ವಿಕೃತ ವಿನೋದ ಮುಂದುವರಿಕೆ: ರೈಲಿಗೆ ಮತ್ತೆ ಕಲ್ಲು ತೂರಾಟ; ಓರ್ವ ಪ್ರಯಾಣಿಕನಿಗೆ ಗಾಯ

ಕಾಸರಗೋಡು: ಸಂಚರಿಸುತ್ತಿರುವ ರೈಲುಗಳಿಗೆ ಕಲ್ಲು ತೂರಾಟ ನಡೆಸಿ ಆ ಮೂಲಕ ವಿಕೃತ ವಿನೋದ ಪಡೆಯುವ ಕಿಡಿಗೇಡಿಗಳ ಕಾಟ ರಾಜ್ಯದಲ್ಲಿ ಇನ್ನೂ ಮುಂದುವರಿದಿದೆ. ಪುಣೆ- ಎರ್ನಾಕುಳಂ ಸೂಪರ್ ಫಾಸ್ಟ್ ರೈಲಿಗೆ ನಿನ್ನೆ ಕಣ್ಣೂರಿನ ಎಡಕ್ಕಾಡ್ ಮತ್ತು ಧರ್ಮಡಂ ಮಧ್ಯೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ರೈಲಿನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಕಣ್ಣೂರು ಕನ್ನಾಡಿಪರಂಬ ನಿವಾಸಿ ಮುಹಮ್ಮದ್ ಅನಸ್ಸ್ (೨೫)ರ ಬಲದ ಕೈಗೆ ಕಲ್ಲು ತಾಗಿ ಒಂದು ಬೆರಳು ಮುರಿದಿದೆ. ಘಟನೆ ಬಳಿಕ  ಅನಸ್ಸ್ ಕಣ್ಣೂರು ರೈಲ್ವೇ ಪೊಲೀಸರಿಗೆ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ: ವೇದಿಕೇತರ ಸ್ಪರ್ಧೆಯ ಮೊದಲ ದಿನ ಹೊಸದುರ್ಗ ಉಪಜಿಲ್ಲೆಗೆ ಮುನ್ನಡೆ

ಮುಳ್ಳೇರಿಯ: ಉತ್ಸವ ಛಾಯೆಯಲ್ಲಿರುವ ಕಾರಡ್ಕ ಗ್ರಾಮದಲ್ಲಿ ನಾಳೆ ಗೆಜ್ಜೆನಾದ ಅನುರಣಿಸಲಿದೆ. ನಿನ್ನೆ ಹಾಗೂ ಇಂದು ವೇದಿಕೇತರ ಸ್ಪರ್ಧೆಗಳು ಜಿಲ್ಲಾ ಶಾಲಾ ಕಲೋತ್ಸವದಲ್ಲಿ ನಡೆದಿದ್ದು, ನಾಳೆಯಿಂದ ವೇದಿಕೆಗಳ ಪರದೆ ಮೇಲೇರಲಿದೆ. ಕಾರಡ್ಕ ಗ್ರಾಮವೇ ಈಗ ಕಾರಡ್ಕ ಶಾಲೆಯ ಮೈದಾನದಲ್ಲಿ ಸುತ್ತಾಡುತ್ತಿದ್ದು, ಕಾರ್ಯಕ್ರಮವನ್ನು ಇನ್ನಷ್ಟು ಯಶಸ್ವಿಗೊಳಿಸಲು ಸಕಲರು ತಮ್ಮಿಂದಾಗುವ ಸೇವೆಗೈಯ್ಯುತ್ತಿದ್ದಾರೆ. ನಿನ್ನೆ ಕಥೆರಚನೆ, ಕವಿತೆ ರಚನೆ, ಚಿತ್ರ ರಚನೆ, ಕಾರ್ಟುನ್, ಕೊಲೇಶ್, ಬ್ಯಾಂಡ್‌ಮೇಳ ಮೊದಲಾದ ಸ್ಪರ್ಧೆಗಳು ನಡೆಯಿತು. ನಿನ್ನೆ ನಡೆದ ಸ್ಪರ್ಧೆಗಳಲ್ಲಿ ೮೮ ಅಂಕ ಪಡೆದ ಹೊಸದುರ್ಗ ಉಪಜಿಲ್ಲೆ ಮುನ್ನಡೆಯಲ್ಲಿದೆ. …

ಡಾ| ಜನಾರ್ದನ ನಾಯ್ಕ್‌ರಿಗೆ ಪುರಸ್ಕಾರ

ಕಾಸರಗೋಡು: ಅಸೋಷಿಯೆಶನ್ ಆಫ್ ಫಿಸಿಶಿಯನ್ ಅಫ್ ಇಂಡಿಯಾದ ಕೇರಳ ಘಟಕದಿಂದ ಡಾ. ಎನ್. ಎನ್. ಅಶೋಕನ್ ಸ್ಮಾರಕ ಉಪನ್ಯಾಸ ಪ್ರಶಸ್ತಿಯನ್ನು ಡಾ| ಜನಾರ್ದನ ನಾಯ್ಕ್ ರವರಿಗೆ ಪ್ರದಾನ ಮಾಡಲಾಯಿತು. ಕಾಞಂಗಾಡು ರಾಜ್ ರೆಸಿಡೆನ್ಸಿ ಯಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದಲ್ಲಿ, ರಾಜ್ಯಾಧ್ಯಕ್ಷ ಡಾ| ಅನಿಲ್ ಕುಮಾರ್ ಪ್ರಶಸ್ತಿ ನೀಡಿದರು. ಕಾರ್ಯದರ್ಶಿ ಡಾ| ನೀರಜ್ ಮಾಣೆಕೋತ್, ಡಾ| ಸಜೇಶ್ ಆಶೋಕನ್, ಕಲ್ಲಿಕೋಟೆಯ ವಿಶ್ರಾಂತ ಫ್ರೊ. ಪಿ.ಕೆ ಶಶಿಧರನ್, ಫ್ರೊ. ಸುಮ, ಡಾ| ಕಿಶೋರ್ ಕುಮಾರ್, ಐ ಎಂ ಎ ಯ …

ಮಂಜೇಶ್ವರ: ಸಿಐಟಿಯು ಪಂ. ಸಮಾವೇಶ

ಮಂಜೇಶ್ವರ: ಸಿಐಟಿಯು ಮಂಜೇಶ್ವರ ಪಂಚಾಯತ್ ಸಮಾವೇಶ ಹಾಗೂ ಕೆ. ಮಾಧವರವರ ೧೬ನೇ ವಾರ್ಷಿಕ ಸಂಸ್ಮರಣೆ ಹೊಸಂಗಡಿ ಎಕೆಜಿ ಮಂದಿರದಲ್ಲಿ ನಡೆಯಿತು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿಕೃಷ್ಣನ್ ಉದ್ಘಾಟಿಸಿದರು. ಪ್ರೇಮ ಹೊಸಬೆಟ್ಟು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯ ನಿತಿನ್, ಶೋಭಲತಾ ಸಿ, ರಾಧಾ ಎಂ. ಅಶ್ರಫ್ ಕುಂಜತ್ತೂರು, ಪ್ರಶಾಂತ್ ಕನಿಲ ಮಾತನಾಡಿದರು.

ಬಾಯಾರುಪದವು ವ್ಯಕ್ತಿಯೋರ್ವರ ಹಿತ್ತಿಲಿನಲ್ಲಿ ತುಂಬಿಕೊಂಡಿದ್ದ ಮಾಲಿನ್ಯ ತೆರವುಗೊಳಿಸಿ ಸಂಪೂರ್ಣ ಶುಚೀಕರಣ: ನಿಟ್ಟುಸಿರು ಬಿಟ್ಟ ಸ್ಥಳೀಯರು

ಪೈವಳಿಕೆ: ಬಾಯಾರುಪದವು ನ ಹಿತ್ತಿಲಿನಲ್ಲಿ ತುಂಬಿ ತುಳುಕುತ್ತಿದ್ದ ತ್ಯಾಜ್ಯವನ್ನು ಸ್ಥಳದ ಮಾಲಕ ತೆರವು ಗೊಳಿಸಿ ಶುಚೀಕರಣಕ್ಕೆ ಕ್ರಮಕೈಗೊಂ ಡಿದ್ದಾರೆ. ನಿನ್ನೆ ಬೆಳಿಗ್ಗೆಯಿಂದ ಸಂಜೆ ತನಕ ಸ್ಥಳದ ಮಾಲಕ ಹಾಗೂ ಸ್ಥಳಿಯ ಸಮಾಜ ಸೇವಕರ ಸಹಕಾರದಿಂದ ಹಿತ್ತಿಲಿನಲ್ಲಿ ಹರಡಿಕೊಂಡಿದ್ದ ಭಾರೀ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಚೀಕರಿಸಲಾಯಿತು. ಇದರಿಂದಾಗಿ ಪರಿಸರದ ವ್ಯಾಪಾ ರಿಗಳಿÀÄ ಹಾಗೂ ಮನೆ ಮಂದಿ ನಿಟ್ಟುಸಿರು ಬಿಡುವಂತಾ ಗಿದೆ. ಖಾಲಿ ಹಿತ್ತಿಲಿನಲ್ಲಿ ವಿವಿಧ ಕಡೆಗಳಿಂದ ತ್ಯಾಜ್ಯವನ್ನು ತಂದು ಹಾಕಿ ಅದನ್ನು ಉರಿಸುತ್ತಿರುವುದು ಸ್ಥಳೀ ಯರಲ್ಲಿ ಆತಂಕವನ್ನುAಟುಮಾಡಿತ್ತು.

ಹೇರೂರು ಬಜೆ ಕ್ಷೇತ್ರದಲ್ಲಿ ಕನಕ ಜಯಂತಿ ಆಚರಣೆ

ಉಪ್ಪಳ: ಕಾಸರಗೋಡು ಜಿಲ್ಲೆ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರೊಜೆಕ್ಟ್ ಮಂತ್ರಾಲಯ ಇದರ ಸಂಚಾಲಕಿ ಕುಂಬಳೆ ಕೃಷ್ಣನಗರದ ಪ್ರೆಮಲತ ಗೋಕುಲ್‌ದಾಸ್ ಇವರ ನೇತೃತ್ವದಲ್ಲಿ ನಡೆಯುತ್ತಿರುವ ೧೧ನೇ ವರ್ಷದ ಕನಕ ಜಯಂತಿಯನ್ನು ಬಜೆ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಹರಿನಾಮ ಕೀರ್ತ£ ೆಯೊಂದಿಗೆ ಆಚರಿಸಲಾಯಿತು. ಕ್ಷೇ ತ್ರದ ಪ್ರಧಾನ ಅರ್ಚಕ ಹರಿನಾ ರಾಯಣ ಮಯ್ಯ ಹಾಗೂ ಕನಕ ದಾಸ ಸೇವಾ ಸಮಿತಿಯ ಅಧ್ಯಕ್ಷೆ ಜಯಂತಿ ಬದಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೇಮಲತಾ ಗೋಕುಲ್‌ದಾಸ್ ನಿರೂಪಿಸಿ ಕನಕ ದಾಸರ ಕುರಿತು …

ಮಧೂರಿನಲ್ಲಿ ಜಿಲ್ಲಾ ಮಟ್ಟದ ವಿಶ್ವ ಮಣ್ಣು ದಿನಾಚರಣೆ

ಮಧೂರು: ವಿಶ್ವ ಮಣ್ಣು ದಿನಾಚರಣೆ ನಿಮಿತ್ತ ಜಿಲ್ಲಾ ಮಣ್ಣು ಸಮೀಕ್ಷೆ ಮಣ್ಣು ಸಂರಕ್ಷಣಾ ಇಲಾಖೆ ಹಾಗೂ ಮಧೂರು ಪಂಚಾಯತ್ ಜಂಟಿಯಾಗಿ ಜಿಲ್ಲಾ ಮಟ್ಟದ ವಿಶ್ವ ಮಣ್ಣು ದಿನಾಚರಣೆ ಶಾಸಕ ಎನ್.ಎ.ನೆಲ್ಲಿಕುನ್ನ್ ಉದ್ಘಾಟಿ ಸಿದರು. ನಮ್ಮ ಮಣ್ಣನ್ನು ಸಂರಕ್ಷಿ ಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಅಕ್ರಮವಾಗಿ ಮಣ್ಣು ದುರ್ಬಳಕೆ ಮಾಡಿಕೊಂಡರೆ ಅದರ ಪರಿಣಾಮ ಎದುರಿಸಬೇಕಾಗುವುದು ನಾವೇ ಎಂದು ಎನ್.ಎ.ನೆಲ್ಲಿಕುನ್ನ್ ಹೇಳಿದರು. ವಿಶ್ವ ಮಣ್ಣು ದಿನಾಚರಣೆ ನಿಮಿತ್ತ ಜಿಲ್ಲಾ ಮಣ್ಣು ಸಮೀಕ್ಷೆ ಮಣ್ಣು ಸಂರಕ್ಷಣಾ ಇಲಾಖೆ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ

ಮುಳ್ಳೇರಿಯ: ಕಂದಾಯ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಇಂದು ಬೆಳಿಗ್ಗೆ ಧ್ವಜಾರೋಹಣ ದೊಂದಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ೪೧೧೨ ವಿದ್ಯಾರ್ಥಿಗಳು ೩೦೫ ವಿಭಾಗಗಳಲ್ಲಿ ಸ್ಪರ್ಧಿಸುವರು. ಯುಪಿ,ಎಚ್‌ಎಸ್, ಎಚ್‌ಎಸ್‌ಎಸ್ ಮಕ್ಕಳು ಇದರಲ್ಲಿ ಒಳಗೊಂ ಡಿದ್ದಾರೆ. ಇಂದು ಹಾಗೂ ನಾಳೆ ವೇದಿಕೇತರ ಸ್ಪರ್ಧೆಗಳು, ೭ರಿಂದ ೯ರವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಕನ್ನಡ ವಿಭಾಗದಲ್ಲಿ ೭ ವಿಭಾಗಗಳಿವೆ. ಇಂದು ೮ ವೇದಿಕೆಗಳಲ್ಲಿ ಹಾಗೂ ನಾಳೆ ಏಳು ವೇದಿಕೆಗಳಲ್ಲಿ ವೇದಿಕೇತರ ಸ್ಪರ್ಧೆಗಳು ನಡೆಯಲಿದೆ. ಉಪಜಿಲ್ಲೆಗಳಿಂದ ೯೨  ವಿಭಾಗ ಗಳಲ್ಲಿ ಅಪೀಲು ನೀಡಿರುವುದರಲ್ಲಿ ೩೦೧ ಮಂದಿಗೆ …

ಕಾರ್ಮಿಕ ಬಾವಿಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಓರ್ವ ಕಸ್ಟಡಿಗೆ

ಕಾಸರಗೋಡು: ವಲಸೆ ಕಾರ್ಮಿಕನಾದ ಯುವಕನೋರ್ವ ಬಾವಿಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಳಂಗರೆಯಲ್ಲಿ ನಡೆದಿದೆ. ತಳಂಗರೆ ಕುನ್ನಿಲ್‌ನ ಕೆ.ಎಸ್. ಅಬ್ದುಲ್ಲ ರಸ್ತೆ ಬಳಿಯ ಪೊದೆಗಳು ಆವರಿಸಿದ್ದ ಖಾಸಗಿ ಹಿತ್ತಿಲ ಬಾವಿಯಲ್ಲಿ ನಿನ್ನೆ ರಾತ್ರಿ ಈ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ತಮಿಳುನಾಡು ತಿರುವಣ್ಣಾಮಲೈಯ ವರಾವೂರ್ ಗ್ರಾಮದ ತಿರುಮಲೈ ಮಾವಟ್ಟಂ ಕಂಬಾಟ್ ನಿವಾಸಿ ಕಾಶಿ ಎಂಬವರ ಪುತ್ರ ಭೂಮಿನಾಥನ್ (೨೭) ಎಂದು ಗುರುತಿಸಲಾಗಿದೆ. ಈತ ತಳಂಗರೆಯ ಬಾಡಿಗೆ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿದ್ದನು. ಕೂಲಿ ಕಾರ್ಮಿಕನಾಗಿರುವ ಈತ ಓರ್ವ …

ಪಾಕಿಸ್ತಾನದಲ್ಲಿ ಮತ್ತೆ ಇಬ್ಬರು ಉಗ್ರರ ನಿಗೂಢ ಸಾವು

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಪಾಕಿಸ್ತಾನ ಹಾಗೂ ಖಾಲಿಸ್ತಾನಿ ಉಗ್ರರನ್ನು ಒಬ್ಬರ ಹಿಂದೆ ಒಬ್ಬರಂತೆ ಇತ್ತೀಚೆಗಿ ನಿಂದ ಅಪರಿಚಿತರು ಕೊನೆಗೊಳಿಸುತ್ತಾ ಬಂದಿದ್ದಾರೆ. ಇದು ಪಾಕ್ ಮತ್ತು ಖಾಲಿಸ್ತಾನಿ ಭಯೋತ್ಪಾದಕರಲ್ಲಿ ತೀವ್ರ ಭಯ ಆವರಿಸುವಂತೆ ಮಾಡಿರುವ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಇನ್ನಿಬ್ಬರು ಖಾಲಿಸ್ತಾನಿ ಮತ್ತು ಪಾಕ್ ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ೧೯೮೫ರಲ್ಲಿ ಏರ್ ಇಂಡಿಯಾ ಜೆಟ್ ಕನಿಷ್ಕಾದ ಮೇಲೆ  ಬಾಂಬ್ ದಾಳಿ ನಡೆಸಿದ ಪ್ರಕರಣದ ಆರೋಪಿ ಖಾಲಿಸ್ತಾನಿ ಭಯೋತ್ಪಾದಕ ಲಖ್ಭೀರ್ ಸಿಂಗ್ ರೋಡ್ ಮತ್ತು ಪಾಕಿಸ್ತಾನದ …