ವಿಪಕ್ಷ ಪ್ರತಿಭಟನೆ: ಉಣ್ಣಿತ್ತಾನ್ ಸೇರಿದಂತೆ ೯೨ ಸಂಸದರ ಅಮಾನತು; ಸಾಮೂಹಿಕ ರಾಜೀನಾಮೆಗೆ ವಿಪಕ್ಷ ಚಿಂತನೆ

ನವದೆಹಲಿ: ಸಂಸತ್‌ನೊಳಗೆ ನಡೆದ ಹೊಗೆ ದಾಳಿ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ಷಾ ಸಂಸತ್‌ನಲ್ಲಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಲೋಕಸಭೆ ಮತ್ತು ರಾಜ್ಯ ಸಭೆಗಳ ಕಲಾಪಗಳಿಗೆ ಅಡ್ಡಿಪಡಿಸಿ  ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಹೀಗೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ  ಕಾಸರಗೋಡು ಲೋಕಸಭಾ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸೇರಿದಂತೆ ವಿಪಕ್ಷಗಳ ಒಟ್ಟು ೯೨ ಸಂ ಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್‌ನ ಕಲಾಪಗಳಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಲೋಕಸಭೆಯ ೩೩, ರಾಜ್ಯಸಭೆಯ ೪೫ ಸೇರಿದಂತೆ ನಿನ್ನೆ ಮಾತ್ರವಾಗಿ ೭೮ಮಂದಿಯನ್ನು …

ವರ್ಕ್‌ಶಾಪ್ ಮಾಲಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವಿದ್ಯಾನಗರ ಕೈಗಾರಿಕಾ ಎಸ್ಟೇಟ್ ಆವರಣದೊ ಳಗೆ  ಒಂದೂವರೆ ತಿಂಗಳ ಹಿಂದೆಯಷ್ಟೇ ಕಾರ್ಯಾರಂ ಭಗೊಂಡ  ವರ್ಕ್‌ಶಾಪ್‌ನ ಮಾಲಕ ಮೂಲತಃ ತಮಿಳುನಾಡು ನಿವಾಸಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಅರುಣ್ ಕುಮಾರ್ (೫೧) ಎಂದು ಗುರುತಿಸ ಲಾಗಿದೆ. ಇವರು ಕಾಸರಗೋಡು ಪೊಲೀಸ್ ಏರ್ ಕ್ಯಾಂಪ್ ಸಮೀಪ ವಾಸಿಸುತ್ತಿರುವ ನಾರಾಯಣನ್ ನಾಯರ್ ಎಂಬವರ ಮಗಳು ಜ್ಯೋತಿಲಕ್ಷ್ಮಿ ಎಂಬವರನ್ನು ಮದುವೆ ಯಾಗಿ ಅಲ್ಲೇ ವಾಸವಾಗಿದ್ದರು. ಮೃತರು ಪತ್ನಿಯ ಹೊರತಾಗಿ ಮಕ್ಕಳಾದ ಅರ್ಚನ, ಆರ್ಯ ಎಂಬವರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ …

ಯುವತಿಗೆ ಹಲ್ಲೆ: ಸಹೋದರ ಸಹಿತ ಮೂವರ ವಿರುದ್ಧ ಕೇಸು

ಕುಂಬಳೆ: ಸಹೋದರ ಸಹಿತ ಮೂರು ಮಂದಿ ಸೇರಿ ಮರದ ಬೆತ್ತದಿಂದ ಹಲ್ಲೆಗೈದ ರೆಂದು ಆರೋಪಿಸಿ ಯುವತಿ ನೀಡಿದ ದೂರಿನಂತೆ ನ್ಯಾಯಾಲಯದ ನಿರ್ದೇಶ ಮೇರೆಗೆ ಮೂರು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಂಬ್ರಾಣ ನಿವಾಸಿ ಮೂಸ ಎಂಬವರ ಪತ್ನಿ  ಸುಹರಾ ನೀಡಿದ ದೂರಿನಂತೆ ಸುಹರಾರ ಸಹೋದರ ಬಂಬ್ರಾಣದ ಆಬಿದ್, ಆಬಿದ್‌ರ ಕೆಲಸದಾಳುಗಳಾದ ಖಾಲಿದ್ ಹಾಗೂ ಇಕ್ಭಾಲ್ ಎಂಬಿವರ ವಿರುದ್ಧ  ಕೇಸು ದಾಖಲಿಸಲಾಗಿದೆ. ಒಂದು ವಾರದ ಹಿಂದೆ ಹಲ್ಲೆ ಘಟನೆ ನಡೆದಿತ್ತು. ಈ ಬಗ್ಗೆ ಸುಹರಾ ಕಾಸರಗೋಡು …

ನುಳ್ಳಿಪ್ಪಾಡಿಯಲ್ಲಿ ಕಾಡೆಮ್ಮೆ ಪತ್ತೆ

ಕಾಸರಗೋಡು: ನಗರದ ನುಳ್ಳಿಪ್ಪಾಡಿ ಎಂ.ಎ. ರಸ್ತೆಯಲ್ಲಿ ಮೊನ್ನೆ ರಾತ್ರಿ ಕಾಡೆಮ್ಮೆ ಗೋಚರಿಸಿದೆ. ಮೊನ್ನೆ ರಾತ್ರಿ ಸುಮಾರು ೮.೩೦ರ ವೇಳೆ ನುಳ್ಳಿಪ್ಪಾಡಿಯ ಕನ್ನಡ ಭವನದ ಬಳಿ ಕಾಡೆಮ್ಮೆ ಮೊದಲು ಪತ್ತೆಯಾಗಿದ್ದು, ಬಳಿಕ ಅದು ನೇತಾಜಿ ರೆಸಿಡೆನ್ಶಿಯಲ್ ಕಾಲನಿ ಬಳಿಯಲ್ಲೂ ಪತ್ತೆಯಾಗಿದೆ. ನಂತರ ಅದು ರಾಷ್ಟ್ರೀಯಹೆದ್ದಾರಿಯತ್ತ ಸಾಗಿ ಬಳಿಕ ಅಪ್ರತ್ಯಕ್ಷಗೊಂಡಿತ್ತೆಂದು ಈ ಪರಿಸರದವರು ತಿಳಿಸಿದ್ದಾರೆ.

ದಂಪತಿಯ ಚಿನ್ನಾಭರಣ ದರೋಡೆ ಪ್ರಕರಣ : ಹಲವರನ್ನು ತನಿಖಗೊಳಪಡಿಸಿದ ಪೊಲೀಸ್

ಕಾಸರಗೋಡು: ಚೆಮ್ನಾಡ್ ಕೈಂದಾರ್‌ನಲ್ಲಿ ವೃದ್ಧ ದಂಪತಿಗೆ  ಚಾಕು ತೋರಿಸಿ ಬೆದರಿಕೆಯೊಡ್ಡಿ ಎಂಟು ಪವನ್ ಚಿನ್ನಾಭರಣ ದರೋಡೆಗೈದ ಪ್ರಕರಣದಲ್ಲಿ ಪೊಲೀಸರು ಹಲವರನ್ನು ತನಿಖೆಗೊಳಪಡಿಸಿದ್ದಾರೆ. ದರೋಡೆಗೈಯ್ಯಲ್ಪಟ್ಟ ಕೈಂದಾರ್ ನ ಕೋಡೋತ್ ಕುಂಞಿಕಣ್ಣನ್ ನಂಬ್ಯಾರ್, ಪತ್ನಿ ತಂಗಮಣಿ ಅಮ್ಮ ಅವರಿಂದ ಲಭಿಸಿದ ಹೇಳಿಕೆಯ ಆಧಾರದಲ್ಲಿ ಹಲವರನ್ನು ತನಿಖೆಗೊಳಪಡಿಸಲಾಗಿದೆ.  ಚಾಕು ತೋರಿಸಿ ಬೆದರಿಕೆಯೊಡ್ಡಿ ತಂಗಮಣಿ ಅಮ್ಮರ ಕುತ್ತಿಗೆಯಿಂದ ತಾಳಿಮಾಲೆ ಕಸಿದುಕೊಂಡಾಗ ‘ತನ್ನ ತಾಳಿ ಮಾಲೆ ಎಂದು ತಿಳಿಸಿ ಅತ್ತಾಗ’ ಅದನ್ನು ಮರಳಿ ನೀಡಿರುವುದೇ ಇಂತಹ ಸಂಶಯಕ್ಕೆ ಎಡೆಯಾಗಿದೆ. ತಂಡದ ಓರ್ವ ತಾಳಿಮಾಲೆಯನ್ನು ಮರಳಿ …

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವಕ ಕುಸಿದು ಬಿದ್ದು ಸಾವು

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವಕ ಕುಸಿದು ಬಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ ಘಟನೆ  ನಡೆದಿದೆ. ಮೃತರನ್ನು ಚೆಮ್ನಾಡ್ ನೆಂಜಿಲ್ ಹೌಸ್‌ನ ಪಿ. ಚಂದ್ರನ್ ನಾಯರ್- ಕಾರ್ತ್ಯಾಯಿನಿ ದಂಪತಿ ಪುತ್ರ  ಶ್ಯಾಮ್ ಕುಮಾರ್ (೩೨) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಷಷ್ಠಿ ಮಹೋತ್ಸವದ ಅಂಗವಾಗಿ ತಲಕ್ಲಾಯಿ ಕ್ಷೇತ್ರಕ್ಕೆ ಹೋಗಿ ರಾತ್ರಿ ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಳಿಕ ಅಲ್ಲೇ ಕುಸಿದು ಬಿದ್ದರು. ವಿಷಯ ತಿಳಿದ ಕಾಸರಗೋಡು ಪೊಲೀಸರು ಮತ್ತು ಅಗ್ನಿಶಾಮಕ ದಳ ತಕ್ಷಣ …

ಕರ್ನಾಟಕ ಮದ್ಯ ವಶ

ಉಪ್ಪಳ: ಬಂದ್ಯೋಡು ಮಾಣಿಹಿತ್ತಿಲಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ.ವಿ.ಯವರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೮.೧ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿದೆ. ಆದರೆ ಅದನ್ನು ಅಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಲಭಿಸಿಲ್ಲವೆಂದು ಅಧಿಕಾ ರಿಗಳು ತಿಳಿಸಿದ್ದಾರೆ. ವಶಪಡಿಸಲಾದ ಮಾಲನ್ನು ಕುಂಬಳೆ ಅಬಕಾರಿ ರೇಂಜ್ ಕಚೇರಿಗೆ ಹಸ್ತಾಂತರಿಸ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ  ಸಿಇಒಗಳಾದ ಸೋನು ಸೆಬಾಸ್ಟಿ ಯನ್, ಶಿಜಿತ್ ವಿ.ವಿ, ವಿಜಿತ್ ಕೆ.ಆರ್. …

ಜ್ಞಾನವಾಪಿ ಮಸೀದಿ: ಸಮೀಕ್ಷೆ ವಿರುದ್ಧ ಸಲ್ಲಿಸಲಾದ ಅರ್ಜಿಗಳು ವಜಾ

ಲಕ್ನೋ:  ಉತ್ತರಪ್ರದೇಶದ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ದೇವಾಲಯವನ್ನು ಪುನಃಸ್ಥಾಪಿಸುವಂತೆ ಕೋರಿ ವಾರಣಾಸಿ ನ್ಯಾಯಾಲಯ ದಲ್ಲಿ ಬಾಕಿ ಇರುವ ಸಿವಿಲ್ ದಾವೆ ನಿರ್ವಹಣೆಯನ್ನು ಪ್ರಶ್ನಿಸಿ,  ಪುರಾತತ್ವ ಇಲಾಖೆ (ಎಎಸ್‌ಐ) ನಡೆಸಿದ ವೈಜ್ಞಾನಿಕ ಸಮೀಕ್ಷೆಯನ್ನು ವಿರೋಧಿಸಿ ಸಲ್ಲಿಸಲಾದ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ಇಂದು ಬೆಳಿಗ್ಗೆ ವಜಾಗೈದು ತೀರ್ಪು ನೀಡಿದೆ.  ಎಎಸ್‌ಐ ನಡೆಸಿದ ವೈಜ್ಞಾನಿಕ ಸಮೀಕ್ಷೆ ವರದಿಯನ್ನು ಇಂದು ಹೈಕೋರ್ಟ್‌ಗೆ ಸಲ್ಲಿಸಲಿದೆ.

ಬದಿಯಡ್ಕದ ಮೋಟಾರು ವಿವಾದದ ಹಿಂದೆ ರಾಜಕೀಯದಾಟ- ಪಂ. ಅಧ್ಯಕ್ಷೆ ಶಾಂತ

ಬದಿಯಡ್ಕ: ಪೆರಡಾಲ ಕಾಲನಿಯ ಶುದ್ಧ ಜಲ ವಿತರಣೆಗಾಗಿದ್ದ ಮೋಟಾರು ಪಂಪ್ ಕಳವು ನಡೆಸಲಾಗಿದೆ ಎಂಬ ಪ್ರಚಾರ ರಾಜಕೀಯ ಲಾಭಕ್ಕಾಗಿ ಕೆಲವರು ನಡೆಸುವ ಯತ್ನವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಶಾಂತಾ ಬಿ. ತಿಳಿಸಿದ್ದಾರೆ. ಈ ಆರೋಪ ಅಸತ್ಯವೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೆರಡಾಲ ಕಾಲನಿಯ ಮೋಟಾರು ಒಂದು ವರ್ಷದ ಹಿಂದೆ ಹಾನಿಯಾಗಿತ್ತು. ಆ ಬಗ್ಗೆ ಆ ಪಂಪ್ ಆಪರೇಟರ್ ತಿಳಿಸಿದಾಗ ಮೆಕ್ಯಾನಿಕ್‌ನನ್ನು ಕರೆಸಿ ದುರಸ್ತಿ ನಡೆಸಲಾಗಿತ್ತು. ಅದಕ್ಕೆ ೧೮೦೦೦ ರೂಪಾಯಿ ಬಿಲ್  ಮೆಕ್ಯಾನಿಕ್ ನೀಡಿದ್ದು, ಅಷ್ಟು ಮೊತ್ತ ನೀಡಲು …

ಕೃಷಿಕನನ್ನು ಕೊಂದು ಭೀತಿ ಹುಟ್ಟಿಸಿದ್ದ ಹುಲಿ ಮೃಗಾಲಯಕ್ಕೆ

ಕಲ್ಪೆಟ್ಟ: ವಯನಾಡ್ ವಾಕೇರಿ ಎಂಬಲ್ಲಿ  ಭೀತಿ ಹುಟ್ಟಿಸಿದ್ದ ಹುಲಿಯನ್ನು ತೃಶೂರು ಪುತ್ತೂರಿನ ಮೃಗಾಲಯಕ್ಕೆ ತಲುಪಿಸಲಾಗಿದೆ. ಮೊದಲು ಕುಪ್ಪಾಡಿಯ ವನ್ಯಮೃಗ ಸಂರಕ್ಷಣಾ ಕೇಂದ್ರಕ್ಕೆ ತಲುಪಿಸಿದ ಹುಲಿಯ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪುತ್ತೂರಿಗೆ ಕೊಂಡೊಯ್ಯಲಾಯಿತು. ಈ ಹುಲಿ ದಾಳಿಗೆ ಕೃಷಿಕನೋರ್ವ ಮೃತಪಟ್ಟಿದ್ದರು.