ಮಂಜೇಶ್ವರ: ವಿಧಾನಸಭಾ ಮಂಡಲ ರಸ್ತೆಗಳ ನವೀಕರಣಕ್ಕೆ ಹಣ ಮಂಜೂರು

ಉಪ್ಪಳ: ಮಂಜೇಶ್ವರ ವಿಧಾನಸಭಾ ಮಂಡಲದ ವಿವಿಧ ಲೋಕೋಪಯೋಗಿ ರಸ್ತೆಗಳ ಪುನರುದ್ಧಾರಕ್ಕೆ, ದುರಸ್ತಿಗಾಗಿ ೮.೬೪ ಕೋಟಿ ರೂ.ಗಳನ್ನು ಮಂಜೂರು ಮಾಡಿರುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಪೈವಳಿಕೆ, ಮೀಂಜ ಪಂಚಾಯತ್‌ಗಳಿಂದ ಕರ್ನಾಟಕಕ್ಕೆ ತಲುಪುವ ಅತ್ಯಂತ ಶೋಚನೀಯಾವಸ್ಥೆಯಲ್ಲಿರುವ ಮಾಸ್‌ಕುಮೇರಿ-ಕುರುಡಪದವು ಅಂತಾರಾಜ್ಯ ರಸ್ತೆ ಪುನರುದ್ಧಾರಕ್ಕೆ ೪.೫೦ ಕೋಟಿ ರೂ., ಉಪ್ಪಳ-ಪತ್ವಾಡಿ ರಸ್ತೆ, ನಯಾಬಜಾರ್-ಕುದುಕೋಡಿ-ಸೋಂಕಾಲ್-ಪ್ರತಾಪನಗರ-ಅಂಬೇಡ್ಕರ್ ಕಾಲನಿ ರಸ್ತೆ, ಎನ್.ಎಚ್.ಶಾಲೆ-ಮುಳಿಂಜ ಟೆಂಪಲ್ ರಸ್ತೆ, ಹಿದಾಯತ್‌ನಗರ ಎನ್‌ಎಚ್ ಪಚ್ಲಂಪಾರೆ-ಉಪ್ಪಳ ಭಗವತಿ ಟೆಂಪಲ್ ರಸ್ತೆ, ಮೀಯಪದವು-ಚಿಗುರುಪಾದೆ ರಸ್ತೆ, ಬಂಗ್ರಮಂಜೇಶ್ವರ-ಕುಳೂರು ರಸ್ತೆ, ಕುಂಜತ್ತೂರು-ಕೆದುಂಬಾಡಿ-ನಂದರಪದವು ರಸ್ತೆ, ದುರ್ಗಿಪಳ್ಳ-ಬೆಜ್ಜ ಮುನ್ನಿಪ್ಪಾಡಿ ರಸ್ತೆ …

ಬೇಕಲ್ ಅಂತಾರಾಷ್ಟ್ರೀಯ ಬೀಚ್ ಫೆಸ್ಟ್‌ಗೆ ಇಂದು ಸಂಜೆ ಚಾಲನೆ

ಕಾಸರಗೋಡು: ಬೇಕಲ ಬೀಚ್‌ನಲ್ಲಿ ನಡೆಯುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಫೆಸ್ಟ್‌ನ್ನು ಇಂದು ಸಂಜೆ ೬ ಗಂಟೆಗೆ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ   ರಾಜ್ಯ ವಿಧಾನಸಭಾ ಸ್ಪೀಕರ್ ಎ.ಎನ್. ಶಂಶೀರ್ ಉದ್ಘಾಟಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡುವರು. ಉದ್ಘಾಟನಾ ಸಮಾರಂಭದ ಬಳಿಕ ತೈಕುಡಂ ಬ್ರಿಡ್ಜ್ ಇದರಿಂದ ಮೆಘಾ ಮ್ಯೂಸಿಕ್ ಶೋ ನಡೆಯಲಿದೆ. ಫೆಸ್ಟ್ ಡಿಸೆಂಬರ್ ೩೧ರ ತನಕ ಮುಂದುವರಿ ಯಲಿದೆ. ಅಂದು ರಾತ್ರಿ ೧೨ಗಂಟೆಗೆ ಹೊಸ ವರ್ಷಕ್ಕೆ ಸ್ವಾಗತ ನೀಡುವ ಆಕರ್ಷಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಫೆಸ್ಟ್‌ನ ಪ್ರವೇಶ ಶುಲ್ಕವನ್ನು ೧೦೦ …

ಕೆ.ಎಸ್.ಟಿ.ಎ. ಮಂಜೇಶ್ವರ ಯೂನಿಟ್ ಸಮ್ಮೇಳನ

ಮಂಜೇಶ್ವರ : ಕೆ.ಎಸ್.ಟಿ.ಎ ಮಂಜೇಶ್ವರ ಯೂನಿಟ್ ಸಮ್ಮೇಳನ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಮೋಹನ್ ದಾಸ್ ಕುಂಬಳೆ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ರಾಮ ಪೊಯ್ಯೆಕಂಡ. ಮಾಜಿ ಯೂನಿಟ್ ಅಧ್ಯಕ್ಷ ವಿಶ್ವನಾಥ್ ಕುತ್ತಾನಾಡಿ, ಮನೋಹರ ಶೆಟ್ಟಿ ಕುಂಜತ್ತೂರು, ಉಪಾಧ್ಯಕ್ಷರು ಬಾಲಕೃಷ್ಣ ಶೆಟ್ಟಿ, ವಿಜಯ ದೇವದಾಸ್ ಶೆಟ್ಟಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಪ್ರೇಮಲತಾ ವರದಿ ಮಂಡಿಸಿದರು, ಕೋಶಾಧಿಕಾರಿ ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಸದಸ್ಯರಾದ …

ಶ್ರೀಗಂಧ ಕಳವು ಸ್ಥಳೀಯರಿಂದ ಇಬ್ಬರ ಸೆರೆ

ಮುಳ್ಳೇರಿಯ: ಶಂಕಾಸ್ಪದವಾದ ರೀತಿಯಲ್ಲಿ ಶ್ರೀಗಂಧ ಕೊರಡಿನೊಂ ದಿಗೆ ಕಂಡುಬಂದ ವ್ಯಕ್ತಿಯನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಈಮೊದಲು ಶ್ರೀಗಂಧ ಕೊರಡು ಗಳನ್ನು ಖರೀದಿಸಿದ ಯುವಕನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪುಂಡೂರು ನೆಕ್ರಾಜೆಯ ರಾಮನ್ (೪೦), ಆಲಂಪಾಡಿ, ನೆಕ್ಕರೆಯ ಇರ್ಷಾದ್ (೩೯) ಎಂಬವರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ನೀಡಿದ ಮಾಹಿತಿಯಂತೆ ಮುಳಿಯಾರು ಚೋಕೆಮೂಲೆಯ ರಾಮಚಂದ್ರ ಭಟ್‌ರ ಹಿತ್ತಿಲಿನಿಂದ ಕೆಲವು ದಿನಗಳ ಹಿಂದೆ ಶ್ರೀಗಂಧದ ಮರವನ್ನು ಕಳವು ನಡೆಸಲಾಗಿತ್ತು. ಈ ಬಗ್ಗೆ ನೀಡಿದ …

ವಿವಾಹ ವಿಚ್ಛೇದನ ಲಭಿಸಿದ ಬೆನ್ನಲ್ಲೇ ಯುವತಿ ಪ್ರಿಯತಮನೊಂದಿಗೆ ಪರಾರಿ

ಕುಂಬಳೆ: ವಿವಾಹ ವಿಚ್ಛೇದನ ವನ್ನು ಅಂಗೀಕರಿಸಿ ಕುಟುಂಬ ನ್ಯಾಯಾಲಯದಿಂದ ತೀರ್ಪಿನ ಪ್ರತಿ ಲಭಿಸಿದ ಬೆನ್ನಲ್ಲೇ ಯುವತಿ ಪ್ರಿಯತಮನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಮಂಗಲ್ಪಾಡಿ ಬೇರಿಕೆ ಕಡಪ್ಪುರದ ಫಾತಿಮತ್ ಅಶೂರ (೨೦) ಎಂಬಾಕೆ ಎರ್ನಾಕುಳಂ ಪೆರುಂಬಾ ವೂರು ನಿವಾಸಿಯಾದ ಹನೀಫ್ ರೊಂದಿಗೆ ಪರಾರಿಯಾಗಿ ದ್ದಾಳೆ. ನಿನ್ನೆ ಸಂಜೆ ೫.೩೦ರಿಂದ ರಾತ್ರಿ ೮.೩೦ರ ಮಧ್ಯೆ ಯುವತಿ ಪರಾರಿಯಾಗಿದ್ದಾಳೆಂದು ತಾಯಿ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಫಾತಿಮತ್ ಅಶೂರಳ  ಮದುವೆ ಎರಡು ವರ್ಷಗಳ ಹಿಂದೆ ವಡಗರ ನಿವಾಸಿಯೊಂದಿಗೆ ನಡೆದಿತ್ತು. ಆದರೆ …

ರಾಜ್ಯಪಾಲ ವಿರುದ್ಧ ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಮುಖ್ಯಮಂತ್ರಿಯಿಂದ ಪತ್ರ

ತಿರುವನಂತಪುರ: ರಾಜ್ಯಪಾಲರು ಮತ್ತು ಸರಕಾರದ ನಡುವಿನ  ಗುದ್ದಾಟ ಶಮನಗೊಳ್ಳದೆ ಇನ್ನೂ ಮುಂದುವರಿ ಯುತ್ತಿರುವಂತೆಯೇ  ಈ ವಿಷಯದಲ್ಲಿ ಸರಕಾರ ತನ್ನ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸಂವಿಧಾನಾತ್ಮಕ ಹೊಣೆಗಾರಿಕೆ ನಿರ್ವಹಿಸುತ್ತಿಲ್ಲವೆಂದು  ದೂರಿ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು  ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ.  ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ಸರಿಯಾಗಿ  ನಿರ್ವಹಿಸುತ್ತಿಲ್ಲ ಮಾತ್ರವಲ್ಲ, ರಾಜ್ಯಪಾಲರು ನಿರಂತರವಾಗಿ ಶಿಷ್ಟಾಚಾರ (ಪ್ರೊಟೋಕಾಲ್)ನ್ನೂ ಉಲ್ಲಂಘಿಸುತ್ತಿದ್ದಾರೆಂದೂ ಪತ್ರದಲ್ಲಿ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಇದು ಸರಕಾರ ಮತ್ತು ರಾಜ್ಯಪಾಲರ …

ಬಾಲಕಿಗೆ ಲೈಂಗಿಕ ಕಿರುಕುಳ: ಮದ್ರಸಾ ಅಧ್ಯಾಪಕನಿಗೆ ೨೦ ವರ್ಷ ಕಠಿಣ ಸಜೆ

ಕಾಸರಗೋಡು: ಒಂಬತ್ತು ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ೨೦ ವರ್ಷ ಕಠಿಣ ಸಜೆ ಮತ್ತು ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಪೈವಳಿಕೆ ಕುರುಡಪದವು ಸುಂಕದಕಟ್ಟೆಯ ಆದಂ ಡಿ.  (೩೮) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ, ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೧೮ ಸೆಪ್ಟಂಬರ್ ತಿಂಗಳ  …

ಕಾರಿನಲ್ಲಿ ಪರಾರಿಯಾದ ಆರೋಪಿಯನ್ನು ರಸ್ತೆಗೆ ಅಡ್ಡವಾಗಿ ಪೊಲೀಸ್ ವಾಹನ ನಿಲ್ಲಿಸಿ ಸೆರೆ

ಹೊಸದುರ್ಗ: ಪೊಲೀಸರ ಕಣ್ತಪ್ಪಿಸಿ ಸುತ್ತಾಡುತ್ತಿದ್ದ ಮಾದಕವಸ್ತು ಮಾರಾಟದ ಸೂತ್ರಧಾರನನ್ನು ಪೊಲೀಸ್ ವಾಹನವನ್ನು ರಸ್ತೆಗೆ ಅಡ್ಡವಾಗಿರಿಸಿ ಸೆರೆಹಿಡಿಯಲಾಗಿದೆ. ಪಡನ್ನಕ್ಕಾಡ್ ಞಾಣಿಕಡವ್ ಅಫ್ಸಲ್ ಮಂಜಿಲ್‌ನ ಅರ್ಶಾದ್ (೩೩) ಎಂಬಾತನನ್ನು ಡಿವೈಎಸ್ಪಿ  ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಸೆರೆಹಿಡಿದಿದೆ. ಈತನ ಕೈಯಿಂದ ೨೭ ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಆತನ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಪ್ರಕಾರ ಈತನ ಬಂಧನ ನಡೆದಿದೆ. ಇನ್‌ಸ್ಪೆಕ್ಟರ್ ಕೆ.ಪಿ. ಶಾನು, ಎಸ್‌ಐ ಕೆ.ಪಿ. ಸತೀಶನ್  ಈ ಕಾರ್ಯಾಚರಣೆ ನಡೆಸಿದ್ದಾರೆ. ಅರ್ಶಾದ್ ಕಾರಿನಲ್ಲಿ ಮಾದಕವಸ್ತು …

ಮದ್ಯ ವಶ:ಇಬ್ಬರ ವಿರುದ್ಧ ಪ್ರಕರಣ ದಾಖಲು, ಓರ್ವ ಸೆರೆ

ಬೇಳ: ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡಿನ ಪ್ರಿವೆಂಟಿವ್ ಆಫೀಸರ್ ಸಾಜನ್ ಅಪ್ಯಾಲ್‌ರ ನೇತೃತ್ವದ ಅಬಕಾರಿ ತಂಡ ಬೇಳ ಮೇಗಿನಡ್ಕದ ಜನವಾಸವಿಲ್ಲದ ಮನೆಗೆ ನಿನ್ನೆ ನಡೆಸಿದ ದಾಳಿಯಲ್ಲಿ ಅಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ೨೦೭.೩೬ ಲೀಟರ್ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಅದರಲ್ಲಿ ೧೮೦ ಎಂ.ಎಲ್.ನ ೧೧೫೨ ಬಾಟಲಿ ಮದ್ಯ ಒಳಗೊಂಡಿತ್ತು. ಆದರೆ ಗೋವಾ ನಿರ್ಮಿತ ಮದ್ಯವೆಂಬ ಹೆಸರಲ್ಲಿ  ಬೇರೆ ಎಲ್ಲೋ ಇಂತಹ ನಿರ್ಮಿಸಲಾಗುತ್ತಿದೆ ಎಂಬ ಶಂಕೆಯನ್ನೂ ಅಬಕಾರಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಇದಕ್ಕೆ …

ಗುತ್ತಿಗೆ ನೀಡಿದ ರಸ್ತೆ ಬದಲಿಸಿ ಕಾಂಕ್ರೀಟ್ ನಡೆಸಲೆತ್ನ ಮೊಟಕುಗೊಂಡ ಕಾಮಗಾರಿಗೆ ಮರು ಜೀವ

ಕುಂಬಳೆ: ಕುಂಬಳೆ ಪಂಚಾಯತ್ ೧೨ನೇ ವಾರ್ಡ್‌ನ ಶೇಡಿಮೂಲೆಯಲ್ಲಿ ಶಾಸಕರ ಫಂಡ್‌ನಿಂದ ೧೦ ಲಕ್ಷ ರೂಪಾಯಿ ವ್ಯಯಿಸಿ ೨೦೦ ಮೀಟರ್ ರಸ್ತೆಗೆ ಕಾಂಕ್ರೀಟ್ ನಡೆಸಲು ಮಂಜೂರು ಮಾಡಿದ ಯೋಜನೆಯಲ್ಲಿ ಖಾಸಗಿ ಹಿತ್ತಿಲಿನ ಮಧ್ಯದಲ್ಲಾಗಿ  ಕೆಲಸ ಆರಂಭಿಸಿದಾಗ ಬ್ಲೋಕ್ ಪಂಚಾಯತ್  ಅದಕ್ಕೆ ತಡೆಯೊಡ್ಡಿದೆ. ಇತ್ಯರ್ಥ ಮೂಲಕ ಬೇರೆಡೆ ನಿರ್ಮಿಸಿದ ರಸ್ತೆಯನ್ನು ಪಂಚಾಯತ್‌ನ ಸೊತ್ತು ಅಭಿವೃದ್ಧಿ ಫಂಡ್‌ಗೆ ಬಿಟ್ಟುಕೊಡಲು ಸ್ಥಳದ ಮೂಲಕ ಒಪ್ಪಿಕೊಂಡಿದ್ದಾರೆ. ಇದರಿಂದ ಆ ಮೂಲಕವೇ ರಸ್ತೆ ನಿರ್ಮಿಸಿ ಡಾಮರೀಕರಣ ನಡೆಸಲು ಅಧಿಕೃತ ಮಟ್ಟದಲ್ಲಿ ಕ್ರಮ ಆರಂಭಿಸಲಾಗಿದೆ. ಎಂಟು ತಿಂಗಳ …