ರಿಯಾಸ್ ಮೌಲವಿ ಕೊಲೆ ಪ್ರಕರಣ: ತೀರ್ಪು ಜ. ೨೭ರಂದು
ಕಾಸರಗೋಡು: ಕಾಸರಗೋ ಡಿನಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಕಾಸರಗೋಡು ಹಳೇ ಸೂರ್ಲಿನ ಮದ್ರಸಾ ಅಧ್ಯಾಪಕ ಮೂಲತಃ ಕೊಡಗು ನಿವಾಸಿ ಮೊಹಮ್ಮದ್ ರಿಯಾಸ್ ಮೌಲವಿ (೨೭)ರ ಕೊಲೆ ಪ್ರಕರಣ ತೀರ್ಪನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಕೆ. ಬಾಲಕೃಷ್ಣನ್ ಅವರು ಜನವರಿ ೨೭ರಂದು ನೀಡಲಿರುವರು. ೨೦೧೭ ಮಾರ್ಚ್ ೨೦ರಂದು ರಾತ್ರಿ ೧೨ ಗಂಟೆ ವೇಳೆಗೆ ಹಳೇ ಸೂರ್ಲಿನ ಮದ್ರಸಾದ ಕಟ್ಟಡದಲ್ಲಿ ನಿದ್ರಿಸುತ್ತಿದ್ದ ರಿಯಾಸ್ ಮೌಲವಿಯವರನ್ನು ಅಕ್ರಮಿಗಳು ಇರಿದು ಕೊಲೆಗೈದಿದ್ದರು. ಕೇಳುಗುಡ್ಡೆಯ ಅಜೇಶ್ ಅಲಿಯಾಸ್ ಅಪ್ಪು, ಪೆರಿಯಡ್ಕದ …