ಶಬರಿಮಲೆ: ಅಧಿಕ ಶುಲ್ಕ ವಸೂಲಿ ಸಲ್ಲದು-ಹೈಕೋರ್ಟ್

ಕೊಚ್ಚಿ: ಶಬರಿಮಲೆ ತೀರ್ಥಾಟ ಕರಿಂದ ಎರುಮೇಲಿ ವಾಹನ ಪಾರ್ಕಿಂ ಗ್ ಹೆಸರಲ್ಲಿ  ಅಧಿಕ ಶುಲ್ಕ ವಸೂಲಿ ಮಾಡಬಾರದೆಂದೂ, ಇದನ್ನು ಸಂಬಂ ಧಪಟ್ಟವರು ಖಾತರಿಪಡಿಸುವಂ ತೆಯೂ ಹೈಕೋರ್ಟ್‌ನ ವಿಭಾಗೀಯ ಪೀಠ ನಿರ್ದೇಶ ನೀಡಿದೆ. ಎರಮೇಲಿಯಲ್ಲಿ ವಾಹನ ಪಾರ್ಕಿಂಗ್‌ಗಾಗಿ ತೀರ್ಥಾಟಕರಿಂದ ಅಮಿತ ಶುಲ್ಕ ವಸೂಲಿ ಮಾಡ ಲಾಗುತ್ತಿದೆಯೆಂಬ ದೂರು ಉಂಟಾಗಿ ದ್ದು ಅದನ್ನು  ಪರಿಶೀಲಿಸಿದ ನ್ಯಾಯ ಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಜಿ. ಗಿರೀಶ್ ರನ್ನೊಳಗೊಂಡ ಹೈಕೋ ರ್ಟ್‌ನ ವಿಭಾಗೀಯ ಪೀಠ ಈ ನಿರ್ದೇಶ ನೀಡಿದೆ.  ಭೋಜನ …

ಧರ್ಮಶಾಸ್ತಾ ಭಜನಾ ಮಂದಿರ: ವಿಶೇಷ ಮಂಡಲಪೂಜೆ

ಕಾಸರಗೋಡು: ಶಾಸ್ತಾ ಭಜನಾ ಮಂದಿರದಲ್ಲಿ ನವೋ ಫ್ರೆಂಡ್ಸ್ ಮಲ್ಲಿಕಾರ್ಜುನ  ವತಿಯಿಂದ ವಿಶೇಷ ಮಂಡಲಪೂಜೆ ಜರಗಿತು. ಪ್ರಧಾನಿ ನರೇಂದ್ರಮೋದಿಯವರ ಆರೋಗ್ಯ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾ ಕಾರ್ಯ ಸಾಂಗವಾಗಿ ನೆರ ವೇರಲು ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭದಲ್ಲಿ ೫೦ನೇ ವರ್ಷ ಶಬ ರಿಮಲೆ ಯಾತ್ರೆಗೈಯ್ಯುತ್ತಿರುವ ಕರುಣಾಕರ ಗುರುಸ್ವಾಮಿಯನ್ನು ನಮೋ ಫ್ರೆಂಡ್ಸ್ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಕಾರ್ಯದರ್ಶಿ ಕಿಶೋರ್ ಕುಮಾರ್ ಗೌರವಿಸಿದರು. ಬಾಲಕೃಷ್ಣ ಗುರುಸ್ವಾಮಿ, ವೆಂಕಟರಮಣ ಹೊಳ್ಳ, ಸುರೇಶ್ ಸುವರ್ಣ, ಲವ ಮೀಪುಗುರಿ, ಮಹೇಶ್, ಧನಂಜಯ, ಅನಂತರಾಜ್ ಹಾಗೂ ಅಯ್ಯಪ್ಪ ಭಕ್ತರು …

ಎಸ್‌ಎಫ್‌ಐ ಬೆದರಿಕೆಗೆ ರಾಜ್ಯಪಾಲ ಸವಾಲು: ಆರಿಫ್ ಮುಹಮ್ಮದ್ ಖಾನ್ ನಾಳೆ ಕಲ್ಲಿಕೋಟೆಗೆ: ವಿ.ವಿ. ಅತಿಥಿಗೃಹದಲ್ಲಿ ವಾಸ್ತವ್ಯ

ತಿರುವನಂತಪುರ: ವಿಶ್ವವಿದ್ಯಾಲ ಯಗಳಲ್ಲಿ ರಾಜ್ಯಪಾಲರನ್ನು ಕಾಲೂರಲು ಬಿಡಲಾರೆವೆಂದು ಎಸ್‌ಎಫ್‌ಐಯ ಬೆದರಿಕೆಯನ್ನು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಒಂದು ಸವಾಲಾಗಿ ತೆಗೆದುಕೊಂಡಿದ್ದಾರೆ. ನಾಳೆ ಕಲ್ಲಿಕೋಟೆಗೆ ತಲುಪುವ ರಾಜ್ಯಪಾಲ ಕಲ್ಲಿಕೋಟೆ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ರಾಜ್ಯಪಾಲ ಈ ಹಿಂದೆ ಸರಕಾರದ ಅತಿಥಿಗೃಹದಲ್ಲಿ ತಂಗಲು ನಿರ್ಧರಿಸಿದ್ದರು. ಎಸ್‌ಎಫ್‌ಐಯಿಂದ ಬಂದ ಬೆದರಿಕೆಯನ್ನು ಸವಾಲಾಗಿ ಪರಿಗಣಿಸಿ ತಮ್ಮ ವಾಸ್ತವ್ಯ ಸ್ಥಳವನ್ನೂ ಬದಲಾಯಿಸಿರುವುದಾಗಿ ಹೇಳಲಾಗುತ್ತಿದೆ. ನಾಳೆಯಿಂದ ೧೮ರವರೆಗೆ ರಾಜ್ಯಪಾಲ ಕಲ್ಲಿಕೋಟೆಯಲ್ಲಿರುವರು. ಎಸ್‌ಎಫ್‌ಐಯ ಬೆದರಿಕೆಯನ್ನು  ಪರಿಗಣಿಸಿ ವಿ.ವಿ, ಅತಿಥಿಗೃಹ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ …

ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಷಷ್ಠಿ ಮಹೋತ್ಸವ ನಾಳೆಯಿಂದ

ಕಾಸರಗೋಡು: ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಷಷ್ಠಿ ಮಹೋತ್ಸವ ನಾಳೆಯಿಂದ ೧೮ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ೫.೩೦ಕ್ಕೆ ಗಣಪತಿಹೋಮ, ೯.೩೦ಕ್ಕೆ ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ರಾತ್ರಿ ೭ಕ್ಕೆ ಶ್ರೀ ನಾರಾಯಣ ಮಹಿಳಾ ಸಮಾಜದ ಆಶ್ರಯದಲ್ಲಿ ಹೊರೆಕಾಣಿಕೆ ಸಮರ್ಪಣೆ, ೯.೧೫ಕ್ಕೆ ‘ಕೈಕೊಟ್ಟಿಕಳಿ’, ೯.೩೦ಕ್ಕೆ ನರೇಂದ್ರ ಬಾಲಗೋಕುಲದ ಮಕ್ಕಳಿಂದ ನೃತ್ಯ, ೧೭ರಂದು ಬೆಳಿಗ್ಗೆ ೫.೩೦ಕ್ಕೆ ಗಣಪತಿ ಹೋಮ, ೯.೩೦ಕ್ಕೆ ನವಕಾಭಿಷೇಕ,  ೧೦.೩೦ಕ್ಕೆ  ಆಯಿಲ್ಯಂ ಪೂಜೆ, ನಾಗತಂಬಿಲ, ಪಂಚಮಿ ಉತ್ಸವ, ೧ರಿಂದ ಅನ್ನಸಂತರ್ಪಣೆ, ರಾತ್ರಿ ೯ಕ್ಕೆ …

ಪೂರ್ವ ವಿದ್ಯಾರ್ಥಿಗಳಿಂದ ಕಾಸರಗೋಡು ಶಾಲೆಗೆ ವಾಟರ್ ಕೂಲರ್ ಹಸ್ತಾಂತರ

ಕಾಸರಗೋಡು: ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ  ಶಾಲೆಯ  ಪ್ಲಸ್ ಟು ಶಿಕ್ಷಣ ಕೈಗೊಂಡ ಮೊದಲ ಬ್ಯಾಚ್‌ನ ಸಂಗಮ ಈ ತಿಂಗಳ ೨೩ರಂದು ನಡೆಯಲಿದ್ದು, ಇದರಂಗವಾಗಿ ಶಾಲೆಗೆ ವಾಟರ್ ಕೂಲರ್ ಹಸ್ತಾಂತರಿಸಿದರು. ಶಾಲೆಯ ಹೈಯರ್ ಸೆಕೆಂಡರಿ ಬ್ಲಾಕ್‌ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಗೀತಾ ತೋಪಿಲ್ ಸೀಮಾ ಟೀಚರ್‌ಗೆ ನೀಡಿದರು. ಪೂರ್ವ ವಿದ್ಯಾರ್ಥಿಗಳಾದ ಆಶಿಫ್, ರಶೀದ್, ವಿನೇಶ್, ಸಾಬಿತ್ ಮುಹಮ್ಮದ್, ರಖೀಬ್, ಲತೀಫ್, ಶರೀಫ್, ಸುದಿನ್, ಶಾಹಿರ, ಸಲ್ವಾ, ನಿಶಾ, ಸಜಿತ, ಮೋನಿಶ, ಅಂಬಿಕಾ, ಮಹೇಶ್ವರಿ ಭಾಗವಹಿಸಿದರು.

ಸಿಪಿಎಂ ಮುಖಂಡರ ನಿಧನ: ಪೈವಳಿಕೆಯಲ್ಲಿ ಸರ್ವಪಕ್ಷ ಸಂತಾಪ ಸಭೆ

ಪೈವಳಿಕೆ: ಸಿಪಿಎಂ ಮುಖಂಡ ಎ.ಕೆ. ನಾರಾಯಣನ್, ಕೆ. ಕುಂಞರಾಮನ್ ಅವರ ನಿಧನಕ್ಕೆ ಪೈವಳಿಕೆಯಲ್ಲಿ ಸರ್ವಪಕ್ಷ ಸಂತಾಪ ಸೂಚಕ ಸಭೆ ಜರಗಿತು. ಸಿಪಿಎಂನ ಹಿರಿಯ ನೇತಾರ ಪೈವಳಿಕೆ ಪಂಚಾಯತ್ ಸದಸ್ಯರು ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಮಂಜೇಶ್ವರ ಏರಿಯ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್, ರಾಜ್ಯ ಲೈಬ್ರೆರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್, ಕೆಎಸ್‌ಟಿಎ ಜಿಲ್ಲಾ ಅಧ್ಯಕ್ಷ ಶ್ಯಾಂಭಟ್, ಸಿಪಿಐಯ ಅಜಿತ್ ಎಂ.ಸಿ, ಲೋರೆನ್ಸ್ ಡಿ’ಸೋಜಾ, ಮುಸ್ಲಿಂ ಲೀಗ್‌ನ ಆದಂ ಬಳ್ಳೂರು, ಡಿವೈಎಫ್‌ಐ ಹಾರಿಸ್ ಪೈವಳಿಕೆ, …

ಬೀಗ ಜಡಿದ ಮನೆಯಲ್ಲಿ ಕಳವು: ಇಬ್ಬರ ಸೆರೆ

ಕಾಸರಗೋಡು: ಬೀಗ ಜಡಿದ ಮನೆಗೆ ನುಗ್ಗಿ ಕಳವು ನಡೆಸಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಅಣಂಗೂರು ತುರ್ತಿ ಮುಬಾರಕ್ ಮಂಜಿಲ್‌ನ ನಿವಾಸಿ ಹಾಗೂ ಈಗ ಕೋಟೆಕಣಿಯಲ್ಲಿ ನೆಲೆಸಿರುವ ಆಸಿಫ್ ಟಿ.ಎ(೩೭) ಮತ್ತು ಮೂಲತಃ ಕಾಸರಗೋಡು  ಆಲಂಪಾಡಿ ಎರಿಯಪ್ಪಾಡಿ ಹೌಸ್‌ನ ನಿವಾಸಿ ಹಾಗೂ ಈಗ ಬೇಕಲ ಪಾಲಕುನ್ನು ಆರಾಟುಕಡವಿನಲ್ಲಿ ವಾಸಿಸುತ್ತಿರುವ ಅಬ್ದುಲ್ ಖಾದರ್ ಪಿ.ಎಂ(೪೦) ಎಂಬವರು ಬಂಧಿತರಾದ ಆರೋಪಿಗಳು. ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ. ವಿನೋದ್ ಕುಮಾರ್‌ರ ನೇತೃತ್ವದ ಪೊಲೀಸರು ಇವರನ್ನು ಬಂಧಿಸಿದ್ದಾರೆ. …

ಸಿಪಿಎಂ ಮಾಜಿ ಜಿಲ್ಲಾ ಕಾರ್ಯದರ್ಶಿ ಕೆ. ಕುಂಞಿರಾಮನ್ ನಿಧನ

ಚೆರುವತ್ತೂರು: ಸಿಪಿಎಂನ ಜಿಲ್ಲೆಯ ಪ್ರಮುಖ ಹಾಗೂ ಹಿರಿಯ ನೇತಾರನಾದ ಕೆ. ಕುಂಞಿರಾಮನ್ (೮೦) ನಿನ್ನೆ ಮಧ್ಯರಾತ್ರಿ ನಿಧನ ಹೊಂದಿದರು. ಸಿಪಿಎಂ ಮಾಜಿ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯ, ತೃಕ್ಕರಿಪುರ ಶಾಸಕ ಎಂಬಿ ಸ್ಥಾನಗಳಲ್ಲಿ ಇವರು ಕಾರ್ಯಾಚರಿಸಿದ್ದರು. ವೃದ್ದಾಪ್ಯ ಸಹಜ ಅಸೌಖ್ಯದ ಹಿನ್ನೆಲೆಯಲ್ಲಿ ಮಟ್ಟಲಾಯಿ ಎಂಬಲ್ಲಿ ಸ್ವಂತ ಮನೆಯಾದ ಮಾನವೀಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅಸೌಖ್ಯ ತೀವ್ರಗೊಂಡುದರಿಂದ ಎರಡು ದಿನಗಳ ಹಿಂದೆ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಮಧ್ಯರಾತ್ರಿ ೧೨.೩೦ರ ವೇಳೆ ನಿಧನ ಸಂಭವಿಸಿದೆ. ಮೃತದೇಹವನ್ನು ಇಂದು …

ಪರೀಕ್ಷೆಗೆ ಹೆದರಿ ಬ್ಯಾಗ್ ಉಪೇಕ್ಷಿಸಿ ಅಡಗಿ ಕುಳಿತ ವಿದ್ಯಾರ್ಥಿಗಳು: ನಾಗರಿಕರಲ್ಲಿ ಆತಂಕ

ಉಪ್ಪಳ: ಶಾಲಾ ವಿದ್ಯಾರ್ಥಿಗಳ ಎರಡು ಬ್ಯಾಗ್‌ಗಳು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನಿನ್ನೆ ಬೆಳಿಗ್ಗೆ ಉಪ್ಪಳದಲ್ಲಿ ಆತಂಕಕ್ಕೆ ಕಾರಣವಾಯಿತು. ಕೈಕಂಬ ಪೇಟೆ ಬಳಿಯ ಮಣ್ಣಿನ ರಾಶಿ ಮೇಲೆ ನಿನ್ನೆ ಬೆಳಿಗ್ಗೆ ಎರಡು ಶಾಲಾ ಬ್ಯಾಗ್‌ಗಳು ಪತ್ತೆಯಾಗಿತ್ತು. ಇದರಿಂದ ಆತಂಕಗೊಂಡ ನಾಗರಿಕರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಹಾಗೂ ನಾಗರಿಕರು ತೀವ್ರಶೋಧ ನಡೆಸಿದರೂ ಬ್ಯಾಗ್ ಯಾರದೆಂದು ತಿಳಿದುಬಂದಿಲ್ಲ. ಇದರಿಂದ  ವ್ಯಾಪಕ ಆತಂಕ ಸೃಷ್ಟಿಯಾಯಿತು. ಬ್ಯಾಗ್ ಪತ್ತೆಯಾದ  ಸ್ಥಳದಲ್ಲಿ ನಾಗರಿಕರು ಹಾಗೂ ಪೊಲೀಸರು ಕಾವಲು ನಿಂತಿದ್ದರು. ಈ ವೇಳೆ …

ಸಂಸತ್ ಮೇಲೆ ದಾಳಿ : ಬಂಧಿತರ ವಿರುದ್ಧ ಯು.ಎ.ಪಿ.ಎ ಪ್ರಕಾರ ಪ್ರಕರಣ ದಾಖಲು

ನವದೆಹಲಿ: ೨೦೦೧ರಂದು ಸಂ ಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ೨೨ನೇ ವಾರ್ಷಿಕ ದಿನವಾದ ನಿನ್ನೆ ಸಂಸತ್ತಿನ ಒಳಗೆ ಗ್ಯಾಸ್ ಕ್ಯಾನ್ಸಿಸ್ಟರ್ ಬಳಸಿ ದಾಳಿ ನಡೆಸಿದ ಹಾಗೂ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿರುವ ಆರೋ ಪಿಗಳ ವಿರುದ್ಧ ಯುಎಪಿಎ (ದೇ ದ್ರೋಹ ತಡೆ ಕಾನೂನು) ಹಾಗೂ ಇತರ ಹಲವು ಸೆಕ್ಷನ್‌ಗಳ ಪ್ರಕಾರ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಆದರೆ ಈ ಆರೋಪಿಗಳು ಯಾವುದೇ ಉಗ್ರಗಾಮಿ ಸಂಘಟನೆ ಗಳೊಂದಿಗೆ ಸದ್ಯ ಗುರುತಿಸಿಕೊಂಡವರಲ್ಲ ಎಂದು  ಪೊಲೀಸರು ನಡೆಸಿದ ಪ್ರಾಥಮಿಕ …