ಕೆಂಪುಕಲ್ಲಿನ ಕ್ವಾರೆಗಳಲ್ಲಿ ತುಂಬಿಕೊಳ್ಳುತ್ತಿರುವ ಮಳೆನೀರು: ಅಪಾಯಭೀತಿ

ಕುಂಬಳೆ: ಮಳೆಗಾಲ ಆರಂಭಗೊಂಡ ಬೆನ್ನಲ್ಲೇ ನಾಡಿನ ವಿವಿಧೆಡೆಗಳಲ್ಲಿ ಕೆಂಪು ಕಲ್ಲಿನ ಹೊಂಡಗಳಿಂದ ಅಪಾಯ ಭೀತಿ ಎದುರಾದ ಬಗ್ಗೆ ನಾಗರಿಕರು ಆರೋಪಿಸುತ್ತಿದ್ದಾರೆ. ಕಲ್ಲು ಕಡಿದು ತೆಗೆದ ಬಳಿಕ ಸೃಷ್ಟಿಯಾದ ಹೊಂಡದಲ್ಲಿ ನೀರು ತುಂಬಿಕೊಳ್ಳುತ್ತಿರುವುದು ಅಪಾಯ ಭೀತಿಗೆ ಕಾರಣವಾಗಿದೆ. ಕಲ್ಲಿನ ಕ್ವಾರೆಗಳಿಗೆ ಆವರಣ ನಿರ್ಮಿಸಬೇ ಕೆಂಬ  ನಿಬಂಧನೆಯಿದ್ದರೂ ಸಂಬಂ ಧಪಟ್ಟವರು ಅದನ್ನು ಅವಗಣಿಸುತ್ತಿ ದ್ದಾರೆ. ಇದರಿಂದ ಕ್ವಾರೆಗಳಲ್ಲಿ ತುಂಬಿರುವ ನೀರಿಗೆ ಅಕಸ್ಮಾತ್ ಬಿದ್ದು ಸಾವುನೋವು ಸಂಭವಿಸುತ್ತಿರುವುದಾಗಿ ದೂರಲಾಗಿದೆ. ಕಯ್ಯಾರು ಗ್ರಾಮ ಕಚೇರಿ ವ್ಯಾಪ್ತಿಯಲ್ಲಿ ಮಾತ್ರ ೨೫ರಷ್ಟು ಕೆಂಪು ಕಲ್ಲಿನ ಕ್ವಾರೆಗಳಿವೆ. …

ಹೃದಯಾಘಾತ ಯುವಕ ನಿಧನ

ಕಾಸರಗೋಡು: ಹೃದಯಾ ಘಾತದಿಂದ ಯುವಕ ನಿಧನಹೊಂ ದಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ.  ಕಾಸರಗೋಡು ಗುಡ್ಡೆ ದೇವಸ್ಥಾನ ಬಳಿಯ ಶಿವಕೃಪಾದ ಉಮೇಶ್ ಪೂಜಾರಿ-ರಮಣಿ ದಂಪತಿ ಪುತ್ರ ಪೈಂಟಿಂಗ್ ಕಾರ್ಮಿಕ ರಾಜೇಶ್ ಸುವರ್ಣ (32) ಸಾವನ್ನಪ್ಪಿದ ಯುವಕ. ಇವರಿಗೆ ನಿನ್ನೆ ಸಂಜೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿಧನ ಹೊಂದಿದರು.  ಮೃತರು ಹೆತ್ತವರ ಹೊರತಾಗಿ ಸಹೋದರಿಯರಾದ ಅಶ್ವಿತ್ (ಗಲ್ಫ್), ಸರಿತ, ಮಮತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮನೆ ಅಂಗಳದಲ್ಲಿ ಬಿದ್ದು ಗಾಯಗೊಂಡಿದ್ದ ಕೃಷಿಕ ನಿಧನ

ಉಪ್ಪಳ: ಮನೆ ಅಂಗಳ ಬಳಿಯಲ್ಲಿ ಬಿದ್ದು ತಲೆಗೆ ಏಟು ತಗಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷಿಕ ನಿಧನರಾದರು. ಮುಳಿಂಜ ಕುಂಟುಪುಣಿ ನಿವಾಸಿ ಕೃಷಿಕ ಕೊರಗಪ್ಪ ಶೆಟ್ಟಿ (69) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸೋಮವಾರ ಸಂಜೆ ಮನೆ ಅಂಗಳ ಬಳಿಯಿರುವ ಹಟ್ಟಿಗೆ ತೆರಳುತ್ತಿದ್ದ ವೇಳೆ ಜಾರಿ ಬಿದ್ದು ತಲೆಗೆ ಗಂಭೀರ ಏಟು ತಗಲಿದ ಅವರನ್ನು ಉಪ್ಪಳದ ಆಸ್ಪತ್ರೆಗೆ ಸಾಗಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಿನ್ನೆ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಇವರು ಈ …

ಹಿರಿಯ ಕೃಷಿಕ ನಿಧನ

ಕಳತ್ತೂರು: ಕಿದೂರು ನಿವಾಸಿ ಮರುವಳ ಮಹಾಬಲ ಭಟ್ (95) ನಿಧನ ಹೊಂದಿದರು. ಇವರು ಹಿರಿಯ ಕೃಷಿಕರಾಗಿದ್ದರು. ಮೃತರು ಮಕ್ಕಳಾದ ಮಹಾಬಲ ಭಟ್ (ಕಂಬಾರು ಕ್ಷೇತ್ರದ ಬ್ರಹ್ಮವಾದಕರು), ಶಂಕರ ಭಟ್ (ಉದ್ಯಮಿ), ನಾರಾಯಣ ಭಟ್ (ಉಪನ್ಯಾಸಕ), ಲಕ್ಷ್ಮಿ, ಪಾರ್ವತಿ,  ಸೊಸೆಯಂದಿರಾದ ಸುಲೋಚನ, ಜಯಶ್ರೀ, ವೀಣ, ಇಬ್ಬರು ಅಳಿಯಂದಿರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವಿವಿಧ ಬೇಡಿಕೆ ಮುಂದಿಟ್ಟು ಆಟೋರಿಕ್ಷಾ ಮಜ್ದೂರ್ ಸಂಘದಿಂದ ಕುಂಬಳೆ ಪಂಚಾಯತ್ ಕಚೇರಿ ಮಾರ್ಚ್

ಕುಂಬಳೆ: ಕಂಚಿಕಟ್ಟೆ ಸೇತುವೆ ಮೂಲಕ ಸಂಚಾರ ಮೊಟಕುಗೊಳಿಸಿ ವರ್ಷ ಕಳೆದರೂ ಪಿಡಬ್ಲ್ಯುಡಿ ಹಾಗೂ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ, ಕುಂಬಳೆಯಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಭರವಸೆ ನೀಡಿ ಜನರನ್ನು ವಂಚಿಸಿದ ಪಂಚಾಯತ್ ಅಧಿಕಾರಿಗಳ ವಿರುದ್ಧ, ಪಂಚಾಯತ್ ವ್ಯಾಪ್ತಿಯ ಹಲ ವಾರು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದನ್ನು ಪ್ರತಿಭಟಿಸಿ, ಕುಂಬಳೆ ಪೇಟೆಯಿಂದ ಕಡಪ್ಪುರ ಭಾಗಕ್ಕೆ ತೆರಳುವವರಿಗಾಗಿ ರೈಲ್ವೇ ಸ್ಟೇಷನ್ ಹತ್ತಿರ ನಿರ್ಮಿಸಿದ ಅಂಡರ್ ಪಾಸ್‌ನಲ್ಲಿ ನೀರು ತುಂಬಿ ವಾಹನ ಸಂಚಾರ ಅಸಾಧ್ಯವಾಗುತ್ತಿರುವುದನ್ನು ಪ್ರತಿಭಟಿಸಿ ಬಿಎಂಎಸ್ …

ಮಂಗಳೂರಿನಲ್ಲಿ ಕಾರು ಅಪಘಾತ: ಮಲಪ್ಪುರಂ ನಿವಾಸಿ ಮೃತ್ಯು; ಜತೆಗಿದ್ದ ವಿದ್ಯಾರ್ಥಿನಿಗೆ ಗಾಯ

ಮಂಗಳೂರು: ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮಲಪ್ಪುರಂ ನಿವಾಸಿ ಮೃತಪಟ್ಟಿದ್ದಾರೆ. ಅಳಿಕ್ಕೋಡ್ ತಾಳೆಕೊಳಕೋಟೂರು ಎಂ.ಪಿ. ಹೌಸ್‌ನ ಅಬ್ದುಲ್ ಕಬೀರ್ ಎಂಬವರ ಪುತ್ರ ಮುಹಮ್ಮದ್ ಅಮಲ್ (29) ಮೃತಪಟ್ಟ ದುರ್ದೈವಿ. ಸೋಮವಾರ ರಾತ್ರಿ 12 ಗಂಟೆಗೆ ಅಪಘಾತವುಂಟಾಗಿದೆ. ಸ್ನೇಹಿತೆಯೊಂದಿಗೆ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಂತೂರು ಬಳಿ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ  ಅಮಲ್‌ರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಅಮಲ್ ಜತೆಗೆ …

ಕೆಎಸ್ಆರ್ಟಿಸಿ ಕೊಟ್ಟಿಯೂರ್ ಯಾತ್ರೆ

ಕಾಸರಗೋಡು: ಕೆಎಸ್ಆರ್ಟಿಸಿ ಕಾಸರಗೋಡು ಡಿಪ್ಪೋದಿಂದ ಈ ತಿಂಗಳ 21ರಂದು ಕೊಟ್ಟಿಯೂರ್ ಯಾತ್ರೆ ಆಯೋಜಿಸಲಾಗುತ್ತಿದೆ. ಬೆಳಿಗ್ಗೆ 5 ಗಂಟೆಗೆ ಕಾಸರಗೋಡಿನಿಂದ ಹೊರಟು, ರಾತ್ರಿ 8 ಗಂಟೆಗೆ ಮರಳಲಿದೆ. ಕೊಟ್ಟಿಯೂರ್ ಜೊತೆಗೆ ಮಾಮಾನಿಕುನ್ನ್, ಮೃದಂಗ ಶೈಲೇಶ್ವರಿ ರಾಜರಾಜೇಶ್ವರಿ ಕ್ಷೇತ್ರಗಳಿಗೂ ಸಂದರ್ಶನ ಇರುತ್ತದೆ. 8848678173ರಿಂದ ಹೆಚ್ಚಿನ ಮಾಹಿತಿ ಲಭಿಸುವುದು

ಐಲ ಬೀಚ್ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಧರಾಶಾಹಿ

ಉಪ್ಪಳ: ಐಲ ಬೀಚ್ ರಸ್ತೆಯಲ್ಲಿ ಹತ್ತರಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಹಿನ್ನೆಲೆಯಲ್ಲಿ  ಈ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಐಲ ಶಿವಾಜಿನಗರದಿಂದ  ಕುದುಪುಳು ವರೆಗೆ ಸ್ಥಾಪಿಸಿರುವ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ನಿನ್ನೆ ರಾತ್ರಿ ಸುರಿದ ಮಳೆ ಜತೆಗೆ ಬೀಸಿದ ಗಾಳಿಗೆ ಸಿಲುಕಿ ಗಾಳಿಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದಿತ್ತು. ಇದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮುಸೋಡಿಯಿಂದ ಪೆರಿಂಗಡಿಗೆ ತೆರಳುವ ಕರಾವಳಿ ರಸ್ತೆಯಲ್ಲಿ ಕಂಬಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಅದೇ ರೀತಿ ಈ ಭಾಗದಲ್ಲಿ  …

10 ವರ್ಷವಾದರೂ ಮಂಜೇಶ್ವರ ತಾಲೂಕು ಕಚೇರಿಗೆ ಸ್ವಂತ ಕಟ್ಟಡವಿಲ್ಲ: ಎನ್‌ಜಿಒ ಅಸೋಸಿಯೇಶನ್‌ನಿಂದ ಪ್ರತಿಭಟನೆ

ಉಪ್ಪಳ: ಕಳೆದ 10 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯಾ ಚರಿಸುತ್ತಿರುವ ಮಂಜೇಶ್ವರ ತಾಲೂಕು ಕಚೇರಿಗೆ ಸ್ಥಳ ಕಂಡುಕೊಂಡು ಹೊಸ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿ ಕೇರಳ ಎನ್‌ಜಿಒ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಎ.ಟಿ ಶಶಿ ಆಗ್ರಹಿಸಿದರು.  ಮಂಜೇಶ್ವರ ತಾಲೂಕು ಕಚೇರಿಯ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಅಸೋಸಿಯೇಶನ್‌ನ ಮಂಜೇಶ್ವರ ಶಾಖಾ ಸಮಿತಿ ಆಯೋಜಿಸಿದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. ೬೫ರಷ್ಟು ನೌಕರರು ಕೆಲಸ ಮಾಡುವ ತಾಲೂಕು ಆಡಳಿತ ಕೇಂದ್ರದಲ್ಲಿ ನೀರು, ವಿದ್ಯುತ್ ಅಲಭ್ಯವಿದೆ. ಪ್ರಾಥಮಿಕ ಅಗತ್ಯಕ್ಕಿರುವ ಶುಚಿಗೃಹ ಸೌಕರ್ಯವೂ …

ಮಳೆನೀರು ರಸ್ತೆಯಲ್ಲಿ: ಮಲೆನಾಡು ಹೆದ್ದಾರಿ ನಾಶ ಭೀತಿ

ಸೀತಾಂಗೋಳಿ: ನಂದಾರ ಪದವುನಿಂದ ಆರಂಭಿಸಿ ತಿರುವನಂತಪುರದವರೆಗೆ ಸಾಗುವ ಮಲೆನಾಡು ಹೆದ್ದಾರಿಯಲ್ಲಿ ಚೇವಾರಿನಿಂದ ಅಂಗಡಿಮೊಗರು ತನಕ ಮಳೆ ನೀರು ಹೆದ್ದಾರಿಯಲ್ಲೇ ಹರಿಯುತ್ತಿದೆ. ಹೆದ್ದಾರಿ ಬದಿಯಲ್ಲಿ ಸೂಕ್ತ ಚರಂಡಿ ನಿರ್ಮಿಸದಿರುವುದು ಮಳೆ ನೀರು ರಸ್ತೆಯಲ್ಲೇ ಹರಿಯಲು ಕಾರಣವಾಗಿದೆ. ರಸ್ತೆಯಲ್ಲಿ ಹರಿಯುವ ನೀರು ಸಮೀಪದ ಅಂಗಡಿಗಳಿಗೂ ನುಗ್ಗುತ್ತಿದ್ದು, ಪರಿಸರದ ತಗ್ಗು ಪ್ರದೇಶಕ್ಕೆ ಹರಿದು ಮನೆ ಅಂಗಳಗಳಿಗೂ ತಲುಪುತ್ತಿದೆ. ನೀರು ಕಟ್ಟಿ ನಿಲ್ಲುವುದರಿಂದಾಗಿ ರಸ್ತೆ ಹಾನಿಗೊಳ್ಳಲು ಆರಂಭಗೊಂಡಿದೆ. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ ನೀರು ಹರಿಯಲು ವ್ಯವಸ್ಥೆ ಕೈಗೊಳ್ಳದಿದ್ದಲ್ಲಿ ಈ ಹೆದ್ದಾರಿ ನಾಶವಾಗುವುದರಲ್ಲಿ …