ಜನರಲ್ ಆಸ್ಪತ್ರೆಯಲ್ಲಿ ಪ್ರದರ್ಶನವಸ್ತುವಾಗಿ ಉಳಿದ ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್

ಕಾಸರಗೋಡು: ಜನರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಾಣುವುದಾಗಿ ತಿಳಿಸುತ್ತಾ ರಾಜ್ಯ ಸಚಿವ ಸಂಪುಟ ನವಕೇರಳ ಯಾತ್ರೆ ನಡೆಸುತ್ತಿರುವಾಗಲೇ  ಕಾಸರಗೋ ಡಿನಲ್ಲಿ ರೋಗಿಗಳಿಗೆ ಅತ್ಯಗತ್ಯವಾಗಿ ಲಭಿಸಬೇಕಾದ ಚಿಕಿತ್ಸೆ ಲಭಿಸದೆ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಸರಗೋಡಿನ  ಬಹುತೇಕ ಜನರು ಆಶ್ರಯಿಸುವ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವಿವಿಧ ಸಮಸ್ಯೆಗಳು ದೀರ್ಘ ಕಾಲದಿಂದ ಕಾಡುತ್ತಿದೆಯಾದರೂ ಅವರ ಪರಿಹಾರಕ್ಕೆ ಕ್ರಮ ಉಂಟಾಗಿಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ ವೆಂಟಿಲೇಟರ್‌ಗಳು ಇದ್ದರೂ ಅವುಗಳು ಉಪಯೋಗ ವಿಲ್ಲದೆ ಕೇವಲ ಪ್ರದರ್ಶನವಸ್ತು ಗಳಂತೆಯೇ ಉಳಿದುಕೊಂಡಿವೆ. ಇದರ ಪರಿಣಾಮವಾಗಿ ರೋಗಿಗಳು …

ಕಳ್ಳಭಟ್ಟಿ ಸಾರಾಯಿ, ೬೦ ಲೀಟರ್ ವಾಶ್ ವಶ

ಮುಳ್ಳೇರಿಯ: ಬದಿಯಡ್ಕ ಮದ್ಯ ಅಬಕಾರಿ ರೇಂಜ್‌ನ ಅಬಕಾರಿ ಇನ್ಸ್‌ಪೆಕ್ಟರ್ ಎಚ್. ಬಿನು ಅವರ ನೇತೃತ್ವದ ಅಬಕಾರಿ ತಂಡ ಮುಳ್ಳೇರಿಯಾ ಅರಣ್ಯ ವಲಯದಲ್ಲಿ  ನಡೆಸಿದ  ತಪಾಸಣೆಯಲ್ಲಿ ಅಲ್ಲಿ ಬಚ್ಚಿಡ ಲಾಗಿದ್ದ ೧೦ ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ೬೦ ಲೀಟರ್ ಹುಳಿರಸ (ವಾಶ್) ಪತ್ತೆಹಚ್ಚಿದೆ. ಬಳಿಕ ಮಾಲುಗಳನ್ನು ಅಲ್ಲೇ ನಾಶಗೊಳಿಸಲಾಯಿತು. ಇದು ಕ್ರಿಸ್ಮಸ್ ಮತ್ತು ಹೊಸವರ್ಷ ಆಚರಣೆಯ ವೇಳೆ ವಿತರಿಸಲು ಬಚ್ಚಿಡಲಾಗಿದ್ದ ಮಾಲುಗಳಾಗಿ ದ್ದುವೆಂದ,   ಈ ಮಾಲುಗಳನ್ನು ಅಲ್ಲಿ ಬಚ್ಚಿಟ್ಟವರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು …

೭.೨ ಲೀಟರ್ ಮದ್ಯ ವಶ : ಸ್ಕೂಟರ್ ಸಹಿತ ಓರ್ವ ಸೆರೆ

ಬದಿಯಡ್ಕ: ಬದಿಯಡ್ಕಕ್ಕೆ ಸಮೀಪದ ದೇವರಡ್ಕದಲ್ಲಿ ಕರ್ನಾಟಕ ಗಡಿ ಪ್ರದೇಶ ಬಳಿ ಬದಿಯಡ್ಕ ಅಬಕಾರಿ ರೇಂಜ್‌ನ ಅಬಕಾರಿ ಇನ್ಸ್‌ಪೆಕ್ಟರ್ ಮಿನು ಎಚ್. ರ ನೇತೃತ್ವದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೭.೨ ಲೀಟರ್ ಕರ್ನಾಟಕ  ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಅಜ್ಜಾವರ ಗಂಧದಗುಡ್ಡೆ ನಿವಾಸಿ ನಾಗರಾಜ ಕೆ. ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿಇಒಗಳಾದ ಮನೋಜ್ ಪಿ, ಸೋನ್‌ಸನ್ ಪೋಲ್, ಮೋಹನ್ …

ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ಶಬರಿಮಲೆ ದರ್ಶ ನಕ್ಕಾಗಿ ಮಾಲೆ ಧರಿಸಿ ವ್ರತಾಚರಣೆಯ ಲ್ಲಿದ್ದ ಯುವಕ ಮರದ ರೆಂಬೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡೂರು ಮಂಡೆಬೆಟ್ಟು ವಿನ ಸರೋಜಿನಿ ಎಂಬವರ ಪುತ್ರ ವಿಜಿತ್ ಕುಮಾರ್  ಮೃತ ಯುವಕ, ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಇನ್ನೂ ಐವರು ಆರೋಪಿಗಳಿಗಾಗಿ ಎನ್‌ಐಎ ಶೋಧ

ಸುಳ್ಯ: ಯುವಮೋರ್ಛಾ ನೇತಾರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಐದು ಮಂದಿ ಆರೋಪಿಗಳಿಗಾಗಿ ಎನ್‌ಐಎ ಶೋಧ ತೀವ್ರಗೊಳಿಸಿದೆ. ಬೆಳ್ಳಾರೆಯ ಬೂಡು ನಿವಾಸಿ ಎಂ.ಡಿ. ಮುಸ್ತಫ, ನೆಕ್ಕಿಲಾಡಿ ಅಗ್ನಾಡಿ ನಿವಾಸಿ ಮಸೂದ್ ಕೆ.ಎ, ಬಂಟ್ವಾಳ ತಾಲೂಕು ಕೊಡಾಜೆ ನಿವಾಸಿ ಮೊಹಮ್ಮದ್ ಶರೀಫ್, ಸುಳ್ಯದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಆರ್. ಉಮ್ಮರ್ ಫಾರೂಕ್, ಬೆಳ್ಳಾರೆ ನಿವಾಸಿ ಅಬೂಬಕರ್ ಸಿದ್ದಿಕ್ ಎಂಬಿವರಿಗಾಗಿ ಶೋಧ ನಡೆಯುತ್ತಿದೆ. ೨೦೨೨ ಜುಲೈ ೨೬ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರನ್ನು ತಂಡವೊಂದು ಮಾರಕಾಯುಧಗಳಿಂದ ಕಡಿದು …

ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಪ್ರೇಮ್ ಸದನ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯವಾದ ೧.೩೭ ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೂಲತಃ ಪಡನ್ನಕ್ಕಾಡ್ ನಿವಾಸಿ, ಈಗ ನೀಲೇಶ್ವರ ಕಣಿಚ್ಚಿರದ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿ ರುವ ಪಿ. ವಿಷ್ಣು (೨೭) ಎಂಬವರನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

೭.೫ ಲೀಟರ್ ಮದ್ಯ ವಶ: ಮಹಿಳೆ ಸೆರೆ

ಕಾಸರಗೋಡು: ಪೆರಿಯಾ ಗ್ರಾಮದ ಅರಂಙನಡ್ಕದಲ್ಲಿ ಹೊಸದುರ್ಗ ಅಬಕಾರಿ ರೇಂ ಜ್‌ನ ಇನ್ಸ್‌ಪೆಕ್ಟರ್ ಗಂಗಾ ಧರನ್ ಕೆ.ಪಿ.ರ ನೇತೃತ್ವದ ಅಬಕಾರಿ ತಂಡ ಡಿ.೧೪ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟ ಮಾಡುವ ಉದ್ದೇಶ ದಿಂದ  ಕೈವಶವಿರಿಸಿಕೊಳ್ಳಲಾದ ೭.೫ ಲೀಟರ್ ಭಾರತೀಯ ನಿರ್ಮಿತ ವಿದೇಶ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪುಲ್ಲೂರಿನ ಮಾಧವಿ ಎಂ. ಎಂಬಾಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಅಸೌಖ್ಯ: ಯುವಕ ನಿಧನ

ಉಪ್ಪಳ: ಕರುಳು ಸಂಬAಧ ಅಸೌಖ್ಯ ದಿಂದ ಬಳಲುತ್ತಿದ್ದ ಯುವಕ ನಿಧನರಾಗಿದ್ದಾರೆ ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಗೌರವಾಧ್ಯಕ್ಷ ಉಪ್ಪಳ ನಿವಾಸಿ ಜಯರಾಮ ಎಂಬವರ ಪುತ್ರ ಸಾಯಿ ಪ್ರಸಾದ್ (೪೩) ನಿನ್ನೆ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಎರಡು ವರ್ಷಗಳಿಂದ ಕರುಳು ಸಂಬAಧಿಸಿದ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಿಸಲಾಗಿತ್ತು. ಇವರು ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆ ಉಪ್ಪಳ ಇದರ ಸಕ್ರಿಯ ಕಾರ್ಯಕರ್ತ ರಾಗಿದ್ದರು. ಮೃತರು ತಂದೆ, ತಾಯಿಭವಾನಿ, …

ಸಂತಾಪ ಸಭೆ

ಉಪ್ಪಳ: ಧಾರ್ಮಿಕ ಮುಖಂಡ ದಾಮೋದರ ಬೊಳ್ಳಾರ ನಿಧನಕ್ಕೆ ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿಯಲ್ಲಿ ಸಂತಾಪ ಸೂಚಕ ಸಭೆ ನಿನ್ನೆ ಸಂಜೆ ನಡೆಯಿತು.  ಗ್ರಂಥಾಲ ಯದ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಧನರಾಜ್ ಸ್ವಾಗತಿಸಿದರು. ತುಳು ಅಕಾಡೆಮಿ ಅಧ್ಯಕ್ಷರಾದ  ಎ.ಆರ್,. ಜಯಾ ನಂದ, ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದಸ್ಯ ಕೆ.ಎ. ಹುಸೈನ್, ಜಿಲ್ಲಾ ಕೌನ್ಸಿಲ್ ಸದಸ್ಯೆ ವನಿತಾ ಆರ್ ಶೆಟ್ಟಿ, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ ಯು. ಶೆಟ್ಟಿ,ಉಮೇಶ್ ಶೆಟ್ಟಿ ಮಾತನಾಡಿದರು.

ರಸ್ತೆ ಬದಿಯ ಅಪಾಯಕಾರಿ ವಿದ್ಯುತ್ ಕಂಬ ತೆರವಿಗೆ ಬಿಎಂಎಸ್ ಆಗ್ರಹ

ಕಾಸರಗೋಡು: ರಸ್ತೆ ಬದಿಯಲ್ಲಿ ಅಪಾಯಕರವಾದ ರೀತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸ ಬೇಕೆಂದು ಬಿ.ಎಂ.ಎಸ್ ಆಗ್ರಹಿಸಿದೆ. ಇದೇ ಬೇಡಿಕೆ ಮುಂದಿಟ್ಟು ಕರಂದಕ್ಕಡ್- ಮಧೂರು ರಸ್ತೆಯಲ್ಲಿ  ಬಿಎಂಎಸ್ ಬೋರ್ಡ್ ಸ್ಥಾಪಿಸಿದೆ. ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಇತ್ತೀಚೆಗೆ ಬಸ್ ಪ್ರಯಾಣಿಕನಾಗಿದ್ದ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದನು. ಇದಲ್ಲದೆ ಇದಕ್ಕೆ ಮುಂಚಿತವೂ ಈ ರಸ್ತೆಯಲ್ಲಿ ಈ ರೀತಿಯ ಅಪಘಾತ ಉಂಟಾಗಿದೆ ಎಂದು ಬಿ.ಎಂ.ಎಸ್. ತಿಳಿಸಿದೆ.