ತಾತ್ಕಾಲಿಕ ಪ್ರಾಧ್ಯಾಪಕರ ನೇಮಕ ಹೆಸರಲ್ಲಿ ಲಂಚ ಸ್ವೀಕಾರ ಆರೋಪ: ಕೇಂದ್ರೀಯ ವಿ.ವಿ ಪ್ರೊಫೆಸರ್ ಬಂಧನ

ಕಾಸರಗೋಡು: ಕಾಸರಗೋಡು ಪೆರಿಯಾದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತೆರವಿರುವ ತಾತ್ಕಾಲಿಕ  ಪ್ರಾಧ್ಯಾಪಕರ ಒಪ್ಪಂದದ ನವೀಕರಣೆ ಮತ್ತು ಪಿಎಚ್‌ಡಿಗೆ ಪ್ರವೇಶ ಕೊಡಿಸುವ ಹೆಸರಲ್ಲಿ  ಲಂಚ ಸ್ವೀಕರಿಸಿದ ಆರೋಪ ದಂತೆ ಪ್ರಸ್ತುತ ವಿ.ವಿಯ ಸೋಶ್ಯಲ್ ವರ್ಕ್ ವಿಭಾ ಗದ ಪ್ರೊಫೆಸರ್ ಎ.ಕೆ. ಮೋಹನ ನ್‌ರನ್ನು ವಿಜಿಲೆನ್ಸ್ ತಂಡ ಬಂಧಿಸಿದೆ. ಪ್ರಸ್ತುತ ವಿ.ವಿಯ  ಸೋಶ್ಯಲ್ ವರ್ಕ್ ವಿಭಾಗದಲ್ಲಿ ಒಪ್ಪಂದದ ಆಧಾರದಲ್ಲಿ ನಡೆಸಲಾದ ಅಧ್ಯಾಪಕ ನೇಮಕಾತಿಯ ಅವಧಿ ಡಿಸೆಂಬರ್ ನಲ್ಲಿ ಕೊನೆಗೊಂಡಿತ್ತು. ಅದನ್ನು ನವೀಕರಿಸುವ ಪ್ರಕ್ರಿಯೆ ಈಗ ನಡೆ ಯುತ್ತಿದೆ. ಅದರಲ್ಲಿ ಮತ್ತೆ …

ನಿವೃತ್ತ ಅಧ್ಯಾಪಿಕೆ ನಿಧನ

ಬದಿಯಡ್ಕ: ಪೆರಡಾಲ ಜಿಎಸ್‌ಬಿಎಸ್‌ನ ನಿವೃತ್ತ ಅಧ್ಯಾಪಿಕೆ ಬೀಜಂತ್ತಡ್ಕ ನಿವಾಸಿ ಸುಗುಣ ಕೆ. (೮೫) ನಿಧನ ಹೊಂದಿದರು. ದಿ| ರಘುವೀರ್ ರಾವ್‌ರ ಪತ್ನಿಯಾಗಿದ್ದಾರೆ. ಮೃತರು ಮಕ್ಕಳಾದ ರಾಜೇಶ್ವರಿ, ಜಯಲಕ್ಷ್ಮಿ, ಗಣೇಶ, ವಿದ್ಯಾ, ಜ್ಯೋತಿ, ಪ್ರಕಾಶ, ಪೂರ್ಣಿಮಾ ರಾವ್, ಅಳಿಯಂದಿರಾದ ವಿಶ್ವನಾಥ, ಪ್ರದೀಪ, ಲಕ್ಷ್ಮಣ, ಗೋಪಿನಾಥ, ಸೊಸೆಯಂದಿರಾದ ಪುಷ್ಪಲತಾ, ಸುಚಿತ್ರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಲು ಒತ್ತಾಯಿಸಿ ಕ್ರಿಯಾ ಸಮಿತಿಯಿಂದ ಧರಣಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಬೇಕೆಂದು ಒತ್ತಾಯಿಸಿ ಕಾಸರಗೋಡು ನಗರಸಭಾ ವ್ಯಾಪ್ತಿಯ ೭, ೮, ೯, ೧೭, ೧೮ ವಾರ್ಡ್‌ಗಳ ಜನತೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ನುಳ್ಳಿಪ್ಪಾಡಿಯಲ್ಲಿ ಇಂದು ಧರಣಿ ನಡೆಸಿದರು. ಧರಣಿಯನ್ನು ನಗರಸಭಾ ಕೌನ್ಸಿಲರ್ ಪಿ. ರಮೇಶ್ ಉದ್ಘಾಟಿಸಿದರು. ನಗರಸಭಾ ಕೌನ್ಸಿಲರ್ ಎಂ. ಲಲಿತ ಅಧ್ಯಕ್ಷತೆ ವಹಿಸಿದರು. ಕ್ರಿಯಾ ಸಮಿತಿ ಕನ್ವೀನರ್ ನಗರಸಭಾ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ,  ಕ್ರಿಯಾ ಸಮಿತಿ ಕನ್ವೀನರ್ ಅನಿಲ್ ಚೆನ್ನಿಕ್ಕೆರೆ, ನಗರಸಭಾ ಕೌನ್ಸಿಲರ್‌ಗಳಾದ  ಶಾರದ, ವಿಮಲ ಶ್ರೀಧರ, ಡಾ. …

ಎರಡೆಡೆಗಳಿಗೆ ಅಬಕಾರಿ ದಾಳಿ ಕರ್ನಾಟಕ ಮದ್ಯ ಪತ್ತೆ; ಸ್ಕೂಟರ್ ಕಸ್ಟಡಿಗೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಎರಡೆಡೆಗಳಿಗೆ ದಾಳಿ ನಡೆಸಿ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಕಾಸರಗೋಡು ಕೂಡ್ಲು ಮನ್ನಿಪ್ಪಾಡಿಯಲ್ಲಿ ಕಾಸರಗೋಡು ಅಬಕಾರಿ ಕಮು ವಿಭಾಗ ಪ್ರಿವೆಂಟಿವ್ ಆಫೀಸರ್ ಸಿ.ಕೆ.ಎ. ಸುರೇಶ್‌ರ ನೇತೃತ್ವದ ತಂಡ ನಿನ್ನೆ ದಾಳಿ ನಡೆಸಿ ೧೮೦ ಎಂಎಲ್‌ನ ೧೭ ಪ್ಯಾಕೇಟ್ (೩.೦೬ ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಆ ವೇಳೆ ಅದನ್ನು ಸಾಗಿಸುತ್ತಿದ್ದ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ. ಆದರೆ ಆತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ …

ಹೊಳೆಯಲ್ಲಿ ಪತ್ತೆಯಾದ ಮೃತದೇಹದ ಗುರುತು ಇನ್ನೂ ಅಲಭ್ಯ

ಮಂಜೇಶ್ವರ: ಹೊಳೆಯಲ್ಲಿ ಜೀರ್ಣಾವಸ್ಥೆ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಬಂಗ್ರಮAಜೇಶ್ವರ ಕೊಪ್ಪಳ ಹೊಳೆಯಲ್ಲಿ ನಿನ್ನೆ ಮಧ್ಯಾಹ್ನ ಮೃತದೇಹ ಸ್ಥಳೀಯರ ಗಮನಕ್ಕೆ ಬಂದಿದೆ. 40ರಿಂದ 50 ವರ್ಷ ಪ್ರಾಯ ಅಂದಾಜಿಸುವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹ ನಗ್ನ ಸ್ಥಿತಿಯಲ್ಲಿ ಜೀರ್ಣಾವಸ್ಥೆಯಲ್ಲಿತ್ತು. ಹಲವು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಮಂಜೇಶ್ವರ ಎಸ್.ಐ ಪ್ರಶಾಂತ್ ನೇತೃತ್ವದ ಪೊಲೀಸರು ತಲುಪಿ ಮೃತದೇಹದ ಪಂಚನಾಮೆ ನಡೆಸಿ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಮೃತದೇಹದ …

ಶ್ರೀಗಂಧ ಮರ ಸಾಗಾಟ: ಇಬ್ಬರ ಸೆರೆ

ಹೊಸದುರ್ಗ: ಶ್ರೀಗಂಧ ಮರ ಕಡಿದು ಸಾಗಿಸುವ ತಂಡದ ಇಬ್ಬರು ಸೆರೆಗೀಡಾಗಿದ್ದಾರೆ. ಇರಿಯಕಿಳಕ್ಕೇ ವೀಟಿಲ್‌ನ ಕೆ. ಅಜೀಶ್, ಅಂಬಲತ್ತರ ಪಾರಪಳ್ಳಿಯ ಬಿ. ನಸೀರ್ ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಭೀಮನಡಿ ಸೆಕ್ಷನ್ ಫಾರೆಸ್ಟ್ ಆಫೀಸರ್ ಕೆ.ಎನ್. ಲಕ್ಷ್ಮಣನ್, ಬೀಟ್ ಆಫೀಸರ್‌ಗಳಾದ ಕೆ. ವಿಶಾಖ್, ವಿ. ಯಧುಕೃಷ್ಣನ್, ಅಪರ್ಣ, ಚಂದ್ರನ್ ಎಂಬಿವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಕರಿಂದಳ ಕಯನಿಯಿಂದ ೫೦ ಕಿಲೋ ಶ್ರೀಗಂಧ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧನ ನಡೆದಿದೆ.

 ಪಂಪಾದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಮತ್ತೆ ಬೆಂಕಿ

ಪತ್ತನಂತಿಟ್ಟ: ಪಂಪಾದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಮತ್ತೆ ಬೆಂಕಿ ಹತ್ತಿಕೊಂಡಿದೆ. ಇಂದು ಬೆಳಿಗ್ಗೆ ೬ ಗಂಟೆಗೆ ಈ ಘಟನೆ ನಡೆದಿದೆ. ಹಿಲ್ ವ್ಯೂನಿಂದ ಜನರನ್ನು ಹತ್ತಿಸಲು ಬಸ್‌ನ್ನು ಸ್ಟ್ಯಾಂಡ್ ತರುತ್ತಿದ್ದಾಗ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಘಟನೆ ವೇಳೆ ಬಸ್‌ನಲ್ಲಿ ಚಾಲಕ ಹಾಗೂ ಕಂಡಕ್ಟರ್ ಮಾತ್ರವೇ ಇದ್ದರು.  ಇತ್ತೀಚೆಗೆ ಇದೇ ರೀತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹತ್ತಿಕೊಂಡಿತ್ತು.

ಗಣರಾಜ್ಯೋತ್ಸವ: ಕಾರಗೋಡಿನಲ್ಲಿ ಸಚಿವ ವಿ. ಅಬ್ದುಲ್ ರಹ್ಮಾನ್‌ರಿಂದ ಧ್ವಜಾರೋಹಣ

ಕಾಸರಗೋಡು: ಗಣರಾ ಜ್ಯೋತ್ಸವ ದಿನವಾದ ಜನವರಿ  ೨೬ರಂದು ಕಾಸರಗೋಡು ವಿದ್ಯಾನಗರ ನಗರಸಭಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಕ್ರೀಡಾ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಜ್ಜ್ ಖಾತೆ ಸಚಿವ  ವಿ. ಅಬ್ದುಲ್ ರಹ್ಮಾನ್ ತ್ರಿವರ್ಣ ಧ್ವಜ ಹಾರಿಸಿ ಪರೇಡ್‌ನಲ್ಲಿ ವಂದನೆ ಸ್ವೀಕರಿಸುವರು.

ಹರಿಜಾಲ್ ಕ್ಷೇತ್ರದಲ್ಲಿ ಚಪ್ಪರ, ಭದ್ರದೀಪ ಸಮರ್ಪಣೆ

ಬೆದ್ರಡ್ಕ: ಹರಿಜಾಲ್ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಹರಿಪಾದ ಸೇವಾ ಸಮಿತಿ ನಿರ್ಮಿಸಿದ ದೇಗುಲದ ಶಾಶ್ವತ ಚಪ್ಪರ, ಗರ್ಭಗುಡಿಯ ಬಾಗಿಲಿಗೆ ಹಿತ್ತಳೆಯ ಹೊದಿಕೆ, ಭದ್ರದೀಪ ಎಂಬಿವುಗಳ ಸಮರ್ಪಣೆ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ನಡೆಸಿದರು. ಇದರಂಗವಾಗಿ  ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ನಡೆಯಿತು. ತಂತ್ರಿ ವಿಷ್ಣುಪ್ರಕಾಶ್ ರಾವ್ ಪಟ್ಟೇರಿ, ವಸಂತ ಪೈ, ರವೀಂದ್ರ, ವಿಮಲ್ ರಾಜ್, ರಮಣಿಕೃಷ್ಣನ್, ಶಿವಪ್ಪಗಟ್ಟಿ ಮಾತನಾಡಿದರು.

ಕಡಂಬಾರು ಪರಿಸರ ರಸ್ತೆಯಲ್ಲಿ ತ್ಯಾಜ್ಯ ರಾಶಿ: ದುರ್ವಾಸನೆಯಿಂದ ಸಂಚಾರ ಸಮಸ್ಯೆ

ಮಂಜೇಶ್ವರ: ಹೊಸಂಗಡಿ- ಆನೆಕಲ್ಲು ಲೋಕೋಪಯೋಗಿ ಇಲಾಖೆಯ ದುರ್ಗಿಪಳ್ಳ, ಕಡಂ ಬಾರು ಪರಿಸರದ ರಸ್ತೆ ಬದಿಯ ಅಲ್ಲಲ್ಲಿ ತ್ಯಾಜ್ಯ ರಾಶಿಗಳು ಕಂಡು ಬರುತ್ತಿದ್ದು, ಮಳೆಗೆ ಕೊಳೆತು ದುರ್ವಾಸನೆ ಬೀರುತ್ತಿದ್ದು, ಈ ಭಾಗದಲ್ಲಿ ಸಂಚಾರ ಸಮಸ್ಯೆಯಾ ಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಪ್ಲಾಸ್ಟಿಕ್ ಚೀಲದಲ್ಲಿ ವಿವಿಧ ತ್ಯಾಜ್ಯಗಳನ್ನು ತಂದು ಉಪೇಕ್ಷಿಸಲಾಗುತ್ತಿದೆ. ಕಡಂಬಾರು ತಿರುವುನಲ್ಲಿ ರಸ್ತೆಯ ಇಕ್ಕೆಡೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿದೆ. ಮಂಜೇಶ್ವರ ಹಾಗೂ ಮೀಂಜ ಪಂಚಾಯತ್ ಸಂಗಮಿಸುವ ಪ್ರದೇಶ ಇದಾಗಿದೆ. ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಈ ಹಿಂದೆ ಕಡಂಬಾರಿನಲ್ಲಿ …