ಯುವಕ ಮನೆಯೊಳಗೆ ನೇಣುಬಿಗಿದು ಸಾವು

ಉಪ್ಪಳ: ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿ ಯ ದಡ್ಡಂಗಡಿ ನಿವಾಸಿ ಗುಮ್ಮಣ್ಣ ಶೆಟ್ಟಿಗಾರ್ ಎಂಬವರ ಪುತ್ರ ಚರಣ್ ರಾಜ್ ಜಿ (35) ಮೃತಪಟ್ಟ ಯುವಕ. ಇವರು ನಿನ್ನೆ ರಾತ್ರಿ ಮನೆಯಲ್ಲಿ ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ 6.30ಕ್ಕೆ ಎಬ್ಬಿಸಲೆಂದು ತಾಯಿ  ಹೋದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿತ್ತು. ಕರೆದರೂ ಪ್ರತಿಕ್ರಿಯೆ ಉಂಟಾಗದ ಹಿನ್ನೆಲೆಯಲ್ಲಿ ಕಿಟಿಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಚರಣ್‌ರಾಜ್ ಪತ್ತೆಯಾಗಿ ದ್ದಾರೆ. …

ತಮ್ಮನನ್ನು ರಕ್ಷಿಸಲು ಕೆರೆಗಿಳಿದ ಅಣ್ಣ ನೀರಿನಲ್ಲಿ ಮುಳುಗಿ ದಾರುಣ ಸಾವು

ಕಾಸರಗೋಡು: ಮಸೀದಿಯ ಕೆರೆಗೆ ಬಿದ್ದ ತಮ್ಮನ್ನು ರಕ್ಷಿಸಲು ಇಳಿದ ಅಣ್ಣ ನೀರಿನಲ್ಲಿ ಮುಳುಗಿ ದಾರುಣ ವಾಗಿ ಸಾವನ್ನಪ್ಪಿದ ಘಟನೆ ನಗರದ ತಳಂಗರೆಯಲ್ಲಿ ನಿನ್ನೆ ನಡೆದಿದೆ. ಬೆಂಗಳೂರು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ತಾನಿ ರಸ್ತೆಯ ಮುಜಾಹಿದ್ ಎಂಬವರ ಪುತ್ರ ಫೈಸಲ್ (22) ಸಾವನ್ನಪ್ಪಿದ ದುರ್ದೈವಿ. ಫೈಸಲ್ ತನ್ನ ಕುಟುಂಬದವರ ಸಹಿತ ನಿನ್ನೆ ತಳಂಗರೆ ಮಾಲಿಕ್ ದೀನಾರ್ ದರ್ಗಾಕ್ಕೆ ತೀರ್ಥಾಟನೆಗೆ ಬಂದಿದ್ದರು. ಆ ತಂಡದಲ್ಲಿ ಒಟ್ಟು 11 ಮಂದಿ ಇದ್ದರು. ಈ ಮಧ್ಯೆ ಮಸೀದಿಯ ಕೆರೆಯಲ್ಲಿ ಫೈಸಲ್‌ರ …

ನಿಲಂಬೂರು ಸಹಿತ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಮತದಾನ ಆರಂಭ; ನಿಲಂಬೂರು ಎಡರಂಗ ಮತ್ತು ಐಕ್ಯರಂಗಕ್ಕೆ ಅಗ್ನಿಪರೀಕ್ಷೆ

ತಿರುವನಂತಪುರ: ಕೇರಳದ ನಿಲಂಬೂರು ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಲ್ಲಾಗಿ ಐದು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಕ್ಷೇತ್ರಗಳ ಸಂಖ್ಯೆ ಸೀಮಿತವಾಗಿದ್ದರೂ ಈ ಉಪ ಚುನಾವಣೆಯಲ್ಲಿ ಕೇರಳದಲ್ಲಿ ಆಡಳಿತ ಒಕ್ಕೂಟವಾದ ಎಡರಂಗ ಮತ್ತು ವಿರೋಧಪಕ್ಷವಾದ ಐಕ್ಯ ರಂಗಕ್ಕೆ ಇದು ಒಂದು ಅಗ್ನಿ ಪರೀಕ್ಷೆಯಾಗಿದೆ. ನಿಲಂಬೂರಿನ ಹೊರತಾಗಿ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಗುಜರಾತಿನ ನಾಲ್ಕು ವಿಧಾನಸಭಾಕ್ಷೇತ್ರಗಳಿಗೂ ಇಂದು ಉಪಚುನಾವಣೆ ನಡೆಯು ತ್ತಿದೆ. ಈ ನಾಲ್ಕು ಕ್ಷೇತ್ರಗಳ ಫಲಿತಾಂಶ ಇನ್ನೊಂದೆಡೆ ಕೇಂದ್ರದ ಆಡಳಿತಾರೂಢ ಎನ್ಡಿಎ ಮತ್ತು ಇಂಡಿಯಾ ಒಕ್ಕೂಟಕ್ಕೂ …

ಯುವಕನನ್ನು ಅಪಹರಿಸಿ ಬೆದರಿಕೆ: ಕೇಸು ದಾಖಲು

ಬದಿಯಡ್ಕ: ಯುವಕನನ್ನು ಕಾರಿನಲ್ಲಿ ಅಪಹರಿಸಿ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಮೂವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನೀರ್ಚಾಲು ಗೋಳಿಯಡ್ಕ ಹೌಸ್‌ನ ಮೊಹಮ್ಮದ್ ಅಲ್ತಾಫ್ (30) ಎಂಬಾತ ಈ ದೂರು ನೀಡಿದ್ದು ಅದರಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜೂನ್ 17ರಂದು ಸೀತಾಂಗೋಳಿ ಪೆಟ್ರೋಲ್ ಬಂಕ್‌ನ ಬಳಿಯಿಂದ ಮೂವರ ತಂಡ ತನ್ನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋದರೆಂದೂ, ಅದರಲ್ಲಿ ಓರ್ವ ಚಾಕು ತೋರಿಸಿ ತನಗೆ ಬೆದರಿಕೆ ಒಡ್ಡಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಲ್ತಾಫ್ ಆರೋಪಿಸಿದ್ದಾನೆ. …

ಮುಂಜಾನೆ ಯುವತಿಗೆ ಹೆರಿಗೆ ನೋವು: ಆಸ್ಪತ್ರೆಗೆ ತಲುಪಿಸಲು ತಕ್ಷಣ ನೆರವಾಗಿ ಮಾನವೀಯತೆ ಮೆರೆದ ಬದಿಯಡ್ಕ ಪೊಲೀಸರು, ಬಿಜೆಪಿ ಮುಖಂಡ

ಬದಿಯಡ್ಕ: ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ತಲುಪಿಸಲು ಯಾವುದೇ ವಾಹನ ಲಭಿಸದೇ ಇದ್ದಾಗ ಮಾಹಿತಿ ಲಭಿಸಿದ ಬದಿಯಡ್ಕ ಪೊಲೀಸರು ತಕ್ಷಣ ತಲುಪಿ ಸಹಾಯವೊದಗಿಸಿ ಮಾನವೀಯತೆ ಮೆರೆದರು.  ಕನ್ನೆಪ್ಪಾಡಿ ಬಳಿಯ ಬಾಪಾಲಿ ಪೊನದ ಬಾಡಿಗೆ ಮನೆಯಲ್ಲಿ ವಾಸಿಸುವ ಕೂಲಿ ಕಾರ್ಮಿಕ ಶಿವರಾಮರ ಪತ್ನಿ ಸುಮಿತ್ರ (25) ಅವರಿಗೆ ಇಂದು ಮುಂಜಾನೆ 3 ಗಂಟೆ ವೇಳೆಗೆ ಹೆರಿಗೆ ನೋವು ಅನುಭವಗೊಂಡಿತ್ತು. ಇದರಿಂದ ಆಕೆಯನ್ನು ಆಸ್ಪತ್ರೆಗೆ ತಲುಪಿಸಲು ಶಿವರಾಮ ಹಲವು ವಾಹನಚಾಲ ಕರಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಕೊನೆಗೆ …

ಒಂದಂಕಿ ಲಾಟರಿ ನಡೆಸುತ್ತಿದ್ದಾತ ಸೆರೆ

ಕುಂಬಳೆ: ಕೇರಳ ರಾಜ್ಯ ಲಾಟರಿಗೆ ಸಮಾನವಾಗಿ ಒಂದಂಕಿ ಲಾಟರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿ ದ್ದಾರೆ. ಬಂದ್ಯೋಡು ಮಂಜುಶ್ರೀ ನಿಲಯದ  ಮಂಜುನಾಥ (58) ಬಂಧಿತ ವ್ಯಕ್ತಿ. ಈತನ ಕೈಯಂದ 31,981 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಜುನಾಥ ಬಂದ್ಯೋಡಿನಲ್ಲಿ ಕೇರಳ ಲಾಟರಿಗೆ ಸಮಾನವಾಗಿ ಲಾಟರಿ ನಡೆಸುತ್ತಿದ್ದಾ ನೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು  ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತನ ವಿರುದ್ಧ ಕೇರಳ ಲಾಟರಿ ಆಕ್ಟ್ ಪ್ರಕಾರ ಕೇಸು ದಾಖಲಿಸಲಾಗಿದೆ. ಬಂಧಿತನನ್ನು …

ಅಡೂರು ಮೃತದೇಹ ಪತ್ತೆ ಪ್ರಕರಣ: ಡಿಎನ್‌ಎ ತಪಾಸಣೆಗೆ ನಿರ್ಧಾರ

ಮುಳ್ಳೇರಿಯ: ಅಡೂರು ಬೆಳ್ಳಚ್ಚೇರಿ ಗುಳಿಗನಮೂಲೆ ಎಂಬಲ್ಲಿ ಕಾಡಿನಲ್ಲಿ  ಪತ್ತೆಯಾದ ಮೃತದೇಹ ಯಾರದ್ದೆಂದು ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮೊನ್ನೆ ಸಂಜೆ ವೇಳೆ ಪತ್ತೆಯಾದ  ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿತ್ತು.  ಸಮೀಪದ ಮರದ ರೆಂಬೆಯಲ್ಲಿ ಬಟ್ಟೆ ನೇತಾಡಿಸಿದ ಸ್ಥಿತಿಯಲ್ಲಿ ಕಂಡುಬಂದಿ ದ್ದು, ಈ ಹಿನ್ನೆಲೆಯಲ್ಲಿ  ನೇಣು ಬಿಗಿದು ಸಾವಿಗೀಡಾರಬಹುದೆಂದು ಅಂದಾಜಿಸಲಾಗಿದೆ. ಮೃತದೇಹ ಯಾರದ್ದೆಂದು ತಿಳಿಯಲು  ಡಿಎನ್‌ಎ ತಪಾಸಣೆ ನಡೆಸಬೇಕಾಗಿ ಬರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಮೃತದೇಹ ಸ್ಥಳದಿಂದ ನಾಪತ್ತೆಯಾದ  …

ಮಾಜಿ ಶಾಸಕ ಪಿ.ಜೆ. ಫ್ರಾನ್ಸಿಸ್ ನಿಧನ

ಆಲಪ್ಪುಳ: ಕಾಂಗ್ರೆಸ್ ಮುಖಂ ಡ, ಮಾಜಿ ಶಾಸಕ ಪಿ.ಜೆ. ಫ್ರಾನ್ಸಿಸ್ (88) ನಿಧನ ಹೊಂದಿದರು. 1996ರ ವಿಧಾನಸಭಾ ಚುನಾವಣೆ ಯಲ್ಲಿ ಮಾರಾರಿಕುಳಂ ಕ್ಷೇತ್ರದಲ್ಲಿ ವಿ.ಎಸ್. ಅಚ್ಯುತಾನಂದನ್ರನ್ನು ಸೋಲಿಸಿ ಗಮನ ಸೆಳೆದಿದ್ದರು. 1987, 91ರಲ್ಲಿ ಅರೂರು ವಿಧಾನ ಸಭಾ ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿಯಾಗಿದ್ದ ಕೆ.ಆರ್. ಗೌರಿಅಮ್ಮರ ವಿರುದ್ಧ ಸ್ಪರ್ಧಿಸಿದ್ದರು. ಅದರ ಬಳಿಕ ಮಾರಾರಿಕುಳಂನಲ್ಲಿ ಕೇರಳದ ಗಮನ ಸೆಳೆದ ಸ್ಪರ್ಧೆ ಯಲ್ಲಿ ಅವರು ವಿ.ಎಸ್. ಅಚ್ಯುತಾ ನಂದನ್ರನ್ನು ಸೋಲಿಸಿ ಜಯ ಗಳಿಸಿದ್ದರು. ಆ ಬಳಿಕ 2001ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದರಾ …

ವಿಜಿಲೆನ್ಸ್ ಪರಿಶೀಲನೆ ಮೊಬೈಲ್ ಟವರ್‌ನಿಂದ ತೆರಿಗೆ ವಸೂಲಿ ಮಾಡದ ಪಂಚಾಯತ್‌ಗೆ ಎರಡು ಲಕ್ಷ ರೂ. ನಷ್ಟ

ಉಪ್ಪಳ: ಮೊಬೈಲ್ ಟವರ್ ಸ್ಥಾಪಿಸಿದ ಸ್ಥಳದಿಂದ ಸಕಾಲದಲ್ಲಿ ತೆರಿಗೆ ವಸೂಲಿ ಮಾಡದ ಮಂಗ ಲ್ಪಾಡಿ ಗ್ರಾಮ ಪಂಚಾಯತ್‌ಗೆ 2.10 ಲಕ್ಷ  ರೂ.ಗಳ  ನಷ್ಟ ಉಂಟಾಗಿದೆ. ಕಾಸರಗೋಡು ವಿಜಿಲೆನ್ಸ್ ಇನ್‌ಸ್ಪೆಕ್ಟರ್ ಪಿ. ನಾರಾಯಣನ್ ನೇತೃತ್ವದ ತಂಡ ನಿನ್ನೆ  ಮಂಗಲ್ಪಾಡಿ ಪಂಚಾಯತ್ ಕಚೇರಿಯಲ್ಲಿ   ಪರಿಶೀಲನೆ ನಡೆಸಿದ್ದು, ಅದರಲ್ಲಿ ಈ ನಷ್ಟ ಪತ್ತೆಯಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. 2013-14 ನೇ ಆರ್ಥಿಕ ವರ್ಷದಲ್ಲಿ ಈ ನಷ್ಟ ಉಂಟಾಗಿದೆ. ಈ ಅವಧಿಯಲ್ಲಿ ಎರಡು ಖಾಸಗಿ ಮೊಬೈಲ್ ಸಂಸ್ಥೆಗಳಿಂದ ತೆರಿಗೆ ವಸೂಲಿ ಮಾಡಲಾಗಿಲ್ಲವೆಂದೂ …

ಬೇಕರಿಯಲ್ಲಿ ಗ್ರಾಹಕ ಮರೆತುಹೋದ ಮೊಬೈಲ್ ಫೋನ್ ತನ್ನದೆಂದು ತಿಳಿಸಿ ಲಪಟಾಯಿಸಿದ ಬೇರೊಬ್ಬ ವ್ಯಕ್ತಿ; ಯಥಾರ್ಥ ವಾರಸುದಾರ ಬಂದಾಗ ವ್ಯಾಪಾರಿಗೆ ಕಾಡಿತು ಚಿಂತೆ

ಕುಂಬಳೆ: ಬೇಕರಿಯಲ್ಲಿ  ಗ್ರಾಹಕ ರೊಬ್ಬರು ಮರೆತುಹೋದ ಮೊಬೈಲ್ ಫೋನ್ ತನ್ನದೆಂದು ತಿಳಿಸಿ ಬೇರೊಬ್ಬ ವ್ಯಕ್ತಿ ಲಪಟಾಯಿಸಿದ ಘಟನೆ ನಡೆದಿದೆ. ಕುಂಬಳೆ ಪೇಟೆಯಲ್ಲಿರುವ  ಬೇಕರಿಯೊಂದಕ್ಕೆ ನಿನ್ನೆ ಮಧ್ಯಾಹ್ನ ತಲುಪಿದ ಗ್ರಾಹಕರೊಬ್ಬರು ಸಾಮಗ್ರಿ ಖರೀದಿಸಿ ಮರಳುವಾಗ ಅವರ  ಫೋನ್ ಬೇಕರಿಯಲ್ಲಿ ಮರೆತು ಹೋಗಿ ದ್ದರು. ಅದನ್ನು ಬೇರೊಬ್ಬ ಗ್ರಾಹಕ ಬೇಕರಿಯ ವ್ಯಾಪಾರಿಗೆ ನೀಡಿದ್ದರು. ಮೊಬೈಲ್ ಫೋನ್ ಯಾರದ್ದೆಂದು ವ್ಯಾಪಾರಿ ಹುಡುಕಾಡುತ್ತಿದ್ದಾಗ ಅಲ್ಲೇ ಸಮೀಪದಲ್ಲಿದ್ದ ವ್ಯಕ್ತಿ ಹೊರಗೆ ಹೋಗಿ ಸ್ವಲ್ಪ ಹೊತ್ತಿನ ಬಳಿಕ ಮರಳಿ ಬಂದು  ತನ್ನ ಮೊಬೈಲ್ ಫೋನ್ ಮರೆತು …