ಸೋಮೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ: ನಾಡಿನಲ್ಲಿ ಶೋಕಸಾಗರ
ಮಂಜೇಶ್ವರ: ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಬಲವಾದ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (೧೭)ನ ಮೃತದೇಹವನ್ನು ದೇವಿಪುರದ ಸ್ಮಶಾನದಲ್ಲೂ, ಕುಂಜತ್ತೂರು ಮಜಲ್ನ ಯುವರಾಜ್ (೧೭)ನ ಮೃತದೇಹವನ್ನು ಕುಂ ಜತ್ತೂರಿನ ಮಹಾಲಿಂಗೇಶ್ವರ ಸ್ಮಶಾನದಲ್ಲಿ ಸಂಬಂಧಿಕರ ಸಹಿತ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಉಳ್ಳಾಲ ಸೋಮೇಶ್ವರದ ಪರಿಜ್ಞಾನ ಪಿಯು ಕಾಲೇಜಿನ ದ್ವಿತೀಯ ವರ್ಷ ಪಿಯುಸಿ ವಿದ್ಯಾರ್ಥಿಗಳಾದ ಇಬ್ಬರು ಮೊನ್ನೆ ಸಂಜೆ ಸಮುದ್ರದಲ್ಲಿ ಅಪಘಾತಕ್ಕೀಡಾಗಿದ್ದರು. …
Read more “ಸೋಮೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ: ನಾಡಿನಲ್ಲಿ ಶೋಕಸಾಗರ”