ಅಂಬಾರು ಕ್ಷೇತ್ರದಲ್ಲಿ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ: ಸಮಿತಿ ರೂಪೀಕರಣ

ಮಂಗಲ್ಪಾಡಿ: ಅಂಬಾರು ಶ್ರೀ ಸದಾಶಿವ ಕ್ಷೇತ್ರದಲ್ಲಿ ಜುಲೈ 5ರಂದು ನಡೆಯುವ ನವಗ್ರಹ ಸಹಿತ ಸ್ವಯಂ ವರ ಪಾರ್ವತಿ ಯಾಗದ ಯಶಸ್ವಿಗೆ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಶುಭಕರ ಶೆಟ್ಟಿ ತೋಟ, ಉಪಾಧ್ಯಾಕ್ಷರಾಗಿ ಕೇಶವ ಪಂಜ, ನವೀನ್ ಶೆಟ್ಟಿ ಕುಳಬೈಲು, ಪ್ರವೀಣ್ ಬೇಕೂರು, ರಾಧಾಕೃಷ್ಣ ಶೆಟ್ಟಿ, ವಸಂತ ಕುಮಾರ್ ಮಯ್ಯ, ಮೋಹನ ಪಡ್ಪು, ಗೌರವಾ ಧ್ಯಕ್ಷರಾಗಿ ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಗೌರವ ಸಲಹೆಗಾರರಾಗಿ ರಾಜೀವ ಪೂಜಾರಿ ಚೆರುಗೋಳಿ, ಶುಭಕರ ಕೊಪ್ಪಳ, ರಘು. ಸಿ, ವೀರಪ್ಪ ಅಂಬಾರು, ಸದಾಶಿವ. ಬಿ, ಕಾರ್ಯಾಧ್ಯಕ್ಷರಾಗಿ …

ಅಡೂರು ಬಳಿ ವ್ಯಕ್ತಿಯ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಅಡೂರು ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಜೀರ್ಣಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡೂರು ಬಳಿಯ ಬೆಳ್ಳಚ್ಚೇರಿ ಗುಳಿಗನಮೂಲೆ ಎಂಬಲ್ಲಿನ ಕಾಡು ಪೊದೆಗಳೆಡೆಯಲ್ಲಿ ನಿನ್ನೆ ಸಂಜೆ 6.30ರ ವೇಳೆ ಮೃತದೇಹ ಕಂಡುಬಂದಿದೆ.  ಈ ಬಗ್ಗೆ  ಸ್ಥಳೀಯ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯಂತೆ ಆದೂರು ಪೊಲೀಸರು ಸ್ಥಳಕ್ಕೆ ತಲುಪಿ  ತನಿಖೆ  ಆರಂಭಿಸಿದ್ದಾರೆ.

ಪ್ರಾಕೃತಿಕ ವಿಕೋಪ ಸಂತ್ರಸ್ತರ ಶಿಬಿರಕ್ಕೆ ನುಗ್ಗಿ ಅಧಿಕಾರಿಗಳಿಗೆ ಕೊಲೆ ಬೆದರಿಕೆ: ಯುವಕ ಸೆರೆ

ಕಾಸರಗೋಡು:  ತೀವ್ರ ಮಳೆ ಹಿನ್ನೆಲೆಯಲ್ಲಿ  ಉಂಟಾದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರನ್ನು ಸ್ಥಳಾಂತರಿಸಿದ ಸುರಕ್ಷಿತ ಕೇಂದ್ರಕ್ಕೆ ನುಗ್ಗಿ ಅಲ್ಲಿದ್ದ ಅಧಿಕಾರಿಗಳಿಗೆ ಕೊಲೆ ಬೆದರಿಕೆಯೊಡ್ಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೋಂ ಪರಂಬದ ಶ್ಯಾಮ್ ಕುಮಾರ್ ಎಂಬಾತನನ್ನು ಚಿಟ್ಟಾರಿಕ್ಕಲ್ ಪೊಲೀಸರು ಸೆರೆ ಹಿಡಿದಿದ್ದಾರೆ. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರು ವಾಸ್ತವ್ಯ ಹೂಡಿರುವ ಮಾಲೋಂ ಪರಂಬ ಎಲ್‌ಪಿ ಶಾಲೆಗೆ ನಿನ್ನೆ ರಾತ್ರಿ 9.30ರ ವೇಳೆ ಅತಿಕ್ರಮಿಸಿ ನುಗ್ಗಿದ ಶ್ಯಾಮ್ ಕುಮಾರ್ ಅಲ್ಲಿದ್ದ ವೆಸ್ಟ್ ಎಳೇರಿ ಗ್ರಾಮಾಧಿಕಾರಿ ಸಹಿತ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಯೊಡ್ಡಿರುವುದಾಗಿ ದೂರಲಾಗಿದೆ. …

ಬದಿಯಡ್ಕದಲ್ಲಿ ಮಟ್ಕಾ ಕೇಂದ್ರಕ್ಕೆ ಪೊಲೀಸರ ದಾಳಿ: ಓರ್ವ ಸೆರೆ; 25,700 ರೂ, ಕಾರು ವಶ

ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಮಟ್ಕಾ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿ ದ್ದಾರೆ.   ಅಲ್ಲಿಂದ 25,700 ರೂಪಾಯಿ ಹಾಗೂ ಒಂದು ಕಾರನ್ನು ವಶಪಡಿಸಲಾಗಿದೆ. ಬದಿಯಡ್ಕ ಬಸ್ ನಿಲ್ದಾಣ ಬಳಿ ಮಟ್ಕಾ ದಂಧೆ ನಡೆಸುತ್ತಿದ್ದ ಸೂರಂಬೈಲು ನಿವಾಸಿ ರಾಜೇಶ್ (39) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಸ್ಪೆಷಲ್ ಬ್ರಾಂಚ್ ನೀಡಿದ ಮಾಹಿತಿ ಮೇರೆಗೆ ನಿನ್ನೆ ರಾತ್ರಿ 7.15ರ ವೇಳೆ ಬದಿಯಡ್ಕ ಎಸ್‌ಐ ಸುಮೇಶ್‌ಬಾಬು, ಪ್ರೊಬೆಷನರಿ ಎಸ್ ಐ ರೂಪೇಶ್, ಚಾಲಕ ಅನೀಶ್ ಎಂಬವರು ಮಟ್ಕಾ …

‘ಆಪರೇಷನ್ ಸಿಂಧೂರ’: ಮಧ್ಯಸ್ಥಿಕೆ ಸ್ವೀಕರಿಸಿಲ್ಲ; ಟ್ರಂಪ್‌ಗೆ ಮೋದಿ

ನವದೆಹಲಿ: ಕಾಶ್ಮೀರದ ಪಹ ಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋ ತ್ಪಾದಕರು ನಡೆಸಿದ ದಾಳಿಗೆ  ಪ್ರತೀಕಾರವಾಗಿ ಭಾರತ ಪಾಕಿಸ್ತಾನದ  ವಿರುದ್ಧ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯ ವಿಷಯದಲ್ಲಿ ಭಾರತ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಸ್ವೀಕರಿಸಿಲ್ಲ ವೆಂದೂ, ಪಾಕಿಸ್ತಾನ ಸತತವಾಗಿ ಅಂಗಲಾಚಿಕೊಂಡ ಕಾರಣದಿಂದ ಆಪರೇಶನ್ ಸಿಂಧೂರ್ ಕಾರ್ಯಾ ಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿಬಂದಿದೆ. ಅಲ್ಲದೆ ಈ ವಿಷಯದಲ್ಲಿ ಯಾವುದೇ ತೃತಿಯ ದೇಶಗಳ ಮಧ್ಯಸ್ಥಿಕೆಯನ್ನು ಭಾರತ ಸ್ವೀಕರಿಸಿಲ್ಲವೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಪಪಡಿಸಿದ್ದಾರೆ. ಟ್ರಂಪ್‌ರೊಂದಿಗೆ ೩೫ ನಿಮಿಷಗಳ ಕಾಲ ನಡೆಸಿದ …

ದಾರಿ ಮಧ್ಯೆ ಯುವತಿಯನ್ನು ಬಿಗಿದಪ್ಪಿದ ಬೈಕ್ ಸವಾರ: ಆರೋಪಿಗಾಗಿ ಶೋಧ

ಕಾಸರಗೋಡು: ಆಡನ್ನು ಮೇಯಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ದಾರಿಮಧ್ಯೆ ಯುವಕನೋರ್ವ ಬಿಗಿದಪ್ಪಿಕೊಂಡ ಬಗ್ಗೆ ದೂರಲಾಗಿದೆ. ಈ ಬಗ್ಗೆ ೪೦ರ ಹರೆಯದ ಯುವತಿ ನೀಡಿದ ದೂರಿನಂತೆ ವೆಳ್ಳೇರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಮಾಲೋತ್ ಸಮೀಪ ಘಟನೆ ನಡೆದಿದೆ. ಬೈಕ್‌ನಲ್ಲಿ ತಲುಪಿದ ಯುವಕ ಯುವತಿಯ ಸಮೀಪ ನಿಲ್ಲಿಸಿ ದಾರಿ ಕೇಳಿದ್ದನೆನ್ನಲಾಗಿದೆ. ಅನಂತರ ಸ್ವಲ್ಪ ಮುಂದಕ್ಕೆ ಸಂಚರಿಸಿ ಮರಳಿ ಬಂದು ಯುವತಿಯನ್ನು ಬಿಗಿದಪ್ಪಿ ಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಇದೇ ಹೊತ್ತಿನಲ್ಲಿ ಆಟೋರಿಕ್ಷಾ ವೊಂದು ಬರುತ್ತಿರುವುದನ್ನು ಕಂಡ ಯುವಕ …

ಮೈಸೂರು ನಿವಾಸಿ ಯುವತಿ ಕಲ್ಲಿಕೋಟೆಯಲ್ಲಿ ನಿಗೂಢ ರೀತಿಯಲ್ಲಿ ಪತ್ತೆ

ಕಲ್ಲಿಕೋಟೆ: ಈಂಙಾಪುಳ ದಲ್ಲಿ ಕರ್ನಾಟಕ ನಿವಾಸಿಯಾದ ಯುವತಿಯನ್ನು ನಿಗೂಢ ರೀತಿಯಲ್ಲಿ ಪತ್ತೆಹಚ್ಚಲಾಗಿದೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಈಂಙಾ ಪುಳ ಎಲೋಕರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕೇರಳೀಯರಾದ ಮೂರು ಮಂದಿಯ ಜೊತೆ ಮೈಸೂರಿನಿಂದ ಕಾರಿನಲ್ಲಿ ಯುವತಿ ತಲುಪಿರುವುದಾಗಿ ಆಕೆ ತಿಳಿಸಿದ್ದಾಳೆ. ತಾಮರಶ್ಶೇರಿ ಪೊಲೀಸರು ಸ್ಥಳಕ್ಕೆ ತಲುಪಿ ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಗಾಂಜಾ ಸಾಗಾಟ ಪ್ರಕರಣ: ಆರೋಪಿಗೆ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಪ್ರಿಯಾ ಕೆ. ಅವರು ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.  ಪಡನ್ನ ಅಲಿಕ್ಕಲಿನ ಸುಹರಾ ಮಂಜಿಲ್‌ನ ಟಿ. ರತೀಖ್ (54) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 2020 ಫೆಬ್ರವರಿ 12ರಂದು ಪಡನ್ನ ಸರಕಾರಿ ಆಸ್ಪತ್ರೆ ಬಳಿ ನೀಲೇಶ್ವರ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಎ. ಸಾಧಿಕ್‌ರ ನೇತೃತ್ವದ ಅಬಕಾರಿ  ತಂಡ ನಡೆಸಿದ ಕಾರ್ಯಾಚರಣೆಯಲ್ಲಿ …

ನವಜಾತ ಶಿಶುವನ್ನು ಉಸಿರುಗಟ್ಟಿಸಿ ಕೊಲೆಗೈದ ತಾಯಿ: ಮಗುವಿನ ಮೃತದೇಹ ಪತ್ತೆ

ಪತ್ತನಂತಿಟ್ಟ: ಪತ್ತನಂತಿಟ್ಟ ಮೆಲುವೇಲಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಹಚ್ಚಿದ ಘಟನೆಯಲ್ಲಿ ನಿರ್ಣಾಯಕ ವಿವರ ಲಭಿಸಿದೆ. ಮಗುವನ್ನು ಕೊಲೆಗೈದಿರುವುದಾಗಿ 22ರ ಹರೆಯದ ತಾಯಿ ತಪ್ಪೊಪ್ಪಿಗೆ ನಡೆಸಿದ್ದಾಳೆ. ಪ್ರಿಯತಮನಿಂದ ಗರ್ಭಿಣಿಯಾಗಿದ್ದು, ಹೆರಿಗೆ ಬಳಿಕ ಮಗುವನ್ನು ಬಾಯಿ ಹಾಗೂ ಮೂಗು ಹಿಡಿದು ಕೊಲೆಗೈದಿರುವುದಾಗಿ ಒಪ್ಪಿದ್ದಾಳೆ. ಮಗು ಚಲನೆರಹಿತವಾದಾಗ ಸಮೀಪದಲ್ಲೇ ಕೊಂಡುಹೋಗಿ ಹಾಕಿರುವುದಾಗಿ ತಿಳಿಸಿದ್ದಾಳೆ. ಹೆರಿಗೆ ವೇಳೆ ಜೊತೆಗೆ ಯಾರೂ ಕೂಡಾ ಇರಲಿಲ್ಲವೆನ್ನಲಾಗಿದೆ. ಮನೆ ಮಂದಿಗೆ ಈಕೆ ಗರ್ಭಿಣಿ ಎಂಬುದು ತಿಳಿದಿರಲಿಲ್ಲ. ನಿನ್ನೆ ಮುಂಜಾನೆ ೪ ಗಂಟೆಗೆ ಹೆರಿಗೆ ನಡೆದಿದ್ದು, ಹೊಕ್ಕುಳ ಬಳ್ಳಿಯನ್ನು …

ಮೀಯಪದವಿನಲ್ಲಿ ಮನೆಬದಿ ಕುಸಿದು ಆವರಣಗೋಡೆಗೆ ಹಾನಿ: ಮನೆ ಅಪಾಯದಂಚಿನಲ್ಲಿ

ಮಂಜೇಶ್ವರ: ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬದಿಯ ಧರೆ ಕುಸಿದು ಬಿದ್ದಿದ್ದು ಯಾವುದೇ ಕ್ಷಣ ಮನೆ ಕುಸಿಯುವ ಭೀತಿ ನೆಲೆಗೊಂಡಿದೆ. ಸೋಮವಾರ ಮನೆ ಬಳಿಯ  ಧರೆ ಕುಸಿದು ಬಿದ್ದಿದೆ. ಮನೆಯ   ಆವರಣಗೋಡೆ ಕುಸಿದು ಹೋಗಿದ್ದು, ಅಡಿಪಾಯದ ತನಕ ತಲುಪಿದೆ. ಕುಟುಂಬವನ್ನು ಸ್ಥಳಾಂತರಗೊಳಿಸಲಾಗಿದೆ. ಇದೇ ವೇಳೆ ತೋಟದಲ್ಲಿರುವ ಬಾವಿ, ಮೋಟಾರು ಪಂಪ್ ಸಹಿತ ಅಡಿಕೆ ಕೃಷಿ, ತೆಂಗು, ರಬ್ಬರ್ ಕೃಷಿ ನಾಶಗೊಂಡಿದೆ. ಪರಿಸರದ ಹಲವು …