ಬಿಕೆಎಂಯುನಿಂದ ಜಿಲ್ಲೆಯ ವಿವಿಧ ವಿಲ್ಲೇಜ್ ಕಚೇರಿಗಳಿಗೆ ಮಾರ್ಚ್ ಧರಣಿ

ಕಾಸರಗೋಡು: ಕೃಷಿ ಕಾರ್ಮಿಕರಿಗೆ ಕ್ಷೇಮನಿಧಿ ಸೌಲಭ್ಯಗಳ ಬಾಕಿ ಉಳಿಸಿ ರುವ ಮೊತ್ತವನ್ನು ಕೂಡಲೇ  ವಿತರಿ ಬೇಕು, ಕೃಷಿ ಕಾರ್ಮಿಕರ ಪಿಂಚಣಿ ಷರತ್ತು ರಹಿತವಾಗಿ ನೀಡಬೇಕು, ಕ್ಷೇಮನಿಧಿ ಸೌಲಭ್ಯಗಳನ್ನು ಹೆಚ್ಚಿಸ ಬೇಕು. ಉದ್ಯೋಗ ಖಾತರಿ ಯೋಜನೆ ಯನ್ನು ಬುಡಮೇಲುಗೊಳಿಸುವ ಕೇಂದ್ರ ಸರಕಾರದ  ಯತ್ನ ಕೊನೆಗೊಳಿಸಬೇಕು, ಕಾರ್ಮಿಕರಿಗೆ ೭೦೦ ರೂ. ವೇತನ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿ.ಕೆ.ಎಂ.ಯು.  ನೇತೃತ್ವದಲ್ಲಿ ಜಿಲ್ಲೆಯ ವಿವಿಧ ವಿಲ್ಲೇಜ್ ಕಚೇರಿಗಳಿಗೆ ಮಾರ್ಚ್, ಧರಣಿ ನಡೆಸಲಾಯಿತು. ಹೊಸಬೆಟ್ಟು ವಿಲ್ಲೇಜ್ ಆಫೀಸ್  ಧರಣಿಯನ್ನು ಬಿಕೆಎಂಯು ಮಂಡಲ ಅಧ್ಯಕ್ಷ …

ಕೇರಳ ಮೋದಿಯವರೊಂದಿಗೆ ಕೈಬೆಸೆಯುತ್ತಿದೆ-ಪಿ.ಕೆ. ಕೃಷ್ಣದಾಸ್

ಕಾಸರಗೋಡು: ಎಡರಂಗ ಮತ್ತು ಐಕ್ಯರಂಗಗಳನ್ನು ಉಪೇಕ್ಷಿಸಿ ಕೇರಳದ ಜನತೆ ಪ್ರಧಾನಮಂತ್ರಿ ನರೇಂದ್ರಮೋದಿಯವರ ಜೊತೆ ಕೈಬೆಸೆಯತೊಡಗಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಹೇಳಿದ್ದಾರೆ. ಎನ್‌ಡಿಎ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್‌ರ ನೇತೃತ್ವದಲ್ಲಿ ಜನವರಿ ೨೭ರಂದು ಕಾಸರಗೋಡಿನಿಂದ ಪ್ರಯಾಣ ಆರಂಭಿಸಲಿರುವ ಕೇರಳ ಪಾದಯಾತ್ರೆಯ ಯಶಸ್ವಿಗಾಗಿ ನಿನ್ನೆ ಸಂಜೆ ಕಾಸರಗೋಡು ಮುನಿಸಿಫಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಕೃಷ್ಣದಾಸ್ ಮಾತನಾಡುತ್ತಿದ್ದರು. ಪ್ರಧಾನಮಂತ್ರಿ ಮೋದಿಯವರ ಸಂದರ್ಶನ ಕೇರಳದಲ್ಲಿ ಒಂದು ಇತಿಹಾಸವಾಗತೊಡಗಿದೆ. ಇದು ರಾಜ್ಯದಲ್ಲಿ …

ಐಲದಲ್ಲಿ ಡಾ. ಪ್ರಭಾಕರ ಭಟ್‌ರಿಂದ ಅಯೋಧ್ಯಾ ಆಂದೋಲನ ಕಥನ

ಉಪ್ಪಳ: ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾಸರಗೋಡು ಜಿಲ್ಲೆ ಇದರ ಆಶ್ರಯದಲ್ಲಿ ಅಯೋಧ್ಯಾ ಆಂದೋಲನದ ಪ್ರತ್ಯಕ್ಷ ಅನುಭವದ ಪ್ರೇರಣಾದಾಯಿ ಕಥನವನ್ನು ಡಾ.ಪ್ರಭಾಕರ ಭಟ್ ಕಲ್ಲಡ್ಕ ನಿನ್ನೆ ಐಲದಲ್ಲಿ ವಿವರಿಸಿದರು. ನಿವೃತ್ತ ಮುಖ್ಯೋಪಧ್ಯಾಯ ದೇವಪ್ಪ ಶೆಟ್ಟಿ ಚಾವಡಿಬೈಲು ಅಧ್ಯಕ್ಷತೆ ವಹಿಸಿದರು. ವಿ.ಎಚ್.ಪಿ ಜಿಲ್ಲಾ ಉಪಾಧ್ಯಾಕ್ಷ ಬಾಲಕೃಷ್ಣ ಶೆಟ್ಟಿ, ಆರ್.ಎಸ್.ಎಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹ ಲೊಕೇಶ್ ಜೋಡುಕಲ್ಲು ಉಪಸ್ಥಿತರಿದ್ದರು. ಸಂಘಪರಿವಾರದ ಮುಖಂಡರಾದ ಗೋಪಾಲ ಚೆಟ್ಟಿಯಾರ್, ವೀರಪ್ಪ ಅಂಬಾರು, ಜಯಂತಿ ಅಮ್ಮ, ಸುರೇಶ್ ಶೆಟ್ಟಿ ಪರಂಕಿಲ, ಯಾದವ್ …

ಡಿವೈಎಫ್‌ಐ ಮಾನವ ಸರಪಳಿ ನಾಳೆ

ಕಾಸರಗೋಡು: ಕೇಂದ್ರ ಸರಕಾರದ ಧೋರಣೆಗಳನ್ನು ಪ್ರತಿಭಟಿಸಿ ಡಿವೈಎಫ್‌ಐ ನಾಳೆ ಕಾಸರಗೋಡಿನಿಂದ ಆರಂಭಗೊಂಡು ತಿರುವನಂತಪುರ ತನಕ ಮಾನವ ಸರಪಳಿ ಆಂದೋಲನ ನಡೆಸಲಿದೆ. ಇದರಲ್ಲಿ ಜಿಲ್ಲೆಯಿಂದ ಒಂದು ಲಕ್ಷದಷ್ಟು ಮಂದಿ ಭಾಗವಹಿಸು ವರೆಂದು   ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಳ್ಳಾಟ್, ಅಧ್ಯಕ್ಷ ಶಾಲು ಮಾಥ್ಯು, ಜತೆ ಕಾರ್ಯದರ್ಶಿ ಎ.ವಿ. ಶಿವಪ್ರಸಾದ್, ಸುಭಾಶ್ ಪಾಡಿ ಮತ್ತು ಜ್ಯೋತಿ ಚೆನ್ನಿಕೆರೆ ಎಂಬವರು ತಿಳಿಸಿದ್ದಾರೆ. ನಾಳೆ ಸಂಜೆ ೫ ಗಂಟೆಗೆ ಕಾಸರಗೋಡು ರೈಲು ನಿಲ್ದಾಣದಿಂದ ಕಾಲಿಕಡವು ಅನ್ನೂರು …

ಕಣ್ವತೀಥದಲ್ಲಿ ಸಮುದ್ರಪೂಜೆ

ಮಂಜೇಶ್ವರ: ಅಯೋಧ್ಯೆಯಲ್ಲಿ ಜನವರಿ ೨೨ರಂದು ರಾಮ ದೇವರ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅಯೋ ಧ್ಯೆಯ ವಿಶ್ವಸ್ಥ ಮಂಡಳಿಯ ಟ್ರಸ್ಟಿಗಳಾದ ಉಡುಪಿ ಪೇಜಾವರ ಅಧೊಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಬೋವಿ ಸಮಾಜದ ಭಗವತೀ ಕ್ಷೇತ್ರದ ಕಾರ್ನವರು ಮತ್ತು ಮೊಗವೀರ ಬಂಧುಗಳು ಕಣ್ವ ತೀರ್ಥ ಸಮುದ್ರ ಕ್ಕೆ ಹಾಲೆರೆದು ಹಿಂಗರ ಹೂ ಸಮರ್ಪಿಸಿ ಸಮುದ್ರ ಪೂಜೆ ಮಾಡಿದರು ಈ ಸಂದರ್ಭದಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಗೋಪಾಲ ಶೆಟ್ಟಿ ಅರಿಬೈಲು, ಸುಧಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ಭಟ್ …

ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ ಜಾತ್ರಾಮಹೋತ್ಸವ ೨೨, ೨೩ರಂದು

ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ  ಜಾತ್ರಾ ಮಹೋತ್ಸವ ಜನವರಿ ೨೨ ಹಾಗೂ ೨೩ರಂದು ನಡೆಯಲಿದೆ. ಇದರ ಅಂಗವಾಗಿ ೨೧ರಂದು ಸಂಜೆ ೪ಕ್ಕೆ ನಾಟೆಕಲ್ಲು ಶ್ರೀ ಅಯ್ಯಪ್ಪ ಭಜನಾ ಮಂದಿರ ಹಾಗೂ ಹರಿನಗರ ಶ್ರೀ ಗಣೇಶ ಮಂದಿರ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ೫ ಗಂಟೆಗೆ ಉಗ್ರಾಣ ತುಂಬಿಸುವುದು, ೬ಕ್ಕೆ ಭಜನೆ, ೭ಕ್ಕೆ ವೈದಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ೨೨ರಂದು ಬೆಳಿಗ್ಗೆ ೭ರಿಂದ ಗಣಪತಿ ಹೋಮ, ನವಕ, ೮ರಿಂದ ಭಜನೆ, ೯ಕ್ಕೆ ಭಗವದ್ಗೀತೆ ಮತ್ತು ಮೂಲ ರಾಮಾಯಣ ಪಾರಾಯಣ, …

ಕೇವಲ ಒಂದೂವರೆ ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಕ್ರಮವಿಲ್ಲ: ಜನಸಂಚಾರಕ್ಕೆ ಸಮಸ್ಯೆ

ಕುಂಬಳೆ: ಎರಡು ವಾರ್ಡ್‌ಗಳನ್ನು ಸಂಪರ್ಕಿಸುವ ರಸ್ತೆಯೊಂದು ಅಭಿವೃದ್ಧಿಯಿಲ್ಲದೆ ಶೋಚನೀ ಯಾವಸ್ಥೆಯಲ್ಲಿದ್ದು, ಇದರಿಂದ ಜನಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕುಂಬಳೆ ಪಂಚಾಯತ್‌ನ ೧೪ನೇ ವಾರ್ಡ್  ಪೆರುವಾಡ್ ಹಾಗೂ ೨೧ನೇ ವಾರ್ಡ್ ಮಾಟೆಂಗುಳಿ ಮಧ್ಯೆಗಿನ  ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಮಾವಿನಕಟ್ಟೆಯಿಂದ ಕುಂಟಂಗೇರಡ್ಕಕ್ಕೆ ತೆರಳುವ ಈ ಒಂದೂವರೆ ಕಿಲೋ ಮೀಟರ್ ರಸ್ತೆ ಹಾನಿಗೀಡಾಗಿ ಹಲವು ತಿಂಗಳುಗಳು ಕಳೆಯಿತು.  ರಸ್ತೆಗೆ ವರ್ಷಗಳ ಹಿಂದೆ ನಡೆಸಿದ ಡಾಮರೀಕರಣ ಪೂರ್ಣವಾಗಿ ಎದ್ದು ಹೋಗಿದ್ದು, ಜಲ್ಲಿಕಲ್ಲುಗಳು ಎದ್ದುನಿಂತಿವೆ.  ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾಗಳಿಗೆ ಸಂಚರಿಸಲು ಸಾಧ್ಯವಾಗದ ಸ್ಥಿತಿ …

ನಗರಸಭಾ ಅಧ್ಯಕ್ಷ ಸ್ಥಾನದ ಜತೆಗೆ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ನೀಡಿದ ವಿ.ಎಂ. ಮುನೀರ್

ಕಾಸರಗೋಡು: ನಿರೀಕ್ಷೆಯಂತೆ ಮುಸ್ಲಿಂ ಲೀಗ್‌ನ  ನ್ಯಾ. ವಿ.ಎಂ. ಮುನೀರ್ ಕೊನೆಗೂ ಕಾಸರಗೋಡು ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಚ್ಚರಿ ಎಂಬಂತೆ ಅವರು ಇದರ ಜೊತೆಗೆ ತಮ್ಮ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಾಸರಗೋಡು ನಗರಸಭೆಯಲ್ಲಿ ಮುಸ್ಲಿಂ ಲೀಗ್ ಸದಸ್ಯರ ಸಂಖ್ಯೆ ಈಗ ೨೧ರಿಂದ ೨೦ಕ್ಕಿಳಿದಿದೆ. ಬಿಜೆಪಿ-೧೪,  ಇಬ್ಬರು ಪಕ್ಷೇತರರು ಮತ್ತು ಸಿಪಿಎಂನ ಓರ್ವ ಸದಸ್ಯರನ್ನು ನಗರಸಭೆ ಹೊಂದಿದೆ. ಮನೀರ್‌ರ ಈ ರಾಜೀನಾಮೆಯಿಂದ ಅದು ನಗರ ಸಭೆಯಲ್ಲಿ ಮುಸ್ಲಿಂಲೀಗ್‌ಗೆ ಪ್ರತಿಕೂಲ ಕರವಾಗದು. ವಿ.ಎಂ. ಮುನೀರ್ ಕಾಸರಗೋಡು …

ಜಾತ್ರೆ ವೀಕ್ಷಿಸಿ ಮರಳುತ್ತಿದ್ದ ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ

ಹೊಸದುರ್ಗ: ಜಾತ್ರೆ ವೀಕ್ಷಿಸಿ ಮರಳುತ್ತಿದ್ದ ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ತಂಡ ಪರಾರಿಯಾದ ಘಟನೆ ನಡೆದಿದೆ. ಮಡಿಕೈ ಕಾಲಿಚ್ಚಾಂಪೊದಿ ಪುದುಚ್ಚೇರಿ ನಿವಾಸಿ ಕೆ.ಪಿ. ದೇವಕಿ (೬೭) ಎಂಬವರ ಎರಡೂವರೆ ಪವನ್‌ನ ಸರವನ್ನು ಎಗರಿಸಲಾಗಿದೆ. ಇಂದು ಮುಂಜಾನೆ ೫.೩೦ರ ವೇಳೆ ಘಟನೆ ನಡೆದಿದೆ. ಮಾದೋತ್ ಎಂಬಲ್ಲಿನ ಕ್ಷೇತ್ರದಲ್ಲಿ ಜಾತ್ರೆ ವೀಕ್ಷಿಸಿ ದೇವಕಿ ಮನೆಗೆ ನಡೆದು ಹೋಗುತ್ತಿದ್ದರು. ಈ ವೇಳೆ   ಅದಯಿ ಸೇತುವೆ ಸಮೀಪಕ್ಕೆ ತಲುಪಿದಾಗ ಬೈಕ್‌ನಲ್ಲಿ ತಲುಪಿದ ಇಬ್ಬರು ಮಾಲೆ ಎಗರಿಸಿ ಪರಾರಿಯಾಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ …

ಅಯೋಧ್ಯೆಗೆ ತಲುಪಿದ ಕಲಶಯಾತ್ರೆ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಆರಂಭ

ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಕ್ಷೇತ್ರದಲ್ಲಿ ಜನವರಿ ೨೨ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಕಲಶಯಾತ್ರೆಯನ್ನು ಅಯೋಧ್ಯೆಗೆ ತಲುಪಿಸಲಾಯಿತು. ಪ್ರತಿಷ್ಠೆ ವೇಳೆ ಶ್ರೀರಾಮ ವಿಗ್ರಹದಲ್ಲಿ  ಅಭಿಷೇಕ ನಡೆಸಲಿರುವ ಕಲಶಕ್ಕಾಗಿ ದೇಶದ ವಿವಿಧ ಪವಿತ್ರ ನದಿಗಳಿಂದ ಜಲ ಸಂಗ್ರಹಿಸಿ ಅದನ್ನು ಅಯೋಧ್ಯೆಗೆ ಶೋಭಾಯಾತ್ರೆ ಮೂಲಕ  ತಲುಪಿಸಲಾಗಿದೆ. ೧೫೦ರಿಂದ  ೨೦೦ ಕಿಲೋ ವರೆಗೆ ಭಾರವುಳ್ಳ ಕೃಷ್ಣ ಶಿಲೆಯನ್ನು ನಿರ್ಮಿಸಿದ ೫೧ ಇಂಚು ಎತ್ತರದ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುವ ಕಾರ್ಯ ಇಂದು ನಡೆಯಲಿದೆ. ನಾಲ್ಕು ದಿನಗಳ ಕಾಲ ವಿಗ್ರಹವನ್ನು …