ತೃಶೂರಿನಲ್ಲಿ ೧೨೦೦ ಲೀಟರ್ ಸ್ಪಿರಿಟ್, ನಕಲಿ ಮದ್ಯ ವಶ

ತೃಶೂರು: ತೃಶೂರಿನಲ್ಲಿ ೧೨೦೦ ಲೀಟರ್ ಸ್ಪಿರಿಟ್ ಹಾಗೂ  ಭಾರೀ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ  ವೈದ್ಯನೆಂದು ಹೇಳಲಾಗುತ್ತಿರುವ ವ್ಯಕ್ತಿಯ ಸಹಿತ ೬ ಮಂದಿಯನ್ನು  ಬಂಧಿಸಲಾಗಿದೆ.   ಪೆರಿಂಙೋಟ್ ಕರ ಎಂಬಲ್ಲಿನ ಹೋಟೆಲ್‌ವೊಂ ದನ್ನು ಕೇಂದ್ರೀಕರಿಸಿ ನಕಲಿ ಮದ್ಯ ತಯಾ ರಿ ಕೇಂದ್ರ ನಡೆಯುತ್ತಿರುವು ದಾಗಿ ಅಬಕಾರಿ ಇಲಾಖೆಗೆ ಮಾಹಿತಿ ಲಭಿಸಿತ್ತು. ಇದರಂತೆ ಅಲ್ಲಿಗೆ ದಾಳಿ ನಡೆಸಿದಾಗ ಸ್ಪಿರಿಟ್ ಹಾಗೂ ಮದ್ಯ ಪತ್ತೆಯಾಗಿದೆ.  ಸೆರೆಗೀಡಾದವರಲ್ಲಿ ಇರಿಂಙಾಲಕುಡ ನಿವಾಸಿ ಅನೂಪ್ ಎಂಬಾತನಿದ್ದು ಈತ ವೈದ್ಯನೆಂದು ಹೇಳಲಾಗುತ್ತಿದೆ. ಈತನ ನೇತೃತ್ವದಲ್ಲಿ …

ಐಸಿಸ್ ದಾಳಿ ಸಂಚು: ದೇಶದ ೪೪ ಕಡೆ ಏಕಕಾಲದಲ್ಲಿ ಎನ್‌ಐಎ ದಾಳಿ

ನವದೆಹಲಿ: ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ (ಐಸಿಸ್) ದಾಳಿ ನಡೆಸಲು ಸಂಚು ಹೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ, ಮಹಾರಾಷ್ಟ್ರಮತ್ತಿತರ ಹಲವೆಡೆಗಳಲ್ಲಿ ಏಕಕಾಲದಲ್ಲಿ ದಾಳಿ ಆರಂಭಿಸಿದೆ. ಇಂದು ಬೆಳಿಗ್ಗೆ ಆರಂಭಗೊಂಡ ಎನ್‌ಐಎ ದಾಳಿ ದೇಶದ ೪೪ ಕೇಂದ್ರಗಳಲ್ಲಿ ಮುಂದುವರಿಯು ತ್ತಿದೆ. ಕರ್ನಾಟಕದ ಒಂದು, ಪುಣೆಯ ೨, ಥಾಣೆ ಗ್ರಾಮೀಣದ – ೩೧, ನಗರದ ೯ ಸೇರಿದಂತೆ ಹಲವು ಕೇಂದ್ರಗಳಲ್ಲೂ ದಾಳಿ ನಡೆಯುತ್ತಿದೆ. ದಾಳಿಯಲ್ಲಿ ಹಲವು ದೇಶಗಳಿಂದ …

ದುಬಾಯ ಬ್ಯಾಂಕ್‌ಗೆ ವಂಚಿಸಿದ ಪ್ರಕರಣ: ತೃಕ್ಕರಿಪುರ ನಿವಾಸಿ ಸೊತ್ತು ಜಪ್ತಿ

ಕಾಸರಗೋಡು: ದುಬಾಯ ಬ್ಯಾಂಕ್‌ನಿಂದ ೩೦೦ ಕೋಟಿ ರೂಪಾಯಿಗಳನ್ನು ಲಪಟಾಯಿಸಲಾ ಯಿತೆಂಬ ಆರೋಪದಂತೆ ಎನ್‌ಫೋ ರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ತನಿಖೆ ತೀವ್ರಗೊಳಿಸಿದೆ. ಇದರ ಅಂಗವಾಗಿ ಆರೋಪಕ್ಕೆಡೆಯಾದ ವ್ಯಕ್ತಿಯ ಸೊತ್ತುಗಳನ್ನು  ತನಿಖಾ ತಂಡ ಮುಟ್ಟುಗೋಲು ಹಾಕಿದೆ.ತೃಕ್ಕರಿಪುರ ಉಡುಂಬುಂತಲ  ನಿವಾಸಿಯೂ ಸಿನಿಮಾ ನಿರ್ಮಾಪಕನಾದ ಅಬ್ದುಲ್ ರಹ್ಮಾನ್ ಹಾಗೂ ಆತನ ಪತ್ನಿಯ  ಹೆಸರಲ್ಲಿ ಬ್ಯಾಂಕ್‌ಗಳಲ್ಲಿದ್ದ ೩.೫೮ ಕೋಟಿ ರೂಪಾಯಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇದರ ಹೊರತು  ಚರ ಜಂಗಮ ಸೊತ್ತುಗಳು, ಕಂಪೆನಿಗಳ ಶೇರ್ ಮೊದಲಾದವುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಅಬ್ದುಲ್ ರಹ್ಮಾನ್‌ನ ಹೆಕ್ಸ್ ಆಯಿಲ್ ಆಂಡ್ …

ಮಾದಕಪದಾರ್ಥ ಮಾರಾಟ ವೇಳೆ ಮಂಜೇಶ್ವರ ನಿವಾಸಿ ಸಹಿತ ಇಬ್ಬರು ಕದ್ರಿಯಲ್ಲಿ ಸೆರೆ

ಮಂಜೇಶ್ವರ: ಮಂಗಳೂರು  ಕದ್ರಿ ಪಾರ್ಕ್ ಪರಿಸರದಲ್ಲಿ ಮಾದಕ ಪದಾರ್ಥ (ಎಂಡಿಎಂಎ) ಮಾರಾಟ ಮಾಡುತ್ತಿದ್ದ ವೇಳೆ ಮಂಜೇಶ್ವರ ನಿವಾಸಿಯೋರ್ವನ ಸಹಿತ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂ ಜೇಶ್ವರ ಪಾವೂ ರು ಮಚ್ಚಂಪಾಡಿ ನಿವಾಸಿ ನವಾಜ್ (೪೦), ಬಂಟ್ವಾಳ ಫರಂಗಿಪೇಟೆ ಜುಮಾ ದಿಗುಡ್ಡೆಯ ಅಜರುದ್ದೀನ್ ಅಲಿಯಾಸ್ ಅಝರ್ (೩೮) ಬಂಧಿತರಾದವರು. ಇವರಿಂದ ೧೨೦ ಗ್ರಾಂ ತೂಕದ ೬ ಲಕ್ಷ ರೂ. ಮೌಲ್ಯದ ಎಂಡಿಎಂಎ, ೩ ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ, ಬೈಕ್ ಸೇರಿದಂತೆ ಒಟ್ಟು ೬,೮೩,೧೨೦ …

ಕೆಂಪು ಮಣ್ಣು ಸಾಗಾಟ ಲಾರಿಗಳು, ಜೆಸಿಬಿ ವಶ; ಓರ್ವ ಸೆರೆ

ಕುಂಬಳೆ: ಕೆಂಪು ಮಣ್ಣು ಸಾಗಾಟ ನಡೆಸಿದ ಎರಡು ಟಿಪ್ಪರ್ ಲಾರಿಗಳು ಹಾಗೂ ಜೆಸಿಬಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕರಾದ ಕಯ್ಯೂರಿನ ಕೃಷ್ಣ (೪೨), ಪೈವಳಿಕೆಯ ಕಲಂದರ್ (೩೫), ಸುರತ್ಕಲ್‌ನ ನವಾಸ್ (೩೫)  ಎಂಬಿವರನ್ನು ಬಂಧಿಸ ಲಾಗಿದೆ. ಎಸ್.ಐ. ಉಮೇಶ್‌ರ ನೇತೃತ್ವದಲ್ಲಿ  ವಾಹನಗಳು ಹಾಗೂ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

ಬಂಗ್ರಮಂಜೇಶ್ವರ ಶಾಲೆಯಲ್ಲಿ ಮಣ್ಣು ದಿನಾಚರಣೆ

ಮಂಜೇಶ್ವರ:  ಬಂಗ್ರಮಂಜೇಶ್ವರ ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ವಿಶ್ವ ಮಣ್ಣು ದಿನ ಆಚರಿಸಲಾಯಿತು. ಇದರಂಗವಾಗಿ ಹೈಸ್ಕೂಲ್ ವಿಭಾಗದ ಮಕ್ಕಳಿಗಾಗಿ ಮಣ್ಣು ಪರೀಕ್ಷೆ ಮತ್ತು ಜಾಗೃತಿ ಶಿಬಿರವನ್ನು ಆಯೋಜಿ ಸಲಾಗಿತ್ತು. ಕಾಸರಗೋಡು ಮಣ್ಣು ಪರೀಕ್ಷಾ ಲ್ಯಾಬ್‌ನ ಸಹಾಯಕ ನಿರ್ದೇಶಕಿ ರೇಷ್ಮಾ ಶಿಬಿರ ಉದ್ಘಾಟಿಸಿ ಮಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಎ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಕೌನ್ಸೆಲಿಂಗ್ ಸೆಲ್‌ನ ಕೌನ್ಸಿಲರ್ ಟಾಲ್ಸಿ, ಹಿರಿಯ ಶಿಕ್ಷಕಿ ಗಾಯತ್ರಿ,  ಸ್ಟಾಫ್ ಕಾರ್ಯದರ್ಶಿ ಮೋಹನ ಯು ಉಪಸ್ಥಿತರಿದ್ದರು. ಸಮಾರಂಭದ …

ಮುಂದುವರಿಯುತ್ತಿರುವ ಅಬಕಾರಿ ಕಾರ್ಯಾಚರಣೆ: ಮದ್ಯ, ವಾಶ್, ತಂಬಾಕು ಉತ್ಪನ್ನ ವಶ

ಕಾಸರಗೋಡು: ಕ್ರಿಸ್ಮಸ್-ಹೊಸವರ್ಷ ದಿನಾಚರಣೆ ವೇಳೆ ಜಿಲ್ಲೆಗೆ ಹೊರಗಿನಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಇತ್ಯಾದಿಗಳು ಹರಿದುಬರುವ ಸಾಧ್ಯತೆಯನ್ನು ಪರಿಗಣಿಸಿ ಅದನ ತಡೆಗಟ್ಟಲು ಅಬಕಾರಿ ತಂಡ ನಡೆಸುತ್ತಿರುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ. ಇದರಂತೆ ಕಾಸರಗೋಡು ಅಬ ಕಾರಿ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ.ರ ನೇತೃತ್ವದ ತಂಡ ನಗರದ ಕರಂದಕ್ಕಾಡ್‌ನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೭.೦೨  ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಆದರೆ ಇದನ್ನು ಬಚ್ಚಿಟ್ಟವರ ಬಗ್ಗೆ ಅಬಕಾರಿ ತಂಡಕ್ಕೆ ಯಾವುದೇ ಮಾಹಿತಿ …

ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೋದಿಗೆ ಮತ್ತೆ ನಂ.೧ ಪಟ್ಟ

ನವದೆಹಲಿ: ಅಮೆರಿಕ ಮೂಲದ ಕನ್ಸಲ್ಟೆನ್ಸಿ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಆಯ್ಕೆಗೊಂಡಿದ್ದಾರೆ. ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಶೇ. ೭೬ ರಷ್ಟು ಅನುಮೋದಿತ ರೇಟ್‌ನೊಂದಿಗೆ ವಿಶ್ವದ ಅತ್ಯಂತ ನಂ. ೧ ಜನಪ್ರಿಯ ನಾಯಕನಾಗಿ ಮೂಡಿ ಬಂದಿದ್ದಾರೆ.  ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಾಡಾರ್ (ಶೇ. ೬೬), ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷ ಅಲೈನ್ ಜೆರ್ಸೆಟ್ (ಶೇ. ೫೮), ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೋ ಲುಲಾ …

ಅಕ್ಷರಗಳಿಂದ ಡಾ. ವಿರೇಂದ್ರ ಹೆಗ್ಡೆಯವರ ಭಾವಚಿತ್ರ ರಚಿಸಿ ಹಸ್ತಾಂತರಿಸಿದ ರಾಫಿಯ

ಉಪ್ಪಳ: ವ್ಯಕ್ತಿಗಳ ಹೆಸರು ಹಾಗೂ ಅವರ ಸಾಧನೆಗಳ ಬಗ್ಗೆ ಅಕ್ಷರಗಳನ್ನು ಜೋಡಿಸಿ ನೂರಾರು ಖ್ಯಾತ ವ್ಯಕ್ತಿಗಳ ಭಾವಚಿತ್ರ ರಚಿಸಿ ಪ್ರಶಸ್ತಿಯನ್ನು ಪಡೆದ ಉಪ್ಪಳ ಪತ್ವಾಡಿಯ ನಿವಾಸಿ ರಾಫಿಯಾ ಇರ್ಷಾದ್ ಡಾ.ವಿರೇಂದ್ರ ಹೆಗಡೆ ಯವರ ಭಾವಚಿತ್ರ ರಚಿಸಿ ಗಮನ ಸೆಳೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೊಂಡೆವೂರಿನ ಶ್ರೀಮಹಿಮಾ ಸ್ವಸಹಾಯ ಸಂಘದ ಸದಸ್ಯೆಯಾದ ಜುಬೈದ ರವರ ಪುತ್ರಿ ರಾಫಿಯಾ ಸಂಘದ ಸದಸ್ಯೆಯರ ಜೊತೆ ಇತ್ತೀಚೆಗೆ ಧರ್ಮಸ್ಥಳ ಕ್ಷೇತ್ರ ಸಂದರ್ಶಿಸಿ ಹೆಗ್ಡೆಯವರನ್ನು ಭೇಟಿ ಯಾಗಿ ರಚಿಸಿದ ಭಾವಚಿತ್ರವನ್ನು ಅವರಿಗೆ …

ಮಂಡಲ ಪೂಜೆ ೨೭ರಂದು

ಶಬರಿಮಲೆ: ಮಂಡಲ ಕಾಲದ ತೀರ್ಥಾಟನೆ ಡಿಸೆಂಬರ್ ೨೭ರಂದು ಮಧ್ಯಾಹ್ನ ಮಂಡಲಪೂಜೆ ಯೊಂದಿಗೆ ಸಮಾಪ್ತಿ ಹೊಂದಲಿದೆ. ತೀರ್ಥಾಟಕರಿಗೆ ದರ್ಶನ ಸೌಭಾಗ್ಯದ ಪುಣ್ಯವಾಗಿ ಡಿಸೆಂಬರ್ ೨೬ರಂದು ಶ್ರೀ ಅಯ್ಯಪ್ಪ ದೇವರ ವಿಗ್ರಹಕ್ಕೆ ಚಿನ್ನದಂಗಿ (ತಂಗಅಂಗಿ) ಯಿಂದ ಅಲಂಕರಿಸಿ ದೀಪಾರಾಧನೆ ನಡೆಯಲಿದೆ. ಅಯ್ಯಪ್ಪ ದೇವರನ್ನು ಅಲಂಕರಿಸುವ ಚಿನ್ನದ ಅಂಗಿ ಮತ್ತು ಇತರ ಆಭರಣಗಳನ್ನು ಪಂದಳಂ ಅರಮನೆಯಿಂದ ರಥಯಾತ್ರೆಯೊಂದಿಗೆ ಡಿ. ೨೬ರಂದು ಪಂಪಾಕ್ಕೆ ತರಲಾಗುವುದು. ಬಳಿಕ ಅಲ್ಲಿಂದ ಸೇವಾ ಸಂಘದ ಕಾರ್ಯಕರ್ತರು ಹೊತ್ತುಕೊಂಡು ಮೆರವಣಿಗೆ ಮೂಲಕ ಶಬರಿಮಲೆ ಕ್ಷೇತ್ರ ಸನ್ನಿಧಿಗೆ ತಲುಪಿಸುವರು. ಅಂದು …