ಪಂಚಾಯತ್ ಸದಸ್ಯೆ ರಸ್ತೆ ಬದಿ ಕುಸಿದು ಬಿದ್ದು ಸಾವು

ಕಾಸರಗೋಡು: ಗ್ರಾಮ ಪಂಚಾಯತ್ ಸದಸ್ಯೆ ರಸ್ತೆ ಬದಿ ಕುಸಿದು ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ನ ಮೂರನೇ ವಾರ್ಡ್ ಸದಸ್ಯೆ, ಮೂಲತಃ ವಿದ್ಯಾನಗರ ಕೋಪ ನಿವಾಸಿ ಹಾಗೂ ಈಗ ಮೊಗ್ರಾಲ್ ಪುತ್ತೂರು ಮೊಗರಿನಲ್ಲಿ ವಾಸಿಸುತ್ತಿರುವ ಪಿ. ಪುಷ್ಪ(೪೩) ಸಾವನ್ನಪ್ಪಿದ ಮಹಿಳೆ. ಇವರು ಮುಸ್ಲಿಂ ಲೀಗ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಮೂರನೇ ವಾರ್ಡ್‌ನಲ್ಲಿ ಗೆದ್ದು ಪಂಚಾಯತ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದರು. ಇವರು ಬಳ್ಳೂರು ಕೋಟೆ ಕುಂಜ ಚೆನ್ಯಾಕುಳದ ಕ್ವಾರ್ಟರ್ಸ್ ಬಳಿ ನಿನ್ನೆ ರಸ್ತೆ ಬದಿಯಲ್ಲಿ ಬಿದ್ದಿರುವುದನ್ನು …

ಮಧ್ಯವಯಸ್ಕ ಮನೆಯೊಳಗೆ ನೇಣುಬಿಗಿದು ಸಾವು

ಕಾಸರಗೋಡು: ಮಧ್ಯವಯಸ್ಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಡ್ಕತ್ತಬೈಲು ಕುದ್ರು ಹೌಸ್‌ನ ದಿ| ನಾರಾಯಣ ಶೆಟ್ಟಿಯವರ   ಪುತ್ರ ಚಂದ್ರ (೫೩) ಎಂಬವರು ಮೃತ ವ್ಯಕ್ತಿ.  ಇವರು ಇಂದು ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕೂಲಿ ಕಾರ್ಮಿಕನಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ತಾಯಿ ಶಾರದ, ಪತ್ನಿ ಸುಮತಿ, ಮಕ್ಕಳಾದ  ದೀಕ್ಷಿತ್, ದೀಪಿಕ, ಸಹೋದರರಾದ ಶಶಿ, ಮಹಾಬಲ, ಲೋಕೇಶ್ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

ಬೆಳ್ಳಂಬೆಳಗ್ಗೆ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಾಕ್ಕೂಟ್ಟತ್ತಿಲ್ ಸೆರೆ

ಪತ್ತನಂತಿಟ್ಟ: ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಾಕೂಟ್ಟತ್ತಿಲ್‌ರನ್ನು  ಪೊಲೀಸರು ಬಂಧಿಸಿದ್ದಾರೆ.  ಪತ್ತಂತಿಟ್ಟ ಅಡೂರು ಮುಂಡಪ್ಪಳ್ಳಿಯಲ್ಲಿರುವ ರಾಹುಲ್‌ರ ಮನೆಗೆ ಇಂದು ಬೆಳ್ಳಂಬೆಳಗ್ಗೆ ತಿರುವನಂತಪುರ ಕಂಟೋನ್ಮೆಂಟ್ ಪೊಲೀಸರು ಆಗಮಿಸಿ  ಆ ಮನೆಯಲ್ಲಿ ಸುತ್ತುವರಿದು ಅವರನ್ನು ಬಂಧಿಸಿದ್ದಾರೆ. ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ತಿರುವನಂತಪುರದ ಸೆಕ್ರೆಟರಿಯೇಟ್‌ಗೆ ನಡೆಸಲಾದ ಮುತ್ತಿಗೆ ಚಳವಳಿಗೆ ಸಂಬಂಧಿಸಿ ರಾಹುಲ್‌ರನ್ನು   ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯನ್ನಾಗಿ ರಾಹುಲ್‌ರನ್ನು ಹೆಸರಿಸಲಾಗಿದೆ. ರಾಹುಲ್‌ರನ್ನು ಬಂಧಿಸಿದ ಬೆನ್ನಲ್ಲೇ ಯೂತ್ ಕಾಂಗ್ರೆಸ್ ರಾಜ್ಯದಾದ್ಯಂತ ಪ್ರತಿಭಟನೆಗೆ ಇಳಿದಿದ್ದಾರೆ. …

ಸ್ಕೂಟರ್-ಕಾರು ಢಿಕ್ಕಿ: ಇಬ್ಬರು ಮೃತ್ಯು ಪಾದಚಾರಿ ಸಹಿತ ೫ ಮಂದಿಗೆ ಗಾಯ

ಕಾಸರಗೋಡು: ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಪೆರಿಯ ಬಳಿಯ ಕುಣಿಯ ಎಂಬಲ್ಲಿ ಸಂಭವಿಸಿದೆ.  ಅಪಘಾತದಲ್ಲಿ ಓರ್ವ ಪಾದಚಾರಿ ಸಹಿತ ೫ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರು ಚಟ್ಟಂಚಾಲ್ ನಿವಾಸಿಗಳಾದ ನಾರಾ ಯಣನ್ ಹಾಗೂ ಗೋಪಾಲಕೃಷ್ಣನ್ ಎಂಬವರೆಂದು ಹೇಳಲಾಗುತ್ತಿದೆ. ಇವರು ಸಂಚರಿಸುತ್ತಿದ್ದ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದೇ ವೇಳೆ ಅಪಘಾತ   ಸಂಭವಿಸಿದ ರಸ್ತೆಯಲ್ಲಿ ನಡೆದು ಹೋ ಗುತ್ತಿದ್ದ  ಹಂಸ ಎಂಬವರೂ ಗಾಯಗೊಂಡಿ ದ್ದಾರೆಂದು ತಿಳಿದುಬಂದಿದೆ. …

೩ ತಿಂಗಳ ಮಗು ಗಂಟಲಲ್ಲಿ ಹಾಲು ಸಿಲುಕಿ ಮೃತ್ಯು

ಕುಂಬಳೆ: ಮೂರು ತಿಂಗಳ ಪ್ರಾಯದ ಮಗು ಗಂಟಲಲ್ಲಿ ಹಾಲು ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈಶ್ವರಮಂಗಲ ನಿವಾಸಿಯೂ ಪ್ರಸ್ತುತ ಬಂಬ್ರಾಣದ ಬಾಡಿಗೆ ಮನೆಯಲ್ಲಿ ವಾಸಿಸುವ ಅಸೀಸ್- ಖದೀಜ ದಂಪತಿಯ ಪುತ್ರಿ ಆಯಿಶಾ ಮೆಹ್ರ ಮೃತಪಟ್ಟ ಮಗುವಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಗಂಟಲಲ್ಲಿ ಹಾಲು ಸಿಲುಕಿ ಅಸ್ವಸ್ಥಗೊಂಡಿರುವುದಾಗಿ  ತಿಳಿಸಿ ಮಗುವನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಅಷ್ಟರೊಳಗೆ ಮಗು ಮೃತಪಟ್ಟಿರುವುದಾಗಿ ತಪಾಸಣೆಯಲ್ಲಿ ತಿಳಿದು ಬಂದಿದೆ. ಈ ವಿಷಯವನ್ನು ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ …

ಮುಂದುವರಿದ ಅಬಕಾರಿ ಕಾರ್ಯಾಚರಣೆ : ಅಕ್ರಮ ಮದ್ಯ, ವಾಶ್ ವಶ

ಕಾಸರಗೋಡು: ಜಿಲ್ಲೆಯಲ್ಲಿ ಅಬಕಾರಿ ತಂಡ ಆರಂಭಿಸಿರುವ ಅಬಕಾರಿ ದಾಳಿ ಇನ್ನೂ ಮುಂದುವರಿ ಯುತ್ತಿದ್ದು, ಇದರಂತೆ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಿನ್ನೆ ನಡೆಸಲಾದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ಮದ್ಯ ಮತ್ತು ವಾಶ್ (ಹುಳಿರಸ) ಪತ್ತೆಹಚ್ಚಿ  ವಶಪಡಿಸಲಾಗಿದೆ. ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ವಿನು ನೇತೃತ್ವದ ತಂಡ ಅಡೂರು ಬಾಲನಡ್ಕದ ಎಡೋಣಿಯಲ್ಲಿ ನಿನ್ನೆ  ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಎಂಎಲ್‌ನ ೯೬ ಟೆಟ್ರಾ ಪ್ಯಾಕೆಟ್ (೧೭.೨೮ ಲೀಟರ್) ಕರ್ನಾಟಕ ನಿರ್ಮಿತ  ಮದ್ಯ ಪತ್ತೆಹಚ್ಚಿ ವಶಪಡಿ ಸಿಕೊಂಡಿದೆ. ಈ  ಕಾರ್ಯಾ ಚರಣೆಯಲ್ಲಿ …

ಅಬ್ಬಾಸ್ ಬೀಗಂ ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷ

ಕಾಸರಗೋಡು: ಕಾಸರಗೋಡು ನಗರಸಭೆಯ ಹೊಸ ಅಧ್ಯಕ್ಷರನ್ನಾಗಿ ಮುಸ್ಲಿಂ ಲೀಗ್‌ನ ಅಬ್ಬಾಸ್ ಬೀಗಂರನ್ನು ಆರಿಸಲಾಗಿದೆ. ನಗರಸಭಾ ಚುನಾವಣೆಯ ವೇಳೆ ಮುಸ್ಲಿಂ ಲೀಗ್ ಮಾಡಿಕೊಂಡಿದ್ದ ಪೂರ್ವಹೊಂದಾಣಿಕೆಯ ಪ್ರಕಾರ ಅಬ್ಬಾಸ್ ಬೀಗಂರನ್ನು ಹೊಸ ನಗರಸಭಾ ಅಧ್ಯಕ್ಷರನ್ನಾಗಿ ನೇಮಿಸುವ ತೀರ್ಮಾನ ಮುಸ್ಲಿಂ ಲೀಗ್  ಜಿಲ್ಲಾ ಸಂಸದೀಯ ಮಂಡಳಿ ಸಭೆ ಕೈಗೊಂಡಿದೆ. ಈ ಹಿಂದೆ ಮಾಡಿಕೊಳ್ಳಲಾದ ಹೊಂದಾಣಿಕೆ ಪ್ರಕಾರ ಕಾಸರಗೋಡು ನಗರಸಭೆಯ ಮೊದಲ ಎರಡೂವರೆ ವರ್ಷ  ನಗರಸಭಾ ಅಧ್ಯಕ್ಷ ಸ್ಥಾನವನ್ನು ನ್ಯಾ. ವಿ.ಎಂ. ಮುನೀರ್‌ರಿಗೂ ನಂತರದ ಎರಡೂವರೆ ವರ್ಷ ಅಬ್ಬಾಸ್ ಬೀಗಂರಿಗೆ   ವಹಿಸಿಕೊಡುವ ತೀರ್ಮಾನ …

ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಭಾರೀ ಮಾದಕಪದಾರ್ಥವಾದ ಎಂಡಿಎಂಎ ಮಾರಾಟ ಜಿಲ್ಲೆಯಲ್ಲಿ ದಿನೇ ದಿನೇ ತೀವ್ರಗೊಳ್ಳುತ್ತಿದ್ದು ಅದರ ವಿರುದ್ಧ ಪೊಲೀಸರು ಮತ್ತು ಅಬಕಾರಿ ದಳ ಜಿಲ್ಲೆಯಾದ್ಯಂತ ನಡೆಸುತ್ತಿರುವ ತನ್ನ ಕಾರ್ಯಾ ಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದರಂತೆ ಚಂದೇರ ಪೊಲೀಸ್ ಠಾಣೆಯ ಎಸ್‌ಐ ಎಂ.ವಿ. ಶ್ರೀದಾಸನ್‌ರ ನೇತೃತ್ವದ ಪೊಲೀಸರು ತೃಕ್ಕರಿಪುರ ಆಯಟ್ಟಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಂದೂವರೆ ಗ್ರಾಂ ಎಂಡಿಎಂಎ ಸಹಿತ ಯುವಕ ನನ್ನು ಬಂಧಿಸಿದೆ. ತೃಕ್ಕರಿಪುರ ಆಯಿಟ್ಟಿ ಪಳ್ಳಿವಳಪ್ಪಿಲ್  ವೀಟಿಲ್‌ನ ಪಿ.ವಿ. ಮೊಹಮ್ಮದ್ ಸಬ್‌ಹಾನ್ (೨೫) ಬಂಧಿತ ಆರೋಪಿ ಇಂತಹ ಕಾರ್ಯಾಚರಣೆಯನ್ನು ಪೊಲೀಸರು …

ಉಪ್ಪಳದಲ್ಲಿ ಚರಂಡಿಗೆ ಬಿದ್ದ ಸಾರಿಗೆ ಬಸ್‌ನ ಚಕ್ರ

ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಮಲಬಾರ್ ಬಸ್‌ನ ಮುಂಭಾಗದ ಚಕ್ರ ಚರಂಡಿ ಹೊಂಡಕ್ಕೆ ಬಿದ್ದ ಘಟನೆ ಇಂದು ಬೆಳಿಗ್ಗೆ ಉಪ್ಪಳ ಬಸ್ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಉಪ್ಪಳ ನಿಲ್ದಾಣಕ್ಕೆ ಪ್ರವೇಶಿಸಿ ಅಲ್ಲಿಂದ ತಿರುಗಿ ಕಾಸರಗೋಡಿನತ್ತ ತೆರಳುತ್ತಿದ್ದಾಗ ಸರ್ವೀಸ್ ರಸ್ತೆ ಬಳಿಯಲ್ಲಿ ನಿರ್ಮಿಸುತ್ತಿರುವ ಚರಂಡಿಗೆ ಬಸ್‌ನ ಚಕ್ರ ಬಿದ್ದಿದೆ.  ಆದರೆ ಯಾವುದೇ ಅಪಾಯ ಸಂಭವಿಸಲಿಲ್ಲ. ಪ್ರಯಾಣಿಕರನ್ನು ಇನ್ನೊಂದು ಬಸ್‌ನಲ್ಲಿ ಕಳುಹಿಸಿಕೊಡಲಾಯಿತು. ಈ ವೇಳೆ ಅಲ್ಪ ಹೊತ್ತು ಬಸ್‌ಗಳಿಗೆ ಉಪ್ಪಳ ನಿಲ್ದಾಣಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. …

ನಟ ಸುರೇಶ್‌ಗೋಪಿ ಮಗಳ ಮದುವೆ: ಪ್ರಧಾನಮಂತ್ರಿ ಗುರುವಾಯೂರಿಗೆ

ಗುರುವಾಯೂರು: ಸಿನಿಮಾ ನಾಟಕನಟ, ಮಾಜಿ ರಾಜ್ಯಸಭಾ ಸದಸ್ಯ, ಬಿಜೆಪಿ ನೇತಾರರೂ ಆಗಿರುವ ಸುರೇಶ್ ಗೋಪಿ ಅವರ ಮಗಳು ಭಾಗ್ಯರ ವಿವಾಹ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಪಾಲ್ಗೊಳ್ಳುವರು. ಜನವರಿ ೧೭ರಂದು ಸುರೇಶ್ ಗೋಪಿಯವರ ಮಗಳ ಮದುವೆ ಗುರುವಾಯೂರು ಕ್ಷೇತ್ರದಲ್ಲಿ ನಡೆಯಲಿದೆ. ಅದರಲ್ಲಿ ಮೋದಿ ಭಾಗವಹಿಸಿ ವಧೂವರರನ್ನು ಆಶೀರ್ವದಿಸುವರು. ಇದರಂತೆ ಅಂದು ಬೆಳಿಗ್ಗೆ ೮ ಗಂಟೆಗೆ ಪ್ರಧಾನಮಂತ್ರಿ ಗುರುವಾ ಯೂರು ಕ್ಷೇತ್ರ ಸಂದರ್ಶಿಸಿ ದೇವರ ದರ್ಶನ ನಡೆಸು ವರು. ಆ ಬಳಿಕ ಮದುವೆ ಸಮಾರಂಭ ದಲ್ಲಿ ಭಾಗವಹಿಸುವರು. ಮಾತ್ರವಲ್ಲ …