ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಉಪ್ಪಳ: ವಿಷ ಸೇವಿಸಿ ಗಂ ಭೀರ ಸ್ಥಿತಿಯಲ್ಲಿ ಪರಿಯಾರಂ ಮೆಡಿ ಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಯುವಕ ಮೃತಪಟ್ಟರ. ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಕೇಶವ ಎಂಬವರ ಪುತ್ರ ಅವಿನಾಶ್ (೩೪) ಮೃತಪಟ್ಟ ವ್ಯಕ್ತಿ. ಇವರು  ಈ ತಿಂಗಳ ೯ರಂದು ರಾತ್ರಿ ಹೊಟ್ಟೆ ನೋವೆಂದು ಸಹೋದರನಲ್ಲಿ ತಿಳಿಸಿದ್ದರೆನ್ನಲಾಗಿದೆ. ಇದರಿಂದ ಔಷಧಿ ನೀಡಿದ್ದು, ಅಲ್ಪಹೊತ್ತಿನಲ್ಲಿ ವಾಂತಿ ಮಾಡಿದ್ದರು. ಆದರೆ ಅಸ್ವಸ್ಥತೆ ತೀವ್ರಗೊಂಡಾಗಲೇ ವಿಷ ಸೇವಿಸಿದ ವಿಷಯವನ್ನು ಅವಿನಾಶ್ ತಿಳಿಸಿದ್ದರೆನ್ನಲಾಗಿದೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಸ್ಥಿತಿ …

ವರದಕ್ಷಿಣೆಗಾಗಿ ಯುವತಿಗೆ ಕಿರುಕುಳ : ಪತಿ ಸಹಿತ ಮೂವರ ವಿರುದ್ಧ ಕೇಸು

ಉಪ್ಪಳ: ವರದಕ್ಷಿಣೆಗಾಗಿ ಒತ್ತಾಯಿಸಿ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ಆಕೆಯ ಪತಿ ಸಹಿತ ಮೂರು ಮಂದಿ ವಿರುದ್ಧ ನ್ಯಾಯಾಲಯದ ನಿರ್ದೇಶ ಮೇರೆಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉಪ್ಪಳ ಕೋಡಿಬೈಲು ನಿವಾಸಿ ಬಾಬು ಎಂಬವರ ಪುತ್ರಿ ವನಿತ ಕುಮಾರಿ ನೀಡಿದ  ದೂರಿನಂತೆ ಈಕೆಯ ಪತಿ ಕರ್ನಾಟಕದ ಕುತ್ತಡ್ಕ ನಿವಾಸಿ ರಕ್ಷಿತ್ (೩೪), ಈತನ ತಾಯಿ ಪದ್ಮಾವತಿ (೫೫), ಸಹೋದರ ರಾಹುಲ್ (೩೦) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ೨೦೨೧ ಫೆಬ್ರವರಿಯಲ್ಲಿ ವನಿತ ಕುಮಾರಿ ಹಾಗೂ ರಕ್ಷಿತ್‌ರ ಮದುವೆ …

ಕೆಲಸಕ್ಕಿದ್ದ ಮನೆಯಿಂದ ನಗ-ನಗದು ಕಳವು: ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಸೆರೆ

ಮಂಜೇಶ್ವರ: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲಸಕ್ಕಿದ್ದ ಮನೆಯಿಂದ ನಗ-ನಗದು ಕಳವು ನಡೆಸಿ ಕಳೆದ ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಮಂಜೇಶ್ವರ ನಿವಾಸಿ ಸಹಿತ ಇಬ್ಬರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಮಂಜೇಶ್ವರ ಮೂಲದ ಅಶ್ರಫ್ ಅಲಿ ಹಾಗೂ ಬೆಂಗ್ರೆಯ ಕಬೀರ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ.  ಫರಂಗಿಪೇಟೆಯ ಕೋಡಿಮಜಲು ನಿವಾಸಿಯೂ ಬಿಲ್ಡರ್ಸ್ ಮಾಲಕನಾದ ಮೊಹಮ್ಮದ್ ಜಫಾದುಲ್ಲ ಎಂಬವರ ಮನೆಯಿಂದ  ಕಳವು ನಡೆಸಿದ ಸಂಬಂಧ ಈ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಮೊಹಮ್ಮದ್ ಜಫಾದುಲ್ಲಾರ ಮನೆಯಿಂದ ೨೭.೫೦ ಲಕ್ಷ  ರಪಾಯಿ ಮೌಲ್ಯದ ನಗದು ಹಾಗೂ …

ಮನೆಯಿಂದ ಕದ್ದ ನಗ-ನಗದು ಪತ್ತೆ ಓರ್ವ ಬಲೆಗೆ; ಇನ್ನೋರ್ವ ಪರಾರಿ

ಕಾಸರಗೋಡು: ಮನೆಯೊಂದರಿಂದ ಕದ್ದ ನಗ-ನಗದು ಒಳಗೊಂಡ ಗಂಟುಮೂಟೆಯೊಂದಿಗೆ ಸಾಗುತ್ತಿದ್ದ ವೇಳೆ ಅದು ಪೊಲೀಸರ ಕಣ್ಣಿಗೆ ಬಿದ್ದಾಗ ಅದನ್ನು ಕದ್ದ ಕಳ್ಳರ ಪೈಕಿ ಓರ್ವ ತಪ್ಪಿಸಿಕೊಂಡು ಇನ್ನೋ ರ್ವ ಪೊಲೀಸರ ಬಲೆಗೊಳಗಾದ ಘಟನೆ ನಗರದಲ್ಲಿ ನಡೆದಿದೆ. ಚಂದ್ರಗಿರಿ ವಿಕಲ ಚೇತನರೋರ್ವರು ತಮ್ಮ ಮನೆಗೆ ಬೀಗ ಜಡಿದು ಹೊರಗೆ ಹೋಗಿದ್ದರು. ಆ ವೇಳೆ ಆ ಮನೆಗೆ ಕಳ್ಳರು ನುಗ್ಗಿ ಅಲ್ಲಿಂದ ನಗ-ನಗದು ಕದ್ದು ಅದನ್ನು ಗಂಟುಮೂಟೆ ಕಟ್ಟಿ ಚಂದ್ರಗಿರಿ ಸೇತುವೆ ಬಳಿ ನಿನ್ನೆ ರಾತ್ರಿ ತಂದಿರಿಸಿದ್ದರು. ಆಗ ಕಾಸರಗೋಡು ಪೊಲೀಸ್ …

ಮಾದಕ ಮಾತ್ರೆ, ಮದ್ಯ, ಗಾಂಜಾ ಪತ್ತೆ: ರಿಕ್ಷಾ, ಬೈಕ್ ವಶ; ಇಬ್ಬರ ಸೆರೆ

ಕಾಸರಗೋಡು: ಅಬಕಾರಿ ಇಲಾ ಖೆಯ ತಂಡ ನಿನ್ನೆ ಜಿಲ್ಲೆಯ ವಿವಿಧೆ ಡೆಗಲ್ಲಾಗಿ ನಡೆಸಿದ ಕಾರ್ಯಾಚರಣೆಗ ಳಲ್ಲಿ ಮಾದಕ ಮಾತ್ರೆ, ಗಾಂಜಾ ಮತ್ತು ಮದ್ಯ ಇತ್ಯಾದಿಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಉಳಿಯತ್ತಡ್ಕದಲ್ಲಿ ಕಾಸರಗೋಡು ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ. ನೇತೃತ್ವದಲ್ಲಿ ನಿನ್ನೆ ವಾಹನ ತಪಾ ಸಣೆಯಲ್ಲಿ ತೊಡಗಿದ್ದ ವೇಳೆ ಆ ದಾರಿ ಯಾಗಿ ಬಂದ ಆಟೋ ರಿಕ್ಷಾವೊಂದನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿ ದಾಗ ಅದರಲ್ಲಿ ೫೦ ಗ್ರಾಂ ಗಾಂಜಾ ಮತ್ತು ಅಮಲೇರಿಸಲು ಬಳಸಲಾಗುತ್ತಿರುವ ೨೧೦ ಮಾತ್ರೆಗಳು, …

ಬದಿಯಡ್ಕದ ಹಿರಿಯ ವೈದ್ಯ ಡಾ| ಎಸ್.ಎಸ್.ಭಟ್ ನಿಧನ

ಬದಿಯಡ್ಕ: ಹಿರಿಯ ವೈದ್ಯ, ಸಾಮಾಜಿಕ, ಧಾರ್ಮಿಕ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿದ್ದ ಡಾ| ಎಸ್.ಎಸ್. ಭಟ್ (೯೦) (ಶ್ಯಾಮ್ ಭಟ್) ನಿಧನರಾದರು. ಸರ್ಪಂಗಳ ಡಾಕ್ಟರ್ ಎಂದೇ ಪ್ರಸಿದ್ಧರಾಗಿದ್ದ ಅವರು ಕೆಲವು ವರ್ಷಗಳಿಂದ ಪುತ್ತೂರು ಮುಕ್ವೆ ಎಂಬಲ್ಲಿ ಪುತ್ರನ ಮನೆಯಲ್ಲಿ ವಾಸಿಸುತ್ತಿದ್ದರು. ಬದಿಯಡ್ಕದಲ್ಲಿ ಸುಮಾರು ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಿಂದಿನ ಕಾಲದಲ್ಲಿ ವಾಹನ ಸೌಕರ್ಯ ವಿಲ್ಲದ ಮನೆ ಮನೆಗೂ ಕಾಲ್ನಡಿಗೆಯಲ್ಲೇ ತೆರಳಿ ಅವರು ಹೆರಿಗೆ ಮಾಡಿಸುವುದರಲ್ಲಿ ನುರಿತರಾಗಿದ್ದರು. ಬಡವರಿಗೆ ಉಚಿತವಾಗಿಯೇ ಔಷಧಿಯನ್ನು ನೀಡುತ್ತಿದ್ದರು. ಬದಿಯಡ್ಕ ಸಾರ್ವಜನಿಕ ಶ್ರೀ …

ಪಂಚಾಯತ್ ಇಂಜಿನಿಯರ್‌ನ ನಿರ್ಲಕ್ಷ್ಯ ಕ್ರಮ: ಕೊಡ್ಯಮ್ಮೆಯ ಅಂಗನವಾಡಿ ಕಣ್ಮರೆಯಾಗುವ ಸ್ಥಿತಿಯತ್ತ

ಕುಂಬಳೆ: ತೆಂಗಿನಡ್ಕ ಅಂಗನವಾಡಿ ಕಟ್ಟಡಕ್ಕೆ ಯಾವುದೇ ತೊಂದರೆ ಇಲ್ಲ ವೆಂದೂ ಅದನ್ನು ನವೀಕರಿಸಲು ಸುಮ್ಮನೆ ೧೫ ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿಲ್ಲವೆಂದು ವರದಿ ಸಲ್ಲಿಸಿದ ಕುಂಬಳೆ ಪಂಚಾಯತ್ ಇಂಜಿನಿಯರ್ ಆರು ತಿಂಗಳೊಳಗೆ ಕಟ್ಟಡ ಅಪಾಯ ಕಾರಿ ಸ್ಥಿತಿಯಲ್ಲಿದೆಯೆಂದು ತಿಳಿಸಿ ಮತ್ತೊಂದು ವರದಿ ನೀಡಿದ್ದಾರೆ. ಇಂಜಿನಿಯರ್‌ಗಳ ಸಂಶೋ ಧನೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾ ಯತ್ ಮಂಜೂರು ಮಾಡಿದ ಮೊತ್ತ ಲ್ಯಾಪ್ಸ್ ಆಗಿದ್ದು, ಅಲ್ಲದೆ ಅಂಗನವಾಡಿ ಯನ್ನು ಅಪಾಯಕಾರಿಯಾದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಲಾ ಯಿತು. ಹಳೆಯ ಅಂಗನವಾಡಿ ಕಟ್ಟಡದಲ್ಲಿ ಹಸಿರು …

ತ್ಯಾಜ್ಯ ಹಾಕಲು ಪಂಚಾಯತ್ ಬಾವಿ ಬಾಯಾರುಪದವಿನಲ್ಲಿ ಬತ್ತಿದ ಜಲಮೂಲ

ಪೈವಳಿಕೆ: ಕುಡಿಯುವ ನೀರಿ ಗಾಗಿ ಜನರು ಪರದಾಡುತ್ತಿರುವ ಮಧ್ಯೆ ಪಂಚಾಯತ್ ಬಾವಿಗೆ ತ್ಯಾಜ್ಯವನ್ನು  ಹಾಕಿ ಬಾವಿಯನ್ನು ಉಪಯೋಗ ಶೂನ್ಯಗೊಳಿಸಲಾ ಗಿದೆ. ಪೈವಳಿಕೆ ಪಂಚಾಯತ್‌ನ ಬಾಯಾರುಪದವು ಪೇಟೆಯಲ್ಲಿರುವ ಬಾವಿಗೆ ತ್ಯಾಜ್ಯ ಸುರಿದು ಉಪಯೋ ಗಶೂನ್ಯವ ನ್ನಾಗಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಪಂಚಾಯತ್‌ನಿಂದ ಸುಮಾರು ೩೦ ವರ್ಷಗಳ ಹಿಂದೆ ನಿರ್ಮಿಸಲಾದ ಈ ಬಾವಿಯಲ್ಲಿ ಬೇಸಿಗೆಯಲ್ಲಿಯೂ ನೀರು ಲಭಿಸುತ್ತಿದ್ದು, ಈ ಪ್ರದೇಶದ ಮನೆಯವರು, ವ್ಯಾಪಾರಿಗಳು ಈ ಬಾವಿಯನ್ನೇ ಆಶ್ರಯಿಸುತ್ತಿದ್ದರು. ಸುಮಾರು ೧೫ರಿಂದ ೨೦ರಷ್ಟು ಕೋಲು ಆಳದ ಬಾವಿ ಇದಾಗಿದೆ. ಆದರೆ ಕಳೆದ ಒಂದೆರಡು …

ಮಂಜೇಶ್ವರ: ೧೭೬೬ನೇ ಮದ್ಯವರ್ಜನ ಶಿಬಿರ ಸಮಾರೋಪ

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದಲ್ಲಿ ೧೭೬೬ ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಸಮಾರಂಭ ನಿನ್ನೆ ನೆರವೇರಿತು. ಕುಟುಂಬ ದಿನವನ್ನು ಜನಜಾಗ್ರತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ನೆರವೇರಿಸಿದರು. ೬೬ ಮಂದಿ ಶಿಬಿರಾರ್ಥಿ ಬಂಧುಗಳು ಹೊಸ ಜೀವನಕ್ಕೆ ಕಾಲಿಟ್ಟರು. ಸಮಾರೋಪ ಸಮಾರಂಭದÀಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನವಿತ್ತರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ …

ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ನಿಧನಕ್ಕೆ ಸಂತಾಪ

ಮಂಜೇಶ್ವರ: ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್‌ರ ನಿಧನಕ್ಕೆ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಹೊಸಂಗಡಿ ಎ.ಕೆ.ಜಿ ಮಂದಿರ ಸಮೀಪ ಸರ್ವಪಕ್ಷ ಸಂತಾಪ ಸೂಚಕ ಸಭೆ ನಡೆಯಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಗೋವಿಂದನ್ ಪಳ್ಳಿಕಾಪ್ಪಿಲ್, ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್ ಜಯಾನಂದ, ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಕೋಶಾಧಿಕಾರಿ ಸೈಫುಲ್ಲ ತಂಙಳ್, ಬಿಜೆಪಿ …