ಕಾರ್ಮಿಕ ಇಲಾಖೆ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫.೧೬ ಲಕ್ಷ ವಲಸೆ ಕಾರ್ಮಿಕರಿದ್ದಾರೆ

ಕಾಸರಗೋಡು: ರಾಜ್ಯ ಕಾರ್ಮಿಕ ಇಲಾಖೆ ಲೆಕ್ಕಾಚಾರ ಪ್ರಕಾರ ಕೇರಳದಲ್ಲಿ ೫.೧೬ ಲಕ್ಷ ದಷ್ಟು ವಲಸೆ ಕಾರ್ಮಿಕರಿ ದ್ದಾರೆ. ಆದರೆ ಇದರಲ್ಲಿ ಎಷ್ಟು ಮಂದಿ ಕೇರಳದಲ್ಲಿ ಈಗಲೂ ಉಳಿದುಕೊಂಡಿ ದ್ದಾರೆಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲಾಖೆಗೆ ಲಭಿಸಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಕೇರಳ ಕಾರ್ಮಿಕರ ಇಲಾಖೆಯಲ್ಲಿ ೧.೨೫ ಲಕ್ಷದಷ್ಟು ವಲಸೆ ಕಾರ್ಮಿಕರು ಹೆಸರು ನೋಂದಾಯಿಸಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಕೇರಳಕ್ಕೆ ಆಗಮಿಸುವ ವಲಸೆ ಕಾರ್ಮಿಕರು ರಾಜ್ಯದ ಆಯಾ ಪ್ರದೇಶಗಳ ಕಾರ್ಮಿಕ ಇಲಾಖೆ ಕಚೇರಿಯಲ್ಲಿ  …

ಮಂಜೇಶ್ವರ ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವದ ರಥೋತ್ಸವಕ್ಕೆ ಜನಸಾಗರ

ಮಂಜೇಶ್ವರ: ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಷಷ್ಠಿ ಮಹೋತ್ಸವ ಇಂದು ಸಮಾಪ್ತಿಗೊಳ್ಳಲಿದೆ. ಇದರಂಗವಾಗಿ ನಿನ್ನೆ ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿ ಸಿದರು. ಇಂದು ಮಧ್ಯಾಹ್ನ 1.30ಕ್ಕೆ ಅವಭೃತ, 2.30ರಿಂದ ಮರದ ಲಾಲ್ಕಿಸಣ್ಣ ರಥೋತ್ಸವಗಳು, ಸಂಜೆ 5ಕ್ಕೆ ಶೇಷ ತೀರ್ಥ ಸ್ನಾನ, 6ಕ್ಕೆ ಧ್ವಜ ಅವರೋಹಣ, 7ಕ್ಕೆ ಗಡಿ ಪ್ರಸಾದ ವಿತರಣೆ, ರಾತ್ರಿ 9.30ಕ್ಕೆ ಮಹಾ ಪೂಜೆಯೊಂದಿಗೆ ಷಷ್ಠಿ ಮಹೋತ್ಸವ ಸಂಪನ್ನಗೊಳ್ಳಲಿದೆ.

ನಾಳೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಾಂಗ್ರೆಸ್ ಮಾರ್ಚ್

ಕಾಸರಗೋಡು: ಜಿಲ್ಲೆಯ ಕಾಂಗ್ರೆಸ್ ಮಂಡಲ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ನಾಳೆ ಬೆಳಿಗ್ಗೆ ೧೦ಕ್ಕೆ ಮಾರ್ಚ್ ನಡೆಸಲಾಗುವು ದೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಮುಖ್ಯಮಂತ್ರಿಯ ಅಂಗರಕ್ಷಕರು ಮತ್ತು ಪೊಲೀಸರು ಸಿಪಿಎಂ ಗೂಂಡಾಗಳೊಂದಿಗೆ ಕೈಬೆಸೆದು ಯೂತ್ ಕಾಂಗ್ರೆಸ್ ಮತ್ತು ಕೆಎಸ್‌ಯು ಕಾರ್ಯಕರ್ತರ ಮೇಲೆ ರಾಜ್ಯ ವ್ಯಾಪಕ ದೌರ್ಜನ್ಯವೆಸಗುತ್ತಿದ್ದಾರೆಂದೂ ಅದನ್ನು ಪ್ರತಿಭಟಿಸಿ ಮಾರ್ಚ್ ನಡೆಯಲಿದೆ.

ಸೋಂಕಾಲಿನಲ್ಲಿ ದಿನಪೂರ್ತಿ ಉರಿಯುತ್ತಿರುವ ಮಿನಿಮಾಸ್ಟ್ ದೀಪ

ಉಪ್ಪಳ: ಕೆಲವು ಕಡೆ ಬೀದಿ ದೀಪವಿದ್ದರೂ ಉರಿಯದೆ ಕತ್ತಲೆಯಿಂದ ಸಮಸ್ಯೆಗೀಡಾಗುತ್ತಿರುವ ಘಟನೆ ನಡೆಯುತ್ತಿದೆ. ಆದರೆ ಸೋಂಕಾಲು ಮಸೀದಿ ಬಳಿಯ ಬಸ್ ನಿಲ್ದಾಣ ಪರಿಸರದಲ್ಲಿ ಸ್ಥಾಪಿಸಲಾದ ಮಿನಿಮಾಸ್ಟ್ ಬೀದಿ ದೀಪ ರಾತ್ರಿ ಹಗಲೂ ಉರಿಯುತ್ತಿರುವ ದೃಶ್ಯ ಕಂಡುಬAದಿದೆ. ಇದರಿಂದ ಪಂಚಾಯತ್‌ಗೆ ವಿದ್ಯುತ್ ಬಿಲ್‌ನ ಹೊರೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ದೀಪದ ಕಂಬದಲ್ಲಿ ಅಳವಡಿಸಿದ ಪ್ಯೂಸ್ ಹಾನಿಗೀಡಾಗಿರುವುದೇ ಹಗಲು ಹೊತ್ತಿನಲ್ಲಿ ಉರಿಯಲು ಕಾರಣವೆನ್ನಲಾಗಿದೆ. ಈ ಹಿಂದೆ ಒಂದು ತಿಂಗಳ ತನಕ ನಿರಂತರವಾಗಿ ಹಗಲು ಉರಿಯುತ್ತಿತ್ತು. ಬಳಿಕ …

ಹೆಚ್ಚುತ್ತಿರುವ ಕೋವಿಡ್: ಜಾಗ್ರತೆ ವಹಿಸಲು ಕೇಂದ್ರ ಕರೆ

ದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಹೊಸತಳಿ ಜೆ.ಎನ್.೧ ಆರ್ಭಟ ಶುರುಮಾಡಿದ್ದು, ಈ ಬಗ್ಗೆ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಮುಂಬರುವ ಹಬ್ಬಗಳ ಬಗ್ಗೆ ನಿಗಾ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದೆ. ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಬೇಕು. ತೀವ್ರತರವಾದ ಉಸಿರಾಟ ತೊಂದರೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕೆಂದು ತಿಳಿಸಿದೆ. ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಪರೀಕ್ಷೆ ಮಾಡಲು ಕೇಂದ್ರ ಸೂಚಿಸಿದೆ.

ಕಿರಣ್ ಪ್ರಸಾದ್ ಕೂಡ್ಲು ಇವರಿಗೆ ಸ್ಕೌಟ್ಸ್‌ನ ಮೆಡಲ್ ಆಫ್ ಮೆರಿಟ್ ಪ್ರಶಸ್ತಿ

ಕಾಸರಗೋಡು : ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಮಟ್ಟದಲ್ಲಿ ಉತ್ತಮ ಸ್ಕೌಟು ಅಧ್ಯಾಪಕರಿಗೆ ನೀಡುವ ಉನ್ನತ ಪ್ರಶಸ್ತಿ ಮೆಡಲ್ ಓಫ್ ಮೆರಿಟ್ ಕಾಸರಗೋಡು ಜಿಲ್ಲೆಯ ಕಿರಣ್ ಪ್ರಸಾದ್ ಕೂಡ್ಲು ಅವರಿಗೆ ಲಭಿಸಿದೆ. ಇವರು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಸ್ಕೌಟ್ ಅಧ್ಯಾಪಕರಾಗಿದ್ದು ಸ್ಕೌಟಿಂಗ್ ನಲ್ಲಿ ಹಿಮಾಲಯ ವೃಕ್ಷಮಣಿಧಾರಕರ ತರಬೇತಿ ಹೊಂದಿದವರು. ಇವರು ಉತ್ತರಾಖಂಡದ ಹರಿದ್ವಾರ, ದೆಹಲಿಯ ಬುರಾರಿ, ಆಂದ್ರದ ಹೈದರಾಬಾದ್, ಕರ್ನಾಟಕದ ಮೈಸೂರಿನಲ್ಲಿ ಜರಗಿದ ರಾಷ್ಟçಮಟ್ಟದ ಜಾಂಬೂರಿಯಲ್ಲಿ ಜಿಲ್ಲಾ ಪ್ರತಿನಿಧಿಯಾಗಿ, ತ್ರಿಪುರದ ಅಗರ್ತಲ, ಕರ್ನಾಟಕದ …

ಶ್ರೀ ಧೂಮಾವತೀ ದೈವಸ್ಥಾನ ವಾರ್ಷಿಕ ನೇಮ, ನೂತನ ಮಹಾದ್ವಾರ ಲೋಕಾರ್ಪಣೆ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮ, ನೂತನ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ಡಿ. 22ರಿಂದ 24ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.22ರಂದು ಅಪರಾಹ್ನ 3.20ಕ್ಕೆ ನೂತನ ಮಹಾದ್ವಾರವನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಲೋಕಾರ್ಪಣೆಗೈದು ಆಶೀರ್ವಚನ ನೀಡುವರು. ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನ ಸಮಿತಿ ಅಧಕ್ಷ ರಾಮಕೃಷ್ಣ ಭಟ್ ಸರ್ಪಂಗಳ ಅಧ್ಯಕ್ಷತೆ ವಹಿಸುವರು. ಎಣ್ಮಕಜೆ ಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್, ಬಜಕೂಡ್ಲು …

ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ೩೦ರಂದು

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಈ ತಿಂಗಳ 30ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪೂರ್ವಾಹ್ನ 5ಕ್ಕೆ ಗಣಪತಿ ಹೋಮ, ಬೆಳಿಗ್ಗೆ 6.30ಕ್ಕೆ ಹರಿನಾಮ ಕೀರ್ತನೆ, 8ರಿಂದ ಭಜನೆ ಸಂಕೀರ್ತನೆ, 10.30ಕ್ಕೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಮಧ್ಯಾಹ್ನ 12 ಮಹಾಪೂಜೆ, 12.30ರಿಂದ ಅನ್ನಸಂತರ್ಪಣೆ, ಸಂಜೆ 4ರಿಂದ ಕುಣಿತ ಭಜನೆ, 6ರಿಂದ ಪಾಲೆಕೊಂಬು ಮೆರವಣಿಗೆ ಅಂಬಾರು ಶ್ರೀ ಸದಾಶಿವ ಕ್ಷೇತ್ರದಿಂದ ಉತ್ಸವಾಂಗಣಕ್ಕೆ, ರಾತ್ರಿ ನೃತ್ಯ ಸಂಗಮ, 8ರಿಂದ …

ಚಂದ್ರಗಿರಿ ಸೇತುವೆ: ನಗರಸಭೆಯ ಮನವಿಗೆ ಫಲ: ಕಬ್ಬಿಣದ ಬೇಲಿ, ಬೀದಿ ದೀಪ ಸ್ಥಾಪಿಸಲು ಕ್ರಮ

ಕಾಸರಗೋಡು: ಕೇರಳ  ಲೋಕೋಪಯೋಗಿ ಇಲಾಖೆಯ ಅಧೀನದ ಚಂದ್ರಗಿರಿ ರಸ್ತೆಯಲ್ಲಿರುವ ಚಂದ್ರಗಿರಿ ಸೇತುವೆಯಲ್ಲಿ ಕಬ್ಬಿಣದ ಬೇಲಿ, ದೀಪಗಳನ್ನು ಸ್ಥಾಪಿಸುವುದಕ್ಕೆ ಅಗತ್ಯದ ಕ್ರಮಗಳನ್ನು ಸ್ವೀಕರಿಸಬೇಕೆಂದು ಆಗ್ರಹಿಸಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಲೋಕೋಪಯೋಗಿ ಇಲಾಖೆಗೆ ನೀಡಿದ ಮನವಿಯಲ್ಲಿ ಕ್ರಮ ಉಂಟಾಗುತ್ತಿದೆ. ಸೇತುವೆಯಲ್ಲಿ ಬೀದಿ ದೀಪಗಳನ್ನು ಸ್ಥಾಪಿಸುವುದಕ್ಕೆ ಲೋಕೋಪಯೋಗಿ ಸೇತುವೆ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ಚೆಮ್ಮನಾಡ್ ಪಂ.ಗೆ ಅನುಮತಿ ನೀಡಿ ಕಬ್ಬಿಣದ ಬೇಲಿ ಸ್ಥಾಪಿಸುವುದಕ್ಕೆ ನಗರಸಭೆಯನ್ನು ಸಂಪರ್ಕಿಸಿ ಸಮಗ್ರ ವರದಿ ಸ್ಕೆಚ್ ಸಹಿತ ಸಲ್ಲಿಸುವುದಕ್ಕೆ ಲೋಕೋಪಯೋಗಿ ಇಲಾಖೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ …

ತಾಳಿಪಡ್ಪುನಲ್ಲಿ ಕಾಡು ಕೋಣ ಪತ್ತೆ: ನಾಗರಿಕರು ಭೀತಿಯಲ್ಲಿ

ಕಾಸರಗೋಡು: ತಾಳಿಪಡ್ಪುನಲ್ಲಿ ಕಾಡು ಕೋಣ ಪತ್ತೆಯಾದ ಬಗ್ಗೆ ವರದಿಯಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಹುಡುಕಾಟ ನಡೆಸಿದ್ದರು. ನಿನ್ನೆ ಸಂಜೆ ತಾಳಿಪಡ್ಪುವಿನ ಬಿಜೆಪಿ ಕಚೇರಿ ಸಮೀಪದಲ್ಲಿ ಕಾಡುಕೋಣ ಕಂಡು ಬಂದಿದೆ. ಸಂಜೆ ೬.೩೦ರ ವೇಳೆ ಸೂರ್ಯ ಎಂಬವರಿಗೆ ಕಾಡು ಕೋಣ ಮೊದಲು ಕಾಣಿಸಿದೆಯೆಂದು ಹೇಳಲಾಗುತ್ತಿದೆ. ಸ್ಮಶಾನವೊಂದರ ಸಮೀಪವಿರುವ ಕಾಡಿನೊಳಗೆ ಓಡಿ ಹೋದ ಕಾಡುಕೋಣವನ್ನು ಹಲವರು ಕಂಡಿದ್ದಾರೆನ್ನಲಾಗಿದೆ. ಆರ್‌ಎಸ್‌ಎಸ್ ಕಾರ್ಯಾಲಯ ಸಮೀಪದ ಮನೆಗಳ ಅಂಗಳಕ್ಕೂ ಕಾಡುಕೋಣ ತಲುಪಿದೆ ಎನ್ನಲಾಗಿದೆ. ಕಾಡುಕೋಣ ಎಲ್ಲಿಂದ ಇಲ್ಲಿಗೆ ತಲುಪಿದೆಯೆಂದು …