ಕಲೆಕ್ಟರೇಟ್‌ನಲ್ಲಿ ಮಹಿಳಾ ಆಯೋಗದ ಅದಾಲತ್: ೭ ದೂರುಗಳಿಗೆ ಪರಿಹಾರ

ಕಾಸರಗೋಡು: ಕಲೆಕ್ಟರೇಟ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಅದಾಲತ್‌ನಲ್ಲಿ ೨೭ ದೂರುಗಳನ್ನು ಪರಿಗಣಿಸಲಾಗಿದೆ. ಮಹಿಳಾ ಆಯೋಗದ   ನ್ಯಾಯವಾದಿ ಎ. ಕುಂಞಾಯಿಸ ಭಾಗವಹಿಸಿದ್ದರು. ೨೭ ದೂರುಗಳಲ್ಲಿ ೭ ದೂರಿಗೆ ಮುಂದಿನ ಅದಾಲತ್‌ಗೆ ಮುಂದೂಡಲಾಗಿದೆ. ಬಳಿಕ  ಮಾತನಾಡಿದ ಕುಂಞಾಯಿಸ ಯುವಜನರ ಮಧ್ಯೆ ಕುಟುಂಬ ಸಂಬಂಧಗಳು ಶಿಥಿಲವಾಗುತ್ತಿದೆ ಎಂದೂ ವಿವಾಹ ವಿಮೋಚನೆಗಿರುವ ಹಂಬಲ ಹೆಚ್ಚುತ್ತಿದೆಯಂದೂ, ಇದರ ವಿರುದ್ಧ ಆಯೋಗದ ನೇತೃತ್ವದಲ್ಲಿ ವಿವಾಹಪೂರ್ವ ಕೌನ್ಸಿಲಿಂಗ್‌ಗಳನ್ನು ನಡೆಸಲಾಗುತ್ತಿದೆಯೆಂದು  ಅವರು ನುಡಿದರು. ಅದಾಲತ್‌ನಲ್ಲಿ ನ್ಯಾಯವಾದಿ ಶೀಬ, ಸಿ.ಎ. ಸೀತಾ, ಜಯಶ್ರೀ , ರಮ್ಯ, ಬೈಜು, ಶ್ರೀಧರನ್, ಶ್ರೀಹರಿ …

ಮೊಬೈಲ್ ಡೆಮೋನ್‌ಸ್ಟ್ರೇಶನ್ ವ್ಯಾನ್‌ಗೆ ಚಾಲನೆ

ಕಾಸರಗೋಡು: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಇವಿಎಂವಿವಿ ಪ್ಯಾಟ್ ಯಂತ್ರಗಳನ್ನು ಬಳಸಿ ಮತದಾನ ಮಾಡುವುದು ಸೇರಿದಂತೆ ಮತದಾರರಲ್ಲಿ ಚುನಾವಣಾ ಜಾಗೃತಿ ಮೂಡಿಸಲು ಚೀಫ್ ಇಲೆಕ್ಟರಲ್ ಆಫೀಸರ್‌ರವರ ನಿರ್ದೇಶನವಿರುವ ಮೊಬೈಲ್ ಡೆಮೋಸ್ಟ್ರೇಶನ್ ವ್ಯಾನ್ ಜಿಲ್ಲೆಗೆ ತಲುಪಿದೆ. ಸಬ್ ಕಲೆಕ್ಟರ್ ಸುಫಿಯಾನ್ ಅಹಮ್ಮದ್ ಫ್ಲಾಗ್ ಆಫ್ ಮಾಡಿದರು. ನೆಟ್ಟಣಿಗೆ ಬಜ ಮಾಡೆಲ್ ಕಾಲೇಜ್ ಆಫ್  ಆರ್ಟ್ಸ್  ಆಂಡ್ ಸಯನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಆಫೀಸರ್ ಟಿ.ಟಿ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬೆನೆಟ್ ಥಾiಸ್ …

ಗಣರಾಜ್ಯೋತ್ಸವ ದಿನಾಚರಣೆ ಸಚಿವೆ ಡಾ. ಬಿಂದುರಿಂದ ಧ್ವಜವಂದನೆ

ಕಾಸರಗೋಡು: ಜಿಲ್ಲೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದೆ. ಪರೇ ಡ್‌ನಲ್ಲಿ ಉನ್ನತ ಶಿಕ್ಷಣ ಸಾಮಾಜಿಕ ನೀತಿ ಇಲಾಖೆ ಸಚಿವೆ ಡಾ. ಆರ್. ಬಿಂದು ಧ್ವಜ ವಂದನೆ ಸ್ವೀಕರಿಸುವರು. ವಿದ್ಯಾನಗರ ನಗರಸಭಾ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ೨೦ಪ್ಲಾಟೂನ್‌ಗಳು ಪರೇಡ್‌ನಲ್ಲಿ ಭಾಗವಹಿಸಲಿವೆ. ಲೋಕಲ್ ಪೊಲೀಸ್, ಮಹಿಳಾ ಪೊಲೀಸ್, ಸಶಸ್ತ್ರ ಪೊಲೀಸ್, ಅಬಕಾರಿ, ಎನ್‌ಸಿಸಿ, ಸ್ಕೌಟ್ ಆಂಡ್ ಗೈಡ್ಸ್, ಸ್ಟುಡೆಂಟ್ ಪೊಲೀಸ್ ಕೆಡೆಟ್, ಆಪ್ತಮಿತ್ರ, ಸಿವಿಲ್ ಡಿಫೆನ್ಸ್, ನವೋದಯ ಸ್ಕೂಲ್, ಜೈಮಾತಾ ಸ್ಕೂಲ್ ಎಂಬಿವುಗಳ ಬ್ಯಾಂಡ್ ಮೇಳ ಪರೇಡ್‌ನಲ್ಲಿ ಭಾಗವಹಿಸಲಿದೆ. ೨೬ರಂದು …

ಕೆ.ಎಸ್.ಟಿ.ಎ. ಮಂಜೇಶ್ವರ ತಾಲೂಕು ಸಮ್ಮೇಳನ

ಉಪ್ಪಳ: ಕೇರಳ ಸೆ್ಟÃಟ್ ಟೈಲರ್ಸ್ ಅಸೋಸಿಯೇಶನ್ ಮಂಜೇಶ್ವರ ತಾಲೂಕು ಸಮ್ಮೇಳನ ನಿನ್ನೆ ಪೆರ್ಲ ಪಡ್ರೆ ಸಭಾ ಭವನದಲ್ಲಿ ನಡೆಯಿತು. ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ರಾಜ್ಯ ಅಧ್ಯಕ್ಷ ರಾಮನ್ ಚೆನ್ನಿಕರೆ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಪಿಯು ಶಂಕರನ್, ರಾಜ್ಯ ಸಮಿತಿ ಸದಸ್ಯ ಮೋಹನ್‌ದಾಸ್ ಕುಂಬಳೆ, ಜಿಲ್ಲಾಧ್ಯಕ್ಷ ಸುರೇಶ್ ಭಟ್, ರಾಜ್ಯ ಸಮಿತಿ ಮÁಜಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್ ಪಾವೂರು, ನಾರಾಯಣ ಕುಂಬಳೆ, ಚಂದ್ರನ್ ಪೆರ್ಲ, …

ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಜ.೨೮ರಿಂದ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷಾವಧಿ ಕಳಿಯಾಟ ಮಹೋತ್ಸವ 28ರಿಂದ ಫೆ.1ರತನಕ ನಡೆಯಲಿದೆ. 27ರಂದು ಸಂಜೆ 4ಕ್ಕೆ ಚಪ್ಪರ ಮುಹೂರ್ತ, 28ರಂದು ಬೆಳಿಗ್ಗೆ 11ಕ್ಕೆ ನಾಗತಂಬಿಲ,ಸAಜೆ 6ರಿಂದ ಭಜನೆ, ರಾತ್ರಿ 8ಕ್ಕೆ ಭಂಡಾರ ಆಗಮನ, 10ಕ್ಕೆ ನಡಾವಳಿ ಉತ್ಸವ, 29ರಂದು ಬೆಳಿಗ್ಗೆ 10ಕ್ಕೆ ಪುಲ್ಲೂರು ಕಣ್ಣನ್ ದೈವದ ವೆಳ್ಳಾಟಂ, ಮಧ್ಯಾಹ್ನ 12ರಿಂದ ಕಾಳಪುಲಿಯನ್ ದೈವದ ವೆಳ್ಳಾಟಂ, ಪುಲಿಕಂಡನ್ ದೈವದ ವೆಳ್ಳಾಟಂ, ಸಂಜೆ 3ಕ್ಕೆ ವಿಷ್ಣುಮೂರ್ತಿ ದೈವದ ತೊಡಂಗಲ್, 4ಕ್ಕೆ ಕರೀಂದ್ರನ್ ದೈವದ ವೆಳ್ಳಾಟಂ, ಕೆಂಡಸೇವೆ, ಬಲಿ, …

ತಿರುವನಂತಪುರದಲ್ಲಿ ಮೃತಪಟ್ಟ ಬಂಬ್ರಾಣ ನಿವಾಸಿಯ ಮೃತದೇಹ ಅಂತ್ಯ ಸಂಸ್ಕಾರ

ಕುಂಬಳೆ: ತಿರುವನಂತಪುರದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ  ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟ ಯುವಕನ ಮೃತದೇಹವನ್ನು ಊರಿಗೆ ತಲುಪಿಸಿ ಹಲವರ ಅಂತಿಮ ನಮನದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಬಂಬ್ರಾಣ ಅಂಡಿತ್ತಡ್ಕದ ದಿ| ಪಳ್ಳಿಕುಂಞಿಯವರ ಪುತ್ರ ಅಪ್ಸಲ್ (೨೭)ರ ಮೃತದೇಹವನ್ನು ಇಂದು ಬೆಳಿಗ್ಗೆ ೬.೩೦ರ ವೇಳೆ ಬಂಬ್ರಾಣ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಎರಡು ದಿನಗಳ ಹಿಂದೆ ಅಪ್ಸಲ್ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರು. ಪ್ರಾಥಮಿಕ ತಪಾಸಣೆಯಲ್ಲಿ ಗಂಭೀರ ಗಾಯವಿಲ್ಲವೆಂದು ತಿಳಿಸಿ ಆಸ್ಪತ್ರೆಯಿಂದ ಕಳುಹಿಸಲಾಗಿತ್ತು. …

ಬದಿಯಡ್ಕ ಶಬರಿಗಿರಿಯಲ್ಲಿ ಶ್ರೀರಾಮ ದೀಪೋತ್ಸವ

ಬದಿಯಡ್ಕ: ಬದಿಯಡ್ಕ ಶಬರಿ ಗಿರಿಯಲ್ಲಿ ನೂತನವಾಗಿ ನಿರ್ಮಾಣ ಗೊಳ್ಳಲಿರುವ ಶ್ರೀ ಅಯ್ಯಪ್ಪ ಮಂದಿರ ದಲ್ಲಿ ಅಯ್ಯಪ್ಪ ಸೇವಾಟ್ರಸ್ಟ್, ಶಬರಿಗಿರಿ ಮಹಿಳಾ ಸಮಿತಿ, ಶ್ರೀರಾಮ ಭಕ್ತವೃಂದ ಇವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ದಿನ ಸಂಜೆ ದೀಪೋತ್ಸವ, ಭಜನೆ ನಡೆಯಿತು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ಮಾಸ್ಟರ್ ಧಾರ್ಮಿಕ ಭಾಷಣ ಮಾಡಿದರು. ಕರಸೇವೆಯಲ್ಲಿ ಪಾಲ್ಗೊಂಡ 15 ಮಂದಿಯನ್ನು ಗೌರವಿಸಲಾಯಿತು. ನಿದಿs ಕೂಪನ್ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. …

ಕಾನ ಮಠದಲ್ಲಿ ದೇವಕಾರ್ಯ, ಶ್ರೀ ಧೂಮಾವತೀ ದೈವದ ಕೋಲ

ಕುಂಬಳೆ: ಕಾನ ಶ್ರೀ ಶಂಕರನಾರಾಯಣ ದೇವರ ಮಠದಲ್ಲಿ ಹೊಸ್ತಿನ ದೇವಕಾರ್ಯ ಮತ್ತು ಶ್ರೀ ಧೂಮಾವತೀ ದೈವದ ಪುದ್ವಾರು ಕೋಲ ಈ ತಿಂಗಳ 27, 28ರÀಂದು ಜರಗಲಿರುವುದು. 26ರÀಂದು ಬೆಳಗ್ಗೆ 7 ಗಂಟೆಗೆ ಧೂಮಾವತೀ ಸನ್ನಿದಿsಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, 10 ಗಂಟೆಗೆ ಶ್ರೀ ಶಂಕರನಾರಾಯಣ ದೇವರ ಸನ್ನಿಯಲ್ಲಿ ಕೊಪ್ಪರಿಗೆ ಮುಹೂರ್ತ. 27ರÀಂದು ಬೆಳಗ್ಗೆ 6.30ಕ್ಕೆ ಆಚಾರ್ಯರಿಂದ ಗಣಪತಿ ಹೋಮ, ಪಂಚಗವ್ಯ ಹೋಮ, ನವಕಾಭಿಷೇಕ, 8 ಗಂಟೆಗೆ ಸಾಮೂಹಿಕ ರುದ್ರ ಪಾರಾಯಣ, 10.30ಕ್ಕೆ ತುಲಾಭಾರ ಸೇವೆ, 11 …

ನೀರಿನ ದರ ಪಾವತಿಸದಿದ್ದರೆ ಸಂಪರ್ಕ ಕಡಿತ ಎಚ್ಚರಿಕೆ 

ಕಾಸರಗೋಡು: ಕೇರಳ ಜಲಪ್ರಾಧಿಕಾರದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ತಿಂಗಳ ೩೧ರ ಮುಂಚಿತ ಅದನ್ನು ಪಾವತಿಸದಿದ್ದರೆ ಇನ್ನೊಂದು ಸೂಚನೆ ನೀಡದೆ ಸಂಪರ್ಕವನ್ನು ವಿಚ್ಚೇಧಿಸಲಾ ಗುವುದೆಂದೂ, ಬಾಕಿ ಮೊತ್ತ ವಸೂಲಿಗೆ ರೆವೆನ್ಯೂ ರಿಕವರಿ ಕ್ರಮ ಸ್ವೀಕರಿಸುವು ದಾಗಿಯೂ  ಕೇರಳ ವಾಟರ್ ಅಥೋರಿಟಿ ಕಾಸರಗೋಡು ಡಬ್ಲ್ಯುಎಸ್‌ಪಿ ಸಬ್ ಡಿವಿಶನ್ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ರಿಫಾಯಿ ದಫ್‌ರಾತಿಬ್ ವಾರ್ಷಿಕ, ಧಾರ್ಮಿಕ ಪ್ರವಚನ ನಾಳೆಯಿಂದ

ಕುಂಬಳೆ: ಇಚ್ಲಂಗೋಡು ಪಚ್ಚಂಬಳ ಸಿರಾಜುಲ್ ಮುನೀರ್ ದಫ್ ಸಮಿತಿಯ ಆಶ್ರಯದಲ್ಲಿ ರಿಫಾಯಿ ದಫ್ ರಾತೀಬ್ ಹಾಗೂ ೨೮ನೇ ವಾರ್ಷಿಕ, ನಾಲ್ಕು ದಿನದ ಧಾರ್ಮಿಕ ಪ್ರವಚನ ನಾಳೆಯಿಂದ ೨೮ರ ವರೆಗೆ ಸಕರಿಯ ಜುಮಾ ಮಸೀದಿ ಅಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಳೆ ಸಂಜೆ ೪ ಗಂಟೆಗೆ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮೂದ್ ಹಾಜಿ ಪಚ್ಚಂಬಳ ಧ್ವಜಾರೋಹಣಗೈಯ್ಯುವರು. ರಾತ್ರಿ ೮ ಗಂಟೆಗೆ ಕೆ.ಎಸ್. ಶಮೀಂ ತಂಙಳ್ ಕುಂಬೋಳ್ ಧಾರ್ಮಿಕ ಪ್ರವಚನ ಉದ್ಘಾಟಿಸುವರು. ಅಧ್ಯಕ್ಷ ಮಜೀದ್ …