ರೋಯಲ್ ಟ್ರಾವಂಕೂರ್ ವಂಚನೆ: ಪೊಲೀಸರನ್ನೂ ವಂಚಿಸಿರುವುದಾಗಿ ಆರೋಪ

ಕುಂಬಳೆ: ರೋಯಲ್ ಟ್ರಾವಂಕೂರ್ ಅಗ್ರಿಕಲ್ಚರಿಸ್ಟ್ ಪ್ರೊಡ್ಯೂಸರ್ ಕಂಪೆನಿ ಅಧಿಕಾರಿಗಳು ಪೊಲೀಸರನ್ನು ವಂಚಿಸಿರುವುದಾಗಿ ಆರೋಪವುಂಟಾಗಿದೆ. ಸಂಸ್ಥೆ ಸಂಗ್ರಹಿಸಿದ  ಠೇವಣಿ ವಂಚನೆ ವಿರುದ್ಧ  ಸಂಸ್ಥೆಯ ನೌಕರರು ಹಾಗೂ ಠೇವಣಿದಾರರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಸ್ಥೆಯ ಮಾಲಕರನ್ನು ಪೊಲೀಸರು ಸಂಪರ್ಕಿಸಿದ್ದು, ನಿನ್ನೆ ಈ ಬಗ್ಗೆ ಚರ್ಚೆ ನಡೆಸಲು ತಲುಪುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು.  ಈ ವಿಷಯದಲ್ಲಿ ವಿವಿಧ ಭರವಸೆಗಳನ್ನು ನಂಬಿ ವಂಚಿತರಾದ ಠೇವಣಿದಾರರು ಸಹಿತ ಐವತ್ತಕ್ಕಿಂತ ಹೆಚ್ಚು ಮಂದಿ ಪೊಲೀಸ್ ಠಾಣೆಯಲ್ಲಿ ಕಾದು ನಿಂತಿದ್ದರು.  ಆದರೆ ಸಂಸ್ಥೆಯ ಮಾಲಕರು ತಲುಪಿಲ್ಲ. ಅವರನ್ನು …

ಕೇಂದ್ರೀಯ ವಿ.ವಿ. ಪ್ರಾಧ್ಯಾಪಕನಿಂದ ಅನುಚಿತ ವರ್ತನೆ ಆರೋಪ: ದೂರು ಪೊಲೀಸರಿಗೆ ಹಸ್ತಾಂತರ

ಕಾಸರಗೋಡು: ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಬಿ. ಇಫ್ತಿಕರ ಅಹಮ್ಮದ್ ತನ್ನೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸಿರುವುದಾಗಿ ಆರೋಪಿಸಿ ವಿದ್ಯಾರ್ಥಿನಿಯೋರ್ವೆ ನೀಡಿದ ದೂರನ್ನು ಪ್ರಸ್ತುತ ವಿ.ವಿಯ ಅಧಿಕಾರಿಗಳು ಪರಿಶೀಲಿಸಿ ಅದನ್ನು ಬೇಕಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ದೂರುಗಾರಳ ಹೇಳಿಕೆ ದಾಖಲಿಸಿಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಬೇಕಲ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ಹೇಳಿದ್ದಾರೆ. ತನ್ನೊಂದಿಗೆ ನವೆಂಬರ್ ೧೩ರಂದು ಅನುಚಿತವಾಗಿ ವರ್ತಿಸಿರು ವುದಾಗಿ ಆರೋಪಿಸಿ ವಿದ್ಯಾರ್ಥಿನಿ ಅಸಿಸ್ಟೆಂಟ್ ಪ್ರೊಫೆಸರ್ ವಿರುದ್ಧ ದೂರು ನೀಡಿದ್ದಳು. ಅದನ್ನು …

ಎಲ್ಲಾ ಸರಕಾರಿ ಕಚೇರಿಗಳ ನಾಮಫಲಕಗಳು ಇನ್ನು ಮಲಯಾಳದಲ್ಲಿ : ಕನ್ನಡ ಫಲಕಗಳು ಇಲ್ಲದಾಗಲಿದೆಯೇ?

ಕಾಸರಗೋಡು: ರಾಜ್ಯ ಸರಕಾರದ ಎಲ್ಲಾ ಸರಕಾರಿ ಕಚೇರಿಗಳ ನಾಮಫಲಕಗಳು ಇನ್ನು ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಪ್ರದರ್ಶಿಸುವಂತೆ ಅಧಿಕಾರಿ ಆಡಳಿತ ಸುಧಾರಣಾ ಇಲಾಖೆ ನಿರ್ದೇಶ ನೀಡಿದೆ. ನಾಮಫಲಕದ ಅರ್ಧ ಭಾಗದಲ್ಲಿ  ಮಲಯಾಳಂನಲ್ಲೂ ಇನ್ನರ್ಧ ಭಾಗ ದಲ್ಲಿ  ಇಂಗ್ಲಿಷ್‌ನಲ್ಲೂ ಪ್ರದರ್ಶಿ ಸಬೇಕು. ಇದು ಮಾತ್ರವಲ್ಲ  ಸರಕಾರಿ ವಾಹನಗಳಲ್ಲಿ ಮುಂದಿನ ಮತ್ತು ಹಿಂದಿನ ಭಾಗಗಳಲ್ಲ್ಲಿ ಮಲಯಾಳಂ ಮತ್ತು ಇಂಗ್ಲೀಷ್ ನಾಮಫಲಕ ಅಳವಡಿಸಬೇಕು.  ಕಚೇರಿಗಳ ಮೊಹರುಗಳು, ಅಧಿಕಾರಿಗಳ ಹೆಸರು ಮತ್ತು ಅವರು ವಹಿಸುವ ಔದ್ಯೋಗಿಕ ಸ್ಥಾನದ ಮೊಹರುಗಳನ್ನು ಇಂಗ್ಲಿಷ್‌ನ ಹೊರತಾಗಿ ಮಲಯಾಳಂನಲ್ಲ್ಲೂ ತಯಾರಿಸಬೇಕು.  …

ಮಾದಕದ್ರವ್ಯ ಸಾಗಾಟ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲಿ ಸೆರೆ

ಕಾಸರಗೋಡು: ವಿದೇಶಕ್ಕೆ ಮಾದಕದ್ರವ್ಯ ಸಾಗಿಸಲೆತ್ನಿಸಿದ ಪ್ರಕರಣದ ಆರೋಪಿಯನ್ನು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಸ್ತುತ ವಿಮಾನ ನಿಲ್ದಾಣದ ಎಮಿಗ್ರೇಶನ್ ವಿಭಾಗದ ಅಧಿಕಾರಿಗಳು ಬಂಧಿಸಿ ದ್ದಾರೆ.  ಬೇಕಲ ಕೋಟಿಕುಳಂ ನಿವಾಸಿ ಮೊಹಮ್ಮದ್ ನದೀರ್ (೩೦) ಬಂಧಿತ ಆರೋಪಿ. ಮಾದಕದ್ರವ್ಯ ಸಾಗಾಟಕ್ಕೆ ಸಂಬಂಧಿಸಿ ಮೊಹಮ್ಮದ್ ನದೀರ್‌ನ ವಿರುದ್ಧ ಮಂಗಳೂರು ಪೊಲೀಸರು ಇತ್ತೀಚೆಗೆ ಪ್ರಕರಣ  ದಾಖಲಿಸಿಕೊಂಡಿದ್ದರು. ಆದರೆ ಆ ಪ್ರಕರಣಕ್ಕೆ ಸಂಬಂಧಿಸಿ ಆತ  ನ್ಯಾಯಾಲಯದಲ್ಲಿ ಹಾಜರಾ ಗದೆ ವಿದೇಶಕ್ಕೆ ಸಾಗಿದ್ದನು. ಅದರಿಂ ದಾಗಿ ಆತನ ಪತ್ತೆಗಾಗಿ ಮಂಗಳೂರು ಪೊಲೀಸರು ಲುಕ್‌ಔಟ್ ನೋಟೀ …

ಪಾರ್ಟಿ ಗ್ರಾಮದಲ್ಲಿ ನೇತಾರರ ವಿರುದ್ಧ ಪೋಸ್ಟರ್ ವಿವಾದವಾದಾಗ ತೆರವು

ಹೊಸದುರ್ಗ: ಸಿಪಿಎಂ ಪಾರ್ಟಿ ಗ್ರಾಮವಾದ ಮುನ್ನಾ ಡ್‌ನಲ್ಲಿ ಕೆಲವು ಸಿಪಿಎಂ ನೇತಾರರ ವಿರುದ್ಧ ಪ್ರತ್ಯಕ್ಷ ಗೊಂಡ ಫ್ಲೆಕ್ಸ್ ಬೋರ್ಡ್‌ಗಳನ್ನು ಪಕ್ಷ ಮಧ್ಯಸ್ಥಿಕೆ ವಹಿಸಿ ತೆರವುಗೊಳಿಸಿದೆ. ಸಿಪಿಎಂ ನಿಯಂತ್ರಣ ದಲ್ಲಿರುವ ಆಳಿಕೋಡನ್ ಸ್ಮಾರಕ ಗ್ರಾಂಥಾಲಯ ವಾರ್ಷಿಕಕ್ಕೆ ಸಂಬಂಧಿಸಿ ಫ್ಲೆಕ್ಸ್ ಬೋರ್ಡ್ ಸ್ಥಾಪಿಸಲಾಗಿತ್ತು. ಮೊನ್ನೆ ಪ್ರತ್ಯಕ್ಷಗೊಂಡ ಫ್ಲೆಕ್ಸ್‌ನ್ನು  ಅದೇ  ದಿನ ತೆರವುಗೊಳಿಸಲಾಗಿದೆ. ಡಿವೈಎಫ್‌ಐ-ಎಸ್‌ಎಫ್‌ಐ ಕಾರ್ಯಕರ್ತರು ಹಾಗೂ ಲೋಕಲ್ ಕಮಿಟಿ ನೇತಾರರ ಮಧ್ಯೆಗಿನ ತರ್ಕವೇ ಫ್ಲೆಕ್ಸ್ ಸ್ಥಾಪಿಸಲು ಕಾgಣವೆಂದು ಹೇಳಲಾಗುತ್ತಿದೆ. ಈ ವಿಷಯ ಪಕ್ಷದಲ್ಲಿ ಚರ್ಚೆಗೆಡೆಯಾಗಿದೆ.

ಉದ್ಘಾಟನೆ ಸಂಜೆ: ಕಾರಡ್ಕದಲ್ಲಿ ಆರಂಭಗೊಂಡ ಗೆಜ್ಜೆಯ ಕಲರವ

ಮುಳ್ಳೇರಿಯ: ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಸಂಜೆ ವಿಧಾನಸಭಾ ಸ್ಪೀಕರ್ ಎ.ಎನ್. ಶಂಸೀರ್ ಔಪಚಾರಿಕ ಉದ್ಘಾಟನೆ ನೆರವೇರಿಸುವರು. ಈಗಾಗಲೇ ವಿವಿಧ ಕಡೆಗಳಿಂದ ತಲುಪಿದವರು ಹಾಗೂ ಸ್ಥಳೀಯರು ಸೇರಿ ಕಾರಡ್ಕ ಶಾಲಾ ಪರಿಸರ ಉತ್ಸವ ಛಾಯೆಯಲ್ಲಿದ್ದು, ಇಂದಿನಿಂದ ಅದು ಇನ್ನಷ್ಟು ಪ್ರಜ್ವಲಿಸಲಿದೆ. ಇಂದು ಬೆಳಿಗ್ಗೆ ಪ್ರಧಾನ ವೇದಿಕೆಯಲ್ಲಿ ಮೋನೋ ಆಕ್ಟ್ ಆರಂಭಗೊಂಡಿತು. ಎರಡನೇ ವೇದಿಕೆಯಲ್ಲಿ ಮಾಪಿಳಪ್ಪಾಟ್ ಆರಂಭಗೊಂಡಿದ್ದು, ಬಳಿಕ ಒಪ್ಪನ ನಡೆಯಲಿದೆ. ೩ನೇ …

ಮಂಜೇಶ್ವರದಲ್ಲಿ ತ್ಯಾಜ್ಯರಾಶಿ: ತೆರವುಗೊಳಿಸದಿದ್ದರೆ ಪಂ. ಕಚೇರಿ ಬಳಿ ಹಾಕುವುದಾಗಿ ಎಸ್‌ಡಿಪಿಐ ಮುನ್ನೆಚ್ಚರಿಕೆ

ಮಂಜೇಶ್ವರ: ಪಂಚಾಯತ್ ವ್ಯಾಪ್ತಿಯ ಪೇಟೆ ಹಾಗೂ ಪರಿಸರದಲ್ಲಿ ತ್ಯಾಜ್ಯ ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದು, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದೆ ಎಂದು ಎಸ್‌ಡಿಪಿಐ ದೂರಿದೆ. ಇದರಿಂದ ವ್ಯಾಪಾರಿಗಳು, ಪ್ರಯಾಣಿ ಕರು ತೊಂದರೆ ಅನುಭವಿಸುತ್ತಿದ್ದು, ದೂರು ನೀಡಿದರೂ ತೆರವುಗೊಳಿಸಲು  ಅಧಿಕಾರಿಗಳು ಮುಂದಾಗಿಲ್ಲ. ತ್ಯಾಜ್ಯಮುಕ್ತ ಕೇರಳ ಎಂಬ ಹೆಸರಲ್ಲಿ ಲಕ್ಷಾಂತರ ರೂ. ವೆಚ್ಚಮಾಡಿ ಕಾರ್ಯಕ್ರಮ ನಡೆಸುವುದಲ್ಲದೆ ತ್ಯಾಜ್ಯ ತೆರವಿಗೆ ಪಂಚಾಯತ್ ಪ್ರಾಮಾಣಿ ಕವಾಗಿ ಯತ್ನಿಸುತ್ತಿಲ್ಲವೆಂದು ಎಸ್‌ಡಿಪಿಐ ದೂರಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಪೇಟೆ ಹಾಗೂ ಹೆದ್ದಾರಿ ಬದಿಯಲ್ಲಿನ ತ್ಯಾಜ್ಯ ತೆರವುಗೊಳಿಸದಿ ದ್ದರೆ …

ಇಚ್ಲಂಗೋಡು ಶಾಲೆಯಲ್ಲಿ ಶ್ರದ್ಧಾಂಜಲಿ ಸಭೆ

ಉಪ್ಪಳ: ಇಚ್ಲಂಗೋಡು ಎ.ಎಲ್.ಪಿ ಶಾಲೆಯಲ್ಲಿ ರಾಧಾಕೃಷ್ಣ ಶೆಟ್ಟಿ ಅಕ್ಕಾರಿಹಿತ್ಲು ಅವರಿಗೆ ಸಂತಾಪ ಸೂಚಕ ಸಭೆ ನಡೆಯಿತು. ಶಾಲೆಯ ಆಡಳಿತ ಸಮಿತಿಯ ಕಾರ್ಯದರ್ಶಿ ಎಂ.ಆರ್ ಕೊರಗಪ್ಪ ಶೆಟ್ಟಿ ಮಾತನಾಡಿ ಶಾಲಾ ಆಡಳಿತ ಸಮಿತಿಯ ಸದಸ್ಯರಾಗಿ, ಇಚ್ಲಂಗೋಡಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ, ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ನ ಮಾಜಿ ನಿರ್ದೇಶಕರಾಗಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿದರು. ಶಾಲಾ ಆಡಳಿತ ಸಮಿತಿಯ ಅಧ್ಯ ಕ್ಷ ದಿವಾಕರ ಆಳ್ವ, ಮುಖ್ಯೋಪಾ ಧ್ಯಾಯ ಜಯರಾಮ ಸಿ ಎಚ್, ಅಧ್ಯಾಪಿಔ್ರ ಭಾರತಿ ಉಪಸ್ಥಿತರಿದ್ದರು.

ಕಾಸರಗೋಡು ಅಬಕಾರಿ ರೇಂಜ್‌ನಲ್ಲಿ ಕ್ರಿಸ್ಮಸ್-ನ್ಯೂ ಈಯರ್ ಸ್ಪೆಷಲ್ ಡ್ರೈವ್

ಕಾಸರಗೋಡು: ಅಬಕಾರಿ ರೇಂಜ್ ನಲ್ಲಿ ಕ್ರಿಸ್ ಮಸ್ – ನ್ಯೂ ಇಯರ್ ಸ್ಪೆಷಲ್ ಡ್ರೈವ್ ತೀವ್ರ ಗೆÆಳಿಸಲಾಗಿದೆ. ಕಾಸರ ಗೋಡು ನಗರಸಭೆ, ಚೆಮ್ಮನಾಡು, ಮಧೂರು, ಚೆಂಗಳ ಮತ್ತು ಮೊಗ್ರಾಲ್ ಪುತ್ತೂರು ಪಂಚಾಯಿತಿಗಳ ಕಾಸರಗೋಡು ಈ ರೇಂಜ್‌ನ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳಾಗಿವೆ. ರೇಂಜ್ ವ್ಯಾಪ್ತಿಯಲ್ಲಿ ನಕಲಿ ಮದ್ಯ ಉತ್ಪಾದನೆ, ಸ್ಪಿರಿಟ್, ಡ್ರಗ್ಸ್, ಪಾನ್ ಮಸಾಲಾ ಎಂಬಿವುಗಳ ಕಳ್ಳಸಾಗಣೆ, ಮಾರಾಟ ಮುಂತಾದವುಗಳು ಗಮನಕ್ಕೆ ಬಂದಲ್ಲಿ 04994257541, 9496499852 ದೂರವಾಣಿ ಸಂಖ್ಯೆಯಲ್ಲಿ ಅಬಕಾರಿ ಕಚೇರಿಗೆ ಸಂಪರ್ಕಿಸಲು ಅಬಕಾರಿ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ರೇಂಜ್ …

ಸಂಸತ್ ಮೇಲೆ ದಾಳಿ ನಡೆಸುವುದಾಗಿ ಖಾಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ

ನವದೆಹಲಿ: ಡಿಸೆಂಬರ್ ೧೩ರಂದು ಅಥವಾ ಅದರ ಮೊದಲು ಭಾರತದ ಸಂಸತ್‌ನ ಮೇಲೆ ದಾಳಿ ನಡೆಸುವುದಾಗಿ ಖಾಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ತನ್ನ ಬಿಲದಲ್ಲಿ ಅಡಗಿಕೊಂಡೇ ಮತ್ತೆ ಬೆದರಿಕೆಯೊಡ್ಡುವ ವೀಡಿಯೋ ಬಿಡುಗಡೆಮಾಡಿದ್ದಾನೆ. ೨೦೦೧ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕ  ಅಫ್ಸಲ್ ಗುರುವಿನ ಪೋಸ್ಟರ್ ಒಳಗೊಂಡಿರುವ ವೀಡಿಯೋವನ್ನು ಪನ್ನುನ್ ಬಿಡುಗಡೆ ಮಾಡಿದ್ದು, ಅದರಲ್ಲಿ ‘ದೆಹಲಿ ಬನೇಗಾ ಖಾಲಿಸ್ತಾನ್’ ಎಂಬ ಶೀರ್ಷಿಕೆ ಹಾಕಲಾಗಿದೆ. ತನ್ನನ್ನು ಹತ್ಯೆಗೈಯ್ಯಲು ಭಾರತ ನಡೆಸಿದ ಸಂಚುಗಳೆಲ್ಲವೂ ವಿಫಲವಾಗಿದೆ. ಅಲ್ಲದೆ ಭಯೋ ತ್ಪಾದಕರು  ಸಂಸತ್  ಮೇಲೆ …