ಸೋಂಕಾಲಿನಲ್ಲಿ ಸ್ಕೂಟರ್-ಕಾರು ಅಪಘಾತ: ಸವಾರ ಮೃತ್ಯು

ಉಪ್ಪಳ: ಸ್ಕೂಟರ್‌ಗೆ ಕಾರು ಡಿಕ್ಕಿಹೊಡೆದು ಸವಾರ ಮೃತಪಟ್ಟ ಘಟನೆ ಸೋಂ ಕಾಲಿನಲ್ಲಿ ನಡೆದಿದೆ. ಮೀಂಜ ಪಂಚಾಯತ್‌ನ ಕುಳೂರು ಕೊಜಮುಕು ಉಮಿಕ್ಕಳ ನಿವಾಸಿ ದಿ| ಮೊಯಿದೀನ್ ಕುಂಞÂ ಯವರ ಪುತ್ರ ಮೊಹಮ್ಮದ್ ಹನೀಫ್ (41) ಮೃತಪಟ್ಟಿದ್ದಾರೆ. ಬೇಕೂರು ಬಳಿಯ ಒಬರ್ಲೆ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮ ಕಳೆದು ಸ್ಕೂಟರ್‌ನಲ್ಲಿ ಕೊಡಂಗೆಗೆ ತೆರಳಿದ್ದರು. ಅಲ್ಲಿಂದ ಮನೆಗೆ ತೆರಳಲು ಸೋಂಕಾಲು ರಸ್ತೆ ಪ್ರವೇಶಿಸುತ್ತಿದ್ದಂತೆ ಬೇಕೂರು ಭಾಗದಿಂದ ಆಗಮಿಸಿದ ಕಾರು ಸ್ಕೂಟರ್‌ಗೆ ಡಿಕ್ಕಿಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಇವರನ್ನು ಸ್ಥಳೀಯರು ಕೂಡಲೇ ಉಪ್ಪಳದ ಖಾಸಗಿ …

ಬಲ್ಕೀಸ್‌ಭಾನು ಪ್ರಕರಣ: ೧೧ ಅಪರಾಧಿಗಳ ಕ್ಷಮಾಧಾನ ರದ್ದುಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಬಲ್ಕೀಸ್‌ಭಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ೧೧ ಅಪರಾಧಿಗಳನ್ನು ಅಕಾಲಿಕವಾಗಿ  ಬಿಡುಗಡೆಗೊಳಿಸಿದ್ದ ಗುಜರಾತ್  ಸರಕಾರದ ತೀರ್ಮಾನವನ್ನು  ಸುಪ್ರೀಂಕೋರ್ಟ್ ರದ್ದುಪಡಿಸಿ ಇಂದು ಬೆಳಿಗ್ಗೆ ತೀರ್ಪು ನೀಡಿದೆ.  ನ್ಯಾಯಮೂರ್ತಿಗಳಾದ ಟಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್  ವಿಶೇಷ ಪೀಠ ಈ ತೀರ್ಪು ನೀಡಿದೆ.  ಅಪರಾಧಿಗಳ ಬಿಡುಗಡೆಯ ಬಗ್ಗೆ ನಿರ್ಧರಿಸುವ ಹಕ್ಕು ಮಹಾರಾಷ್ಟ್ರ ಸರಕಾರಕ್ಕೆ ಇದೆಯೇ ಹೊರತು ಗುಜರಾತ್ ಸರಕಾರಕ್ಕಿಲ್ಲವೆಂದು ನ್ಯಾಯಾಲಯ ಹೇಳಿದೆ. ಈ ಅಪರಾಧವು ಗುಜರಾತ್‌ನಲ್ಲಿ ನಡೆದಿದ್ದರೂ ಅದರ ವಿಚಾರಣೆ  ಮಹಾರಾಷ್ಟ್ರದಲ್ಲಿ ನಡೆದಿದೆ. ಆದ್ದರಿಂದ …

ಅಸೌಖ್ಯ: ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ನಿಧನ

ಪೈವಳಿಕೆ: ಕಯ್ಯಾರು ಪರಂಬಳ ನಿವಾಸಿ ನಾರಾಯಣ ನಾಯ್ಕ್ವರ ಪುತ್ರ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ ಗುರುಪ್ರಸಾದ್ [43] ನಿಧನರಾದರು. ಹಲವು ದಿನಗಳ ಹಿಂದೆ ಅಸೌಖ್ಯ ಬಾಧಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ನಿನ್ನೆ ಮುಂಜಾನೆ ನಿಧನರಾದರು. ಇಲೆಕ್ಟಿçÃಷ್ಯನ್ ಆಗಿದ್ದರು. ಬಿಜೆಪಿ ಪರಂಬಳ 116ನೇ ಬೂತ್ ಅಧ್ಯಕ್ಷರಾಗಿದ್ದಾರೆ. ದುರ್ಗಾಶಕ್ತಿ ಕುಣಿತ ಭಜನಾ ಸಂಘ ಪರಂಬಳ ಇದರ ವ್ಯವಸ್ಥಾಪಕರಾಗಿದ್ದರು. ಎ.ಕೆ.ಎಸ್ ಕಯ್ಯಾರು ವಿಲೇಜ್ ಸಮಿತಿ ಅಧ್ಯಕ್ಷರಾಗಿದ್ದರು. ಮೃತರು ತಂದೆ, ತಾಯಿ ಜಯಂತಿ, ಪತ್ನಿ ಸುಜಾತ, ಪುತ್ರ ವೀಕ್ಷಿತ್, ಸಹೋದರರಾದ ಗೋಪಾಲ, …

ವಿವಿಧೆಡೆಗಳಿಗೆ ಅಬಕಾರಿ ದಾಳಿ: ಭಾರೀ ಪ್ರಮಾಣದ ಮದ್ಯ ವಶ; ಕಾರು, ಸ್ಕೂಟರ್ ಕಸ್ಟಡಿಗೆ, ಓರ್ವ ಸೆರೆ

ಕಾಸರಗೋಡು: ಕಾಸರಗೋಡಿನ ವಿವಿಧೆಡೆಗಳಲ್ಲಿ  ಅಬಕಾರಿ ತಂಡ ದಾಳಿ ನಡೆಸಿ ಭಾರೀ ಪ್ರಮಾಣದ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಈರ್ವರನ್ನು ಬಂಧಿಸ ಲಾಗಿದ್ದು, ಕಾರು ಮತ್ತು ಸ್ಕೂಟರ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೂಡ್ಲು ರಾಮದಾಸನಗರ ಶಿವಮಂಗಲದಲ್ಲಿ ಕಾಸರಗೋಡು ಅಬಕಾರಿ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ಸಿ.ಕೆ.ವಿ. ಸುರೇಶ್ ನೇತೃತ್ವದ ತಂಡ ದಾಳಿ ನಡೆಸಿ ಅಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ೨೫.೯೪ ಲೀಟರ್ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ …

ಛತ್ತೀಸ್‌ಘಡದಲ್ಲಿ ಬಿಜೆಪಿ ಮುಖಂಡನನ್ನು ಗುಂಡಿಟ್ಟು ಕೊಲೆ

ರಾಯ್‌ಪುರ್: ಛತ್ತೀಸ್‌ಘಡದಲ್ಲಿ ಬಿಜೆಪಿ ಮುಖಂಡನನ್ನು ಗುಂಡು ಹಾರಿಸಿ ಕೊಲೆಗೈಯ್ಯಲಾಗಿದೆ. ಬಿಜೆಪಿ ಕಂಗೇರ್ ಜಿಲ್ಲಾ ಉಪಾಧ್ಯಕ್ಷ ಅಸಿಂರಾಯ್ (೫೦)ರನ್ನು ಕೊಲೆಗೈಯ್ಯಲಾಗಿದೆ. ನಿನ್ನೆ ರಾತ್ರಿ ೮.೩೦ರ ವೇಳೆ ಪಕಂಜೂರ್ ನಗರದ ಕಂಗೇರ್‌ನಲ್ಲಿ ಬೈಕ್‌ನಲ್ಲಿ ಪ್ರಯಾ ಣಿಸುತ್ತಿದ್ದ ಮಧ್ಯೆ ಆಕ್ರಮಣವುಂಟಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಗೂಂಡಾ ತಂಡಗಳ ಮಧ್ಯೆ ಇರುವ ವೈಷಮ್ಯ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಕೂಡಾ ಇದೇ ರೀತಿಯ ಆಕ್ರಮಣಗಳನ್ನು ನಡೆಸಲಾಗಿತ್ತು. ಕಳೆದ ವರ್ಷ ಛತ್ತೀಸ್‌ಘಡದ ಗಲಭೆಪೀಡಿತ ಪ್ರದೇಶವಾದ ನಾರಾಯಣ್‌ಪುರ್ ಜಿಲ್ಲೆಯಲ್ಲಿ …

ಪೊಲೀಸ್ ಸಾವನ್ನಪ್ಪಿದ ಪ್ರಕರಣ : ಕಾರಣ ತಲೆಗೆ ಬಿದ್ದು ಗಂಭೀರ ಏಟು

ಕಾಸರಗೋಡು: ನಗರದ ಕರಂದಕ್ಕಾಡ್‌ನ ಉಮಾ ನರ್ಸಿಂಗ್ ಹೋಮ್ ಬಳಿ ಶನಿವಾರದಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಕಾಸರಗೋಡು ಜಿಲ್ಲಾ ಪೊಲೀಸ್ ಹೆಡ್ ಕ್ವಾರ್ಟರ್ಸ್‌ನ ಸಿವಿಲ್ ಪೊಲೀಸ್ ಆಫೀಸರ್ ಆಲಪ್ಪುಳ ಮಣ್ಣಂಜೇರಿ ವಡಕನ್ ಆರ‍್ಯಾಡ್ ಕುಟ್ಟನಾಡನ್ ಪರಂಬಿಲ್‌ನ ಕೆ.ಕೆ. ಸುಧೀಶ್ (೪೦)ರ ಸಾವಿಗೆ ಕಾರಣ ತಲೆಗೆ ಗಂಭೀರ ಏಟು ಬಿದ್ದಿರುವುದೇ ಆಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ನಿನ್ನೆ ಮರಣೋತ್ತರ ಪರೀಕ್ಷೆಗೊಳಪಡಿ ಸಲಾಗಿದೆ. ಬಳಿಕ ಮೃತದೇಹವನ್ನು …

ಆಸ್ಪತ್ರೆಯಲ್ಲಿ ಪತ್ನಿಯ ಆರೈಕೆಗಾಗಿ ತಲುಪಿದ ಪತಿ ಹೃದಯಾಘಾತದಿಂದ ನಿಧನ

ಕಾಸರಗೋಡು: ಚಿಕಿತ್ಸೆಯ ಲ್ಲಿರುವ ಪತ್ನಿಯ ಆರೈಕೆಗಾಗಿ ತಲುಪಿದ ಪತಿ ಹೃದಯಾ ಘಾತದಿಂದ ಆಸ್ಪತ್ರೆಯಲ್ಲೇ ಮೃತಪಟ್ಟರು. ಮಾವುಂಗಾಲ್‌ನ ಆಟೋ ಚಾಲಕ ಪುದಿಯ ಕಂಡ ನಿವಾಸಿ ಅಸೀಸ್ (೫೮)  ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೃದಯದ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ಮುಗಿಸಿ ಐಸಿಯುವಿನಲ್ಲಿರುವ ಪತ್ನಿ ಸುಬೈದರ ಆರೈಕೆಗಾಗಿ ಇವರು ಆಸ್ಪತ್ರೆಯಲ್ಲಿದ್ದರು. ಈ ಮಧ್ಯೆ ನಿನ್ನೆ ಬೆಳಿಗ್ಗೆ ಆಸ್ಪತ್ರೆ ಯಲ್ಲೇ ಹೃದಯಾಘಾತ ವುಂಟಾಗಿದೆ. ಕೂಡಲೇ ಕಾರ್ಡಿಯಾಕ್ ಐಸಿಯುವಿಗೆ ತಲುಪಿಸಲಾಗಿತ್ತು. ಮಧ್ಯಾಹ್ನದ ವೇಳೆ ಮೃತಪಟ್ಟರು. ಮೃತ ದೇಹವನ್ನು ಮಾವುಂ ಗಾಲ್ ಪೇಟೆಯಲ್ಲೂ …

ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬಾಲಕ ಮೃತ್ಯು: ತಾಯಿ ಆಸ್ಪತ್ರೆಯಲ್ಲಿ

ಕಾಸರಗೋಡು: ತಾಯಿ ಜತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಎಡನೀರು ಕಳರಿಯ ಎನ್. ಅರವಿಂದಾಕ್ಷನ್- ಸುಚಿತ್ರ ದಂಪತಿ ಪುತ್ರ, ಪೆರಿಯಡ್ಕ ಪೀಸ್ ಇಂಟರ್ ನ್ಯಾಶನಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿ ಅನ್‌ಶಿತ್ತ್ (೬) ಸಾವನ್ನಪ್ಪಿದ ಬಾಲಕ. ಅನ್‌ಶಿತ್ತ್ ತನ್ನ ತಾಯಿ ಸುಚಿತ್ರರ ಜೊತೆ ಡಿಸೆಂಬರ್ ೨೮ರಂದು ಎಡನೀರು- ನೆಲ್ಲಿಕಟ್ಟೆ ನಡುವಿನ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಮಿತ ವೇಗದಲ್ಲಿ ಬಂದ …

ರಾಜ್ಯ ಶಾಲಾ ಕಲೋತ್ಸವ: ಕಾಸರಗೋಡು ಬಿಇಎಂ ಶಾಲಾ ಮಕ್ಕಳ ಯಕ್ಷಗಾನ ತಂಡಕ್ಕೆ ಎ ಗ್ರೇಡ್

ಕಾಸರಗೋಡು: ಕೊಲ್ಲಂ ಜಿಲ್ಲೆಯಲ್ಲಿ ನಡೆದ 62ನೇ ಕೇರಳ ಶಾಲಾ ಕಲೋತ್ಸವದ ಹೆÊಸ್ಕೂಲï ವಿಭಾಗ ಯಕ್ಷಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ ಸ್ಥಾನ ಗಳಿಸುವ ಮೂಲಕ ಬಿಇಎಂ ಶಾಲಾ ಮಕ್ಕಳ ಯಕ್ಷಗಾನ ತಂಡ ಹೊಸ ಇತಿಹಾಸ ದಾಖಲಿಸಿದೆ.ಶಿಕ್ಷಕ ಯಶ್ವಂತ.ವೈ. ಅವರ ನೇತೃತ್ವದಲ್ಲಿ, ಮುಖ್ಯೋಪಾಧ್ಯಾಯ ವಿನ್ಸೆಂಟ್ ವಿನ್ಸ್ಟನ್ ಅವರ ಪ್ರೋತ್ಸಾಹದೊಂದಿಗೆ, ರಮೇಶ್ ಶೆಟ್ಟಿ ಬಾಯಾರು ಅವರ ನಿರ್ದೇಶನ ಹಾಗೂ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ ಕೆ.ಎನ್.ವೆಂಕಟರಮಣ ಹೊಳ್ಳ ಇವರ ಮುಂದಾಳುತ್ವದಲ್ಲಿ ರೂಪುಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಈ ಹೆಗ್ಗಳಿಕೆಗೆ …

ಮೋದಿಯ ಔದಾರ್ಯದಿಂದ ಮುಂದುವರಿಯುತ್ತಿರುವ ಪಿಣರಾಯಿ ಸರಕಾರ- ಪಿ.ಕೆ. ಫೈಸಲ್

ಕಾಸರಗೋಡು: ಜನಕ್ಷೇಮ ಚಟುವಟಿಕೆಗಳನ್ನು ಜ್ಯಾರಿಗೊಳಿಸುವುದರಲ್ಲಿ ಸಂಪೂರ್ಣ ಪರಾಜಯಗೊಂಡ ಮುಖ್ಯಮಂತ್ರಿಯನ್ನು ಪ್ರೋತ್ಸಾಹಿಸಲು ಪಕ್ಷದ ಮುಖಂಡರು, ಸಚಿವರು ಸ್ಪರ್ಧಿಸಿ ವ್ಯಕ್ತಿಪೂಜೆ ನಡೆಸುತ್ತಿದ್ದಾರೆಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಭಿಪ್ರಾಯ ಪಟ್ಟರು. ಬಡ ಜನರನ್ನು ವಂಚಿಸಲು ನಡೆಸಿದ ನವ ಕೇರಳ ಸಭೆಯಲ್ಲಿ ಲಭಿಸಿದ ಲಕ್ಷಾಂತರ ದೂರುಗಳಲ್ಲಿ ಸರಕಾರ ಯಾವುದೇ ಕ್ರಮ ಇದುವರೆಗೆ ಸ್ವೀಕರಿಸಲಿಲ್ಲ. ಚಿನ್ನ ಕಳ್ಳ ಸಾಗಾಟ ಮುಖ್ಯಮಂತ್ರಿಯ ಕಚೇರಿಯನ್ನು ಕೇಂದ್ರೀಕರಿಸಿ ಆಗಿದೆ ಎಂದು ಪ್ರಧಾನಮಂತ್ರಿ ಬಹಿರಂಗಗೊಳಿಸಿ ಕ್ರಮ ಕೈಗೊಳ್ಳದಿರುವುದು ಕೇಂದ್ರದೊಂದಿಗಿರುವ ಪರಸ್ಪರ ಹೊಂದಾಣಿಕೆಯಿಂದಾಗಿದೆ ಎಂದು, ಮೋದಿಯ ಔದಾರ್ಯದಿಂದ ಮಾತ್ರವೇ ಪಿಣರಾಯಿ …