ಸ್ವರ್ಗ ಶಾಲೆಯಲ್ಲಿ ವಿವೇಕಾನಂದ ಜಯಂತಿ, ಶಾಲಾ ವಾರ್ಷಿಕೋತ್ಸವ ನಾಳೆ

ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾ ನಂದ ಎ.ಯು.ಪಿ. ಶಾಲೆಯಲ್ಲಿ ವಿವೇಕಾನಂದ ಜಯಂತಿ, ಶಾಲಾ ವಾರ್ಷಿಕೋತ್ಸವ ಮತ್ತು ಹೆತ್ತವರ ದಿನಾಚರಣೆ ಕಾರ್ಯಕ್ರಮಗಳು ನಾಳೆ ಬೆಳಗ್ಗೆ 10ರಿಂದ ನಡೆಯಲಿದೆ.ಶಾಲಾ ವ್ಯವಸ್ಥಾಪಕ ಹೃಷೀಕೇಶ ವಿ.ಎಸ್. ಬೆಳಗ್ಗೆ 10ಕ್ಕೆ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿ ಸುವರು. ಬಳಿಕ ಸ್ವರ್ಗ, ಕೆಂಗಣಾಜೆ, ಅಡ್ಕಸ್ಥಳ, ಶಿವಗಿರಿ ಅಂಗನವಾಡಿ, ಪೆರ್ಲ ವಿವೇಕ ಶಿಶುಮಂದಿರದ ಮಕ್ಕಳು ಹಾಗೂ ಸ್ವರ್ಗ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಡೆಯಲಿದೆ. 2ರಿಂದ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಪಿ.ಅಧ್ಯಕ್ಷತೆಯಲ್ಲಿ ಸಭಾ …

ಆಂಬುಲೆನ್ಸ್-ಟಾಟಾ ಸುಮೋ ಢಿಕ್ಕಿ ಹೊಡೆದು ೧೪ ವಿದ್ಯಾರ್ಥಿಗಳಿಗೆ ಗಾಯ; ರೋಗಿ ಆಸ್ಪತ್ರೆಗಿರುವ ಪ್ರಯಾಣ ಮಧ್ಯೆ ಮೃತ್ಯು

ಕುಂಬಳೆ: ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಹಾಗೂ ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಟಾಟಾ  ಸುಮೋ ಢಿಕ್ಕಿ ಹೊಡೆದ ಘಟನೆ ನಿನ್ನೆ ಸಂಜೆ  ಶಿರಿಯ ಸೇತುವೆ ಬಳಿ ಸಂಭವಿಸಿದೆ. ಅಪಘಾತ ದಲ್ಲಿ ೧೪ ಮಂದಿ ವಿದ್ಯಾರ್ಥಿಗಳು ಗಾಯಗೊಂ ಡಿದ್ದಾರೆ. ಅಪಘಾತ ಬಳಿಕ ರೋಗಿಯನ್ನು ಬೇರೆ ಆಂಬುಲೆನ್ಸ್‌ನಲ್ಲಿ ಕೊಂಡೊಯ್ದರೂ ಉಪ್ಪಳಕ್ಕೆ ತಲುಪಿದಾಗ ಮೃತಪಟ್ಟರು. ಕಣ್ಣೂರು ಕಾಟಾಚಿರ ನಿವಾಸಿ ಸುರೇಶ್ ಕುಮಾರ್ (೫೦) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಅಪಘಾತದಲ್ಲಿ ಗಾಯಗೊಂಡ ಮುಟ್ಟಂನ ಖಾಸಗಿ ಶಾಲೆಯ ವಿದ್ಯಾರ್ಥಿಗಳಾದ ಮೊಗ್ರಾಲ್ …

ಗುರುವಾಯೂರಿನಲ್ಲಿ ಪ್ರಧಾನಿ ಮೋದಿಗೆ ನಾಳೆ ತಾವರೆ ಹೂವುಗಳಿಂದ ತುಲಾಭಾರ

ತೃಶೂರು: ಗುರುವಾಯೂರು ಶ್ರೀಕೃಷ್ಣ ಕ್ಷೇತ್ರ ದರ್ಶನ ನಡೆಸಲಿ ರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ನಾಳೆ ಬೆಳಿಗ್ಗೆ ೭.೪೦ಕ್ಕೆ  ಶ್ರೀ ಕ್ಷೇತ್ರದಲ್ಲಿ ಕಮಲದ  ಹೂವುಗಳಿಂದ ತುಲಾಭಾರ ಸೇವೆ ನಡೆಸುವರು. ಇದರ ಹೊರತಾಗಿ ಇತರ ಹಲವು ಹರಕೆ ಗಳನ್ನೂ ಅವರು ನೆರವೇರಿಸುವರು. ಪ್ರಧಾನಿಯವರ ಸಂದ ರ್ಶನದ ಹಿನ್ನೆಲೆಯಲ್ಲಿ  ನಾಳೆ ಬೆಳಿಗ್ಗೆ ೬ರಿಂದ ೯ರ ತನಕ ಗುರುವಾಯೂರು ಕ್ಷೇತ್ರ ದಲ್ಲಿ  ಬಿಗಿ ನಿಯಂತ್ರಣ ಏರ್ಪಡಿ ಸಲಾಗಿದೆ. ವಾಹನಗಳಿಗೂ ನಿಯಂತ್ರಣ ಏರ್ಪಡಿಸಲಾಗಿದೆ. ಗುರುವಾಯೂರು ಕ್ಷೇತ್ರ ದಲ್ಲಿ ನಾಳೆ ೮೦ ಮದುವೆಗಳಿಗೆ ಹೆಸರು …

ಪಾರೆಕಟ್ಟೆ ಘರ್ಷಣೆ : ಎರಡು ಪ್ರಕರಣ ದಾಖಲು

ಕಾಸರಗೋಡು: ಕೂಡ್ಲು ಪಾರೆಕಟ್ಟೆಯಲ್ಲಿ ಮೊನ್ನೆ ರಾತ್ರಿ ಬಿಜೆಪಿ ಮತ್ತು ಡಿವೈಎಫ್‌ಐ ಕಾರ್ಯಕರ್ತರ ಮಧ್ಯೆ ಉಂಟಾದ ಘರ್ಷಣೆಗೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಎರಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘರ್ಷಣೆಯಲ್ಲಿ ಗಾಯಗೊಂಡ ಡಿವೈಎಫ್‌ಐ ಕಾರ್ಯಕರ್ತರಾದ ಮಧೂರಿನ ಶೈಲೇಶ್ (೨೦) ಮತ್ತು ಕೂಡ್ಲಿನ ಶರತ್ (೨೦), ಪಾರೆಕಟ್ಟೆಯ ಕಿಶೋರ್ ಎಂಬವರು ನೀಡಿದ ದೂರಿನ ಪ್ರಕಾರ ಬಿಜೆಪಿ ಕಾರ್ಯಕರ್ತರಾದ ಅಖಿಲ್, ಶಿವರಾಜ್, ಪವನ್ ರಾಖೇಶ್ ಮತ್ತು ಧನುಷ್ ಎಂಬವರ ವಿರುದ್ಧ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಘರ್ಷಣೆಯಲ್ಲಿ ಗಾಯಗೊಂಡ ಉದಯಗಿರಿಯ …

ತಂಡಗಳ ಮಧ್ಯೆ ಘರ್ಷಣೆ ತಡೆಯಲೆತ್ನಿಸಿದ ಯುವಕನಿಗೆ ಹಲ್ಲೆ

ಸೀತಾಂಗೋಳಿ: ತಂಡಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದಾಗ ಅದನ್ನು ತಡೆಯಲೆತ್ನಿಸಿದ ಯುವಕನಿಗೆ ತಂಡ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಸೂರಂಬೈಲು ನಿವಾಸಿ ಅಜೇಶ್ (೩೭) ಎಂಬವರು ಗಾಯಗೊಂಡಿದ್ದು, ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ೮.೩೦ರ ವೇಳೆ ಸೀತಾಂಗೋಳಿ ಪೇಟೆಯಲ್ಲಿ ಘಟನೆ ನಡೆದಿದೆ. ಇಲ್ಲಿ ಎರಡು ತಂಡಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದವೆನ್ನಲಾಗಿದೆ. ಈ ವೇಳೆ ಘರ್ಷಣೆ ತಡೆಯಲೆತ್ನಿಸಿದ ಅಜೇಶ್‌ಗೆ ಹಲ್ಲೆ ನಡೆಸಲಾಗಿದೆ. ಬಿಯರ್ ಬಾಟ್ಲಿಯಿಂದ ತಲೆಗೆ ಹೊಡೆದು ಚಾಕುವಿನಿಂದ ಕೈಗೆ ಇರಿದು ಗಾಯಗೊಳಿಸಿರುವುದಾಗಿ ಅಜೇಶ್ …

ಶಬರಿಮಲೆ: ಮಕರಜ್ಯೋತಿ ದರ್ಶನ ಪಡೆದು ಭಾವಪರವಶರಾದ ಅಯ್ಯಪ್ಪ ಭಕ್ತರು

ಶಬರಿಮಲೆ: ಮಕರ ಸಂಕ್ರಾಂತಿ ದಿನದಂದು ಪ್ರತೀ ವರ್ಷವೆಂಬಂತೆ ಈ ವರ್ಷವೂ ನಿನ್ನೆ ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನವಾಯಿತು. ಜ್ಯೋತಿಯನ್ನು ಕಂಡ ಅಯ್ಯಪ್ಪ ಭಕ್ತ ಗಣವು ಭಾವಪರವಶರಾದರು. ಶಬರಿ ಮಲೆ ಬೆಟ್ಟದಲ್ಲಿ ಮಕರ ಸಂಕ್ರಾಂತಿ ಯಂದು ಪ್ರತೀ ವರ್ಷ ನಡೆಯುವ ವಿಶೇಷ ಪೂಜೆಗೆ ಶಬರಿಮಲೆ ವಿಳಕ್ಕು ಎನ್ನುವ ಹೆಸರಲ್ಲಿ ಕರೆಯಲಾಗುತ್ತಿದೆ. ನಿನ್ನೆ ಸಂಜೆ ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ ನಡೆಯುತ್ತಿರು ವಂತೆಯೇ ಪೊನ್ನಂಬಲ ಮೇಡ್ ಬೆಟ್ಟ ದಲ್ಲಿ ೬.೪೫ರಿಂದ ೬.೭೪ ಗಂಟೆ ಒಳಗೆ ಮೂರು ಬಾರಿ ಮಕರ ಜ್ಯೋತಿ ದರ್ಶ …

ವರ್ಕಾಡಿಯಲ್ಲಿ ೧೦ ವರ್ಷದ ಹಿಂದೆ ಒಂದು ಕೋಟಿ ೬೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಆಸ್ಪತ್ರೆ ಕಟ್ಟಡದ ಬೀಗ ಇನ್ನೂ ತೆರೆದಿಲ್ಲ

ವರ್ಕಾಡಿ: ಒಂದು ಕೋಟಿ ೬೫ ಲಕ್ಷ ರೂ. ವೆಚ್ಚದಲ್ಲಿ ೧೦ ವರ್ಷದ ಹಿಂದೆ ವರ್ಕಾಡಿ ಪಂ.ನ ಮಜೀರ್ಪಳ್ಳ ಧರ್ಮನಗರದಲ್ಲಿ ನಿರ್ಮಿಸಿದ ಕುಟುಂಬಾರೋಗ್ಯ ಕೇಂದ್ರವನ್ನು ಇನ್ನೂ ಉದ್ಘಾಟಿಸದಿದ್ದರೆ ಮುಸ್ಲಿಂ ಲೀಗ್ ಪ್ರತಿಕ್ರಿಯಾತ್ಮಕ ಉದ್ಘಾಟನೆ ನಡೆಸುವುದಾಗಿ ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಪದಾಧಿಕಾರಿಗಳ ಸಭೆಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಒಂದು ಕೋಟಿ ೧೦ ಲಕ್ಷ ರೂ. ಹಾಗೂ ಶಾಸಕರ ನಿಧಿಯಿಂದ ೫೦ ಲಕ್ಷ ರೂ., ಪಂಚಾಯತ್ ಪಾಲಾಗಿ ೫ ಲಕ್ಷ ರೂ. ಸೇರಿ ಐಕ್ಯರಂಗದ ಆಡಳಿತ ಕಾಲದಲ್ಲಿ …

ಅಯೋಧ್ಯೆ: ಪ್ರಾಣ ಪ್ರತಿಷ್ಠಾಪನಾ ವಿಧಿಗಳಿಗೆ ಚಾಲನೆ

ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಕ್ಷೇತ್ರದಲ್ಲಿ ಈ ತಿಂಗಳ ೨೨ರಂದು ನಡೆಯಲಿರುವ ಪ್ರಾಣ ಪ್ರತಿಷ್ಠೆಯಂಗವಾಗಿ ವಿವಿಧ ವೈದಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಗಿದ. ಇಂದಿನಿಂದ ಮುಂದಿನ ಏಳು ದಿನಗಳು ಪ್ರಾಣ ಪ್ರತಿಷ್ಠಾಪನಾ ವಿಧಿಗಳನ್ನು ವಿವಿಧ ಹಂತಗಳಲ್ಲಿ ನೆರವೇರಿಸಲಾಗುವುದು. ವಿಗ್ರಹ ಪ್ರತಿಷ್ಠಾಪನೆ ನಡೆಸುವ ಮುಂಚಿ ತವಾಗಿ ೧೦೮  ರೀತಿಯ ದ್ರವ್ಯಗಳ ಅಭಿಷೇಕ ನಡೆಸಲಾಗುವುದು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ (ಪಂಚಾಮೃತ), ಹಣ್ಣುಗಳು, ವಿವಿಧ ಹೂವುಗಳಿಂದ ಅಭಿಷೇಕ ನಡೆಸಿ ವಿಗ್ರಹವನ್ನು ಪವಿತ್ರಗೊಳಿಸಲಾ ಗುವುದು. ವೈದಿಕ ವಿಧಾನಗಳ ಅಂಗವಾಗಿ ಇಂದು ದಶವಿಧ …

ಸುಪರ್‌ಮಾರ್ಕೆಟ್‌ಗೆ ಬೀಗ ಜಡಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ತರ್ಕದ ಹಿನ್ನೆಲೆಯಲ್ಲಿ ಮಿನಿ ಸೂಪರ್ ಮಾರ್ಕೆಟ್‌ಗೆ ಬೀಗ ಜಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕ ಹಾಗೂ  ಅದನ್ನು ಖರೀದಿಸಿದ  ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಪಚ್ಚಂಬಳ ದರ್ಗಾ ಬಳಿಯಿರುವ  ಬಾತಿಷ ಮಿನಿ ಸೂಪರ್ ಮಾರ್ಕೆಟ್‌ಗೆ ಬೀಗ ಜಡಿಯಲಾಗಿದೆ. ಒಬರ್ಲೆ ನಿವಾಸಿಯ ಮಾಲಕತ್ವದಲ್ಲಿದ್ದ ಅಂಗಡಿಯನ್ನು ಇತ್ತೀಚೆಗೆ  ಪಚ್ಚಂಬಳ  ನಿವಾಸಿಗೆ ಮಾರಾಟಗೈಯ್ಯಲಾಗಿತ್ತು.  ಆದರೆ ತಿಳಿಸಿದ ದಿನದಂದು ಅದರ ಹಣ ನೀಡಿರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಅಂಗಡಿಗೆ ಸರಪ ಳಿಯಿಂದ  ಬೀಗಜಡಿದಿರುವುದಾಗಿ ಸಂಶಯಿಸಲಾಗುತ್ತಿದೆ.

ಕಾರು ಕೆರೆಗೆ ಬಿದ್ದು ಮೂವರ ದುರ್ಮರಣ

ತೃಶೂರು:  ಇಲ್ಲಿನ ಮೊಳಕುಳಿಕಾಟ್ಟುಶ್ಶೇರಿ ವರದನಾಡು ಕ್ಷೇತ್ರ ಬಳಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಕಲ್ಲುಗಳಿಂದಾವೃತವಾಗಿರುವ ೫೦ ಅಡಿ ಆಳದ ಕಂದಕದಲ್ಲಿರುವ ಕೆರೆಗೆ ಬಿದ್ದು ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಮೃತರನ್ನು ಪುತ್ತನ್‌ಚಿರ ಮುರಿಕ್ಕೋಡು ನಿವಾಸಿ ತಾಕೋಲ್ ಕ್ಕಾರನ್ ಚಿಟ್ಟೋ (೪೮), ಕುಳಿಕ್ಕಾಟ್ಟುಶ್ಶೇರಿಯ ಮುತ್ತಡತ್ ಶ್ಯಾಂ (೫೧) ಮತ್ತು ಕೋಂಬೋಡಿತ್ತ್ ಮಾಕ್ಕಲ್‌ನ ಪುನ್ನೆಲಿ ಪರಂಬಿಲ್ ಜೋರ್ಜ್ (೪೮) ಎಂದು ಗುರುತಿಸಲಾಗಿದೆ.  ಮೃತದೇಹಗಳನ್ನು  ಇಂದು ಬೆಳಿಗ್ಗೆಯಷ್ಟೇ ಕೆರೆಯಿಂದ ಹೊರತೆಗೆಯಲು ಸಾಧ್ಯವಾಯಿತು. ಅಗ್ನಿಶಾಮಕದಳ, ಪೊಲೀಸರು ಮತ್ತು ಊರವರು ಮೃತದೇಹಗಳನ್ನು …