮೊಹಮ್ಮದ್ ಅಶ್ರಫ್‌ರೊಂದಿಗೆ ಕುಂಬಳೆಗೆ ತೆರಳಲೆಂದು  ಬಸ್‌ನಲ್ಲಿ ಪ್ರಯಾಣಿ ಸಿದ್ದಾರೆ. ಆರಿಕ್ಕಾಡಿಗೆ ತಲುಪಿದಾಗ ಅಬ್ದುಲ್ ಹಮೀದ್‌ರಿಗೆ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಆದ್ದರಿಂದ ಕೂಡಲೇ …

ಅಸೌಖ್ಯ ಬಾಧಿಸಿ ಸಂಕಷ್ಟ ಎದುರಿಸುವ ತಂದೆ, ಪುತ್ರ ನಾಗರಿಕರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲು

ಪೈವಳಿಕೆ: ಅಸೌಖ್ಯ ಬಾಧಿಸಿ ಸಂಕಷ್ಟ ಅನುಭವಿಸುತ್ತಿದ್ದ ತಂದೆ ಹಾಗೂ ಪುತ್ರನ್ನು ನಾಗರಿಕರು ಸೇರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ದಳಿಕುಕ್ಕು ನಿವಾಸಿ ನಾರಾಯಣ (೭೫) ಹಾಗೂ ಪುತ್ರ ವಿನೋದ್ (೨೯) ಎಂಬಿವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ನಾರಾಯಣ  ಹಾಗೂ ಪುತ್ರ ವಿನೋದ್  ಮಾತ್ರವೇ ಮನೆಯಲ್ಲಿ ವಾಸವಾಗಿದ್ದರು. ವಿನೋದ್ ಹಲವು ವರ್ಷಗಳಿಂದ ಅಸೌಖ್ಯ ಬಾಧಿತನಾಗಿದ್ದಾನೆನ್ನ ಲಾಗಿದೆ. ನಾರಾಯಣರಿಗೆ ಕೆಲವು ದಿನಗಳಿಂದ ಆರೋಗ್ಯ ಹದಗೆಟ್ಟಿದೆ.  ಇದರಿಂದ ಈ ಇಬ್ಬರು ಸಂಕಷ್ಟ ಮಯ ಜೀವನ ಸಾಗಿಸುತ್ತಿರುವುದು ನಾಗರಿಕರ ಅರಿವಿಗೆ …