ಕೊಂಡೆವೂರು ವಿದ್ಯಾಪೀಠದಲ್ಲಿ ವಿದ್ಯಾರ್ಥಿ ಸಂಭ್ರಮ

ಉಪ್ಪಳ: ನಿತ್ಯಾನಂದ ವಿದ್ಯಾಪೀಠ ಕೊಂಡೆವೂರು ಇದರ 19ನೇ ವರ್ಷದ ವಾರ್ಷಿಕೋತ್ಸವ ಸಂಸ್ಥಾಪಕರಾದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಭ್ರಮದಿAದ ಜರಗಿತು. ಸ್ವಾಮೀಜಿ ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಕ್ಕಾಗಿ, ಪಠ್ಯದ ಜೊತೆ ವೀರ, ಮಹಾಪುರುಷರ ಜೀವನ ಚರಿತ್ರೆಯ ಪುಸ್ತಕ ಓದಿ ದೇಶಭಕ್ತ ಪ್ರಜೆಗಳಾಗಿ ಬಾಳಿ ಬದುಕಿ ಎಂದರು. ಕಾಸರಗೋಡು ಜಿಲ್ಲೆ ಶಿಕ್ಷಣಾಧಿಕಾರಿ ದಿನೇಶನ್. ವಿ ಅಧ್ಯಕ್ಷತೆ ವಹಿಸಿದ್ದರು. ಕಮಲಾಕ್ಷ ಶಾಲಾ ಚಟುವಟಿಕೆಗಳ ವರದಿ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಪನ್ಯಾಸಕ ಡಾ|ಅಶೋಕ್ ಪದಕ …

ಮಧೂರು ಕ್ಷೇತ್ರದಲ್ಲಿ ಮಂಡಲ ಸಂಕೀರ್ತನೋತ್ಸವ ೧೪ರಿಂದ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಜನವರಿ ೧೪ರಿಂದ ೪೮ ದಿನಗಳ ಕಾಲ ಮಂಡಲ ಸಂಕೀರ್ತನೋತ್ಸವ ನಡೆಯಲಿದೆ. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ಮಧೂರು ದೇವಸ್ಥಾನ ನವೀಕರಣ ಸಮಿತಿ ಹಾಗೂ  ಮಧೂರು ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿರುವುದು. ಮಂಡಲ ಸಂಕೀರ್ತನೋತ್ಸವವನ್ನು  ೧೪ರಂದು ಬೆಳಿಗ್ಗೆ ೧೦ ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ …

ಪಿಂಚಣಿದಾರರನ್ನು ವಂಚಿಸುತ್ತಿರುವ ಕೇರಳ ಸರಕಾರ- ಬಿಜೆಪಿ

ಮಂಜೇಶ್ವರ: ಆರ್ಥಿಕ ಮುಗ್ಗಟ್ಟಿನಿಂದ ಕೇರಳದಲ್ಲಿ ಸರಕಾರ ನೀಡಬೇಕಾದ ಕ್ಷೇಮ ಪಿಂಚಣಿ, ಲೈಫ್ ಯೋಜನೆ, ಮನೆ ರಿಪೇರಿ ಯೋಜನೆಗಳು ಬುಡಮೇಲಾಗುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ವಿವಿಧ ಪಿಂಚಣಿಗಳನ್ನು ಆಗಸ್ಟ್ ತನಕ ಮಾತ್ರ ನೀಡಲಾಗಿದೆ. ಅದರಲ್ಲೂ ಜುಲೈ ತಿಂಗಳಲ್ಲಿ ಸಿಗದವರಿಗೆ ಆಗಸ್ಟ್‌ನಲ್ಲೂ ಪಿಂಚಣಿ ಹಣ ಬಂದಿಲ್ಲ. ಪಿಂಚಣಿದಾರರ ಮಸ್ಟರಿಂಗ್ ಡಿಸೆಂಬರ್‌ನಲ್ಲಿ ಮಾಡಲು ಆದೇಶ ನೀಡಿ, ಈಗ ಜುಲೈ ತಿಂಗಳಿನಿಂದ ಹಣ ಸಿಗದವರು ಪ್ರಶ್ನಿಸಿದರೆ ಮಸ್ಟರಿಂಗ್ ಆಗಿಲ್ಲ, ಆಧಾರ್ ನೀಡಿಲ್ಲ ಎಂದು ಹೇಳಿ ಫಲಾನುಭವಿಗಳ ಖಾತೆಗೆ ಹಣ …

ತಮಿಳುನಾಡಿನಲ್ಲಿ ಧಾರಾಕಾರ ಮಳೆ ಓರ್ವೆ ಬಾಲಕಿ ಮೃತ್ಯು

ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯ ತೊಡಗಿದ್ದು ಇದರಿಂದ ವ್ಯಾಪಕ ನಾಶನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ. ಚೆನ್ನೈ ಸಹಿತ ಹತ್ತು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ೨.೨ ಜಿಲ್ಲೆಗಳಲ್ಲಿ  ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದ ಉಂಟಾದ ದುರ್ಘಟನೆ ಯಿಂದ ರಾಜ್ಯದಲ್ಲಿ ಓರ್ವ ಬಾಲಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ತಿರುವಾಂ ಕೂರ್‌ನಲ್ಲಿ ಮನೆಯ ಗೋಡೆ ಕುಸಿದು ಬಾಲಕಿ ಮೃತಪಟ್ಟಿದ್ದಾಳೆ. ಮಳೆಯ ಜೊತೆ ಬಲವಾದ ಗಾಳಿ ಬೀಸುವ ಸಾಧ್ಯತೆ ಯೂ ಇದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಮುಂಜಾಗ್ರತಾ ಕ್ರಮವೆಂಬಂತೆ ವೈಗಾ, ಚೆಂಬಾರಬಾಕಂ …

ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಇನ್ನಿಲ್ಲ

ತಲಪ್ಪಾಡಿ: ತುಳು-ಕನ್ನಡದ ಖ್ಯಾತ ಸಾಹಿತಿ,  ಜಾನಪದ ವಿದ್ವಾಂಸ, ಸಂಶೋಧಕ ಮಂಗಳೂರು ಸಮೀಪದ ಕೋಟೆಕಾರು ಅಡ್ಕದಲ್ಲಿರುವ ಅಮೃತ ಸೋಮೇಶ್ವರ (೮೯) ನಿಧನಹೊಂದಿದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ.  ಮೃತರು ಪತ್ನಿ ನರ್ಮದಾ, ಮಕ್ಕಳಾದ ಚೇತನ್, ಜೀವನ್, ಸೊಸೆಯಂದಿರಾದ ರಾಜೇಶ್ವರಿ, ಸತ್ಯ ಹಾಗೂ ಮೊಮ್ಮಕ್ಕಳ ಸಹಿತ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ, ಆನಂದಾಶ್ರಮದಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿ, ಮಂಗಳೂರು ಅಲೋಶಿಯಸ್ ಕಾಲೇಜಿನಲ್ಲಿ  ಪದವಿ ಶಿಕ್ಷಣ ನಡೆಸಿದರು. ಖಾಸಗಿಯಾಗಿ ಓದಿ ಕರ್ನಾಟಕ …

ರೈಲಿನಿಂದ ಬಿದ್ದು ಯುವತಿ ಸಾವು

ಕಾಸರಗೋಡು: ಸಂಚರಿಸುತ್ತಿದ್ದ ರೈಲು ಗಾಡಿಯಿಂದ ಬಿದ್ದು ಯುವತಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಳನ್ನು ವಯನಾಡ್ ಕಾವಂಡುಂಡ್ ಮಂಞ್ಞಮಲೆಯಿಲ್ ಕರಿಯೋಡ್ ವೀಟಿಲ್‌ನ ಜೋ ಸೆಫ್ ಅಲಿಯಾಸ್  ಜೋಯ್-ಮೋಳಿ ಅಲಿಯಾಸ್ ಪ್ರೇಮ ದಂಪತಿ ಪುತ್ರಿ ಐಶ್ವರ್ಯ ಜೋಸೆಫ್ (೩೦) ಎಂದು ಗುರುತಿಸಲಾಗಿದೆ. ಇವರು ಕಲ್ಲಿಕೋಟೆಯ  ಮಾರ್ಕೆಟಿಂಗ್ ಸಂಸ್ಥೆ ಯೊಂದರ ಹ್ಯೂಮನ್ ರಿಸೋರ್ಸ್ ಮೆನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.   ನಿನ್ನೆ ಕಲ್ಲಿಕೋಟೆಯಿಂದ ಮಂಗಳೂರಿಗೆ ಸೇವೆ ನಡೆಸುತ್ತಿರುವ  ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿ ಸುತ್ತಿದ್ದ  ವೇಳೆ ಇವರು ಬೇಕಲ-ಕೋಟಿಕುಳಂ ನಡುವಿನ ಮಾಸ್ತಿಕುಂಡ್ ಎಂಬಲ್ಲಿ   …

ನಾಳೆಯಿಂದ ರಾಜ್ಯಗಳಿಗೆ ಚುನಾವಣಾ ಆಯೋಗ ಭೇಟಿ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯಗಳ ಸಿದ್ಧತೆಯ ಮೌಲ್ಯಮಾಪನ ನಡೆಸಲು ಕೇಂದ್ರ ಚುನಾವಣಾ ಆಯೋಗ (ಇಸಿ) ನಾಳೆಯಿಂದ ರಾಜ್ಯಗಳಿಗೆ ಬೇಟಿ ನೀಡಲಿದೆ. ಆರಂಭದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಚುನಾವಣಾ ಆಯೋಗ ಸಂದರ್ಶಿಸಲಿದೆ. ಇದರಂತೆ ಮೊದಲು ಆಂಧ್ರ ಪ್ರದೇಶ ಮತ್ತು ತಮಿಳುನಾಡು, ತೆಲಂಗಾನ ರಾಜ್ಯಗಳಿಗೆ ಆಯೋಗ ಬೇಟಿ ನೀಡಲಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯಗಳಲ್ಲಿ ನಡೆಸಲಾಗಿರುವ ಪೂರ್ವಬಾವಿ ಸಿದ್ಧತೆಗಳ ಬಗ್ಗೆಯೂ ಆಯೋಗ ಆಯಾ ರಾಜ್ಯ ಚುನಾವಣಾ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ. ಕೇಂದ್ರ ಮುಖ್ಯ …

ಒಬ್ಬಳನ್ನು ಪ್ರೀತಿಸಿ ಇನ್ನೊಬ್ಬಳಿಗೆ ತಾಳಿಕಟ್ಟಿದ ಯುವಕ: ಮದುವೆ ಮಂಟಪದಲ್ಲಿ ಯುವತಿಯ ರಾದ್ಧಾಂತ

ತಲಪ್ಪಾಡಿ: ಮದುವೆ ಕಾರ್ಯಕ್ರಮ ನಡೆಯುತ್ತಿದ್ದಂತೆ ವರನ ಪ್ರೇಯಸಿಯೆಂದು ತಿಳಿಸಿ ಯುವತಿಯೋರ್ವೆ ಮದುವೆ ಮಂಟಪಕ್ಕೆ ತಲುಪಿ ವರ ತನಗೆ ಮೋಸ ಮಾಡಿದ್ದಾನೆಂದು ತಿಳಿಸಿ ರಾದ್ಧಾಂತ ನಡೆಸಿದ್ದಾಳೆ. ಇದರಿಂದ ವಧುವಿನ ಸಂಬಂಧಿಕರ ಸಹಿತ ಅಲ್ಲಿ ನೆರೆದಿದ್ದವರು ಗಲಿಬಿಲಿಗೊಂಡಿದ್ದು, ಅಷ್ಟರಲ್ಲಿ  ವರ ದಿಢೀರ್ ಅಪ್ರತ್ಯಕ್ಷಗೊಂಡಿದ್ದಾನೆ. ಇದರಿಂದ ಕಂಗಾಲಾದ ವಧುವಿನ ಮನೆಯವರು ತಮ್ಮ ಮನೆಗೆ ವಾಪಸಾಗಿದ್ದಾರೆ. ಈ ಘಟನೆ ನಿನ್ನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಬೀರಿ ಸಮೀಪ  ನಡೆದಿದೆ. ಕಲ್ಲಿಕೋಟೆ ನಿವಾಸಿಯಾದ ಯುವಕ ಹಾಗೂ ಮಂಗಳೂರು ಮೂಲದ ಯುವತಿಯ ಮದುವೆ ನಿನ್ನೆ …

ಅಸೌಖ್ಯ ಬಾಧಿಸಿ ಸಂಕಷ್ಟ ಜೀವನ ಎದುರಿಸುತ್ತಿದ್ದ ವ್ಯಕ್ತಿ ರೋಗ ವಾಸಿಯಾಗಿ ಮರಳಿ ಊರಿಗೆ

ಕುಂಬಳೆ: ಅಸೌಖ್ಯ ಬಾಧಿಸಿ ಕುಂಬಳೆಯ ಅಂಗಡಿ ವರಾಂಡದಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಹಾಗೂ ಕಾಸರಗೋಡು ಸಿ.ಎಚ್.ಸೆಂಟರ್   ನೇತಾರರು, ಪದಾಧಿಕಾರಿಗಳು ಸೇರಿ ಕಾಸರಗೋಡಿನ ಆಸ್ಪತ್ರೆಯಲ್ಲಿ  ದಾಖಲಿಸಿದ್ದ ಪಾಲಕ್ಕಾಡ್ ನಿವಾಸಿ ರೋಗ ವಾಸಿಯಾಗಿ ಊರಿಗೆ ಮರಳಿದ್ದಾರೆ. ಪಾಲಕ್ಕಾಡ್ ನಿವಾಸಿಯೂ, ಲಾರಿ ಚಾಲಕನಾಗಿ ಹಲವು ವರ್ಷಗಳ ಕಾಲ ದುಡಿದಿದ್ದ ಶರೀಫ್ (೬೨) ಎಂಬವರ ರೋಗ ಗುಣವಾಗಿದ್ದು, ಅವರನ್ನು ಮುಸ್ಲಿಂ ಲೀಗ್ ಹಾಗೂ ಸಿ.ಎಚ್.ಸೆಂಟರ್‌ನ ಪದಾಧಿಕಾರಿಗಳು ಶಾಸಕ ಎ.ಕೆ.ಎಂ. ಅಶ್ರಫ್‌ರ ನೇತೃತ್ವದಲ್ಲಿ  ಕಾಸರಗೋಡಿ ನಿಂದ ರೈಲು …

ಶಿರಸ್ತ್ರಾಣ ಧರಿಸದವರ ವಿರುದ್ಧ ವಿವಾದ ಹೇಳಿಕೆ: ಸಮಸ್ತ ಮುಖಂಡ ಉಮ್ಮರ್ ಫೈಸಿ ವಿರುದ್ಧ ಕೇಸು

ಕಲ್ಲಿಕೋಟೆ: ಶಿರಸ್ತ್ರಾಣ ಧರಿಸದವರ ವಿರುದ್ಧ ಅವಮಾನಕರ ರೀತಿಯಲ್ಲಿ  ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಇ.ಕೆ ವಿಭಾಗ ಮುಶಾವರ ಜೊತೆ ಕಾರ್ಯದರ್ಶಿ ಉಮ್ಮರ್ ಫೈಸಿ ಮುಕ್ಕತ್ತ್ ನೀಡಿದ ಹೇಳಿಕೆ ವಿವಾದವಾಗಿದ್ದು, ಇವರ ವಿರುದ್ಧ ನಡಕ್ಕಾವ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ. ಕೋಮು ಭಾವನೆಯನ್ನು ಕೆರಳಿಸುವ, ಮತೀಯ ಸ್ಪರ್ಧೆ ಬೆಳೆಸುವ, ಮಹಿಳೆಯರನ್ನು ಅವಮಾನಗೈಯ್ಯುವ ಕಾಯ್ದೆಗಳಂತೆ ಕೇಸು ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತೆ,  ‘ನಿಸಾ’ದ ಅಧ್ಯಕ್ಷೆಯಾದ ವಿ.ಪಿ. ಸುಹರಾ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಕಳೆದ ಅಕ್ಟೋಬರ್ ೮ರಂದು ಕಲ್ಲಿಕೋಟೆ …